ಬಿಗ್ ಬಾಸ್ ನಿಂದ ಹೊರಬಂದ ಮೇಲಂತೂ ಭುವನ್ ಪೊನ್ನಣ್ಣ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದರು. ಸದ್ಯ ಅವರ ನಟನೆಯ ಬಹುನಿರೀಕ್ಷಿತ ರಾಂಧವ ಸಿನಿಮಾದ ಮೂಲಕ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಚಿತ್ರದಲ್ಲಿ ಭುವನ್ ಎರಡು ಶೇಡ್ ನಲ್ಲಿ ಅಬಿನಯಿಸಿದ್ದು, ಎರಡು ತಲೆಮಾರುಗಳ ರೋಚಕ ಕಥೆ ಇದಾಗಿರಲಿದೆಯಂತೆ. ಈಗಾಗಲೇ ರಾಂಧವ ವಿಭಿನ್ನ ಟ್ರೇಲರ್ ಮತ್ತು ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದು, ಇದೀಗ ಕರ್ನಾಟಕದ ವೈಭವವನ್ನು ಸಾರುವ ಶಾಕಿಂಗ್ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಈ ಹಾಡಿನಲ್ಲಿ ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಏನು ಮಾಡಿದನೆಂದು ಮಾರ್ಮಿಕವಾಗಿ ತೋರಿಸಿದ್ದಾರೆ.
‘ಈ ಧರೆಯ ಬೆರಗು ಸೊಗಡು ನಮ್ಮ ಈ ನಾಡು‘ ಎಂಬ ಸಾಲುಗಳುಳ್ಳ ಈ ಹಾಡಿನಲ್ಲಿ ನಮ್ಮ ಕರುನಾಡಿನ ವಿಶೇಷವಾದ ತಾಣಗಳನ್ನು ಪರಿಚಯಿಸಿದ್ದು, ಕನ್ನಡದ ಹೆಮ್ಮೆಯನ್ನು ಸಾರುವ ಗೀತೆ ಇದಾಗಿದೆ. ಈ ಹಾಡನ್ನು ಕೇಶವಚಂದ್ರ ರಚಿಸಿದ್ದು, ಮದ್ವೇಶ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ಕರ್ನಾಟದಕ 28 ರಮಣೀಯ ಕ್ಷೇತ್ರಗಳಲ್ಲಿ ಈ ಹಾಡನ್ನು ಚಿತ್ರೀಕರಿಸಿ, ಈ ಮೂಲಕ ಕರುನಾಡಿನ ಹಿರಿಮೆಯನ್ನು ಸಾರುವ ಪ್ರಯತ್ನವನ್ನು ಮಾಡಿದ್ದಾರೆ. ಅಂದ ಹಾಗೆ ಈ ಹಾಡು ಆನಂದ್ ಆಡಿಯೋ ಸಂಸ್ಥೆಯ ಯುಟ್ಯೂಬ್ ಚಾನಲ್ ನಿಂದ ರಿಲೀಸ್ ಆಗಿದೆ. ಚಿತ್ರಕ್ಕೆ ಶಶಾಂಕ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಸನತ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುನೀಲ್ ಆಚಾರ್ಯ ನಿರ್ದೇಶವಿರುವ ಈ ಚಿತ್ರವು ಜುಲೈ ತಿಂಗಳಲ್ಲಿ ತೆರೆಗೆ ಬರಲಿದೆ.
No Comment! Be the first one.