ಶಿವ 143 ಎನ್ನುವ ಸಿನಿಮಾವೊಂದು ವಾರಗಳ ಮುಂಚೆಯಷ್ಟೇ ರಿಲೀಸಾಗಿತ್ತು. ಹಿರಿಯನಟ ರಾಮ್ ಕುಮಾರ್ ಪುತ್ರ ಧೀರೇನ್ ನಟನೆಯ ಮೊದಲ ಸಿನಿಮಾ ಇದು. ಡಾ. ರಾಜ್ ಮೊಮ್ಮಗನ ಮೊದಲ ಸಿನಿಮಾ ತೆರೆಗೆ ಬರುತ್ತಿದೆ, ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದಾನೆ ಅಂದಾಗ ಸಹಜವಾಗೇ ಎಲ್ಲರಲ್ಲೂ ಕುತೂಹಲಗಳಿರುತ್ತವೆ. ಆದರೆ ಶಿವ 143 ಸಿನಿಮಾ ಕುರಿತು ಇಂಥಾ ಯಾವ ಕೌತುಕಗಳೂ ಕಡೇತನಕ ಹುಟ್ಟಲೇ ಇಲ್ಲ. ದುರಂತವೆಂದರೆ ಸಿನಿಮಾ ತೆರೆಗೆ ಬಂದಿರುವ ವಿಚಾರ ಕೂಡಾ ಎಷ್ಟೋ ಜನಕ್ಕೆ ಗೊತ್ತೇ ಆಗಿಲ್ಲ. […]
rockne venkatesh
darshan
ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವರು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವರ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ ಯಡವಟ್ಟುಗಳನ್ನು ಸ್ವತಃ ಮಾಡಿಕೊಂಡಿದ್ದಾರೆ. ನಂಬಿದವರನ್ನು ಮತ್ತೆ ಮತ್ತೆ ವಂಚಿಸಿದ್ದಾರೆ. ಎಲ್ಲರ ನಂಬಿಕೆ ಕಳೆದುಕೊಂಡಿದ್ದಾರೆ. ಮುಲಾಜಿಲ್ಲದೆ ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಎಲ್ಲ ತಿಳಿದಿದ್ದೂ ಆತ್ಮದ್ರೋಹ […]
ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈಗಾಗಲೇ ಹಲವು ಕಾರಣಕ್ಕೆ ಪ್ರೇಕ್ಷಕರನ್ನು ಸಳೆದಿದೆ. ಬಗೆಬಗೆಯಲ್ಲಿ ಕುತೂಹಲ ಹುಟ್ಟು ಹಾಕಿದೆ. ಅದನ್ನೆಲ್ಲ ಮತ್ತಷ್ಟು ತೀವ್ರವಾಗಿಸಿದ ಕ್ರೆಡಿಟ್ ಸಲ್ಲುವುದು ಮುದ್ದಾಗಿ ಮೂಡಿಬಂದು, ಹಂತ ಹಂತವಾಗಿ ಬಿಡುಗಡೆಯಾದ ಹಾಡುಗಳಿಗೆ. ಮೊದಲು ಬಿಡುಗಡೆಗೊಂಡಿದ್ದ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಮಾಯಗಂಗೆ ಮಾಯಗಂಗೆ ಎಂಥವರೂ ಮುದ್ದು ಮಾಡುವಂತಿದೆ. ಸಾಹಿತ್ಯ, ಸಂಗೀತ, ದೃಶ್ಯವನ್ನು ಸೆರೆ ಹಿಡಿದಿರುವ ಬಗೆಗೆ […]
ಸ್ನೇಹಿತನಿಂದ ಸ್ನೇಹಿತನಿಗಾಗಿ ನಿರ್ಮಾಣವಾಗಿರುವ ಈ ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆ. ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಾಯಕ, ನಾಯಕಿಯಾಗಿ ನಟಿಸಿರುವ “ಚಾಂಪಿಯನ್” ಚಿತ್ರದ ಟ್ರೇಲರ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಂದ ಇತ್ತೀಚಿಗೆ ಬಿಡುಗಡೆಯಾಯಿತು. ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರುತ್ತಿದೆ. ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ. ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. […]
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲರಿಗಿಂತ ಹೆಚ್ಚು ಶಾಕ್ಗೊಳಗಾದವರೆಂದರೆ ಮಾಧ್ಯಮದವರು. ಅವರಿಗೆ ಆಹ್ವಾನವಿರಲಿಲ್ಲ ಅಥವಾ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ಒಂದು ಕಾರಣವಾದರೆ, ಇನ್ನೊಂದು ಕಾರಣ ಆ ಕಾರ್ಯಕ್ರಮಕ್ಕೆ ಬಂದ ಕೆಲವು ನಟಿಯರು ಮತ್ತು ಅವರು ತೊಟ್ಟ ಉಡುಗೆಗೊಳು. ಕನ್ನಡದ ಹಲವು ನಟಿಯರು ತಮ್ಮ ಚಿತ್ರದ ಪತ್ರಿಕಾಗೋಷ್ಠಿಗಳಿಗೆ ಬರುವುದು, ಮಾಧ್ಯಮದವರನ್ನು ಭೇಟಿ ಮಾಡುವುದು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದು, ಟಿವಿ ಕ್ಯಾಮೆರಾಗಳ ಮುಂದೆ ಫೋಸು ಕೊಡುವುದು ಎಲ್ಲವೂ ಸಹಜ. ಆದರೆ, ಪತ್ರಿಕಾಗೋಷ್ಠಿಗಳಿಗೆ ಅವರು ಬರವ ರೀತಿ ಮತ್ತು ಇಂತಹ ಕಾರ್ಯಕ್ರಮಗಳಿಗೆ ಬರುವ […]
ಇಡೀ ಚಿತ್ರರಂಗವನ್ನು ಕರೆದು ಕೂರಿಸೋದು ಬೇಕಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಬಹುಮುಖ್ಯ ನಾಯಕನಟರು, ನಿರ್ದೇಶಕರೆಲ್ಲಾ ಸೇರಿದರೂ ಇವತ್ತಿಗೆ ನೂರು ಜನರಾಗಬಹುದು. ಅವರನ್ನೆಲ್ಲಾ ಕರೆದು ಗೌರವಿಸುವ ಕನಿಷ್ಟ ಪ್ರಜ್ಞೆ ಕೂಡಾ ಸೈಮಾ ಆಯೋಜಕರಿಗೆ ಇಲ್ಲದೇ ಹೋಗಿದ್ದು ದುರಂತ. ನಮ್ಮ ನೆಲದಲ್ಲೇ ಬಂದು ಕಾರ್ಯಕ್ರಮ ಮಾಡಿ, ಕೋಟಿಗಟ್ಟಲೆ ಹಣ ಬಾಚಿದ ಸೈಮಾದ ದರಿದ್ರರಿಗೆ ನೂರು ಖುರ್ಚಿ ವ್ಯವಸ್ಥೆ ಮಾಡಿಸುವಷ್ಟು ಯೋಗ್ಯತೆ ಇಲ್ಲದೇ ಹೋಗಿದ್ದನ್ನು ಖಂಡಿಸದೇ ಏನು ಮಾಡಬೇಕು? ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್) ಪ್ರಶಸ್ತಿ […]