ಕಲಾತ್ಮಕ ಸಿನಿಮಾಗಳ ಕಡೆಯಿಂದ ಕಮರ್ಷಿಯಲ್ ಕಡೆ ಬರುತ್ತಿದ್ದೀರಲ್ಲ?
ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವಂತಹ ಪ್ರೇಕ್ಷಕರು ಹಾಗೂ ಅವರ ಅಭಿರುಚಿಗಳು ಬದಲಾಗಿವೆ. ಅದಕ್ಕೆ ತಕ್ಕ ಹಾಗೆ ಈಗ ಬರುತ್ತಿರುವ ಸಿನಿಮಾಗಳಲ್ಲಿ ವೈವಿಧ್ಯತೆ ಕಾಣುತ್ತಿವೆ. ಈಗಿನ ಪ್ರೇಕ್ಷಕರ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟು ಸಿನಿಮಾ ಮಾಡುವುದು ಬಹಳ ಮುಖ್ಯವಾಗುತ್ತದೆ. ಕಲಾತ್ಮಕ ಮತ್ತು ಕಮರ್ಷಿಯಲ್ ಸಿನಿಮಾಗಳಿಗೆ ಅದರದ್ದೇ ಆದ ವ್ಯಾಕರಣಗಳಿರುತ್ತವೆ. ಎರಡಕ್ಕೂ ಒಗ್ಗಿಕೊಂಡು ನಟಸಿವುದು ನನ್ನ ಕೆಲಸವಷ್ಟೇ…
ಜಂಟಲ್ ಮನ್ ಹೇಗೆ ಭಿನ್ನ?
ಸ್ಲೀಪಿಂಗ್ ಡಿಸಾರ್ಡರ್ ಇರುವಂತಹ ವ್ಯಕ್ತಿ ಒಂದು ದಿನದಲ್ಲಿ ೧೮ ಗಂಟೆಗಳು ನಿದ್ರೆ ಮಾಡಿ ೬ ಗಂಟೆಗಳು ಮಾತ್ರ ಎದ್ದಿದ್ದು, ಈ ಸಮಯದಲ್ಲಿ ಏನು ಮಾಡೋಕೆ ಸಾಧ್ಯ, ತನ್ನ ಸುತ್ತ ಆಗುವಂತಹ ಘಟನೆಗಳನ್ನು ಬಹಳ ಗಂಭೀರವಾಗಿ ಹಾಗೂ ಎಫೆಕ್ಟೀವ್ ಆಗಿ ಕಟ್ಟಿಕೊಡುವಂತಹ ಸಿನಿಮಾ ಜಂಟಲ್ ಮನ್.
ಜಂಟಲ್ ಮನ್ ಸಿನಿಮಾವನ್ನು ಯಾವ ಕಾರಣಕ್ಕೆ ಒಪ್ಪಿಕೊಂಡಿರಿ?
ಗುರು ದೇಶಪಾಂಡೆ ಅವರು ತುಂಬಾ ಸೆನ್ಸಿಟಿ ಆಗಿ ಯೋಚನೆ ಮಾಡುವಂತಹ ವ್ಯಕ್ತಿ. ಜಂಟಲ್ ಮನ್ ಅಂತ ಯಾಕೆ ಟೈಟಲ್ ಇಟ್ಟಿರಬಹುದು ಅಥವಾ ಇದರ ಹಿನ್ನೆಲೆ ಏನು ಅಂತ ನಾನು ಯೋಚಿಸ್ತಿದ್ದೆ. ನಿರ್ದೇಶಕ ಜಡೇಶ್ ಅವರು ಕಥೆ ಹೇಳಿದಾಗ ಸಣ್ಣ ಸಣ್ಣ ಸೂಕ್ಷ್ಮತೆಗಳನ್ನ ನನಗೆ ಹೇಳೋ ಪ್ರಯತ್ನ ಮಾಡಿದಾಗ ನನಗೆ ಅನ್ನಿಸಿತು ಇದೊಂದು ಒಳ್ಳೆಯ ಟೀಂ ಹಾಗೂ ಒಳ್ಳೆಯ ಕಥೆ ಅಂತ. ’ವಿಮೆನ್ ಎಕ್ಸೆಲ್ ಟ್ರಾಫಿಕ್’ ಬಗ್ಗೆ ಎಲ್ಲೂ ನಾನು ಕೇಳಿರಲಿಲ್ಲ, ಯಾವ ಸಿನಿಮಾದಲ್ಲೂ ನೋಡಿಲ್ಲ. ಈ ರೀತಿಯ ಗಂಭೀರವಾದ ಕಾನ್ಸೆಪ್ಟ್ ಇಟ್ಟುಕೊಂಡು ಚಿತ್ರವನ್ನ ಮಾಡಿದ್ದಾರೆ. ಇಂತಹ ಚಿತ್ರವನ್ನ ಮಾಡದಿದ್ದರೆ ನಾನೂ ಏನೋ ಕಳ್ಕೋತೀನಿ ಅನ್ನೋ ಭಾವನೆ ಬಂತು. ಒಂದು ರೀತಿಯ ಬೇರೆ ಆಯಾಮವನ್ನ ನೀಡುವ ಪಾತ್ರ ಇದು ಅನ್ನಿಸಿತು. ಆದ್ದರಿಂದ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನನ್ನದೊಂದು ಅಜಯ್ ಕುಮಾರ್ ಎನ್ನುವ ಪೊಲೀಸ್ ಆಫೀಸರ್ ಪಾತ್ರ. ನಾನವಳಲ್ಲ, ಹರಿವು, ಕೃಷ್ಣ-ತುಳಸಿ ಹೀಗೆ ನಾನು ಇಲ್ಲಿಯವರೆಗೆ ಮಾಡಿರುವಂತಹ ಪಾತ್ರಗಳೆಲ್ಲವೂ ಒಂದು ರೀತಿಯ ಸಾಫ್ಟ್ ನೇಚರ್ ಇರುವಂತಹದ್ದು. ಆದರೆ ಈ ಚಿತ್ರದಲ್ಲಿ ಒಬ್ಬ ಟಫ಼್ ಪೊಲೀಸ್ ಆಫೀಸರ್ ಗೆಟಪ್ಪಿನಲ್ಲಿ ನನ್ನನ್ನು ನೀವು ನೋಡಬಹುದು. ನಾನೂ ಸಹ ನನ್ನ ಪ್ರಯತ್ನವನ್ನು ಮೀರಿ ನಿರ್ದೇಶಕರ ಎಕ್ಸ್’ಪೆಕ್ಟೇಷನ್ ರೀಚ್ ಮಾಡಿದ್ದೇನೆ ಅನ್ಕೊಂಡಿದ್ದೀನಿ. ಹೀಗಾಗಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಅಂತಾ ಹೇಳಬಹುದು.
ಜಂಟಲ್ ಮನ್ ಸಿನಿಮಾವನ್ನು ಜನ ಹೇಗೆ ಸ್ವೀಕರಿಸಬಹುದು?
ಈಗಾಗಲೇ ಟ್ರೈಲರ್ ರಿಲೀಸ್ ಆಗಿದೆ. ಒಂದು ಟ್ರೈಲರ್ ಬಗ್ಗೆ ನಕಾರಾತ್ಮಕ ಹಾಗೂ ಸಕಾರಾತ್ಮಕ ಚರ್ಚೆಗಳಾಗೋದು ಸಹಜ. ಆದರೆ ಈ ಚಿತ್ರದ ಬಗ್ಗೆ ಎಲ್ಲೂ ಸಹ ನಕಾರಾತ್ಮಕ ಚರ್ಚೆಗಳೇ ಇಲ್ಲದಿರೋದು ನನಗೆ ವಂಡರ್ ಅನಿಸಿತು. ಒಬ್ಬ ನಿರ್ದೇಶಕ, ನಿರ್ಮಾಪಕ ಹಾಗೂ ತಂಡ ಮನಸ್ಸಿನಿಂದ ಹಾಗೂ ಸೂಕ್ಷ್ಮವಾಗಿ ಕೆಲಸ ಮಾಡಿದಾಗ ೧೦೦ ಪರ್ಸೆಂಟ್ ಒಳ್ಳೆಯ ರಿಸಲ್ಟ್ ಬರತ್ತೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಜಂಟಲ್ ಮೆನ್.
ಪ್ರಜ್ವಲ್ ದೇವರಾಜ್ ಅವರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಪ್ರಜ್ವಲ್ ದೇವರಾಜ್ ಒಬ್ಬ ಸಹಜ ವ್ಯಕ್ತಿಯಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ಕೆಂಗೇರಿ ಮೋರಿ ಹರಿದು ನಾಗರಬಾವಿ ಕಡೆಗೆ ಬರುತ್ತೆ. ಆ ಮೋರಿಯಲ್ಲಿ ಒಂದು ದಿನ ಶೂಟಿಂಗ್ ಇತ್ತು. ಆ ಮೋರಿಯಲ್ಲಿ ಇಳಿದು ಒಳಗೆ ಹೋಗುತ್ತಿದ್ದಂತೆ ಎಲ್ಲರಿಗೂ ವಾಂತಿ ಬರುತ್ತಿತ್ತು. ಎಷ್ಟೇ ಕಂಟ್ರೋಲ್ ಮಾಡಿದ್ರೂ ಆ ವಾಸನೆ ತಡೆಯೋಕೆ ಆಗುತ್ತಿರಲಿಲ್ಲ. ಆದರೆ ಪ್ರಜ್ವಲ್ ಯಾವುದೇ ಭಾವನೆಗಳ್ನೂ ಇಟ್ಟುಕೊಳ್ಳದೆ ಅವರು ಸಹಜವಾಗೇ ಅಭಿನಯಿಸುತ್ತಿದ್ದುದ್ದನ್ನ ನಾನು ಗಮನಿಸಿದೆ. ಒಬ್ಬ ನಟನಿಗೆ ತಾನು ಎಲ್ಲವನ್ನೂ ಮೀರಿ ನಾನು ಪಾತ್ರವನ್ನ ಮಾಡಬಲ್ಲೆ ಅನ್ನೋದನ್ನ ಬೆಳೆಸಿಕೊಳ್ಳೋದು ಎಲ್ಲರಿಗೂ ಸ್ಫೂರ್ತಿಯಾಗುವಂತಹದ್ದು. ನನಗೆ ಈ ಹಿಂದೆ ಅವರು ಹೆಚ್ಚು ಪರಿಚಯವಿರಲಿಲ್ಲ. ಈ ಸಿನಿಮಾ ಮಾಡಿದ ಮೇಲೆ ನನಗನ್ನಿಸಿದ್ದು, ಈತ ಯಾವುದೇ ರೀತಿಯ ಪಾತ್ರಗಳನ್ನೂ ಸಹ ಮಾಡಬಲ್ಲರು ಎಂದು. ನಿಜವಾಗಲೂ ಅವರು ಜಂಟಲ್’ಮನ್ ಈ ಸಿನಿಮಾ ಅವರ ಕೆರೆಯರ್ನಲ್ಲಿ ಒಂದೊಳ್ಳೆ ಬ್ರೇಕ್ ಕೊಡುತ್ತೆ ಅನ್ಕೊಂಡಿದ್ದೀನಿ.
ನಿರ್ದೇಶಕ ಜಡೇಶ್ ಬಗ್ಗೆ ಏನನಿಸುತ್ತದೆ?
ಜಡೇಶ್ ಅವರು ಈ ಹಿಂದೆ ಒಂದು ಸಿನಿಮಾದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅದನ್ನ ಜಂಟಲ್ ಮೆನ್ ಚಿತ್ರದಲ್ಲಿ ಪ್ರೂವ್ ಮಾಡಿದ್ದಾರೆ. ಯಾರೇ ಆಗಲೀ ಒಂದೊಳ್ಳೆ ಒಪೀನಿಯನ್ ಕೊಡ್ತಾರೆ ಅಂದ್ರೆ ರಿಸೀವ್ ಮಾಡ್ತಾರೆ. ಯಾವುದು ಸರಿ ಅನ್ನಿಸತ್ತೋ ಅದನ್ನ ಹೆಕ್ಕಿ ಸಿನಿಮಾಗೆ ತರುವಂತಹ ಪ್ರಯತ್ನ ಮಾಡ್ತಾರೆ. ಇದು ಅವರ ಒಳ್ಳೆಯ ಗುಣ. ಒಬ್ಬ ನಟನಾಗಲೀ ನಿರ್ದೇಶಕನಾಲೀ ಎಲ್ಲಾ ಆಂಗಲ್ನಲ್ಲೂ ನೋಡೋದು ಬಹಳ ಮುಖ್ಯ ಆಗುತ್ತದೆ. ಜಡೇಶ್ ಅವರಿಗೆ ಈ ಸಿನಿಮಾದಿಂದ ಇನ್ನೂ ಹೆಚ್ಚಿನ ಅವಕಾಶಗಳು ಕೂಡಿಬರಲಿವೆ. ಈ ರೀತಿಯ ಅದ್ಭುತವಾದ ಚಿತ್ರದಲ್ಲಿ ನಟಿಸಿರುವುದಕ್ಕೆ ಬಹಳ ಹೆಮ್ಮೆ ಇದೆ.
ಈ ಚಿತ್ರದ ಬಗ್ಗೆ ಬೇರೇನು ಹೇಳಲು ಬಯಸುತ್ತೀರ?
ನಿಶ್ವಿಕಾ ಅವರ ಇನೋಸೆನ್ಸ್ ನನಗೆ ಇಷ್ಟವಾಯಿತು. ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರಜ್ವಲ್ ಹಾಗೂ ನಿಶ್ವಿಕಾ ಜೋಡಿ ಬಹಳ ಅದ್ಭುತವಾಗಿದೆ. ಹಾಡುಗಳೂ ಸಹ ಬಹಳ ಚೆನ್ನಾಗಿ ಮೂಡಿಬಂದಿವೆ. ಕನ್ನಡ ಚಿತ್ರರಂಗಕ್ಕೆ ಒಂದು ಕೊಡುಗೆಯಾಗಿ ಜಂಟಲ್ ಮನ್ ಚಿತ್ರ ತೆರೆಕಾಣಲಿದೆ. ಕನ್ನಡ ಹಲವಾರು ದಿಗ್ಗಜರು ಚಿತ್ರದ ಕುರಿತು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಸಪೋರ್ಟ್ ಮಾಡಿ.
ನಿರೂಪಣೆ: ಸುಮ ಜಿ
No Comment! Be the first one.