ಲಹರಿ ಆಡಿಯೋ ಸಂಸ್ಥೆಯ ಮೂಲಕ ಹತ್ತಾರು ಪ್ರಾಕಾರಗಳ ಸಾವಿರಾರು ಹಾಡುಗಳನ್ನು ಕನ್ನಡಿಗರಿಗೆ ಕೇಳಿಸಿದವರು ಲಹರಿ ವೇಲು. ಹಾಡುಗಳ ಜೊತೆಗೇ ಬದುಕುವಂಥಾ ವ್ಯಕ್ತಿತ್ವದ ವೇಲು ಅವರಿಂದಲೇ ಹಾಡುಗಳನ್ನು ಹಾಡಿಸಬೇಕೆಂಬ ಆಲೋಚನೆ ಈ ಹಿಂದೆಯೇ ದಿಗ್ಗಜ ಸಂಗೀತ ನಿರ್ದೇಶಕರುಗಳಿಗೆ ಬಂದಿದ್ದಿದೆ. ಆದರೆ ರಾಜ್ಯ ಪ್ರಶಸ್ತಿ ವಿಜೇತ ಯುವ ಸಂಗೀತ ನಿರ್ದೇಶಕ ಅಭಿಮನ್ ರಾಯ್ ವೇಲು ಅವರಿಂದ ಹಾಡಿಸುವಲ್ಲಿ ಕಡಗೂ ಗೆದ್ದಿದ್ದಾರೆ. ಅಭಿಮನ್ ರಾಯ್ ವೇಲು ಅವರಿಂದ ಹಾಡಿಸುವಲ್ಲಿ ಮಾತ್ರ ಗೆದ್ದಿಲ್ಲ, ವೇಲು ಹಾಡಿದ ಮೊದಲ ಹಾಡೂ ಕೂಡಾ ಜನಮನ ಗೆದ್ದಿದೆ. […]
ರಿಷಬ್ ಶೆಟ್ಟಿ ಮತ್ತವರ ತಂಡದವರು ಭರ್ಜರಿ ಗೆಲುವೊಂದರ ಖುಷಿಯಲ್ಲಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಬೆರಗಾಗಿಸುವಂಥಾ ಯಶಸ್ಸಿನ ರೂವಾರಿಯಾಗಿದೆ. ಕಂಟೆಂಟು, ನಿರೂಪಣೆಯಲ್ಲಿ ಹೊಸತನ ಇದ್ದರೆ ಖಂಡಿತಾ ಕನ್ನಡದ ಪ್ರೇಕ್ಷಕರು ಕೈ ಬಿಡಲಾರರೆಂಬ ವಿಚಾರವೂ ಈ ಮೂಲಕವೇ ಸಾಬೀತಾಗಿದೆ. ಈ ಚಿತ್ರ ಬಿಡುಗಡೆಯಾಗೋ ಮುನ್ನವೇ ಇದು ಪಕ್ಕಾ ಜ್ಯೂನಿಯರ್ ಕಿರಿಕ್ ಪಾರ್ಟಿ ಎಂಬ ವಿಚಾರವನ್ನು ರಿಷಬ್ ಸ್ಪಷ್ಟಪಡಿಸಿದ್ದರು. ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಸಾರ್ವಕಾಲಿಕ ದಾಖಲೆ ಮಾಡಿತ್ತಲ್ಲಾ? ಜ್ಯೂನಿಯರ್ ಕಿರಿಕ್ […]
ಸಾಹಸಸಿಂಹ ಡಾ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಪಡ್ಡೆಹುಲಿ ಚಿತ್ರತಂಡ ಭಿನ್ನವಾದೊಂದು ಗಿಫ್ಟ್ ನೀಡಿದೆ. ನಾಯಕ ಶ್ರೇಯಸ್ ಅಭಿನಯಿಸಿರೋ ರ್ಯಾಪ್ ಸಾಂಗ್ ಒಂದನ್ನು ಬಿಡುಗಡೆ ಮಾಡಿತ್ತು. ಆ ಹಾಡು ಎಲ್ಲ ವಿಷ್ಣು ಅಭಿಮಾನಿಗಳ ಮನ ಗೆದ್ದಿದೆ! ವಿಷ್ಣು ಅಂದರೆ ಅಭಿಮಾನಿಗಳ ಮನಸಲ್ಲಿ ಮೂಡಿಕೊಳ್ಳೋದು ನಾಗರಹಾವು ಚಿತ್ರದ ಪಾತ್ರ. ಆ ಎನರ್ಜಿಟಿಕ್ ಪಾತ್ರದ ಸೀನುಗಳ ಮೂಲಕವೇ ಆರಂಭವಾಗೋ ಈ ರ್ಯಾಪ್ ಸಾಂಗ್ನಲ್ಲಿ ವಿಷ್ಣು ಅಭಿನಯದ ಹೆಸರು ಮತ್ತವರ ಬಿರುದುಗಳನ್ನಿಟ್ಟುಕೊಂಡೇ ಸಾಹಿತ್ಯ ರಚಿಸಲಾಗಿದೆ. ಈ ಹಾಡಿನಲ್ಲಿ ನಾಯಕ ಶ್ರೇಯಸ್ ಪಕ್ಕಾ ವಿಷ್ಣುವರ್ಧನ್ ಅವರ […]
ಹಿರಿಯ ನಟ ಸದಾಶಿವ ಬ್ರಹ್ಮಾವರ್ ಬ್ರಹ್ಮಾವರ್ ನಿಧನ ಹೊಂದಿದ್ದಾರೆ. ಮೂರು ತಲೆಮಾರುಗಳ ನಟರೊಂದಿಗೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದ, ಆರುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾ ಕಾಡುವಂಥಾ ಪಾತ್ರಗಳನ್ನು ನಿರ್ವಹಿಸಿದ್ದ ಅವರು ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ವಯಸ್ಸು ಬಳಲಿಸಿದರೂ ಬಣ್ಣದ ನಂಟು ಕಳೆದುಕೊಳ್ಳದೆ ಸಕ್ರಿಯರಾಗಿದ್ದವರು ಸದಾಶಿವ ಬ್ರಹ್ಮಾವರ. ಡಾ ರಾಜ್ ಕುಮಾರ್ ಅವರ ಚಿತ್ರಗಳಿಂದ ಮೊದಲ್ಗೊಂಡಿ ಕಿಚ್ಚಾ ಸುದೀಪ್ ಅವರ ಸ್ವಾತಿ ಮುತ್ತು ಚಿತ್ರ ಸೇರಿದಂತೆ ಮೂರು ತಲೆಮಾರುಗಳ ನಟರ ಜೊತೆ ನಟಿಸಿದ್ದ ಹೆಗ್ಗಳಿಕೆ ಸದಾಶಿವರದ್ದು. ಪೋಷಕ ಪಾತ್ರಗಳಿಗೆ […]
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ವರ್ಷಗಳಿಗೊಂದು ಚಿತ್ರ ಮಾಡುತ್ತಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲರಲ್ಲಿ ಪ್ರೀತಿ ತುಂಬಿದ ತಕರಾರೊಂದಿದೆ. ಆದರೆ ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಸಾಕ್ಷಾತ್ತು ಅಂಬರೀಶ್ ಅವರೇ ಕಿವಿ ಹಿಂಡಿದ್ದರಲ್ಲಾ? ಅದರಿಂದಾಗಿಯೇ ಧ್ರುವ ಬೇಗ ಬೇಗನೆ ಸಿನಿಮಾ ಮುಗಿಸಿಕೊಳ್ಳಲು ತಯಾರಾಗಿದ್ದರು. ಈ ವಿದ್ಯಮಾನದ ಹಿಂಚುಮುಂಚಲ್ಲಿಯೇ ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ನಟಿಸಲೂ ಧ್ರುವ ತಯಾರಾಗಿದ್ದರು. ದುರಂತವೆಂದರೆ ತಿಂಗಳುಗಳು ಸರಿದು ವರ್ಷವೊಂದು ಜಮೆಯಾಗುತ್ತಾ ಬಂದರೂ ಪೊಗರು ಚಿತ್ರದ ಸುಳಿವೇ ಇಲ್ಲ. ಇದರಿಂದ ನಿರಾಸೆಗೊಂಡವರೆಲ್ಲ ಕಾರಣ ಕೆದಕಲಾರಂಭಿಸಿದ್ದರು. […]
ಬಿಲ್ವ ಕ್ರಿಯೇಷನ್ಸ್ ನಿರ್ಮಾಣದ ಇರುವುದೆಲ್ಲವ ಬಿಟ್ಟು ನಾಳೆ ತೆರೆಗೆ ಬರುತ್ತಿದೆ. ಇದೀಗ ನಿರ್ದೇಶಕ ಕಾಂತ ಕನ್ನಲಿ ಯೋಗರಾಜ ಭಟ್ಟರಿಂದ ವಿಶೇಷವಾದ ಪ್ರಮೋಷನ್ ಸಾಂಗ್ ಒಂದನ್ನು ಬರೆಸಿ, ಅಷ್ಟೇ ವಿಶೇಷವಾದ ಸಂಗೀತದೊಂದಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರದ ಆಂತರ್ಯಕ್ಕೆ ಪೂರಕವಾದ ಈ ಹಾಡೀಗ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅದ್ಭುತ ಪ್ರತಿಕ್ರಿಯೆಗಳೇ ಸಿಗುತ್ತಿವೆ. `ಈ ಜೀವನ ಎಲ್ಲಾನು ಕಲಿಸುತ್ತೆ ಅಮಿಕಂಡಿರೋದನ್ನ ಬಿಟ್ಟು. ಈ ಜೀವನ ನಮಗರ್ಥ ಆಗೋದ್ರೊಳಗೆ ಎಲ್ಲ ಕೂತ್ಕೊಂಡ್ಬಿಟ್ವಲ್ಲಪ್ಪ ಕೆಟ್ಟು’ ಎಂಬ ಈ ಹಾಡನ್ನು ಕನ್ನಡ ಕೋಗಿಲೆ ಖ್ಯಾತಿಯ […]
ಭೋಳೇತನವನ್ನು ಗಂಭೀರವಾದುದೇನನ್ನೋ ದಾಟಿಸುವ ವಾಹಕದಂತೆ ಬಳಸಿಕೊಂಡು ಬಂದಿರುವವರು ಯೋಗರಾಜ ಭಟ್. ನಿರ್ದೇಶಕರಾಗಿ ಜನಮಾನಸದಲ್ಲಿ ನೆಲೆಯೂರಿರುವ ಭಟ್ಟರನ್ನು ಗೀತರಚನೆಕಾರರಾಗಿ ಇಷ್ಟಪಡುವವರ ಸಂಖ್ಯೆಯೂ ದೊಡ್ಡದಿದೆ. ಅವರದ್ದೊಂದು ಚಿತ್ರ ಘೋಷಣೆಯಾದೇಟಿಗೆ ಮೊದಲು ಗಮನ ನೆಡುವುದು ಹಾಡುಗಳ ಮೇಲೆ! ಸದ್ಯ ಅವರು ನಿರ್ದೇಶನ ಮಾಡಿರೋ ಪಂಚತಂತ್ರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಯಥಾ ಪ್ರಕಾರವಾಗಿ ಈ ಚಿತ್ರದ ಹಾಡುಗಳ ಬಗೆಗೂ ಜನರಲ್ಲೊಂದು ಕತೂಹಲವಿದೆ. ಇದೀಗ ಯೋಗರಾಜ ಭಟ್ಟರು ಪಂಚತಂತ್ರದ ಐಟಂ ಸಾಂಗ್ ಒಂದನ್ನು ಚಿತ್ರೀಕರಿಸಿಕೊಂಡಿದ್ದಾರೆ! ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಎಂಬ ಈ […]
ಇಡೀ ರಾಜ್ಯದ ತುಂಬಾ ಸುದ್ದಿಯಾಗುವಂತೆ ಅದ್ದೂರಿಯಾಗಿ ರಶ್ಮಿಕಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ಗಳು… ಇದೆಲ್ಲದರಿಂದ ಕಂಗೆಟ್ಟಿರೋ ರಕ್ಷಿತ್ ನೆಮ್ಮದಿ ಅರಸಿಕೊಂಡು ವಿದೇಶದತ್ತ ತೆರಳಿದರಾ? ಇಂಥಾದ್ದೊಂದು ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿಯೂ ಹುಟ್ಟಿಕೊಂಡಿದೆ. ರಕ್ಷಿತ್ ಶೆಟ್ಟಿ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಬ್ಯಾಂಕಾಕ್ಗೆ ತೆರಳಿದ್ದಾರೆ. ಅಲ್ಲಿಯೇ ಒಂದಷ್ಟು ಸ್ಥಳಗಳಿಗೆ ಭೇಟಿ ನೀಡಿ ನಿರಾಳವಾಗೋ ಯೋಜನೆಯನ್ನೂ […]