ಸಿನಿಮಾ ಪತ್ರಕರ್ತರಾಗಿ, ಅಂಕಣಕಾರರಾಗಿ ಗುರುತಿಸಿಕೊಳ್ಳುತ್ತಲೇ ರಿಯಾಲಿಟಿ ಶೋಗಳನ್ನು ರೂಪಿಸುತ್ತಾ ಕಿರುತೆರೆಯಲ್ಲಿಯೂ ಸಕ್ರಿಯರಾಗಿರುವವರು ವಿನಾಯಕರಾಮ್ ಕಲಗಾರು. ಪ್ರತಿಯೊಂದು ಕೆಲಸದಲ್ಲೂ ಕ್ರಿಯಾಶೀಲತೆ, ಹೊಸತನ ಹುಡುಕುವುದು ವಿನಾಯಕ ರಾಮರ ಗುಣ. ಸಿನಿಮಾ ಅನ್ನೋದೇ ಮನರಂಜನೆಯ ತಾಣ. ಬೇರೆ ಕ್ಷೇತ್ರಗಳ ಆಗುಹೋಗುಗಳ ಕುರಿತು ಲೋಡುಗಟ್ಟಲೆ ಸುದ್ದಿ ಬರೆಯುವವರಿಗೂ ಎರಡು ಪ್ಯಾರಾ ಸಿನಿಮಾ ಸುದ್ದಿ ಬರೆಯೋದು ಕಷ್ಟ. ದಿನದ ನ್ಯೂಸ್ ಪೇಪರ್ರಾಗಲಿ, ವಾರಪತ್ರಿಕೆಯಾಗಲಿ, ಜನ ಓದಲು ಶುರುಮಾಡೋದೇ ಸಿನಿಮಾ ಸುದ್ದಿಗಳಿಂದ. ಚಿತ್ರಗಳನ್ನೇ ನೋಡದವರೂ ಬಣ್ಣದ ಜಗತ್ತಿನ ವಿಚಾರಗಳನ್ನು ಓದದೇ ಬಿಡುವುದಿಲ್ಲ. ಹೀಗಿರುವಾಗ ಪ್ರತೀ ಸಾಲನ್ನೂ ರಸವತ್ತಾಗಿ ಬರೆಯಬೇಕಾದ ಛಾಲೆಂಜು ಸಿನಿಮಾ ಪತ್ರಕರ್ತರಿಗಿರುತ್ತದೆ. ಹಾಗೆ ಕಳೆದ ಒಂದೂವರೆ ದಶಕಗಳಿಂದ ಸಿನಿಮಾ ಫೀಲ್ಡ್ ನ ಇಂಟರೆಸ್ಟಿಂಗ್ ವಿಷಯಗಳನ್ನು ಯಾರ ಮನಸಿಗೂ ಬೇಸರ ಆಗದಂತೆ ಬರೆಯುತ್ತಲೇ ಇತರೇ ಸೃಜನಶೀಲ ಕೆಲಸಗಳನ್ನೂ ಮಾಡುತ್ತಾ ಬಂದವರು ಕಲಗಾರು. ವಿಜಯಕರ್ನಾಟಕದಲ್ಲಿ ವೃತ್ತಿ ಆರಂಭಿಸಿದ ಕಲಗಾರು, ಆಗಿದಂಲೇ ಚಿತ್ರರಂಗದ ಸಾಹಚರ್ಯ ಹೊಂದಿದವರು. ಸಿನಿಮಾ ಕಲಾವಿದರ ಬದುಕು, ಅವರು ಸಾಗಿಬಂದ ಹಾದಿ, ಅನುಭವಿಸಿದ ಯಾತನೆಗಳೆಲ್ಲಾ ವಿನಾಯಕರಾಮ್ ಅರಿತಿದ್ದಾರೆ.
ಈ ಹಿನ್ನೆಲೆಯಲ್ಲಿ ತೂಗುದೀಪ ಕುಟುಂಬಕ್ಕೆ ಎದುರಾದ ಕಷ್ಟ ಸುಖಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಕಲಗಾರು, ಅದರ ಮೊದಲ ಭಾಗವನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ. ಈ ಕೃತಿಗೆ ‘ತೂಗುದೀಪ ದರ್ಶನ’ ಎನ್ನುವ ಹೆಸರಿಟ್ಟು, ಮೀನಿಂಗ್ ಫುಲ್ ಲೈಫ್ ಸ್ಟೋರಿ ಎನ್ನುವ ಅಡಿ ಬರಹ ನೀಡಿದ್ದಾರೆ.
ಇನ್ನೂರು ಪುಟಗಳ ಸದ್ಯ ಈ ಪುಸ್ತಕದ ಮುಖಪುಟವನ್ನು ಮೀನಾ ತೂಗುದೀಪ ಅವರು ಅನಾರಣಗೊಳಿಸಿದ್ದಾರೆ. ಹಾಗೆಯೇ ಸ್ಯಾಂಡಲ್ ವುಡ್ ನ ‘ದೊಡ್ಡ’ ಮನಸಿನ ಹೀರೋ ಈ ಪುಸ್ತಕದ ಕವರ್ ಪೇಜ್ ಲಾಂಚ್ ಮಾಡಲಿದ್ದಾರೆ. ಪಾಸಿಟಿವ್ ಅಪ್ರೋಚ್ ಇರುವ ಈ ಪುಸ್ತಕದಲ್ಲಿ ದರ್ಶನ್ ಅವರ ಚಾಲೆಂಜಿಂಗ್ ಬದುಕಿನ ಅನಾವರಣ ಆಗಲಿದ್ದು, ಘಟನೆ ಆಧಾರಿತ ಒಂದಷ್ಟು ಸ್ವಾರಸ್ಯಕರ ವಿಷಯಗಳನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ.
ಈ ಕೃತಿಯೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ವರೆಗಿನ ಅಪರೂಪದ ಫೋಟೋಗಳನ್ನು ಬಳಸಿ ಸುಂದರವಾದ ಕ್ಯಾಲೆಂಡರನ್ನೂ ರೂಪಿಸಲಾಗಿದೆ. ಜೋಹರ್ ಪಬ್ಲಿಕೇಷನ್ ಹೊರತರುತ್ತಿರೋ ಈ ಪುಸ್ತಕದ ಜೊತೆ ಹನ್ನೆರಡು ಪುಟಗಳ ಈ ವರ್ಣರಂಜಿತ ದಿನ‘ದರ್ಶಿಕೆ’ಯನ್ನು ದರ್ಶನ್ ಅವರ ಅಭಿಮಾನಿಗಳಿಗೆ ಉಚಿತವಾಗಿ ನೀಡಲಾಗುವುದು. ಬೇಕಿದ್ದವರು ಜೋಹರ್ ಪಬ್ಲಿಕೇಷನ್ ಅಥವಾ ಟ್ರೋಲ್ ರಾಮ ವಿನಾಯಕರಾಮ್ ಅವರನ್ನು ಸಂಪರ್ಕಿಸಬಹುದು…
No Comment! Be the first one.