ಲೋಕಸಭಾ ಚುನಾವಣೆಯ ಆರಂಭದಿಂದಲೂ ತಮ್ಮ ಪಕ್ಷದ ಹೊರತಾಗಿ ಮತ್ತಾರಿಗೂ ಸಪೋರ್ಟ್ ಮಾಡದ ಉಪೇಂದ್ರ ಮಂಡ್ಯದ ಸುಮಲತಾ ಪರವಾಗಿಯೂ ಒಂದು ಮಾತನ್ನು ಆಡಿರಲಿಲ್ಲ.
ಎಲ್ಲರನ್ನೂ ಪ್ರತಿಸ್ಪರ್ಧಿಗಳಾಗಿ ನೋಡುತ್ತಿರುವಂತೆಯೂ ಪ್ರತಿಕ್ರಿಯಿಸಿದ್ದರು. ಆದರೆ ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದರೂ ದೊಡ್ಡಗೌಡರ ಮನೆ ಮೊಮ್ಮಗನ್ನೇ ಮನೆ ಕಡೆ ತಿರುಗುವಂತೆ ಮಾಡಿದ ಸುಮಲತಾ ಅವರ ಗೆಲುವಿನ ಕುರಿತಾಗಿಯೂ ಬುದ್ದಿವಂತ 2 ಮುಹೂರ್ತ ಕಾರ್ಯಕ್ರಮದಲ್ಲಿ ರಿಪ್ಲ್ಥೈ ಮಾಡಿದ್ದು, ‘ಸುಮಲತಾ ಅವರಿಗೆ ಧನ್ಯವಾದಗಳು. ಅವರು ಗೆದ್ದಿದ್ದೂ ಖುಷಿ ತಂದಿದೆ. ಅವರಲ್ಲಿ ಪ್ರಬುದ್ಧ ರಾಜಕಾರಣಿ ಆಗುವ ಎಲ್ಲಾ ಲಕ್ಷಣಗಳಿವೆ. ಅವರಿಗೆ ಮುಂದೆಯೂ ಒಳಿತಾಗಲಿ’ ಎಂದು ಶುಭಾಶಯ ಕೋರಿದ್ದಾರೆ.
No Comment! Be the first one.