ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ನಾಯಕತ್ವದಲ್ಲಿ ಮೂಡಿಬರುತ್ತಿರುವ ಹೊಸ ಜಬರ್ಧಸ್ತ್ ಸಿನಿಮಾ ಕ್ಷತ್ರಿಯ. ಚಿತ್ರೀಕರಣ ಈಗಾಗಲೇ ಶುರು ಮಾಡಿರುವ ಕ್ಷತ್ರಿಯ ಟೀಮಿಗೆ ಬಾಂಬೆ ವಿಲನ್ ಎಂಟ್ರಿಯಾಗಿದೆ. ಹೌದು.. ಅಬ್ರಾರ್ ಜಾಹೂರ್ ಧಾರ್ ಎಂಬ ಮುಂಬೈ ಪ್ರತಿಭೆಯನ್ನು ಕ್ಷತ್ರಿಯ ಚಿತ್ರಕ್ಕಾಗಿ ಕರೆತರಲಾಗುತ್ತಿದೆ. ಇವರು ಬಾಲಿವುಡ್ ನಲ್ಲಿ ಈ ಮೊದಲು ಕಾರ್ಯ ನಿರ್ವಹಿಸಿದ್ದು, ನೀರ್ಜಾ, ಉರಿ, ಕಮ್ಯಾಂಡೋ 3, ಮಿಷನ್ ಮಂಗಲ್ ರಂತಹ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಬ್ರಾರ್ ಜಾಹೂರ್ ಧಾರ್ ಕ್ಷತ್ರಿಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.
ಅಕ್ಕ ತಮ್ಮನ ನಡುವಿನ ಬಾಂದವ್ಯದ ಮೇಲೆ ಕ್ಷತ್ರಿಕ ಕಥೆ ಸಾಗಲಿದ್ದು, ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕಥಾವಸ್ತು ಚಿತ್ರಕ್ಕೆ ಹೈಲೈಟು. ತೀರಾ ಜವಾಬ್ದಾರಿಯುತ ಅಕ್ಕನಿಗೆ ಒಬ್ಬ ತರ್ಲೆ ತಮ್ಮ ಇದ್ದರೆ ಹೇಗಿರುತ್ತದೆ, ನಂತರ ಆತ ಸಮಾಜದ ಒಳಿತಿಗಾಗಿ ಶ್ರಮಿಸುವಂತವನಾದರೆ ಹೇಗಿರುತ್ತದೆ ಅನ್ನೋದೆ ಚಿತ್ರದ ಎಳೆಯಾಗಿಟ್ಟುಕೊಂಡು ಅನಿಲ್ ಮಂಡ್ಯ ಕ್ಷತ್ರಿಯ ಮಾಡುತ್ತಿದ್ದಾರೆ. ಅಂದಹಾಗೆ ಕ್ಷತ್ರಿಯ ಸಿನಿಮಾವನ್ನು ಈ ಹಿಂದೆ ಇದೇ ಚಿರು ನಟನೆಯ ಸಂಹಾರ ಚಿತ್ರವನ್ನು ನಿರ್ಮಿಸಿದ್ದ ವೈಷ್ಣವಿ ಮನು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎ.ವೆಂಕಟೇಶ್, ಕಿಶೋರ್ ಮಂಗಳವಾರ ಪೇಟೆ, ಎಂ.ವಿ.ಮನೀಶ್ ಮತ್ತು ಎಂ.ಜೆ. ವಿಷ್ಣುವರ್ಧನ್ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ, ಡಾ. ಕೆ. ರವಿವರ್ಮ ಸಾಹಸವಿರುವ ಈ ಚಿತ್ರಕ್ಕೆ ಬಹದ್ದೂರ್ ಚೇತನ್ ಕುಮಾರ್ ಭರ್ಜರಿಯಾದ ಸಂಭಾಷಣೆ ರಚಿಸುತ್ತಿದ್ದಾರೆ.
No Comment! Be the first one.