ಇಲ್ಲೊಂದು ಚಿತ್ರತಂಡ ಸಿನಿಪ್ರಿಯರಿಗೆ ಹೊಸಬಗೆಯ ಚಿತ್ರವೊಂದನ್ನು ತರುವುದಕ್ಕೆ ಸನ್ನದ್ಧವಾಗಿದೆ. ‘ಸಾಲಿಗ್ರಾಮ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಚಿತ್ರವನ್ನು, ಚಿತ್ರೀಕರಣ ಸಾಮಾಗ್ರಿಗಳನ್ನು ಬಾಡಿಗೆಗೆ ನೀಡುತ್ತಿದ್ದ ಹರ್ಷ ಅವರು ನಿರ್ದೇಶನ ಮಾಡಿದ್ದಾರೆ. ಕಥೆ, ಛಾಯಾಗ್ರಹಣ, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಹರ್ಷ, ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳು, ನಂತರದ ಜನ್ಮದಲ್ಲಿ ಕಾಡುವ ಸನ್ನಿವೇಶಗಳನ್ನು ತೋರಿಸುವ ಮುಖಾಂತರ ಕಥೆಯೊಂದನ್ನು ತೆರೆಯ ಮೇಲೆ ತರಲಿದ್ದಾರಂತೆ. ಅಂಬೇಡ್ಕರ್ ಭವನದಲ್ಲಿ ನಡೆದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಶಿವಣ್ಣ, ಈ ನಡುವೆ ಒಳ್ಳೆಯ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ […]
ಇದೀಗ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಕೊಳ್ಳುವಂತೆ ಮಾಡಿರೋ ಚಿತ್ರ ಯಾರಿಗೆ ಯಾರುಂಟು. ಕಿರಣ್ ಗೋವಿ ನಿರ್ದೇಶನದ ಈ ಚಿತ್ರದಲ್ಲಿ ಲೇಖಾ ಚಂದ್ರ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದು ಆ ಬಳಿಕ ಆಕಸ್ಮಿಕ ತಿರುವುಗಳ ಮೂಲಕ, ತನ್ನೊಳಗಿನ ನಟನೆಯ ತಾಕತ್ತಿನ ಮೂಲಕವೇ ನಾಯಕಿಯಾಗಿ ನೆಲೆ ಕಂಡುಕೊಂಡಿರೋ ಲೇಖಾಗೆ ಈ ಚಿತ್ರದಲ್ಲಿ ಚಾಲೆಂಜಿಂಗ್ ಆದೊಂದು ಪಾತ್ರ ಸಿಕ್ಕಿದೆ. ಲೇಖಾ ಚಂದ್ರ ಈ ಚಿತ್ರವನ್ನು ಒಪ್ಪಿಕೊಂಡಿರುವುದೇ ಚೆಂದದ ಕಥೆಯ ಕಾರಣದಿಂದ. ನಿರ್ದೇಶಕ ಕಿರಣ್ ಗೋವಿಯವರು […]
ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯಿಸುತ್ತಿರುವ ಐಲವ್ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎರಡನೇ ಬಾರಿ ಚಂದ್ರು ಮತ್ತು ಉಪ್ಪಿ ಕಾಂಬಿನೇಷನ್ನಿನ ಈ ಚಿತ್ರದ ಸಾಹಸ ದೃಷ್ಯಾವಳಿಗಳು ಹೆಸರಘಟ್ಟದ ಆಚಾರ್ಯ ಕಾಲೇಜಿನಲ್ಲಿ ಸೆರೆಹಿಡಿಯಲ್ಪಡುತ್ತಿವೆ. ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಅವರ ಸಮ್ಮುಖದಲ್ಲಿ ಐ ಲವ್ ಯೂ ಚಿತ್ರದ ಮೈ ನವಿರೇಳಿಸುವ ಸಾಹಸ ದೃಷ್ಯಾವಳಿಗಳ ಚಿತ್ರೀಕರಣ ನಡೆಯುತ್ತಿವೆ. ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್ನ ರೋಚಕ ಸನ್ನಿವೇಶಗಳನ್ನು ಅವ್ಯಾಹತವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. https://www.facebook.com/directorrchandru/videos/245602072779327/ ಈ ಚಿತ್ರವನ್ನು ಆರ್ ಚಂದ್ರು ಅವರೇ […]
ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ಮೂಡಿಗೆ ಹೋಗೋದಿದೆ. ಇದೀಗ ನಟಿ ಮೈತ್ರಿಯಾ ಗೌಡ ಅಂಥಾದ್ದೇ ಮೂಡಿನಲ್ಲಿದ್ದಾರೆ! ಮೈತ್ರಿಯಾಳ ಮುದ್ದಿನ ನಾಯಿ ನಿನ್ನೆ ಜೀವ ತೊರೆದಿದೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳು, ಬಗೆ ಬಗೆಯ ಕಾರ್ಯಕ್ರಮಗಳಲ್ಲಿ ಸದಾ ಬ್ಯುಸಿಯಾಗಿರೋ ಮೈತ್ರಿಯಾಗೆ ಇದ್ದ ಏಕೈಕ ರಿಲೀಫೆಂದರೆ ಅವರ ಮುದ್ದಿನ ನಾಯಿ ಕಾಲಬೈರವಿ ಅಲಿಯಾಸ್ ಪಾಪ. […]
ಕನ್ನಡ ಚಿತ್ರರಂಗದಲಿ ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇದರ ನಡುವೆಯೇ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡಿರುವ ಕವಿರತ್ನರು ತಮ್ಮದೇ ಆಡಿಯೋ ಕಂಪನಿಯನ್ನೂ ಹೊಂದಿದ್ದಾರೆ. ಕನ್ನಡದಲ್ಲಿ ಒಂದೂವರೆ ದಶಕದ ಚೆಂದದ ಚಿತ್ರಗೀತೆಗಳನ್ನು ಪಟ್ಟಿ ಮಾಡಲು ಕೂತರೆ ಅದರಲ್ಲಿ ಖಂಡಿತವಾಗಿಯೂ ವಿ. ನಾಗೇಂದ್ರ ಪ್ರಸಾದ್ ಪಾಲು ಬಲು ದೊಡ್ಡದು. ಸಿನಿಮಾರಂಗದ ನಾನಾ ವಿಭಾಗಗಳಲ್ಲಿ ಅಪ್ಪ ಇಷ್ಟೊಂದು ಬ್ಯುಸಿಯಾಗಿರುವಾಗಲೇ ಮಗಳು ಕೂಡಾ ಬಣ್ಣದಲೋಕಕ್ಕೆ ಎಂಟ್ರಿ ನೀಡುತ್ತಿದ್ದಾಳೆ. ನಾಗೇಂದ್ರ ಪ್ರಸಾದ್ ಪುತ್ರಿ ದಿವಿಜಾ ಮುಖ್ಯ ಭೂಮಿಕೆಯಲ್ಲಿರುವ ‘ಪರಂಗಿ’ ಎನ್ನುವ ಸಿನಿಮಾ […]
ಹೈದ್ರಾಬಾದಿನ ಚಿನ್ಮಯಿ ಶ್ರೀಪಾದ ಎನ್ನುವ ಗಾಯಕಿ ರಾಕ್ ಸಿಂಗರ್ ರಘು ದೀಕ್ಷಿತ್ ವಿರುದ್ಧ ಬಾಂಬು ಸಿಡಿಸಿದ್ದಾಳೆ! ಹೆಸರು ಹೇಳಲು ಇಚ್ಚಿಸದ ಬೇರೊಬ್ಬ ಗಾಯಕಿಯೊಬ್ಬರು ರಘು ದೀಕ್ಷಿತ್ ಮೇಲೆ ಮಾಡಿರುವ ಆರೋಪವನ್ನು ಗಾಯಕಿ ಚಿನ್ಮಯಿ ಟ್ವಿಟರಿನಲ್ಲಿ ಹಾಕಿಕೊಂಡಿದ್ದಾರೆ. ಅದೊಂದು ದಿನ ಗಾಯಕಿಯನ್ನು ರೆಕಾರ್ಡಿಂಗಿಗೆಂದು ತಮ್ಮ ಸ್ಟುಡಿಯೋಗೆ ಕರೆಸಿಕೊಂಡ ರಘು ದೀಕ್ಷಿತ್ ‘ನನ್ನ ಹೆಂಡತಿಗೆ ಹುಷಾರಿಲ್ಲ, ಅದೂ ಇದೂ’ ಅಂತೆಲ್ಲಾ ಆಕೆಯ ಬಗ್ಗೆ ಕೆಟ್ಟದಾಗಿ ಮಾತು ಶುರು ಮಾಡಿದರಂತೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ರಘು ಪತ್ನಿ ಮಯೂರಿ ಚನ್ನಾಗೇ ಇದ್ದರಂತೆ. […]
ಕಳೆದ ಸೀಜನ್ನಿನ ಬಿಗ್ಬಾಸ್ ಶೋನಲ್ಲಿ ಸಮೀರ್ ಆಚಾರ್ಯನ ಕಪಾಳಕ್ಕೆ ಬಾರಿಸಿ ಹೋದ ಸಂಯುಕ್ತಾ ಹೆಗಡೆ ಈಗೆಲ್ಲಿದ್ದಾಳೆ? ಹೀಗೊಂದು ಪ್ರಶ್ನೆ ಯಾರನ್ನು ಕಾಡಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ಈ ಸಂಯುಕ್ತಾ ಅಖಂಡ ಒಂದು ವರ್ಷಗಳ ಕಾಲ ಕಣ್ಮರೆಯಾಗಿದ್ದದ್ದಂತೂ ನಿಜ. ಆ ನಂತರದಲ್ಲಿ ತುಂಡು ಬಟ್ಟೆ ತೊಟ್ಟು ಪೋಸು ಕೊಟ್ಟರೂ, ರೈಲ್ವೇ ಹಳಿ ಮೇಲೆ ಕಾಲೆತ್ತಿಕೊಂಡು ಬಿದ್ದರೂ ಸಂಯುಕ್ತಾಗೆ ಛೀಮಾರಿ ಸಿಕ್ಕಿತೇ ಹೊರತು ಬೇರೇನೂ ಗಿಟ್ಟಿರಲಿಲ್ಲ! ಹೀಗೆ ಮರೆಯಾದಂತಿದ್ದ ಸಂಯುಕ್ತಾ ಇದೀಗ ಸನ್ನಿ ಲಿಯೋನ್ ನಡೆಸಿ ಕೊಡುವ ಸ್ಪಿಡ್ಜ್ ವಿಲ್ಲಾ […]
ಅದೆಷ್ಟೇ ಬೇಡಿಕೆಯ ನಟಿಯರಾದರೂ ಮದುವೆಯಾದ ನಂತರ ಮರೆಯಾಗೋದು ಮಾಮೂಲು. ಆದರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ಚಂದ್ರ ಮಾತ್ರ ಮದುವೆಯಾದ ನಂತರವೇ ನಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಯಕಿಯಾಗಿಯೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಗಿಣಿ ನಟನೆಗಿಳಿಯುತ್ತಾರೆಂಬ ಬಗ್ಗೆ ಮದುವೆಯಾದ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿತ್ತು. ಕಡೆಗೂ ಅವರು ಪ್ರಜ್ವಲ್ ನಟನೆಯ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸುತ್ತಾರೆಂಬುದೂ ಪಕ್ಕಾ ಆಗಿತ್ತು. ಇದೀಗ ಅಧಿಕೃತವಾಗಿಯೇ ರಾಗಿಣಿ ಥ್ರಿಲ್ಲರ್ ಚಿತ್ರವೊಂದರಲ್ಲಿ ನಾಯಕಿಯಾಗುತ್ತಿರೋ ಸುದ್ದಿ ಹೊರ ಬಿದ್ದಿದೆ. ಈ […]
ಫೇಸ್ಬುಕ್ಕಲ್ಲಿ ಹುಡುಗೀರ ಬೇಟೆಗೆ ಬಂದೂಕು ಹಿಡಿದು ಕೂತ ಕಾಮುಕರದ್ದೊಂದು ದೊಡ್ಡ ಸಂಖ್ಯೆಯೇ ಇದೆ. ಈ ಅನಿಷ್ಠ ಕಾರ್ಯಕ್ಕೆ ಹೆಚ್ಚಾಗಿ ಚಿತ್ರರಂಗದ ಹೆಸರೇ ಬಳಕೆಯಾಗುತ್ತಿದೆ ಎಂಬುದು ದುರಂತ ಸತ್ಯ. ಇದೀಗ ತನ್ನನ್ನು ತಾನು ನಿರ್ದೇಶಕ ಅಂತ ಬಿಂಬಿಸಿಕೊಂಡಿರೋ ಪ್ರಕಾಶ್ ಬಸವನಬಾಗೇವಾಡಿ ಎಂಬ ಕಂಮಗಿಯ ವಿರುದ್ಧ ನೀಮಾ ಗೌಡ (ಹೆಸರು ಬದಲಿಸಿದೆ) ಎಂಬ ನವರಂಗಿಯೊಬ್ಬಳು ತಿರುಗಿ ಬಿದ್ದಿದ್ದಾಳೆ! ಈ ಆಸಾಮಿ ಪ್ರಕಾಶ್ ತನ್ನ ಹೆಸರಿನ ಮುಂದೆ ಪುಣ್ಯಸ್ಥಳವಾದ ಬಸವನಬಾಗೇವಾಡಿಯ ಹೆಸರನ್ನು ತಗುಲಿಸಿಕೊಂಡಿದ್ದಾನೆ. ಫೇಸ್ ಬುಕ್ನಲ್ಲಿ ಇವನದ್ದೊಂದು ಪ್ರೊಫೈಲ್ ಇದೆ. ಅದಕ್ಕೆ […]
ಭರ್ತಿ ಐದು ವರ್ಷ ಪ್ರಸಾರವಾದ ಪುಟ್ಗೌರಿ ಮದುವೆ ಸೀರಿಯಲ್ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿರುವವರು ರಂಜಿನಿ ರಾಘವನ್. ಆರಂಭದಿಂದ ಇಲ್ಲಿವರೆಗೂ ಸಾಂಪ್ರದಾಯಿಕ ಲುಕ್ಕು, ಉಡುಗೆ ತೊಟ್ಟು ಪುಟ್ಗೌರಿ ಎಂದೇ ಖ್ಯಾತರಾಗಿರುವ ರಂಜಿನಿ ಹೆಂಗಳೆಯರ ಪಾಲಿಗೆ ಮನೆ ಮಗಳು. ಅವರೀಗ ಟಕ್ಕರ್ ಚಿತ್ರದಲ್ಲಿ ಮನೋಜ್ಗೆ ನಾಯಕಿಯಾಗಿಯೂ ಅಭಿನಯಿಸುತ್ತಿದ್ದಾರೆ. ಇಂಥಾ ಪುಟ್ಗೌರಿಯ ಫೋಟೋ ಒಂದೀಗ ಟ್ರೋಲ್ ಪೇಜುಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಜನರೂ ಕೂಡಾ ಒಂಥರಾ ಶಾಕ್ ಮತ್ತು ಅಚ್ಚರಿ ಮಿಶ್ರಿತವಾದ ಗೊಂದಲದಲ್ಲಿದ್ದಾರೆ. ಒಂದು ಕಡೆ ಮೈ ತುಂಬಾ ಸೀರೆ ಉಟ್ಟು […]