ಹೋಮದ ಹೊಗೆಯಿಂದ ಚಿತ್ರರಂಗ ಉದ್ಧಾರವಾಗತ್ತಾ
ಹಿರಿಯ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಅವರಿಗೆ ಧೀರ, ಶೂರ ಎಂಬಿತ್ಯಾದಿ ಬಿರುದುಗಳು ಪ್ರಾಪ್ತಿಯಾಗಿವೆ. ನಾಯಕತ್ವ ಗುಣದ ವ್ಯಕ್ತಿ ಅಂತಾ ಒಂದಷ್ಟು ಜನ ನಂಬಿದ್ದಾರೆ. ಈಗ ಇದೇ ರಾಕ್ ಲೈನ್ ವೆಂಕಟೇಶ್ ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡವರು ʻಇವರಿಗೆಲ್ಲಾ ಏನಾಗಿದೆ?ʼ ಎಂದು ಪ್ರಶ್ನಿಸುವಂತಾಗಿದೆ. ಅರುಣ್ ಕುಮಾರ್.ಜಿ ಕನ್ನಡ ಚಿತ್ರರಂಗ ನೆಲಕಚ್ಚಿದೆ ನಿಜ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಆ ಕಾರಣಗಳನ್ನು ಗುರುತಿಸಿ, ಅದಕ್ಕೆ ತಕ್ಕ ಪರಿಹಾರ ಹುಡುಕುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕು. ಅದನ್ನು ಬಿಟ್ಟು ಹೋಮ ಮಾಡಿದರೆ ಸರಿ ಹೋಗುತ್ತದೆ […]
ಅಧಿಕಾರ ದುರುಪಯೋಗ ಮಾಡಿಕೊಂಡ್ರಾ ಅಧ್ಯಕ್ಷರು?
ಈ ಸಲ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಬಂಗಾರಪ್ಪನವರ ಪುತ್ರಿ ಮತ್ತೊಮ್ಮೆ ರಾಜಕಾರಣದ ಅಖಾಡದಲ್ಲಿ ಪರೀಕ್ಷೆಗಳಿದಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಿಜಕ್ಕೂ ಗಟ್ಟಿಗಿತ್ತಿ ಹೆಣ್ಣುಮಗಳು. ಹೇಗೆ ಪಾರ್ವತಮ್ಮನವರು ಡಾ. ರಾಜಕುಮಾರ್ ಅವರ ಪ್ರೇರಕ ಶಕ್ತಿಯಾಗಿದ್ದರೋ, ಹಾಗೆಯೇ ಕಳೆದ ಮೂರೂವರೆ ದಶಕಗಳಿಂದ ಶಿವರಾಜ್ ಕುಮಾರ್ ಅವರ ಬೆನ್ನಿಗೆ ನಿಂತವರು. ಆದರೆ ಈಗ ವಿಚಾರ ಅದಲ್ಲ. ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಶಿವಣ್ಣನ ಪತ್ನಿ […]
ಕಳೆದೊಂದು ವರ್ಷದ ಹಿನ್ನೋಟ!
೨೦೨೩ರಲ್ಲಿ ಬಂದ ಬಹುತೇಕ ಸಿನಿಮಾಗಳು ದೊಪ್ಪದೊಪ್ಪನೆ ನೆಲಕ್ಕಪ್ಪಳಿಸಿದ್ದರಿಂದ ಕನ್ನಡ ಚಿತ್ರರಂಗ ಹೆಚ್ಚೂ ಕಡಿಮೆ ಐಸಿಯೂ ಬೆಡ್ಡಿನಲ್ಲಿ ಮಲಗಿತ್ತು. ವರ್ಷದ ಕೊನೆಯಲ್ಲಿ ತೆರೆಕಂಡ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಅಮೋಘ ಗೆಲುವು ಚಿತ್ರರಂಗ ಒಂದಿಷ್ಟು ಮಟ್ಟಕ್ಕಾದರೂ ಕಣ್ಣು ಬಿಡುವಂತಾಗಿತ್ತು. ನಂತರ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಕೂಡ ನಿರೀಕ್ಷಿಸಿದ್ದಕ್ಕಿಂತಾ ದೊಡ್ಡ ಗೆಲುವು ಕಂಡು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿನಿಮಾ ಇಂಡಸ್ಟ್ರಿಯಲ್ಲಿ ಲವಲವಿಕೆಯ ವಾತಾವರಣ ನಿರ್ಮಾಣವಾಗಬೇಕೆಂದರೆ, ದೊಡ್ಡ ಸ್ಟಾರ್ಗಳ ಸಿನಿಮಾಗಳು ಅಲ್ಲೊಂದು ಇಲ್ಲೊಂದಾದರೂ ರಿಲೀಸಾಗುತ್ತಿರಬೇಕು. ಹೊಸಬರ ಸಿನಿಮಾಗಳು ಗೆಲುವು […]
ಅಷ್ಟು ದೂರ ಹೋಗೋದು ಅಂದ್ರೆ ಸುಮ್ನೇನಾ?
ಮೊದಲೆಲ್ಲಾ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ರಂಥಾ ಕಲಾವಿದರು ವರ್ಷಕ್ಕೆ ಒಂದು ಅಥವಾ ಎರಡು ಸಲ ಮೀಡಿಯಾದವರನ್ನು ತಮ್ಮ ಮನೆಗೇ ಕರೆಸಿಕೊಂಡು ಆತ್ಮೀಯ ಸಭೆ ನಡೆಸುತ್ತಿದ್ದರು. ಯಾವುದಾದರೂ ವಿಶೇಷ ಸಂದರ್ಭಕ್ಕೆ ಇಂಥಾ ಕಾರ್ಯಕ್ರಮಗಳು ಏರ್ಪಾಟಾಗುತ್ತಿದ್ದವು. ಈಗ ಕಾಲ ಬದಲಾಗಿದೆ…! ಹೀರೋಗಳ ಮನೆಗಳೇ ಮಾಧ್ಯಮಗೋಷ್ಟಿಗಳ ಕೇಂದ್ರವಾಗುತ್ತಿವೆ… ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೀಗ ಕನ್ನಡದ ಹಿರಿಯ ನಟ. ಈ ವಯಸ್ಸಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಲಾವಿದ. ತಮ್ಮ ʻಎನರ್ಜಿʼಯಿಂದಲೇ ದೇಶವ್ಯಾಪಿ ಹೆಸರಾಗಿರುವವರು. ಇಂಥ ಶಿವಣ್ಣ ಈಗ […]
ಇದು ಶಿವಣ್ಣ ಪುತ್ರಿ ಹೊಸ ಪ್ರಯತ್ನ
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿಬಂದಿರುವ ಫೈರ್ ಫ್ಲೈ ಬೆಳಕಿನ ಹಬ್ಬ ದೀಪಾವಳಿಗೆ ದರ್ಶನ ಕೊಡಲಿದೆ. ಈ ಬಗ್ಗೆ ಶಿವಣ್ಣನ ನಾಗವಾರ ನಿವಾಸದಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ಶಿವಣ್ಣ, ಗೀತಾಕ್ಕ ಮಗಳ ಹೊಸ ಪ್ರಯತ್ನಕ್ಕೆ ಜೊತೆಯಾಗಿ ಸಾಥ್ ಕೊಟ್ಟರು. ಬಳಿಕ ಮಾತನಾಡಿದ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್ ಮಾತನಾಡಿ, ವೆಬ್ ಸೀರಿಸ್ […]
ನಿರ್ದೇಶಕ ವಿನಾಯಕ್ಗೆ ಶುಭಾಶಯ ಕೋರಿದ “ಫುಲ್ ಮೀಲ್ಸ್”!
ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ “ಫುಲ್ ಮೀಲ್ಸ್” ಚಿತ್ರದ ನಿರ್ದೇಶಕ ಎನ್ ವಿನಾಯಕ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಮೇಕಿಂಗ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿ ನಿರ್ದೇಶಕರಿಗೆ ಶುಭಾಶಯ ಕೋರಿದೆ. ಸಿನೆಮಾಗೆ ಕೊನೆಯ ಹಂತದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ. ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಎನ್.ವಿನಾಯಕ, ಈ ಹಿಂದೆ ಹಲವು ಕಿರುಚಿತ್ರ ಮತ್ತು […]
ಮಹಂತೇಶ್-ಮಿಲಿ ಒಂದಾದರು!
ಇವತ್ತಿನ ದಿನಗಳಲ್ಲಿ ನಿಜಕ್ಕೂ ನಗಿಸುವ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ. ಒಬ್ಬ ನಟ ತೆರೆ ಮೇಲೆ ಬರ್ತಿದ್ದಂಗೇ ಜನ ನಗಲು ಶುರು ಮಾಡ್ತಾರೆ ಅಂದರೆ ನಿಜಕ್ಕೂ ಅದು ಒಬ್ಬ ಹಾಸ್ಯ ಕಲಾವಿದನ ಗೆಲುವು ಅಂದುಕೊಳ್ಳಬಹುದು. ಸಧ್ಯಕ್ಕೆ ಸಾಧು ಕೋಕಿಲಾ ನಂತರ ಜನ ತೆರೆ ಮೇಲೆ ಅತಿ ಹೆಚ್ಚು ಎಂಜಾಯ್ ಮಾಡ್ತಿರೋದು ಮಹಂತೇಶ್ ಅವರ ನಟನೆಯನ್ನು ನೋಡಿ! ಫ್ರೆಂಚ್ ಬಿರಿಯಾನಿ ಸಿನಿಮಾದ ಮಸಲ್ ಮಣಿ ಪಾತ್ರ ಮಹಂತೇಶ್ ಅವರಿಗೆ ಸ್ಟಾರ್ ವರ್ಚಸ್ಸು ತಂದುಕೊಟ್ಟಿದೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ […]