TV9 ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2023
ಇಡೀ ಭಾರತದಲ್ಲೇ ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರು ಪಡೆದಿದೆ. ಇದು ಟೆಕ್ನಾಲಜಿ ಹಬ್ ಎನ್ನುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸ್ಟಾರ್ಟಪ್ ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳ ಪ್ರಧಾನ ಕಛೇರಿಗಳು ಇಲ್ಲಿ ತಲೆಯೆತ್ತಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಸದ್ಯ ಈ ಬೇಸಿಗೆಯಲ್ಲಿ ತಮ್ಮ ಶಾಪಿಂಗ್ ಮಾಡಲು ರಿಯಾಯಿತಿ ಮತ್ತು ಕಡಿಮೆ ಮೌಲ್ಯದ ವಸ್ತುಗಳನ್ನು ಹುಡುಕುತ್ತಿರುವವರಿಗೆ TV9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಅತ್ಯುತ್ತಮ ವೇದಿಕೆಯಾಗಿದೆ. […]
ನೋಡಬಹುದಾದ ಪುಟಗಳು!
ʻʻಅವೆಲ್ಲಾ ನೆನ್ನೆ ಮೊನ್ನೆ ಆದಂತೆ ಅನಿಸುತ್ತೆ… ಏನೆಲ್ಲಾ ಘಟಿಸಿಬಿಡ್ತು… ಇನ್ನೂ ಆ ದಿನಗಳು ಕಣ್ಣಲ್ಲೇ ಇವೆ…ʼʼ ಹೀಗೆ ಹಳೇದನ್ನು ನೆನಪು ಮಾಡಿಕೊಂಡು ಯಾರು ತಾನೆ ನಿಟ್ಟುಸಿರು ಬಿಡೋದಿಲ್ಲ ಹೇಳಿ. ಒಬ್ಬೊಬ್ಬರ ಬದುಕಿನ ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಪುಟಗಳನ್ನೆಲ್ಲಾ ತೆರೆದಿಟ್ಟಿರುವ ಚಿತ್ರ ನೋಡದ ಪುಟಗಳು. ಈಗೆಲ್ಲಾ ಮೊಬೈಲು, ಸೋಷಿಯಲ್ ಮೀಡಿಯಾಗಳಿವೆ. ಶಾಲೆ, ಕಾಲೇಜು ಬಿಟ್ಟ ನಂತರವೂ ಮಕ್ಕಳು ಸಂಪರ್ಕದಲ್ಲಿರುತ್ತಾರೆ. ತೊಂಭತ್ತರ ದಶಕದದಲ್ಲಿ ಸ್ಕೂಲು, ಕಾಲೇಜು ಓದಿದವರು ಕಳೆದುಕೊಂಡ ಸಹಪಾಠಿಗಳನ್ನು ಹುಡುಕುವ ಪ್ರಕ್ರಿಯೆಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತಾರೆ. ಅಚಾನಕ್ಕಾಗಿ ಎಲ್ಲರೂ ಭೇಟಿಯಾದಾಗ […]
ಕೌತುಕ ವಿಚಾರಗಳ ಸುತ್ತ ನೋಡದ ಪುಟಗಳು
ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ’ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್ದಲ್ಲಿ ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೇಲರ್ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ತೂಕ ಹೆಚ್ಚಿದೆ. ನವ ಪ್ರತಿಭೆ ಎಸ್.ವಸಂತ್ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು […]
ಉಳ್ಳಾಡಿಸಿ ನಗಿಸುವ ಉಂಡೆನಾಮ
ಮದುವೆ ಅನ್ನೋದೇ ಹಾಗೆ. ಯಾರು ಆ ಬಗ್ಗೆ ಹೆಚ್ಚು ಕುತೂಹಲ ಹೊಂದಿರುತ್ತಾರೋ, ಅತಿಯಾದ ಆಸಕ್ತಿ ವಹಿಸುತ್ತಾರೋ ಅಂಥವರಿಗೇ ಅದು ಸುಲಭಕ್ಕೆ ಕೈಗೂಡೋದಿಲ್ಲ. ಇಲ್ಲೂ ಅಷ್ಟೇ ಹೀರೋ ವೆಂಕಿಗೆ ಮದುವೆಯಾಗಬೇಕು, ಮೊದಲ ರಾತ್ರಿಯನ್ನು ವೈಭೋಗದಿಂದ ನೆರವೇರಿಸಿಕೊಳ್ಳಬೇಕು ಅನ್ನೋದೇ ಬದುಕಿನ ಪರಮ ಗುರಿ. ಹೆಣ್ಣು ನೋಡಿ, ಎಲ್ಲಾ ಒಪ್ಪಿ ಇನ್ನೇನು ಗಟ್ಟಿ ಮೇಳದ ಸೌಂಡು ಕೇಳಿಸಬೇಕು ಅನ್ನುವಷ್ಟರಲ್ಲಿ ಸಂಬಂಧ ಮುರಿದು ಬೀಳುತ್ತಿರುತ್ತದೆ. ಅದಕ್ಕೆ ಏನು ಕಾರಣ ಅನ್ನೋದು ಕೂಡಾ ಒಂದು ಹಂತದಲ್ಲಿ ಪ್ರೇಕ್ಷಕರಿಗೆ ಮನವರಿಕೆಯಾಗುತ್ತದೆ. ಇದೇ ಹೊತ್ತಿನಲ್ಲಿ ಜಗತ್ತಿಗೇ ಕೊರೋನಾ […]
ಒಂದಲ್ಲ ಎರಡಲ್ಲ ಐದು ಬಿಡಿ ಚಿತ್ರಗಳು!
ಒಂದಕ್ಕೊಂದು ಸಂಬಂಧವಿಲ್ಲದ ನಾಲ್ಕಾರು ಕಿರು ಚಿತ್ರಗಳನ್ನು ಒಂದು ಕಡೆ ಜೋಡಿಸಿ ಗುಚ್ಚವಾಗಿಸಿ ಸಿನಿಮಾ ಮಾಡೋದು ಕನ್ನಡಕ್ಕೆ ತೀರಾ ಹೊಸದಲ್ಲ. ಈಗ ಅಂಥದ್ದೇ ಒಂದು ಪ್ರಯತ್ನ ʻಪೆಂಟಗನ್ʼ ಮೂಲಕ ನಡೆದಿದೆ. ಕಾಮಿಡಿ, ಕರಾಳತೆ, ಧರ್ಮ, ಕರ್ಮ, ಕಾಮ – ಈ ಎಲ್ಲ ವಿಚಾರಗಳನ್ನು ಒಂದೊಂದು ಭಿನ್ನ ಕತೆಗಳನ್ನಾಗಿಸಿ ಚೆಂದಗೆ ಕಟ್ಟಿರುವ ಚಿತ್ರ ಪೆಂಟಗನ್. ʻಸಾವುʼ ಪ್ರತಿಯೊಂದೂ ಕಿರುಚಿತ್ರದ ಕೇಂದ್ರ ಬಿಂದು. ಕಾಗೆ ಅದರ ರೂಪಕ! ಆತ್ಮಹತ್ಯೆ ಮಾಡಿಕೊಳ್ಳಲು ಹೆದರಿ ತನ್ನನ್ನು ಕೊಲ್ಲಿಸಿಕೊಂಡು ತಾನೇ ಸುಫಾರಿ ಕೊಡುವ ಹುಡುಗನ ಕಥೆಯ […]
ಮಧುವನದಲ್ಲಿ ವಸಂತೋತ್ಸವ!
ರವೀಂದ್ರ ತುಂಬರಮನೆ-ರಮೇಶ್ ಬೇಗಾರ್ ಸೃಷ್ಟಿಸಿದ ಜಲಪಾತ ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ, ರಿಂದ. ನಟ ಪ್ರಮೋದ್ ಶೆಟ್ಟಿ ಅವರಿಗಾಗಿ ವೈಶಂಪಾಯನ ತೀರ ಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಬೇಗಾರ್ ಸದ್ಯ ʻಜಲಪಾತʼವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಜಲಪಾತದಲ್ಲಿದೆ. ೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, […]
ಕಮಲ ಹಿಡಿಯಲಿದ್ದಾರೆ ಕಿಚ್ಚ!
ಈ ಬಾರಿಯ ವಿಧಾನಸಭಾ ಚುನಾವಣೆಗೆ ಸುದೀಪ್ ಅವರನ್ನು ರಾಜ್ಯಾದ್ಯಂತ ಸ್ಟಾರ್ ಪ್ರಾಚಾರಕನನ್ನಾಗಿಸುವ ಪ್ಲಾನ್ ಬಿಜೆಪಿಯದ್ದು. ಎಲ್ಲವೂ ನಾಳೆ ಮಧ್ಯಾಹ್ನ1.30ಕ್ಕೆ ನಡೆಯಲಿರುವ ಪ್ರೆಸ್ ಮೀಟ್ ನಲ್ಲಿ ಬಯಲಾಗಲಿದೆ ಕಿಚ್ಚ ಸುದೀಪ ರಾಜಕಾರಣಕ್ಕೆ ಬರ್ತಾರಂತೆ… ಕಳೆದ ಹದಿನೈದು ವರ್ಷಗಳಲ್ಲಿ ಪ್ರತೀ ಸಲ ಚುನಾವಣೆ ಬಂದಾಗಲೂ ಇಂಥದ್ದೊಂದು ಸುದ್ದಿ ಸರಸರನೆ ಹರಿದಾಡುತ್ತದೆ. ಅದು ಹಾಗೇ ತಣ್ಣಗಾಗುತ್ತದೆ. ಸುದೀಪ್ ಅವರನ್ನು ರಾಜಕೀಯದ ಪಡಸಾಲೆಗೆ ಎಳೆದುತರಲು ಎಲ್ಲ ಪ್ರಮುಖ ಪಕ್ಷಗಳೂ ಕರಸತ್ತು ನಡೆಸಿವೆ ಅನ್ನೋದಂತೂ ನಿಜ. ಆದರೆ ಸುದೀಪ್ ಯಾವತ್ತೂ ಅಧಿಕೃತವಾಗಿ ಈ ಬಗ್ಗೆ […]
ಮಕ್ಕುಗಿದರು ಚಾರ್ಲಿ ಸಂಗೀತಾ!
ಕಳೆದೆರಡು ವರ್ಷಗಳಿಂದ ಯೂ ಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆದರೆ ಇದೇ ಯೂ ಟ್ಯೂಬ್ ಹೆಸರಲ್ಲಿ ಹೆಸರು-ಹಣ ಮಾಡಲು ನಿಂತವರೂ ಸಾಕಷ್ಟು ಜನರಿದ್ದಾರೆ. ಹುಟ್ಟು ಸೋಂಬೇರಿಗಳಿಗೆ ಯೂ ಟ್ಯೂಬ್ ಒಂದು ನೆಪವಾಗಿದೆ. ನೂರಿನ್ನೂರು ಸಬ್ಸ್ಕ್ರೈಬರ್ಗಳೂ ಇಲ್ಲದ, ಬೆರಳೆಣಿಕೆಯ ವ್ಯೂಸ್ ಹೊಂದಿರುವ ಚಾನೆಲ್ಲುಗಳನ್ನು ತೆರೆದ ʻಸ್ವಯಂ ಘೋಷಿತ ಜರ್ನಲಿಸ್ಟುʼಗಳ ಸಂಖ್ಯೆ ಜಾಸ್ತಿಯಾಗಿದೆ. ಸಿನಿಮಾ ವಲಯದಲ್ಲಿ ಸುಶಾಂತ್ ಎನ್ನುವ ಹೇತ್ಲಾಂಡಿಯ ಕಾಟ […]
ಫ್ಲೆಮಿಂಗೋ ವರ್ಲ್ಡ್ಗೆ ಬೀಗ ಬೀಳಲಿ!
ಅದೆಷ್ಟು ಜನ ಹೆಣ್ಣುಮಕ್ಕಳು ಕಣ್ಣೀರಿಟ್ಟಿದ್ದರೋ, ಯಾರೆಲ್ಲ ಅಯ್ಯೋ ಅಂದಿದ್ದರೋ, ಅವರೆಲ್ಲರ ಶಾಪ ಒಂದೇ ಏಟಿಗೆ ತಟ್ಟಿದೆ. ಮಾಡಬಾರದ್ದನ್ನೆಲ್ಲಾ ಮಾಡಿ ಧಿಮಾಕಿನಿಂದ ತಿರುಗುತ್ತಿದ್ದ ದವನ್ ಎನ್ನುವ ಬ್ಲೇಡ್ ಗಿರಾಕಿ ಈಗ ಬೇಸಿಗೆ ರಜೆ ಕಳೆಯಲು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾನೆ! ರಾಜಾಜಿನಗರದಲ್ಲಿ ʻಫ್ಲೆಮಿಂಗೋ ಸೆಲೆಬ್ರೆಟೀಸ್ ವರ್ಲ್ಡ್ʼ ಎನ್ನುವ ಕಾಸು ಗೆಬರುವ ಅಂಗಡಿ ಇದೆ. ಕಳೆದ ಹತ್ತು ವರ್ಷಗಳಿಂದ ದವನ್ ಸೋಹಾ ಎನ್ನುವ ಫೋರ್ ಟ್ವೆಂಟಿಯೊಬ್ಬ ಈ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಸಿನಿಮಾ ರಂಗದ ಎಲ್ಲ ವಿಭಾಗಗಳ ತರಬೇತಿ ಕೊಡುತ್ತೇನೆ ಅಂತಾ ಬೋರ್ಡು […]
ತಮಿಳಿನ ಲೋಕೇಶ್ ಕನಕರಾಜ್ ಪ್ಯಾನ್ ಇಂಡಿಯಾ ಗಾಳಕ್ಕೆ ಸಿಕ್ಕಿಕೊಳ್ಳುವ ಕನ್ನಡದ ನಟ ಯಾರು?
ಲೋಕೇಶ್ ಕನಕರಾಜ್ ಸದ್ಯ ಇಂಡಿಯಾದ ಸ್ಟಾರ್ ಡೈರೆಕ್ಟರ್. ಮಾನಗರಮ್, ಕೈದಿ, ಮಾಸ್ಟರ್ ಮತ್ತು ವಿಕ್ರಂ ಈ ನಾಲ್ಕು ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಲಿಯೋ ಚಿತ್ರವನ್ನು ಆರಂಭಿಸಿದ್ದಾರೆ. ಇದಾಗುತ್ತಿದ್ಧಂತೇ ಪ್ಯಾನ್ ಇಂಡಿಯಾ ಲೆವೆಲ್ಲಿನ ಮಲ್ಟಿ ಸ್ಟಾರರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಭಾರತದ ಎಲ್ಲ ಭಾಷೆಗಳ ಸೂಪರ್ ಸ್ಟಾರ್ಗಳು ಪಾಲ್ಗೊಳ್ಳಲಿದ್ದಾರೆ. ಸಂಜಯ್ ದತ್, ತ್ರಿಶಾ, ವಿಜಯ್ ಸೇತುಪತಿ, ಕಮಲಹಾಸನ್ ಮತ್ತು ವಿಜಯ್ ಈ ಚಿತ್ರದಲ್ಲಿರಲಿರೋದು ಬಹುತೇಕ ಕನ್ಫರ್ಮ್ ಆಗಿದೆ. ಕನ್ನಡದಿಂದ ಯಾವ ನಟ ಆ […]