ರಾಜಕಾರಣಿಗಳು ಸದಾ ಒಂದಿಲ್ಲೊಂದು ತಕರಾರುಗಳು, ಆರೋಪಗಳು, ತಗಾದೆಯಲ್ಲಿಯೇ ಬದುಕನ್ನು ರೋಬೋಗಳ ತರ ಕಳೆಯುವುದರಲ್ಲೇ ಖುಷಿ ಪಡುತ್ತಾರೆ. ಇತ್ತೀಚಿಗೆ ಕುಮಾರಿ ಶೋಭಾ ಕರಂದ್ಲಾಜೆ ಅವರು ಸಿದ್ರಾಮಣ್ಣ ಬಳೆ ತೊಡಲಿ ಎಂದು ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಹಾಗೂ ಸಚಿವೆ ಜಯಮಾಲಾ ಕುಮಾರಿ ಶೋಭಾ ಕರಂದ್ಲಾಜೆ ಅವರದು ಎಲುಬಿಲ್ಲದ ನಾಲಿಗೆ ಎಂದು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ೫ ವರ್ಷ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಯಾವ ಸಿಎಂ ಮಾಡದ ರೀತಿಯಲ್ಲಿ ಜನಪರ ಕೆಲಸ ಮಾಡಿದ್ದಾರೆ.. ಸಿದ್ದರಾಮಯ್ಯು ಲಘುವಾದ ಮಾತು ಯಾರಿಗೂ ಶೋಭೆ ತರುವುದಿಲ್ಲ ಎಂದ ಜಯಮಾಲಾ ಶೋಭಕ್ಕನ ವಿರುದ್ಧ ಗರಂ ಆಗಿದ್ದಾರೆ.
No Comment! Be the first one.