https://youtu.be/RgcD826Cg-M ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಮನಮಿಡಿಯುವ ನೈಜ ಘಟನೆಯನ್ನಾಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮೊನ್ನೆಯಷ್ಟೇ ನಿರ್ದೇಶಕ ರಘುರಾಮ್ ಈ ಚಿತ್ರದ ಟೀಸರ್ಅನ್ನು ಬಿಡುಗಡೆಗೊಳಿಸಿದ್ದರು. ಖಡಕ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅನಾವರಣಗೊಂಡ ಟೀಸರ್ ಯೂಟ್ಯೂಬ್ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಇದೀಗ ರಾಜ್ಯದ ಗಡಿ ದಾಟಿ ಪರಭಾಷಾ ಚಿತ್ರರಂಗದ ನಟನಟಿಯರನ್ನೂ ಮೋಡಿಗೀಡುಮಾಡಿದೆ. ಕನ್ನಡದ ಮಿಸ್ಸಿಂಗ್ ಬಾಯ್ ಟೀಸರ್ ಬಗ್ಗೆ ತೆಲುಗು ನಟ ನಟಿಯರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟಾಲಿವುಡ್ ನಟಿ ಪ್ರಿಯಾ ರಾಧಾ ಕೃಷ್ಣನ್, ಆರ್ಯ, ಹಂಸ ನಂದಿನಿ, […]
ಸಂಭಾಷಣೆಕಾರರಾಗಿ ಪ್ರಸಿದ್ಧರಾಗಿರೋ ಪ್ರಶಾಂತ್ ರಾಜಪ್ಪ ನಿರ್ದೇಶನಕ್ಕಿಳಿದ ಬಗ್ಗೆ ಸದ್ಯ ಸುದ್ದಿ ಚಾಲ್ತಿಯಲ್ಲಿದೆ. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸೋದು ಪಕ್ಕಾ ಆಗಿತ್ತಾದರೂ ಟೈಟಲ್ ಮಾತ್ರ ನಿಕ್ಕಿಯಾಗಿರಲಿಲ್ಲ. ಇದೀಗ ಗಣೇಶನ ಹಬ್ಬದ ಶುಭ ಸಂದರ್ಭದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ! ಅನೀಶ್ ತೇಜೇಶ್ವರ್ ಅವರ ಹೊಸಾ ಚಿತ್ರಕ್ಕೆ ಕೇಡಿ ನಂಬರ್ ೧ ಎಂಬ ನಾಮಕರಣವಾಗಿದೆ! ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರವೂ ಸೇರಿದಂತೆ ಈ ವರೆಗಿನ ಸಿನಿ ಯಾನದಲ್ಲಿ ಸ್ಟೈಲಿಶ್ ಲುಕ್ಕಿನಲಲ್ಲಿ ಕಾಣಿಸಿಕೊಂಡಿದ್ದವರು ಅನೀಶ್ ತೇಜೇಶ್ವರ್. ಕೇಡಿ […]
ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ತಮ್ಮ ಪ್ರೀತಿಯ ಸುತ್ತಾ ಹರಡಿಕೊಂಡಿರೋ ರೂಮರುಗಳ ಬಗ್ಗೆ, ನಿಖರ ಎಂಬಂತೆ ಹರಿದಾಡುತ್ತಿರೋ ಸುದ್ದಿಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲೊಂದಷ್ಟು ಮಂದಿ, ಮಾಧ್ಯಮದಲ್ಲಿ ಮತ್ತೊಂದಷ್ಟು ಜನ ಸೇರಿ ತಾವೇ ಮುಂದೆ ನಿಂತು ಬ್ರೇಕಪ್ ಮಾಡಿಸುತ್ತಿದ್ದಾರೆ. ರಶ್ಮಿಕಾ ರಕ್ಷಿತ್ ನಡುವೆ ಸಂಬಂಧ ಹಳಸಿಕೊಂಡಿರೋದು ನಿಜವಿರ ಬಹುದು. ಅದಕ್ಕೆ ಸಾಕಷ್ಟು ಕಾರಣವೂ ಇರ ಬಹುದು. ಆದರೆ ಅದಕ್ಕೆ ತೆಲುಗು ನಟ ವಿಜಯ್ ದೇವರಕೊಂಡ ಕಾರಣನಲ್ಲ ಎಂಬ ವಿಚಾರ ಈಗ ಜಾಹೀರಾಗಿದೆ! ಅದ್ಯಾವ […]
ಮೊದಲ ಚಿತ್ರ ಜಲ್ಸಾ ಮೂಲಕವೇ ಭರವಸೆ ಹುಟ್ಟಿಸಿದ್ದ ಯುವ ನಿರ್ದೇಶಕ ಕಾಂತ ಕನ್ನಲ್ಲಿ. ಇವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ ಇರುವುದೆಲ್ಲವ ಬಿಟ್ಟು… ಬಣ್ಣದ ಲೋಕದ ಕನಸುಗಳನ್ನು ಪುಟ್ಟ ಹಳ್ಳಿಯೊಂದರಲ್ಲಿ ಕಣ್ತುಂಬಿಕೊಂಡಿದ್ದ ಕಾಂತ ಚಿತ್ರರಂಗದ ಬಗ್ಗೆ ನಿರ್ಧಿಷ್ಟವಾಗಿ ಕನಸು ಕಾಣಲೂ ಸಾಧ್ಯವಾಗದಂಥಾ ಹಳ್ಳಿಯಿಂದ ಬಂದವರು. ಆದರೆ ಮನೆಯೊಳಗಿನ ಕಲೆಯ ವಾತಾವರಣದಿಂದ ಆ ನಂಟನ್ನು ಪೊರೆದುಕೊಂಡು ಬಂದಿದ್ದ ಕಾಂತ ಕನ್ನಲ್ಲಿ ನಿರ್ದೇಶಕನಾಗಿ ಹೊರ ಹೊಮ್ಮಿದ್ದರ ಹಿಂದೆ ಬಹು ದೂರದ ಪ್ರಯಾಣವೊಂದಿದೆ! ಬೆಂಗಳೂರಿಗೆ ಹತ್ತಿರದಲ್ಲೇ ಇದ್ದಾರೂ ಹಳ್ಳಿಗಾಡಿನ ಸ್ವರೂಪವನ್ನೂ ಇನ್ನೂ […]
ದುನಿಯಾ ರಶ್ಮಿ ಹೊಸಾ ಸ್ವರೂಪದಲ್ಲಿ ಮತ್ತೆ ವಾಪಾಸಾಗಿರುವ ಚಿತ್ರ ಕಾರ್ನಿ. ಈಗಾಗಲೇ ಬಿಡುಗಡೆಯಾಗಿ ಟ್ರೈಲರ್ ಮೂಲಕವೇ ನಿಗೂಢವಾದುದೇನನ್ನೋ ಪ್ರೇಕ್ಷಕರತ್ತ ದಾಟಿಸಿರೋ ಈ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಬೇರೇನನ್ನೂ ಯೋಚಿಸಲೇ ಸಾಧ್ಯವಾಗದಂತೆ ಪ್ರೇಕ್ಷಕರನ್ನು ಆರಂಭದಿಂದ ಮುಕ್ತಾಯದವರೆಗೂ ಹಿಡಿದಿಡುವಂಥಾ ಚಿತ್ರ ರೂಪಿಸಬೇಕೆಂಬ ಹಂಬಲದೊಂದಿಗೇ ಈ ಚಿತ್ರ ತಯಾರಾಗಿದೆ. ಕಾಡು, ಕತ್ತಲು ಮತ್ತು ಅದರ ಗರ್ಭದಲ್ಲಿ ತೆರೆದುಕೊಳ್ಳೋ ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ… ಇದನ್ನೆಲ್ಲ ಅಂತರಾಳವಾಗಿಸಿಕೊಂಡಿರೋ ಈ ಚಿತ್ರ ತೆರೆ ಕಾಣಲು ದಿನವಷ್ಟೇ ಬಾಕಿ ಉಳಿದಿದೆ. ಐವರು ಹುಡಿಗಿಯರು ಮಲೆನಾಡ […]
ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ ಕೆಲವರು ಟೈಟಲ್ ಮೂಲಕವೇ ಗಮನ ಸೆಳೆಯುತ್ತಾರೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ `ಮುಂದಿನ ಬದಲಾವಣೆ’! ಸಿರಪ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಫಣಿ ಭೂಷಣ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಪ್ರವೀಣ್ ಭೂಷಣ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರವನ್ನು ಕೆಲಸ ಕಾರ್ಯಗಳ ಮೂಲಕವೇ ಪಡೆಯಬೇಕೆಂಬ […]
ಈಗೊಂದಷ್ಟು ವರ್ಷಗಳ ಹಿಂದೆ ತಮನ್ನ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಮೆರೆಯುತ್ತಿದ್ದರಲ್ಲಾ? ಆ ಕಾಲದಲ್ಲಿಯೇ ಆಕೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೆ ಯಾಕೋ ಅದಕ್ಕೆ ಈವರೆಗೂ ಕಾಲ ಕೂಡಿ ಬಂದಿಲ್ಲ. ಆದರೆ ಯಶ್ ಅಭಿನಯದ ವಿಶೇಷ ಹಾಡೊಂದರಲ್ಲಿ ತಮನ್ನಾ ಕುಣಿದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ನಟಿಸೋ ಇರಾದೆಯನ್ನು ಹೊರ ಹಾಕಿದ್ದಾರೆ. ಕನ್ನಡದಲ್ಲಿ ತಮಗೆ ಯಾವ ಹೀರೋ ಜೊತೆ ನಟಿಸಲು ಇಷ್ಟ ಎಂಬುದನ್ನೂ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮನ್ನಾ ಯಶ್ ಜೊತೆ ಹಾಡೊಂದರಲ್ಲಿ […]
ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಇದೀಗ ಹೊಸಬರೇ ಹೆಚ್ಚಾಗಿರೋ ತಂಡವೊಂದು ಫೇಸ್ ಟು ಫೇಸ್ ಎಂಬ ಚಿತ್ರವನ್ನು ರೂಪಿಸಿ ಹಾಡುಗಳನ್ನು ಅನಾವರಣಗೊಳಿಸಿದೆ. ಈ ಮೂಲಕವೇ ಸದ್ದು ಶುರುವಿಟ್ಟಿದೆ! ಸುಮಿತ್ರಾ ಜನಾರ್ಧನ್ ನಿರ್ಮಾಣದ ಫೇಸ್ ಟು ಫೇಸ್ ಚಿತ್ರವನ್ನು ಹೊಸಾ ಹುಡುಗ ಸಂದೀಪ್ ಜನಾರ್ಧನ್ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳನ್ನು ಹಿರಿಯ ನಟ ಶಿವರಾಂ ಅವರು ಬಿಡುಗಡೆಗೊಳಿಸಿದ್ದಾರೆ. ಪ್ರಥಮ್, ಅನುಪಮಾ, ಜಯಶ್ರೀ, ಕೃಷಿ ತಾಪಂಡ ಮುಂತಾದ ಬಿಗ್ ಬಾಸ್ ಸ್ಪರ್ಧಿಗಳೂ ಈ ಸಮಾರಂಭದಲ್ಲಿ ಹಾಜರಿದ್ದು ಹೊಸಬರ […]
ಕಾವೇರಿ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಉಗ್ರ ತಮಿಳನಂತೆ ಕನ್ನಡಿಗರ ವಿರುದ್ಧ ಕೆಂಡ ಕಾರಿದ್ದವರು ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್. ಕನ್ನಡಿಗರ ವಿರುದ್ಧ ಈತ ಮಾತಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕನ್ನಡಿಗರೆಲ್ಲ ಈತನಿಗೆ ಉಗಿದಿದ್ದರು. ಆದರೆ ಉಗ್ರ ತಮಿಳು ಭಾಷಾಭಿಮಾನ ಹೊಂದಿರೋ ಕಟ್ಟಪ್ಪ ಈಗ ಭಾರತವನ್ನು ಕೊರೆದು ತಿನ್ನುತ್ತಿರೋ ಜಾತಿವಾದದ ಬಗ್ಗೆ ಸ್ಪಷ್ಟವಾದ ಮಾತಾಡಿದ್ದಾರೆ. ಜಾತಿ ವ್ಯವಸ್ಥೆಯ ಬಗೆಗಿನ ಸೂಕ್ಷ್ಮ ಒಳನೋಟಗಳಿರೋ ಸತ್ಯರಾಜ್ ಅವರ ಮಾತಿನ ವೀಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. […]
ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ಆಸಕ್ತಿ ಮಾಡುತ್ತಿದೆ. ಒಂದು ಕಿರುಚಿತ್ರವು ಅಲ್ಲದ ಅತ್ತ ಕಮರ್ಷಿಯಲ್ ಚಿತ್ರವು ಅಲ್ಲದ ಬ್ರಿಡ್ಜ್ ಸಿನಿಮಾ ರೀತಿ ಹೊಸ ಪ್ರಯೋಗವನ್ನು ನಾಗರಾಜ ಸೋಮಯಾಜಿ ಮತ್ತು ಅವರ ತಂಡ ಮಾಡಿದೆ. ದಿ ಬೆಸ್ಟ್ ಆಕ್ಟರ್ ಎಂಬ ಹೆಸರಿನ ಈ ಚಿತ್ರ ೪೩ ನಿಮಿಷ ಅವಧಿಯಾಗಿದ್ದು, ಒಬ್ಬ ಯಕ್ಷಗಾನ ಕಲಾವಿದನ ಬಣ್ಣದ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ. ಕುಂದಾಪುರ ಹಾಗೂ ಸಾಲಿಗ್ರಾಮದಂತಹ ಸ್ಥಳಗಳಲ್ಲಿ ೯ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ […]