ಲಾಂಗ್ ಗ್ಯಾಪ್ ನ ನಂತರ ಕೋಡ್ಲು ರಾಮಕೃಷ್ಣ ನಿರ್ದೆಶಿಸುತ್ತಿರುವ ಹೊಸಬರ ಸಿನಿಮಾ ಮತ್ತೆ ಉದ್ಭವ. ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಕೇವಲ ಹಾಡು ಮತ್ತು ಸಾಹಸ ಸನ್ನಿವೇಶವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ವೈಟ್ ಪ್ಯಾಂಥರ್ಸ್ ಕ್ರಿಯೇಟರ್ಸ್ ಸಂಸ್ಥೆಯವರು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಇನ್ನು ವಿ. ಮನೋಹರ್ ಸಂಗೀತ ನಿರ್ದೇಶನ, ಮೋಹನ್ ಛಾಯಾಗ್ರಹಣ, ಎಸ್. ಮೋಹನ್ ಸಂಭಾಷಣೆ, ವಸಂತ್ ರಾವ್ ಕುಲಕರ್ಣಿ ಕಲಾನಿರ್ದೇಶನ ಅಪೇಕ್ಷ ಪುರೋಹಿತ್ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತೆ ಉದ್ಭವಕ್ಕೆ ನಾಯಕನಾಗಿ ನಟಿಸಿದ್ದು, ಮಿಲನ ನಾಗರಾಜ್ ನಾಯಕಿಯಾಗಿಇ ಜತೆಯಾಗಿದ್ದಾರೆ. ಉಳಿದಂತೆ ಅವಿನಾಶ್, ರಂಗಾಯಣ ರಘು, ಮೋಹನ್, ಸುಧಾ ಬೆಳವಾಡಿ, ಶುಭ ರಕ್ಷ, ಮಂಡ್ಯ ರವಿ, ಪಿ.ಡಿ.ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.