ಸದ್ಯ ಹರಿಪ್ರಿಯ ನಾಯಕಿಯಾಗಿ ನಟಿಸುತ್ತಿರುವ ಕನ್ನಡ್ ಗೊತ್ತಿಲ್ಲ ಸಿನಿಮಾ ಈಗಾಗಲೇ ಟೈಟಲ್ ಮೂಲಕ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದೆ. ವಿಶೇಷವೆಂದರೆ ಚಿತ್ರದಲ್ಲಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಪರಿಚಯವನ್ನು ಆರಂಭದಲ್ಲಿ ಮಾಡಿಕೊಡುವ ಕಾನ್ಸೆಪ್ಟ್ ನ್ನು ಅಳವಡಿಸಿದ್ದು, ಅದನ್ನು ಎಲಿಜಬಲ್ ವ್ಯಕ್ತಿಯಿಂದಲೇ ನರೇಟ್ ಮಾಡಬೇಕೆಂಬ ಉದ್ದೇಶದಲ್ಲಿ ಚಿತ್ರತಂಡವಿತ್ತು.
ಸದ್ಯ ದೇಶಭಕ್ತಿಯ ಜ್ವಾಲೆಯನ್ನು ಯುವಜನಾಂಗದಲ್ಲಿ ಹೊತ್ತಿಸುವ ಜವಾಬ್ದಾರಿಯಲ್ಲಿ ಬ್ಯುಸಿಯಾಗಿರು ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯವರನ್ನು ಸೆಲೆಕ್ಟ್ ಮಾಡಿದ್ದಾರಂತೆ. ಸಿನಿಮಾ ಆರಂಭದಲ್ಲಿ ಮೂರು ನಿಮಿಷ ಅವರ ದನಿ ಕೇಳಲಿದ್ದು, ಕನ್ನಡ, ಕರ್ನಾಟಕದ ಇತಿಹಾಸ, ಪ್ರಸ್ತುತ ಕನ್ನಡದ ಸ್ಥಿತಿ ಮತ್ತು ಭವಿಷ್ಯದ ಕನ್ನಡದ ಬಗ್ಗೆ ಅವರ ಎಂದಿನ ಶೈಲಿಯಲ್ಲೇ ಮಾತನಾಡಿದ್ದಾರಂತೆ.
No Comment! Be the first one.