ದುನಿಯಾ ರಶ್ಮಿ ಹೊಸಾ ಸ್ವರೂಪದಲ್ಲಿ ಮತ್ತೆ ವಾಪಾಸಾಗಿರುವ ಚಿತ್ರ ಕಾರ್ನಿ. ಈಗಾಗಲೇ ಬಿಡುಗಡೆಯಾಗಿ ಟ್ರೈಲರ್ ಮೂಲಕವೇ ನಿಗೂಢವಾದುದೇನನ್ನೋ ಪ್ರೇಕ್ಷಕರತ್ತ ದಾಟಿಸಿರೋ ಈ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಬೇರೇನನ್ನೂ ಯೋಚಿಸಲೇ ಸಾಧ್ಯವಾಗದಂತೆ ಪ್ರೇಕ್ಷಕರನ್ನು ಆರಂಭದಿಂದ ಮುಕ್ತಾಯದವರೆಗೂ ಹಿಡಿದಿಡುವಂಥಾ ಚಿತ್ರ ರೂಪಿಸಬೇಕೆಂಬ ಹಂಬಲದೊಂದಿಗೇ ಈ ಚಿತ್ರ ತಯಾರಾಗಿದೆ. ಕಾಡು, ಕತ್ತಲು ಮತ್ತು ಅದರ ಗರ್ಭದಲ್ಲಿ ತೆರೆದುಕೊಳ್ಳೋ ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ… ಇದನ್ನೆಲ್ಲ ಅಂತರಾಳವಾಗಿಸಿಕೊಂಡಿರೋ ಈ ಚಿತ್ರ ತೆರೆ ಕಾಣಲು ದಿನವಷ್ಟೇ ಬಾಕಿ ಉಳಿದಿದೆ. ಐವರು ಹುಡಿಗಿಯರು ಮಲೆನಾಡ […]
ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ ಕೆಲವರು ಟೈಟಲ್ ಮೂಲಕವೇ ಗಮನ ಸೆಳೆಯುತ್ತಾರೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ `ಮುಂದಿನ ಬದಲಾವಣೆ’! ಸಿರಪ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಫಣಿ ಭೂಷಣ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಪ್ರವೀಣ್ ಭೂಷಣ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರವನ್ನು ಕೆಲಸ ಕಾರ್ಯಗಳ ಮೂಲಕವೇ ಪಡೆಯಬೇಕೆಂಬ […]
ಈಗೊಂದಷ್ಟು ವರ್ಷಗಳ ಹಿಂದೆ ತಮನ್ನ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಮೆರೆಯುತ್ತಿದ್ದರಲ್ಲಾ? ಆ ಕಾಲದಲ್ಲಿಯೇ ಆಕೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೆ ಯಾಕೋ ಅದಕ್ಕೆ ಈವರೆಗೂ ಕಾಲ ಕೂಡಿ ಬಂದಿಲ್ಲ. ಆದರೆ ಯಶ್ ಅಭಿನಯದ ವಿಶೇಷ ಹಾಡೊಂದರಲ್ಲಿ ತಮನ್ನಾ ಕುಣಿದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ನಟಿಸೋ ಇರಾದೆಯನ್ನು ಹೊರ ಹಾಕಿದ್ದಾರೆ. ಕನ್ನಡದಲ್ಲಿ ತಮಗೆ ಯಾವ ಹೀರೋ ಜೊತೆ ನಟಿಸಲು ಇಷ್ಟ ಎಂಬುದನ್ನೂ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮನ್ನಾ ಯಶ್ ಜೊತೆ ಹಾಡೊಂದರಲ್ಲಿ […]
ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಇದೀಗ ಹೊಸಬರೇ ಹೆಚ್ಚಾಗಿರೋ ತಂಡವೊಂದು ಫೇಸ್ ಟು ಫೇಸ್ ಎಂಬ ಚಿತ್ರವನ್ನು ರೂಪಿಸಿ ಹಾಡುಗಳನ್ನು ಅನಾವರಣಗೊಳಿಸಿದೆ. ಈ ಮೂಲಕವೇ ಸದ್ದು ಶುರುವಿಟ್ಟಿದೆ! ಸುಮಿತ್ರಾ ಜನಾರ್ಧನ್ ನಿರ್ಮಾಣದ ಫೇಸ್ ಟು ಫೇಸ್ ಚಿತ್ರವನ್ನು ಹೊಸಾ ಹುಡುಗ ಸಂದೀಪ್ ಜನಾರ್ಧನ್ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳನ್ನು ಹಿರಿಯ ನಟ ಶಿವರಾಂ ಅವರು ಬಿಡುಗಡೆಗೊಳಿಸಿದ್ದಾರೆ. ಪ್ರಥಮ್, ಅನುಪಮಾ, ಜಯಶ್ರೀ, ಕೃಷಿ ತಾಪಂಡ ಮುಂತಾದ ಬಿಗ್ ಬಾಸ್ ಸ್ಪರ್ಧಿಗಳೂ ಈ ಸಮಾರಂಭದಲ್ಲಿ ಹಾಜರಿದ್ದು ಹೊಸಬರ […]
ಕಾವೇರಿ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಉಗ್ರ ತಮಿಳನಂತೆ ಕನ್ನಡಿಗರ ವಿರುದ್ಧ ಕೆಂಡ ಕಾರಿದ್ದವರು ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್. ಕನ್ನಡಿಗರ ವಿರುದ್ಧ ಈತ ಮಾತಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕನ್ನಡಿಗರೆಲ್ಲ ಈತನಿಗೆ ಉಗಿದಿದ್ದರು. ಆದರೆ ಉಗ್ರ ತಮಿಳು ಭಾಷಾಭಿಮಾನ ಹೊಂದಿರೋ ಕಟ್ಟಪ್ಪ ಈಗ ಭಾರತವನ್ನು ಕೊರೆದು ತಿನ್ನುತ್ತಿರೋ ಜಾತಿವಾದದ ಬಗ್ಗೆ ಸ್ಪಷ್ಟವಾದ ಮಾತಾಡಿದ್ದಾರೆ. ಜಾತಿ ವ್ಯವಸ್ಥೆಯ ಬಗೆಗಿನ ಸೂಕ್ಷ್ಮ ಒಳನೋಟಗಳಿರೋ ಸತ್ಯರಾಜ್ ಅವರ ಮಾತಿನ ವೀಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. […]
ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ಆಸಕ್ತಿ ಮಾಡುತ್ತಿದೆ. ಒಂದು ಕಿರುಚಿತ್ರವು ಅಲ್ಲದ ಅತ್ತ ಕಮರ್ಷಿಯಲ್ ಚಿತ್ರವು ಅಲ್ಲದ ಬ್ರಿಡ್ಜ್ ಸಿನಿಮಾ ರೀತಿ ಹೊಸ ಪ್ರಯೋಗವನ್ನು ನಾಗರಾಜ ಸೋಮಯಾಜಿ ಮತ್ತು ಅವರ ತಂಡ ಮಾಡಿದೆ. ದಿ ಬೆಸ್ಟ್ ಆಕ್ಟರ್ ಎಂಬ ಹೆಸರಿನ ಈ ಚಿತ್ರ ೪೩ ನಿಮಿಷ ಅವಧಿಯಾಗಿದ್ದು, ಒಬ್ಬ ಯಕ್ಷಗಾನ ಕಲಾವಿದನ ಬಣ್ಣದ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ. ಕುಂದಾಪುರ ಹಾಗೂ ಸಾಲಿಗ್ರಾಮದಂತಹ ಸ್ಥಳಗಳಲ್ಲಿ ೯ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ […]
ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ “ಮಾಸ್ಟರ್ ಪೀಸ್” ನಿರ್ದೇಶಿಸಿದ್ದವರು ಮಂಜು ಮಾಂಡವ್ಯ. ಅದಕ್ಕೂ ಮುಂಚೆ ಸಾಕಷ್ಟು ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಮಂಜು ಮಾಂಡವ್ಯ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. `ಶ್ರೀ ಭರತ ಬಾಹುಬಲಿ’ ಸಿನಿಮಾದ ಮೂಲಕ ಮಂಜು ಮಾಂಡವ್ಯ ನಾಯಕನಟನಾಗುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಒಂದು ಪ್ರಮುಖ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಆ ದೃಶ್ಯದಲ್ಲಿ ಆ ಕಾಲದಲ್ಲಿ ಅಣ್ಣಾವ್ರ ಕ್ರೇಜ್ ಎಷ್ಟು ದೊಡ್ಡದು ಎಂದು ತೋರಿಸುವ ಸನ್ನಿವೇಶ ಇತ್ತು. ಆ ದೃಶ್ಯಕ್ಕೆ […]
ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿದ್ದಾರೆಂಬ ಸುದ್ದಿಯೊಂದು ತಿಂಗಳಿಂದೀಚೆಗೆ ಹರಿದಾಡುತ್ತಿತ್ತು. ಆದರೆ ಅದು ಯಾವ ಚಿತ್ರ, ಅದರ ಶೀರ್ಷಿಕೆ ಏನೆಂಬುದರ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಆದರೀಗ ಈ ಚಿತ್ರದ ಟೈಟಲ್ ಯಾವುದೆಂಬುದನ್ನು ಚಿತ್ರತಂಡ ಜಾಹೀರು ಮಾಡಿದೆ! ಈ ಚಿತ್ರಕ್ಕೆ ಆದಿ ಲಕ್ಷ್ಮಿ ಪುರಾಣ ಎಂಬ ನಾಮಕರಣ ಮಾಡಲಾಗಿದೆಯಂತೆ. ಶೀರ್ಷಿಕೆ ಕೇಳಿದರೇನೇ ಕಥೆ ಎಂಥಾದ್ದಿರಬಹುದೆಂಬ ಕೌತುಕವೂ ಹುಟ್ಟುತ್ತದೆ. ಆದರೆ ಇದೊಂದು ಲವ್ ಸ್ಟೋರಿ ಎಂಬ ಸುಳಿವೂ ಕೂಡಾ ಸಿಗುವಂತಿದೆ. ಇದರ ಜೊತೆ ಜೊತೆಗೇ ರಾಧಿಕಾ […]
ರಾಘು ಶಿವಮೊಗ್ಗ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ನಿನ ಮೊದಲ ಚಿತ್ರ ಕುಸ್ತಿ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಮೂಲಕವೇ ಈ ಚಿತ್ರ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಇದನ್ನು ತಮ್ಮ ವೃತ್ತಿ ಬದುಕಿನ ಮಹತ್ವಪೂರ್ಣ ಚಿತ್ರವಾಗಿ ಪರಿಗಣಿಸಿರುವ ವಿಜಿ ಈ ಪಾತ್ರಕ್ಕಾಗಿ ಭಾರೀ ತಯಾರಿ ಮಾಡುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ನಾಯಕಿಯಾಗಿ ಅದಿತಿ ಪ್ರಭುದೇವ್ ಆಯ್ಕೆಯಾಗಿದ್ದಾರೆ! ನಾಗಕನ್ನಿಕೆ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಭಾರೀ ಅಭಿಮಾನಿ ಬಳಗವನ್ನು ಹೊಂದಿರುವವರು ಅದಿತಿ. ಆ ಬಳಿಕ ಶಿವತೇಜಸ್ ನಿರ್ದೇಶನದ ಧೈರ್ಯ ಚಿತ್ರದಲ್ಲಿ ಅಜೇಯ್ […]
ಥರ ಥರದ ಕಿರಿಕ್ಕು ಮಾಡುತ್ತಲೇ ರೈಲ್ವೇ ಹಳಿ ಮೇಲೆ ಬಿದ್ದುಕೊಂಡು ಕಾಲೆತ್ತಿ ಪೋಸು ಕೊಟ್ಟರೂ ಸಂಯುಕ್ತಾ ಹೆಗ್ಡೆಯ ನಸೀಬು ಬದಲಾಗಲಿಲ್ಲ. ಕಾಲೇಜ್ ಕುಮಾರ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಅಲ್ಲಿಂದಾಚೆಗೆ ಈಕೆಯನ್ನು ನಾಯಕಿಯನ್ನಾಗಿಸುವ ಸಾಹಸಕ್ಕೆ ಕನ್ನಡದಲ್ಲಿ ಯಾರೂ ಕೈ ಹಾಕಲಿಲ್ಲ. ಕನ್ನಡದಲ್ಲಿ ಹುಚ್ಚಾ ವೆಂಕಟನ ಖಾಸಾ ತಂಗಿಯೆಂದೇ ಬ್ರ್ಯಾಂಡ್ ಆಗಿರೋ ಈಕೆ ಕನ್ನಡದಲ್ಲಿ ನೆಲೆಗೊಳ್ಳೋದು ಕನಸಿನ ಮಾತೆಂಬ ವಾತಾವರಣವೇ ದಟ್ಟೈಸಿದೆ! ಒಂದೆರಡು ಸಲ ಅರೆಬರೆ ಬಟ್ಟೆ ತೊಟ್ಟು ಅಸಹ್ಯದ ಪೋಸುಗಳಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಮಂಗಳಾರತಿ ಮಾಡಿಸಿಕೊಂಡಿದ್ದಳು. ಅದಾದ ನಂತರ […]