ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಮೊದಲ ಭಾಗ ಸೆಪ್ಟೆಂಬರ್ 30 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಜನರಿಗೆ ವಿಷಯ ತಲುಪಿಸಲು ವಿಭಿನ್ನ ಪ್ರಚಾರ ಕಾರ್ಯ ಹಮ್ಮಿಕೊಂಡಿರುವ ಚಿತ್ರತಂಡ, ಬಸ್ಸು, ಆಟೋ, ಮೆಟ್ರೋ ಹಾಗೂ ಮಾಲ್ ಮುಂತಾದೆಡೆ ಭರ್ಜರಿಯಾಗಿ ಸದ್ದು ಮಾಡಿದೆ. ಇದೀಗ ಒಂದು ಹೆಜ್ಜೆ ಮುಂದಕ್ಕೆ ಇಟ್ಟು ಗಮನ ಸೆಳೆದಿದೆ ಟೀಂ ತೋತಾಪುರಿ. ರೈಲಿನಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡ ಚಿತ್ರತಂಡ, ವಿನೂತನವಾಗಿ ಎಲ್ಲರ ಗಮನ ಸೆಳೆದಿದೆ. ರೈಲಿನ ಭೋಗಿಗಳಿಗೆಲ್ಲಾ ತೋತಾಪುರಿ ಥರೇವಾರಿ ಪೋಸ್ಟರ್ […]
ಸತತ ಎರಡನೇ ಸಲ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮೂಲಕ ಸುದ್ದಿಯಲ್ಲಿರುವ ನಟಿ ದಿವ್ಯಾ ಉರುಡುಗ. ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯಗೊಂಡವರು ದಿವ್ಯಾ. ಈಗ ಮತ್ತೆ ಈಕೆ ಅರವಿಂದ್ ಕೌಶಿಕ್ ಜೊತೆಯಾಗಿದ್ದಾರೆ. ʻ ಅರ್ದಂಬರ್ಧ ಪ್ರೇಮ ಕಥೆʼ ಎನ್ನುವ ಭಿನ್ನ ಶೀರ್ಷಿಕೆಯ ಚಿತ್ರ ಈಗಾಗಲೇ ಮುಕ್ತಾಯಗೊಂಡಿದೆ. ಆದರೆ ಈ ವರೆಗೂ ಈ ಚಿತ್ರದ ನಾಯಕ ನಟ ಯಾರು ಅಂತಾ ರಿವೀಲ್ ಮಾಡಿಲ್ಲ. ನಿರ್ದೇಶಕ ಅರವಿಂದ್ ಕೌಶಿಕ್ ಅದಾಗಲೇ ಟೀಸರ್ ಒಂದನ್ನು […]
ನೀರ್ ದೋಸೆ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ ‘ತೋತಾಪುರಿ’ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಇದಾಗಿದ್ದು, ಕಾಮಿಡಿ ಜತೆಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಮೂಲಕ ಝಲಕ್ ತೋರಿಸಿದ್ದಾರೆ. ಇದಕ್ಕೆ ದೇಶಾದ್ಯಂತ ಸಖತ್ ರೆಸ್ಪಾನ್ಸ್ ಪಡೆದುಕೊಂಡ ಖುಷಿ ಚಿತ್ರತಂಡಕ್ಕಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದು ಎರಡೂ ಭಾಗದ ಚಿತ್ರೀಕರಣವನ್ನೂ ಮೊದಲೇ ಮಾಡಿಕೊಂಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಚಾಪ್ಟರ್ 1 […]
ರವಿಚಂದ್ರನ್ ಮನೆ ಮಾರಿಬಿಟ್ಟರಂತೆ. ಸಿಕ್ಕಾಪಟ್ಟೆ ಸಾಲಕ್ಕೆ ಸಿಲುಕಿರುವ ಕ್ರೇಜಿಸ್ಟಾರ್ ಮನೆ ಮಾರಿ ಬಾಡಿಗೆ ಮನೆಗೆ ಹೋಗಿದ್ದಾರೆ – ಎಂಬಿತ್ಯಾದಿ ವಿಚಾರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಪ್ಪ ಮಾಡಿಟ್ಟಿದ್ದ ಮನೆಯನ್ನೂ ಮಾರುವಷ್ಟು ಕನಸುಗಾರ ಕಷ್ಟಕ್ಕೆ ಸಿಲುಕಿದ್ದಾರಾ? ಏನಿದು ವಿಚಾರ? ಇದರ ಅಸಲೀಯತ್ತೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ವತಃ ವಿ. ರವಿಚಂದ್ರನ್ ಮನಬಿಚ್ಚಿ ಮಾತಾಡಿದ್ದಾರೆ. ಅದರ ವಿವರ ಇಲ್ಲಿದೆ. ನಾನು ಅಂದುಕೊಂಡಂತೆ ನನ್ನ ಸಿನಿಮಾ ಯಶ್ವಿಯಾಗಿಲ್ಲ. ರವಿ ತೋಪಣ್ಣ ಆಗಿದ್ದು ನಿಜ. ಆದರೆ ನನ್ನ ಮನೆಯ ವಿಚಾರದಲ್ಲಿ ಕೆಲವು ಮೀಡಿಯಾದವರು […]
ಮುಂದಿನ ವರ್ಷ ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದಿಂದ ಅಧಿಕೃತವಾಗಿ ಗುಜರಾತಿಯ ಚೆಲ್ಲೋ ಸಿನಿಮಾ ಆಯ್ಕೆಯಾಗಿದೆ. ಅಷ್ಟೊಂದು ಚಿತ್ರಗಳು ರೇಸಿನಲ್ಲಿರುವಾಗ, ಹೆಸರೇ ಕೇಳದ, ಹೆಚ್ಚು ಸುದ್ದಿಯಾಗದ ಚಿತ್ರವೊಂದು ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಅದೆಲ್ಲ ಏನಾದರೂ ಇರಲಿ, ಈ ಬಾರಿ ಆಸ್ಕರ್ ಪ್ರಶಸ್ತಿ ಜ್ಯೂರಿಯಲ್ಲಿ ಕನ್ನಡದ ಪವನ್ ಒಡೆಯರ್ ಇರುವುದು ಕನ್ನಡದ ಮಟ್ಟಿಗೆ ಖುಷಿಯ ವಿಚಾರ. ಅದೆಷ್ಟೋ ವರ್ಷಗಳಿಂದ ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರಗಳನ್ನು ಜ್ಯೂರಿ ಆಯ್ಕೆ ಮಾಡುತ್ತಿದೆ. ಪ್ರತೀ ವರ್ಷ ಭಾರತದಾದ್ಯಂತ […]
ರಿಷಬ್ ಶೆಟ್ಟಿ ಅಪ್ಪಟ ವ್ಯಾಪಾರೀ ಗುಣದ ನಿರ್ದೇಶಕ ಕಂ ನಟ. ರಿಷಬ್ ನಿರ್ದೇಶನದ ಮೊದಲ ಸಿನಿಮಾ ರಿಕ್ಕಿಯನ್ನು ಎಸ್.ವಿ.ಬಾಬು ನಿರ್ಮಿಸಿದ್ದರು. ಸಿನಿಮಾ ಬಾಕ್ಸಾಫೀಸಲ್ಲಿ ಮುಗ್ಗರಿಸಿತು. ನಂತರ ಕಿರಿಕ್ ಪಾರ್ಟಿಯನ್ನು ಕಟ್ಟಿದರು. ಇವರಿವರೇ ನಾಲ್ಕೈದು ಜನ ಬಂಡವಾಳ ಹೂಡಿಕೆ ಮಾಡಿ ರೂಪಿಸಿದ ಕಿರಿಕ್ ಪಾರ್ಟಿ ಗಳಿಕೆಯಲ್ಲಿ ದಾಖಲೆ ನಿರ್ಮಿಸಿತು. ಆ ನಂತರ ಶೆಟ್ಟರ ಗುಂಪು ಭಾಳಾ ಹುಷಾರಾಯಿತು. ಕಿರಿಕ್ ಪಾರ್ಟಿ ನಂತರ ರಕ್ಷಿತ್ ಸೋಲು-ಗೆಲುವು ಎರಡನ್ನೂ ಕಂಡರು. ಆದರೆ ರಿಷಬ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ಸಿನಿಮಾಗಳು ಬರಿಯ ಲಾಭವನ್ನೇ […]
ಝೈದ್ ಖಾನ್ ಸಾಗುತ್ತಿರುವ ಹಾದಿಯನ್ನೊಮ್ಮೆ ಗಮನಿಸಿ. ನಿಜಕ್ಕೂ ಈ ಹುಡುಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವ ಸಾಧ್ಯತೆ ಎದ್ದು ಕಾಣುತ್ತಿದೆ. ಅಪ್ಪನ ಪ್ರಭಾವಳಿಯನ್ನು ಬಳಸಿಕೊಳ್ಳದೆ ಝೈದ್ ಎಲ್ಲರೊಂದಿಗೂ ಬೆರೆಯುವ, ಸಹಜ, ಸರಳತೆಯನ್ನೆಲ್ಲಾ ನೋಡಿದರೆ ಯಾರಿಗಾದರೂ ಖುಷಿಯಾಗದೇ ಇರೋದಿಲ್ಲ. ಇವರ ತಂದೆ ಜಮೀರ್ ಅವರ ಕಾರಣಕ್ಕಾಗಿ ಝೈದ್ ಸಿನಿಮಾ ವಿರುದ್ಧ ಕೆಲವರು ಕುತಂತ್ರ ರೂಪಿಸಿದ್ದು ಸುಳ್ಳಲ್ಲ. ಆದರೆ, ಅದ್ಯಾವುದಕ್ಕೂ ಪ್ರತಿಕ್ರಿಯಿಸದ ಇವರು ತಮ್ಮ ಪಾಡಿಗೆ ತಾವು ಮುಂದೆ ಸಾಗುತ್ತಿದ್ದಾರೆ. ಹೇಳಿಕೆಗಳಿಗೆ ಪ್ರತಿ ಹೇಳಿಕೆ ಕೊಡದೇ, ಬೇಡದ ವಿವಾದಗಳಿಗೆ ದಾರಿ […]
ನಿಂತೋಗಿರೋ ಗಡಿಯಾರ, ನಿಂತಿರೋ ಆಟಗಾರ ಯಾವ ಪ್ರಯೋಜನಕ್ಕೂ ಬರಲ್ಲ – ಇದು ಗುರು ಶಿಷ್ಯರು ಸಿನಿಮಾದ ಪಾತ್ರವೊಂದರ ಸಂಭಾಷಣೆ. ನಿಜ ಅಲ್ಲವಾ? ಆಟಗಾರ ಮಾತ್ರವಲ್ಲ ನಿರಂತರ ಚಲನೆಯಿಲ್ಲದ, ಜಡವಾಗಿ ಇರುವ ಯಾರೇ ಆಗಲಿ, ಏನನ್ನೂ ಸಾಧಿಸಲು ಆಗೋದಿಲ್ಲ. ನಮ್ಮದಲ್ಲದ, ಯಾವುದೋ ದೇಶಗಳಿಂದ ಬಂದ ಕ್ರೀಡೆಗಳನ್ನು ಜೀವಕ್ಕಂಟಿಸಿಕೊಂಡು ಪ್ರೀತಿಸುತ್ತೇವೆ. ನಮ್ಮದೇ ನೆಲದ, ಶತಮಾನಗಳಿಂದ ಸಂಸ್ಕೃತಿಯಲ್ಲಿ ಬೆರೆತ ಆಟಗಳನ್ನು ನಾವೇ ಕಡೆಗಣಿಸಿರುತ್ತೇವೆ. ಅಂಥದ್ದೇ ಆಟಗಳಲ್ಲಿ ಖೊಖೊ ಕೂಡಾ ಒಂದು. ಖೊಖೋ ಭಾರತದ ಪ್ರಮುಖ ಕ್ರೀಡೆಗಳಲ್ಲೊಂದು. ಆದರೆ, ಆಳುವವರು ಮತ್ತು ಬಂಡವಾಳಶಾಹಿಗಳ […]
ಕರೊನಾ ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಸ್ಥಾಪನೆಯಾದ ಪಿಎಂ ಕೇರ್ಸ್ ಫಂಡ್ನ ಸಲಹಾ ಮಂಡಳಿಗೆ ಹೆಮ್ಮೆಯ ಕನ್ನಡತಿ ಮತ್ತು ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷೆ ಸುಧಾ ಮೂರ್ತಿ ಆಯ್ಕೆಯಾಗಿದ್ದಾರೆ. ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯಾಗಿರುವ ಈ ಪಿಎಂ ಕೇರ್ಸ್ ಫಂಡ್, ಎರಡೂವರೆ ವರ್ಷಗಳ ಹಿಂದೆ ಮಾರ್ಚ್ 28, 2020ರಂದು ಸ್ಥಾಪನೆಯಾಯಿತು. ಈ ನಿಧಿಗೆ ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಎಲ್ಲಾ ನಾಗರಿಕರು ಕೊಡುಗೆ ನೀಡುವ ಮೂಲಕ ವಿಪತ್ತಿನ ಸಂದರ್ಭದಲ್ಲಿ ದೇಶದ ಜನರಿಗೆ ಸಹಾಯ ಮಾಡಬಹುದಾಗಿದೆ. ಪ್ರಧಾನಿ […]
ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ಕೆಜಿಎಫ್ ತಾತಾ ಎಂದೇ ಕರೆಸಿಕೊಳ್ಳೋ ಕೃಷ್ಣಾಜಿ ರಾವ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈಗ ಫುಲ್ ಬ್ಯುಸಿ. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಕೃಷ್ಣ ಜಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಬಿಡುಗಡೆಯ ಬಾಗಿಲಲ್ಲಿರುವ ಈ ಚಿತ್ರದ ಟ್ರೇಲರ್ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಕುಮಾರ್ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ‘ನ್ಯಾನೋ ನಾರಾಯಣಪ್ಪ’. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೃಷ್ಣಾಜಿ ರಾವ್ […]