ಸಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ, ನಿಂಗಪ್ಪ ಎಲ್. ನಿರ್ಮಿಸಿರುವ ಮಳೆಬಿಲ್ಲು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. `ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ, ಅವರ ಬದುಕಿನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ ಏಳು ಬಣ್ಣಗಳ ಸಮಾಗಮವಾಗಲಿದೆ’ ಎನ್ನುವ ಪಕ್ಕಾ ಲವ್ ಕಥಾ ಹಂದರವಿರುವ ಈ ಚಿತ್ರವನ್ನು ನಾಗರಾಜ್ ಹಿರಿಯೂರು ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕೆ ಸಿ. ನಾರಾಯಣ್ ಛಾಯಾಗ್ರಹಣ, ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಹೈಟ್ ಮಂಜು, ಎಂ.ಆರ್.ಕಪಿಲ್ ನೃತ್ಯ ನಿರ್ದೇಶನ, ಶರತ್, ಸಂಜನಾ ಆನಂದ್, ನಯನಾ, ಕಿರ್ಲೋಸ್ಕರ್ ಸತ್ಯನಾರಾಯಣ್, ಶ್ರೀನಿವಾಸ ಪ್ರಭು, ಮೈಕೋ ನಾಗರಾಜ್, ಮಹದೇವ್, ಚಂದನ್, ಮೀಸೆ ಆಂಜನಪ್ಪ, ಕೃಷ್ಣಮೂರ್ತಿ, ಧಮಯಂತಿ ನಾಗರಾಜ್, ಡಿ.ಕೆ. ಯಶೋಧ, ರವಿತೇಜ, ಅರವನಹಳ್ಳಿ ಆನಂದ್, ಬಾಲಾಜಿ, ಹರ್ಷಿತಾ, ಪ್ರಜ್ವಲ್, ಸೌಮ್ಯಾ, ಡಾ. ನಾಗೇಶ್, ಸಾತ್ವಿಕ್, ಎಂ. ಭೂಪತಿ, ನಿಂಗರಾಜ್ ಮುಂತಾದವರ ತಾರಾಬಳಗವಿದೆ.
No Comment! Be the first one.