#Raymo, #HodareHoguYaarigeBeku #ShreyaGhoshal
#ArjunJanya #ishan, #Ashikaranganath
#PavanWadeyar, #CRManohar, #Kaviraj
#TripleRiding, #goldenstarganesh #saikartheek
#aditiprabhudeva #meghashetty #rachanainder
#chandanshetty #mangli
ಮಗನಿಗೆ ಕೈತುಂಬಾ ಸಂಬಳ ಬರುವ ಕಂಪನಿಯ ಕೆಲಸ ಸಿಕ್ಕಮೇಲೆ ಹೆತ್ತವರ ಗುರಿ ಒಂದೇ. ಮದುವೆ ಮಾಡಿ ಲೈಫ್ ಸೆಟಲ್ ಮಾಡಿಸೋದು. ಹಾಗೆಯೇ ಇಲ್ಲಿ ಹೀರೋ ಡಾರ್ಲಿಂಗ್ ಕೃಷ್ಣನಿಗೆ ಮದುವೆ ಮಾಡಲು ಹುಡುಗಿಯನ್ನು ಫಿಕ್ಸ್ ಮಾಡಿರುತ್ತಾರೆ. ಅಷ್ಟರಲ್ಲೇ ಆ ಕಡೆ ಇನ್ನೊಬ್ಬಳು ತಗ್ಲಾಕೋತಾಳೆ. ಪಾನಮತ್ತಳಾದವಳನ್ನು ಕರೆದುಕೊಂಡು ಹೋಗಿ ಲಾಡ್ಜಿನಲ್ಲಿ ಮಲಗಿಸಿದ್ದೇ ಅವಾಂತರಕ್ಕೆ ಕಾರಣವಾಗುತ್ತದೆ. ನಮ್ಮಿಬ್ಬರಲ್ಲೂ ಏನೇನೋ ಆಗಿರಬಹುದು. ಅದು ಕನ್ಫರ್ಮ್ ಆಗಲು ನಲವತ್ತೈದು ದಿನಗಳ ಕಾಲ ನೀನು ನನ್ನೊಟ್ಟಿಗಿರಬೇಕು ಅನ್ನೋದು ಹುಡುಗಿಯ ಷರತ್ತು. ಆ ಕಡೆ ಮನೆಯಲ್ಲಿ ಮದುವೆಗೆ […]
ಟ್ರಜರ್ ಹಂಟ್ ಕಥೆಯ, ಸಾಕಷ್ಟು ಥ್ರಿಲ್ಲರ್ ಸಿನಿಮಾಗಳು ಬಂದಿರಬಹುದು. ಆದರೆ ಯೆಲ್ಲೋಗ್ಯಾಂಗ್ ತನ್ನ ಗುಣಮಟ್ಟದ ಕಾರಣಕ್ಕೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಕೆಲವೊಂದು ಸಿನಿಮಾದ ಕಥೆಯೇ ಹಾಗಿರುತ್ತದೆ. ಹೀಗೀಗೆ ಅಂತಾ ಒಂದೇ ಗುಕ್ಕಿಗೆ ಹೇಳಿಬಿಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಥರಹೇವಾರಿ ಪಾತ್ರಗಳು, ಒಂದಕ್ಕೊಂದು ಸೂತ್ರ-ಸಂಬಂಧವಿಲ್ಲದ ಟ್ರ್ಯಾಕುಗಳೆಲ್ಲಾ ಸೇರಿ ಒಂದು ಆಕಾರ ಪಡೆದಿರುತ್ತದೆ. ಕಲ್ಪಿತ ಚೌಕಟ್ಟಿನ ಒಳಗೆ ಚಿತ್ರ ರೂಪಿಸುವವರಿಂದ ಇಂಥ ಕತೆಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಥೇಟು ಚದುರಂಗದ ನುರಿತ ಆಟಗಾರರಂತೆ ತೀರಾ ಬುದ್ದಿವಂತ ನಿರ್ದೇಶಕರು ಮಾತ್ರ ಕಟ್ಟಿ, ಗೆಲ್ಲಬಲ್ಲ […]
ನೀನು ದಿನಾ ಇಷ್ಟು ಊಟ ಮಾಡ್ತೀಯಾ? ಒಂದೊಂದು ಸರ್ತಿ ಇಷ್ಟೆಲ್ಲ ಊಟ ಕೊಡಿಸುವಷ್ಟು ದುಡ್ಡು ನನ್ನ ಹತ್ರ ಇರುತ್ತೋ ಇಲ್ವೋ…. ಎಂದು ಬಿಕ್ಕುತ್ತಾ ಹೇಳುತ್ತಾನೆ ಹುಡುಗ. ಇಲ್ಲ ಕಣೋ, ಇವತ್ತು ನೀನು ಹೋಗ್ತಿದ್ದೀಯ ಅಂತ ಬೇಜಾರಲ್ಲಿ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ, ಅದಕ್ಕೆ ಸ್ವಲ್ಪ ಹೆಚ್ಚು ತಿಂದುಬಿಟ್ಟೆ, ಸಾರಿ ಕಣೋ ಎನ್ನುತ್ತಾಳೆ ಹುಡುಗಿ… ಇದು ಎಲ್ಲ ಹುಡುಗರ ಎದೆಯೊಳಗಿನ ಗಿಲ್ಟು, ಆತಂಕ. ಪ್ರೇಮ ಅನ್ನೋದು ಏನೇನೆಲ್ಲ ಮಾತಾಡಿಸುತ್ತೆ, ಚಂದ್ರನನ್ನೇ ಮಡಿಲಿಗೆ ತಂದುಕೊಡ್ತೀನಿ ಅಂತೀವಿ. ಆದರೆ ಬದುಕಿನ ವಾಸ್ತವ ಬೇರೆ. […]
ಅವಳು ಅಪ್ಪ-ಅಮ್ಮನನ್ನು ಕಳೆದುಕೊಂಡು, ಚಿಕ್ಕಪ್ಪ-ಚಿಕ್ಕಮ್ಮನ ಮಮತೆಯಲ್ಲಿ ಬೆಳೆದವಳು. ಓದುತ್ತಲೇ, ಉದಯೋನ್ಮುಖ ಹಾಡುಗಾರ್ತಿಯಾಗಿಯೂ ಹೆಸರು ಮಾಡಿರುತ್ತಾಳೆ. ಇಂತವಳ ಮುಂದೆ ಅದೊಂದು ದಿನ ಹುಡಗ ಪ್ರತ್ಯಕ್ಷನಾಗುತ್ತಾನೆ. ಅವಳ ಹೆಸರು, ಹಿನ್ನೆಲೆ, ಇಷ್ಟ-ಕಷ್ಟಗಳನ್ನೆಲ್ಲಾ ಪಟಪಟನೆ ವಿವರಿಸುತ್ತಾನೆ. ನಾನು ಭವಿಷ್ಯದಲ್ಲಿ ನಿನ್ನ ಗಂಡನಾಗುವವನು. ನಮಗೆ ಇಂಥದ್ದೇ ಹೆಸರಿನ ಹೆಣ್ಣುಮಗು ಹುಟ್ಟುತ್ತದೆ… ಎಂಬಿತ್ಯಾದಿಯಾಗಿ ತ್ರಿಕಾಲ ಜ್ಞಾನಿಯಂತೆ ಭವಿಷ್ಯ ನುಡಿಯುತ್ತಾನೆ. ಹಿಂದಿನದ್ದನ್ನು ಕರಾರುವ್ಕಾಗಿ ಹೇಳಿದವನು ಮುಂದಿನದ್ದೂ ಕರೆಕ್ಟಾಗಿ ನುಡಿಯುತ್ತಿರುಬೇಕು ಅಂತಾ ಆಕೆ ನಂಬುತ್ತಾಳೆ… ಅಲ್ಲಿಂದ ಅಸಲೀ ವರಸೆಯೂ ಶುರುವಾಗುತ್ತದೆ. ಜೀವನವಿಡೀ ಮಾಡಿದ ಪಾಪ-ಕರ್ಮಗಳನ್ನು ತೊಳೆದುಕೊಳ್ಳಲು ಕೊನೆಗೆ […]
ಅದು ಇಂದಿರಾ ಯುಗ. ಭಾರತ ದೇಶವನ್ನು ಇಂದಿರಾಗಾಂಧಿ ಪ್ರಭಲವಾಗಿ ಆಳುತ್ತಿದ್ದ ಕಾಲ. ಆ ತನಕ ಇದ್ದ ಫ್ಯೂಡಲ್ ಪದ್ಧತಿಯನ್ನು ತೊಡೆದುಹಾಕಬೇಕು ಅಂತಾ ನಿರ್ಧರಿಸಿರುತ್ತಾರೆ. ಪ್ರತೀ ರಾಜ್ಯ, ಜಿಲ್ಲೆ, ಕೇರಿಗಳಲ್ಲಿ ಯುವಪಡೆಗಳನ್ನು ಕಟ್ಟೋದರಿಂದ ಮಾತ್ರ ಅದು ಸಾಧ್ಯ ಅನ್ನೋದು ಮೇಡಂ ಇಂದಿರಾ ನಿಲುವಾಗಿರುತ್ತದೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಅರಸು ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಯುವಕರು ಸಂಘಟಿತರಾಗುತ್ತಾರೆ. ಅದಕ್ಕಿಟ್ಟ ಹೆಸರು ಇಂದಿರಾ ಬ್ರಿಗೇಡ್.. ಈ ತಂಡದ ಲೀಡರ್ ಆಗಿ ಜಯರಾಜ್ ಅವರನ್ನು ನೇಮಿಸಲಾಗುತ್ತದೆ. ತೀರಾ ಸಣ್ಣ ವಯಸ್ಸಿಗೇ […]
ಸ್ನೇಹ ಮತ್ತು ಪ್ರೀತಿ ಇವೆರಡರ ನಡುವೆ ಬದುಕನ್ನು ಇಟ್ಟು, ಮೂರರಲ್ಲಿ ಯಾವುದು ಮುಖ್ಯ ಅಂತಾ ಕೇಳಿದರೆ ಹೇಗಿರುತ್ತೆ? ಅದಕ್ಕೆ ಉತ್ತರದಂತೆ ಮೂಡಿ ಬಂದಿರುವ ಸಿನಿಮಾ ದ ಚೆಕ್ ಮೇಟ್. ಅವರು ನಾಲ್ಕು ಜನ ಫ್ರೆಂಡ್ಸು. ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಪ್ರೇಮಪ್ರಕರಣಗಳು ಘಟಿಸಿರುತ್ತವೆ. ಆ ಪ್ರೀತಿ ಮುರಿದುಬಿದ್ದಿರುತ್ತವೆ. ಅದನ್ನು ಲವ್ ಬ್ರೇಕಪ್ ಪಾರ್ಟಿಯ ಮೂಲಕ ಆಚರಿಸಲು ನಾಲ್ವರೂ ಒಂದು ಸೇರಿರುತ್ತಾರೆ. ಜೊತೆ ಸೇರಿ ಪಾರ್ಟಿ ಮಾಡಲು ಮುಂದಾದವರು ಮತ್ತೊಂದು ಗ್ಯಾಂಗ್ ಜೊತೆ ಕಿತ್ತಾಡಿಕೊಳ್ಳುತ್ತಾರೆ. ಆ ಕಿತ್ತಾಟ, ಬಡಿದಾಟಗಳು ಪಾರ್ಟಿಯನ್ನು […]
ಕಷ್ಟಗಳೇ ನೀವೆಲ್ಲಿ ಖುಷಿಯು ಮನೆಯೆಲ್ಲಾ ತುಂಬಿರುವಾಗ ಪುಟ್ಟ ಮನೆಯಲ್ಲಿ ವಿಶಾಲವಾದ ಮನಸ್ಸಿರುವಾಗ ಸಮಯವೇ ಸಂಪತ್ತು. ಸಹನೆಯೇ ಸಾಕತ್ತು ಇದು ನಮ್ಮ ಅರ್ಜುನನ ಕಥೆ ಮಾತ್ರವಲ್ಲ, ಪ್ರತಿ ಮನೆಯ ಮನಸ್ಸಿನ ಕಥೆ ಇದು ಅರ್ಜುನ ಸನ್ಯಾಸಿ ಚಿತ್ರದ ಕಟ್ಟ ಕಡೆಯಲ್ಲಿ ಕಾಣಿಸಿಕೊಳ್ಳುವ ಸಾಲುಗಳು. ಈ ಸಾಲುಗಳಿಗೆ ಅನ್ವರ್ಥದಂತೆ ಮೂಡಿಬಂದಿರುವ ಸಿನಿಮಾ ಅರ್ಜುನ ಸನ್ಯಾಸಿ. ಚಿತ್ರದ ಹೆಸರು ಅರ್ಜುನ ಸನ್ಯಾಸಿ ಅಂತಿದೆ ನಿಜ. ಹಾಗಂತ ಇದು ಸನ್ಯಾಸಿಯೊಬ್ಬನ ಲೈಫ್ ಸ್ಟೋರಿ ಅಲ್ಲ. ಇವತ್ತಿನ ಜನಗರದ ಜೀವನ ಮದುವೆಯಾಗಿದ್ದವರನ್ನೂ ಅವರವರದ್ದೇ ಖಾಸಗೀ […]
ಅವನೊಬ್ಬ ರಾಜ. ಸಮೃದ್ಧವಾದ ರಾಜ್ಯ. ಅವನ ಖುಷಿಯೇ ತಮ್ಮ ಖುಷಿ ಅಂತಾ ಭಾವಿಸಿದ ಜನರು. ಎಲ್ಲವೂ ಇದ್ದ ಆ ರಾಜನಿಗೆ ಕೊರತೆ ಅಂತಾ ಇದ್ದಿದ್ದು ಒಂದೇ. ಅದು ನೆಮ್ಮದಿ. ನಾಲ್ಕಾರು ದೇವಸ್ಥಾನ ತಿರುಗಿ, ಹತ್ತಾರು ದೀಪಸ್ನಾನ ಮಾಡಿದ. ದೇವರಿಗೆ ತುಲಾಭಾರ, ಪಿತೃಗಳಿಗೆ ಪಿಂಡ ಇಟ್ಟರೂ ರಾಜನ ಕಣ್ಣಿಗೆ ನೆಮ್ಮದಿಯ ನಿದ್ರೆ, ಮನಸ್ಸಿಗೆ ಶಾಂತಿ ಮಾತ್ರ ಸಿಗೋಗಲೇಇಲ್ಲ. ನೆಮ್ಮದಿಯನ್ನು ಅರಸಿ ಹೋದ ರಾಜನಿಗೆ ಅದೊಂದು ದಿನ ಭೂತಾರಾಧಕರು ಸಿಗುತ್ತಾರೆ. ನನ್ನ ಕೂಗು ಎಲ್ಲಿಯವರೆಗೆ ಕೇಳಿಸುತ್ತದೋ ಅಲ್ಲಿಯವರೆಗೆ ಜಾಗವನ್ನು ಕಾಡಿನ […]