ಬಿಲ್ವ ಕ್ರಿಯೇಷನ್ಸ್ ನಿರ್ಮಾಣದ ಇರುವುದೆಲ್ಲವ ಬಿಟ್ಟು ನಾಳೆ ತೆರೆಗೆ ಬರುತ್ತಿದೆ. ಇದೀಗ ನಿರ್ದೇಶಕ ಕಾಂತ ಕನ್ನಲಿ ಯೋಗರಾಜ ಭಟ್ಟರಿಂದ ವಿಶೇಷವಾದ ಪ್ರಮೋಷನ್ ಸಾಂಗ್ ಒಂದನ್ನು ಬರೆಸಿ, ಅಷ್ಟೇ ವಿಶೇಷವಾದ ಸಂಗೀತದೊಂದಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರದ ಆಂತರ್ಯಕ್ಕೆ ಪೂರಕವಾದ ಈ ಹಾಡೀಗ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅದ್ಭುತ ಪ್ರತಿಕ್ರಿಯೆಗಳೇ ಸಿಗುತ್ತಿವೆ. `ಈ ಜೀವನ ಎಲ್ಲಾನು ಕಲಿಸುತ್ತೆ ಅಮಿಕಂಡಿರೋದನ್ನ ಬಿಟ್ಟು. ಈ ಜೀವನ ನಮಗರ್ಥ ಆಗೋದ್ರೊಳಗೆ ಎಲ್ಲ ಕೂತ್ಕೊಂಡ್ಬಿಟ್ವಲ್ಲಪ್ಪ ಕೆಟ್ಟು’ ಎಂಬ ಈ ಹಾಡನ್ನು ಕನ್ನಡ ಕೋಗಿಲೆ ಖ್ಯಾತಿಯ […]
ಭೋಳೇತನವನ್ನು ಗಂಭೀರವಾದುದೇನನ್ನೋ ದಾಟಿಸುವ ವಾಹಕದಂತೆ ಬಳಸಿಕೊಂಡು ಬಂದಿರುವವರು ಯೋಗರಾಜ ಭಟ್. ನಿರ್ದೇಶಕರಾಗಿ ಜನಮಾನಸದಲ್ಲಿ ನೆಲೆಯೂರಿರುವ ಭಟ್ಟರನ್ನು ಗೀತರಚನೆಕಾರರಾಗಿ ಇಷ್ಟಪಡುವವರ ಸಂಖ್ಯೆಯೂ ದೊಡ್ಡದಿದೆ. ಅವರದ್ದೊಂದು ಚಿತ್ರ ಘೋಷಣೆಯಾದೇಟಿಗೆ ಮೊದಲು ಗಮನ ನೆಡುವುದು ಹಾಡುಗಳ ಮೇಲೆ! ಸದ್ಯ ಅವರು ನಿರ್ದೇಶನ ಮಾಡಿರೋ ಪಂಚತಂತ್ರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಯಥಾ ಪ್ರಕಾರವಾಗಿ ಈ ಚಿತ್ರದ ಹಾಡುಗಳ ಬಗೆಗೂ ಜನರಲ್ಲೊಂದು ಕತೂಹಲವಿದೆ. ಇದೀಗ ಯೋಗರಾಜ ಭಟ್ಟರು ಪಂಚತಂತ್ರದ ಐಟಂ ಸಾಂಗ್ ಒಂದನ್ನು ಚಿತ್ರೀಕರಿಸಿಕೊಂಡಿದ್ದಾರೆ! ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಎಂಬ ಈ […]
ಇಡೀ ರಾಜ್ಯದ ತುಂಬಾ ಸುದ್ದಿಯಾಗುವಂತೆ ಅದ್ದೂರಿಯಾಗಿ ರಶ್ಮಿಕಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ಗಳು… ಇದೆಲ್ಲದರಿಂದ ಕಂಗೆಟ್ಟಿರೋ ರಕ್ಷಿತ್ ನೆಮ್ಮದಿ ಅರಸಿಕೊಂಡು ವಿದೇಶದತ್ತ ತೆರಳಿದರಾ? ಇಂಥಾದ್ದೊಂದು ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿಯೂ ಹುಟ್ಟಿಕೊಂಡಿದೆ. ರಕ್ಷಿತ್ ಶೆಟ್ಟಿ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಬ್ಯಾಂಕಾಕ್ಗೆ ತೆರಳಿದ್ದಾರೆ. ಅಲ್ಲಿಯೇ ಒಂದಷ್ಟು ಸ್ಥಳಗಳಿಗೆ ಭೇಟಿ ನೀಡಿ ನಿರಾಳವಾಗೋ ಯೋಜನೆಯನ್ನೂ […]
ಕನ್ನಡ ಚಿತ್ರರಂಗದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಪರ್ವ ಮೆಲ್ಲಗೆ ಕಣ್ತೆರೆಯುತ್ತಿದೆ. ಸುದೀಪ್ ಜೊತೆಯಾಗಿ ನಟಿಸಿದ್ದ ಉಪೇಂದ್ರ ಇದೀಗ ರವಿಚಂದ್ರ ಚಿತ್ರದ ಮೂಲಕ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಈ ಚಿತ್ರ ಸೆಟ್ಟೇರಿದ ಬೆನ್ನಲ್ಲೇ ಮತ್ತೊಂದು ಮಲ್ಟಿಸ್ಟಾರ್ ಚಿತ್ರದ ಬಗೆಗಿನ ಸುದ್ದಿ ಹೊರ ಬಿದ್ದಿದೆ. ಇದು ಫಲಿಸಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ. ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರು ಒಟ್ಟಾಗಿ ನಟಿಸಲು ಒಪ್ಪಿಕೊಂಡರೆ ಆ ಚಿತ್ರವನ್ನು ನಿರ್ಮಾಣ ಮಾಡಲು […]
ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ಜೊತೆ ಮದುವೆಯಾದ ಬಳಿಕ ಮೇಘನಾ ಒಂದು ವಿರಾಮ ತೆಗೆದುಕೊಂಡಿದ್ದರು. ಅವರು ಮತ್ತೆ ನಟನೆಗೆ ವಾಪಾಸಾಗುತ್ತಾರಾ ಅಥವಾ ಫ್ಯಾಮಿಲಿ ಲೈಫಲ್ಲಿ ಕಳೆದುಹೋಗಿ ಬಿಡುತ್ತಾರಾ ಎಂಬ ಅಭಿಮಾನಿಗಳ ಆತಂಕ ಈ ಚಿತ್ರದ ಮೂಲಕ ದೂರಾಗಿದೆ. ಒಂದರ್ಥದಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಭಿನ್ನವಾದೊಂದು ಪಾತ್ರದ ಮೂಲಕ ಅವರು ಭರ್ಜರಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದಾರೆ. ದೇವರಾಜ್ ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರವೂ ನಮ್ಮೊಳಗೆ […]
ಹೃದಯಕೆ ಹೆದರಿಕೆ ಹೀಗೆ ನೋಡಿದರೆ! ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರ ಇದುವರೆಗೂ ನಾನಾ ಥರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಇದೀಗ ಚೆಂದದ ಹಾಡುಗಳ ಸರದಿ. ಹಂತ ಹಂತವಾಗಿ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುತ್ತಿರೋ ಚಿತ್ರ ತಂಡ ಇದೀಗ ಹೊಸಾ ಹಾಡಿನ ಲಿರಿಕಲ್ ವೀಡಿಯೋವೊಂದನ್ನು ಅನಾವರಣಗೊಳಿಸಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನದ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ಘಂಟೆ ಕಳೆಯುವಷ್ಟರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಜಿತ್ ಹೆಗಡೆ ಹಾಡಿರೋ `ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ […]
ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ತಿಲಕ್ ಶೇಖರ್ ಕೂಡಾ ನಾಯಕ. ಇದುವರೆಗೂ ವಿಲನ್ ರೋಲ್ಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಾ ಇತ್ತೀಚೆಗೆ ಹೀರೋ ಆಗಿಯೂ ನಟಿಸಲಾರಂಭಿಸಿರೋ ತಿಲಕ್ ಈ ಚಿತ್ರದಲ್ಲಿ ಈ ಜನರೇಷನ್ನಿನ ಹುಡುಗರ ಮನೋಭೂಮಿಕೆಯ ಪ್ರಾತಿನಿಧಿಕ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ತನ್ನ ಪಾಲಿಗೆ ತುಂಬಾ ಸ್ಪೆಷಲ್ ಎಂಬ ಖುಷಿ ಹೊಂದಿರೋ ತಿಲಕ್ ಅಷ್ಟೇ ಭಿನ್ನವಾದ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಇರುವುದೆಲ್ಲವ ಬಿಟ್ಟು ಮತ್ತೇನೋ ಬಯಸಲು ಹೋಗಿ ಇರುವೆ ಬಿಟ್ಟುಕೊಳ್ಳುವ ಕಥೆ ಹೊಂದಿರೋ ಈ […]
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಚಿತ್ರೀಕರಣದ ಹಂತದಲ್ಲಿಯೇ ಹಂತ ಹಂತವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಈ ಚಿತ್ರದೊಳಗೆ ಸಾಹಸಸಿಂಹ ವಿಷ್ಣುವರ್ಧನ್ ಅವರೆಡೆಗಿನ ಅಭಿಮಾನವೇ ಮೇಳೈಸಿದೆ. ಹಾಗಿರುವಾಗ ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಪಡ್ಡೆಹುಲಿಯ ಕಡೆಯಿಂದೊಂದು ಕೊಡುಗೆ ನಿರೀಕ್ಷಿತವೇ. ಅದಕ್ಕಾಗಿ ನಿರ್ದೇಶಕ ಗುರುದೇಶಪಾಂಡೆ ತಯಾರಾಗಿದ್ದಾರೆ! ಸಾಹಸಸಿಂಹನಿಗೆ ಅರ್ಪಿಸಲೆಂದೇ ವಿಶೇಷವಾದೊಂದು ರ್ಯಾಪ್ ಸಾಂಗನ್ನು ಚಿತ್ರತಂಡ ರೂಪಿಸಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಚೆಂದದ್ದೊಂದು ಟ್ಯೂನು ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣವೂ ಈಗಾಗಲೇ ಮುಗಿದಿದೆ. ಇದನ್ನು ಇದೇ ತಿಂಗಳ […]