ವರ್ಷಾಂತರಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಲೇಡಿ ಸೀರಿಯಲ್ ಕಿಲ್ಲರ್ ಕೆ.ಡಿ ಕೆಂಪಮ್ಮ. ಒಂದೊಂದೂರಿನಲ್ಲಿ ಒಂದೊಂದು ಹೆಸರಿನಿಂದ ಕಾಣಿಸಿಕೊಳ್ಳುತ್ತಿದ್ದ ಈಕೆಯ ಟಾರ್ಗೆಟ್ ಮಹಿಳೆಯರೇ. ಸೈನೈಡ್ ಮೂಲಕ ಮಹಿಳೆಯರನ್ನು ಕೊಂದು ಚಿನ್ನಾಭರಣ ದೋಚುತ್ತಿದ್ದ ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಪಡೆದಿದ್ದಾಳೆ. ಇದೀಗ ಜೈಲುವಾಸಿಯಾಗಿರೋ ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾಳ ರೌದs ಕಥೆ ಚಿತ್ರವಾಗುತ್ತಿದೆ. ಅದಕ್ಕೆ ಸೈನೈಡ್ ಮಲ್ಲಿಕಾ ಎಂದೇ ಟೈಟಲ್ ಇಡಲಾಗಿದೆ! ಈ ಚಿತ್ರದಲ್ಲಿ ಸಂಜನಾ ಪ್ರಕಾಶ್ ಸೈನೈಡ್ ಮಲ್ಲಿಕಾ ಆಗಿ ಕಾಣಿಸಿಕೊಳ್ಳಲಿದ್ದಾಳಂತೆ. ಗುರು ಎಂಟರ್ಟೈನ್ಮೆಂಟ್ ಬ್ಯಾನರಿನಡಿ […]
ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ತಪರಾಕಿ ನೀಡಿದ್ದರಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧವಾಗಿ ಕಟೌಟ್, ಫ್ಲೆಕ್ಸ್ಗಳನ್ನು ಕೂಡಾ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಬ್ಯಾನ್ ಮಾಡಿದೆ. ಆದರೆ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ದ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ! ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿ ಉಪ ವಿಭಾಗದಲ್ಲಿ ಎಆರ್ಓ ಆಗಿರುವ ತಾರಕಾನಾಥ್ ಧ್ರುವ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಮೂವತ್ತನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಲ್ಲಾ […]
ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ಮೀ ಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವು ಅನುಭವಿಸಿದ್ದ ಯಾತನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ. ಈ ಮೂಲಕ ಹಲವಾರು ನಟರು ಬೆತ್ತಲಾಗುತ್ತಿದ್ದಾರೆ. ಇದೇ ಅಭಿಯಾನ ಕನ್ನಡದ ಖ್ಯಾತ ಹಾಡುಗಾರ ರಘು ದೀಕ್ಷಿತ್ ಅವರನ್ನೂ ಲುಂಗಿ ಕಳಚಿ ನಿಲ್ಲಿಸಿ ಬಿಟ್ಟಿದೆ. ಆದರೆ, ತಮ್ಮ ಮೇಲೆ ತೆಲುಗು ಸಿಂಗರ್ ಚಿನ್ಮಯಿ ಶ್ರೀಪಾದ್ ಮಾಡಿದ್ದ ಲೈಂಗಿಕ […]
ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಾವೇ ಭಾಗ್ಯವಂತರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು. ಈಗಿನ ಕಾಲದ ಯುವಜನತೆ ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ನಾವೇ ಭಾಗ್ಯವಂತರು ಎಂಬ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಎಂ.ಹರಿಕೃಷ್ಣ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡರು, ಚಲನಚಿತ್ರ ನಿರ್ಮಾಪಕರಾದ ಡಾ. ಬೆಂ ಕೋ ಶ್ರೀನಿವಾಸ್ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯರಂತಹ ದಿಗ್ಗಜರೆಲ್ಲಾ […]
ಕರಾವಳಿಯ ಪ್ರತಿಭಾತಟಾಕದಲ್ಲಿ ನವಕುಸುಮಗಳು ಕಲಾವಿದರಾಗಿ ಅರಳುವುದು ಹೊಸತೇನಲ್ಲ. ಅದರಲ್ಲೂ ಮಂಗಳೂರು ಭಾಗದ ಅನೇಕ ಕಲಾವಿದರು ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಮುಂತಾದೆಡೆಯೂ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಮಂಗಳೂರು ಸುತ್ತಮುತ್ತದ ಅನೇಕ ಉತ್ಸಾಹಿಗಳು ಕೂಡಿ ಒಂದು ಹೊಸ ಸಿನಿಮಾ ಮಾಡಿದ್ದಾರೆ. ಚಿತ್ರದ ಹೆಸರು ‘ಜಿ-ವನ ಯಜ್ಞ’ ಚಿತ್ರದ ಕಥೆ, ಸಂಭಾಷಣೆ, ಚಿತ್ರಕಥೆ, ಹಾಗೂ ನಿರ್ದೇಶನ ಮಾಡಿರುವವರು ಶಿವು ಸರಳೇಬೆಟ್ಟು. ಪಾರ್ಲೆ ಜಿ ಸಂತೋಷವನ್ನು ನೀಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ. ಆ ಅರ್ಥದಲ್ಲಿ ಜಿ-ವನ ಯಜ್ಞ ಟೈಟಲ್ ನಲ್ಲಿ […]
ಇಲ್ಲೊಂದು ಚಿತ್ರತಂಡ ಸಿನಿಪ್ರಿಯರಿಗೆ ಹೊಸಬಗೆಯ ಚಿತ್ರವೊಂದನ್ನು ತರುವುದಕ್ಕೆ ಸನ್ನದ್ಧವಾಗಿದೆ. ‘ಸಾಲಿಗ್ರಾಮ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಚಿತ್ರವನ್ನು, ಚಿತ್ರೀಕರಣ ಸಾಮಾಗ್ರಿಗಳನ್ನು ಬಾಡಿಗೆಗೆ ನೀಡುತ್ತಿದ್ದ ಹರ್ಷ ಅವರು ನಿರ್ದೇಶನ ಮಾಡಿದ್ದಾರೆ. ಕಥೆ, ಛಾಯಾಗ್ರಹಣ, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಹರ್ಷ, ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳು, ನಂತರದ ಜನ್ಮದಲ್ಲಿ ಕಾಡುವ ಸನ್ನಿವೇಶಗಳನ್ನು ತೋರಿಸುವ ಮುಖಾಂತರ ಕಥೆಯೊಂದನ್ನು ತೆರೆಯ ಮೇಲೆ ತರಲಿದ್ದಾರಂತೆ. ಅಂಬೇಡ್ಕರ್ ಭವನದಲ್ಲಿ ನಡೆದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಶಿವಣ್ಣ, ಈ ನಡುವೆ ಒಳ್ಳೆಯ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ […]
ಇದೀಗ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಕೊಳ್ಳುವಂತೆ ಮಾಡಿರೋ ಚಿತ್ರ ಯಾರಿಗೆ ಯಾರುಂಟು. ಕಿರಣ್ ಗೋವಿ ನಿರ್ದೇಶನದ ಈ ಚಿತ್ರದಲ್ಲಿ ಲೇಖಾ ಚಂದ್ರ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದು ಆ ಬಳಿಕ ಆಕಸ್ಮಿಕ ತಿರುವುಗಳ ಮೂಲಕ, ತನ್ನೊಳಗಿನ ನಟನೆಯ ತಾಕತ್ತಿನ ಮೂಲಕವೇ ನಾಯಕಿಯಾಗಿ ನೆಲೆ ಕಂಡುಕೊಂಡಿರೋ ಲೇಖಾಗೆ ಈ ಚಿತ್ರದಲ್ಲಿ ಚಾಲೆಂಜಿಂಗ್ ಆದೊಂದು ಪಾತ್ರ ಸಿಕ್ಕಿದೆ. ಲೇಖಾ ಚಂದ್ರ ಈ ಚಿತ್ರವನ್ನು ಒಪ್ಪಿಕೊಂಡಿರುವುದೇ ಚೆಂದದ ಕಥೆಯ ಕಾರಣದಿಂದ. ನಿರ್ದೇಶಕ ಕಿರಣ್ ಗೋವಿಯವರು […]
ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯಿಸುತ್ತಿರುವ ಐಲವ್ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎರಡನೇ ಬಾರಿ ಚಂದ್ರು ಮತ್ತು ಉಪ್ಪಿ ಕಾಂಬಿನೇಷನ್ನಿನ ಈ ಚಿತ್ರದ ಸಾಹಸ ದೃಷ್ಯಾವಳಿಗಳು ಹೆಸರಘಟ್ಟದ ಆಚಾರ್ಯ ಕಾಲೇಜಿನಲ್ಲಿ ಸೆರೆಹಿಡಿಯಲ್ಪಡುತ್ತಿವೆ. ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಅವರ ಸಮ್ಮುಖದಲ್ಲಿ ಐ ಲವ್ ಯೂ ಚಿತ್ರದ ಮೈ ನವಿರೇಳಿಸುವ ಸಾಹಸ ದೃಷ್ಯಾವಳಿಗಳ ಚಿತ್ರೀಕರಣ ನಡೆಯುತ್ತಿವೆ. ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್ನ ರೋಚಕ ಸನ್ನಿವೇಶಗಳನ್ನು ಅವ್ಯಾಹತವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. https://www.facebook.com/directorrchandru/videos/245602072779327/ ಈ ಚಿತ್ರವನ್ನು ಆರ್ ಚಂದ್ರು ಅವರೇ […]
ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ಮೂಡಿಗೆ ಹೋಗೋದಿದೆ. ಇದೀಗ ನಟಿ ಮೈತ್ರಿಯಾ ಗೌಡ ಅಂಥಾದ್ದೇ ಮೂಡಿನಲ್ಲಿದ್ದಾರೆ! ಮೈತ್ರಿಯಾಳ ಮುದ್ದಿನ ನಾಯಿ ನಿನ್ನೆ ಜೀವ ತೊರೆದಿದೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳು, ಬಗೆ ಬಗೆಯ ಕಾರ್ಯಕ್ರಮಗಳಲ್ಲಿ ಸದಾ ಬ್ಯುಸಿಯಾಗಿರೋ ಮೈತ್ರಿಯಾಗೆ ಇದ್ದ ಏಕೈಕ ರಿಲೀಫೆಂದರೆ ಅವರ ಮುದ್ದಿನ ನಾಯಿ ಕಾಲಬೈರವಿ ಅಲಿಯಾಸ್ ಪಾಪ. […]
ಕನ್ನಡ ಚಿತ್ರರಂಗದಲಿ ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇದರ ನಡುವೆಯೇ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡಿರುವ ಕವಿರತ್ನರು ತಮ್ಮದೇ ಆಡಿಯೋ ಕಂಪನಿಯನ್ನೂ ಹೊಂದಿದ್ದಾರೆ. ಕನ್ನಡದಲ್ಲಿ ಒಂದೂವರೆ ದಶಕದ ಚೆಂದದ ಚಿತ್ರಗೀತೆಗಳನ್ನು ಪಟ್ಟಿ ಮಾಡಲು ಕೂತರೆ ಅದರಲ್ಲಿ ಖಂಡಿತವಾಗಿಯೂ ವಿ. ನಾಗೇಂದ್ರ ಪ್ರಸಾದ್ ಪಾಲು ಬಲು ದೊಡ್ಡದು. ಸಿನಿಮಾರಂಗದ ನಾನಾ ವಿಭಾಗಗಳಲ್ಲಿ ಅಪ್ಪ ಇಷ್ಟೊಂದು ಬ್ಯುಸಿಯಾಗಿರುವಾಗಲೇ ಮಗಳು ಕೂಡಾ ಬಣ್ಣದಲೋಕಕ್ಕೆ ಎಂಟ್ರಿ ನೀಡುತ್ತಿದ್ದಾಳೆ. ನಾಗೇಂದ್ರ ಪ್ರಸಾದ್ ಪುತ್ರಿ ದಿವಿಜಾ ಮುಖ್ಯ ಭೂಮಿಕೆಯಲ್ಲಿರುವ ‘ಪರಂಗಿ’ ಎನ್ನುವ ಸಿನಿಮಾ […]