ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದವರು ರಶ್ಮಿಕಾ ಮಂದಣ್ಣ. ಅಲ್ಲಿಂದಲೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಕುಚ್ ಕುಚ್ ಶುರುವಾಯಿತು. ಎಂಗೇಜ್ ಮೆಂಟ್ ಕೂಡ ಮಾಡಿಕೊಂಡರು. ಪಾಪ ಅದೇನಾಯಿತೋ.. ಸ್ಪಷ್ಟತೆಯಿಲ್ಲದೇ ಸಂಭಂದಗಳನ್ನು ಕಡಿದುಕೊಂಡು ದೂರಾ.. ದೂರಾ.. ಆಗಿ ಹೋದರು. ಬ್ರೇಕಪ್ ಆದ ಕಾರಣದಿಂದಲೇ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದು ನಾರಾಯಣನ ಜಪದಲ್ಲಿದ್ದರು.
ಸದ್ಯ ಅಭಿಮಾನಿಗಳ ಒತ್ತಾಯದ ಮೇರೆಗೆ ರಕ್ಷಿತ್ ಶೆಟ್ಟಿ ಸೋಶಿಯಲ್ ಖಾತೆಗಳನ್ನು ಪುನಃ ಬಳಸಲು ಶುರು ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಅವರ ಜನ್ಮದಿನದ ಅಂಗವಾಗಿ ಅವರ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಟೀಸರ್ ರಿಲೀಸ್ ಮಾಡಿಕೊಂಡರು. ಯೂಟ್ಯೂಬ್ ನಲ್ಲಿ ಟೀಸರ್ ಬಹಳಷ್ಟು ಸದ್ದು ಮಾಡುತ್ತಿದೆ.
ಇನ್ನು ಬ್ರೇಕಪ್ ಮಾಡಿಕೊಂಡ ಮೇಲೆ ರಶ್ಮಿಕಾ ಮಂದಣ್ಣ ಅವರಿಗೆ ಸ್ಯಾಂಡಲ್ ವುಡ್ ಜತೆಗೆ ಟಾಲಿವುಡ್ ನಿಂದ ನಿರೀಕ್ಷೆಗೂ ಮೀರಿದ ಆಫರ್ ಗಳು ಬರಲು ಶುರುವಾಯಿತು. ಸಖತ್ ಬ್ಯುಸಿ ಮೂಡ್ ನಲ್ಲಿ ರಶ್ಮಿಕಾ ಸಾಲು ಸಾಲು ಸಿನಿಮಾಗಳನ್ನು ಸ್ಟಾರ್ ನಟರ ಜತೆಗೆ ನಟಿಸುತ್ತಿದ್ದಾರೆ. ಸಂಪೂರ್ಣವಾಗಿ ಟಾಲಿವುಡ್ ಚಿತ್ರತಂಗದಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಆಗಾಗ ಕನ್ನಡಕ್ಕೂ ಬಂದು ಹೋಗುತ್ತಿದ್ದಾರೆ.
ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವೆ ಬ್ರೇಕಪ್ ಆದ ಮೇಲಂತೂ ಟ್ರೋಲಿಗರು ರಶ್ಮಿಕಾ ಅವರ ಕಾಲೆಳೆಯುವುದನ್ನೇ ಡ್ಯೂಟಿ ಮಾಡಿಕೊಂಡು ಚಿಕ್ಕ ವಿಚಾರ ಸಿಕ್ಕರೂ ಸೋಶಿಯಲ್ ಮೀಡಿಯಾದಲ್ಲಿ ಹರಿದು ಮುಕ್ಕಿಬಿಡುತ್ತಿದ್ದರು. ಆಮೇಲೆ ಕೆಲ ದಿನಗಳು ಸ್ವಲ್ಪ ಕೂಲ್ ಆಗಿದ್ದ ನೆಟ್ಟಿಗರು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆದ ಮೇಲೆ ಪುನಃ ರಶ್ಮಿಕಾ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಹೌದು ಟಾಲಿವುಡ್ ನಲ್ಲಿ ಯಾರದೇ ಹುಟ್ಟುಹಬ್ಬವಾದರೂ, ಟೀಸರ್, ಪೋಸ್ಟರ್, ಟ್ರೇಲರ್ ರಿಲೀಸ್ ಆದರೂ ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುವ ರಶ್ಮಿಕಾ ಮಂದಣ್ಣ ತನ್ನನ್ನು ಇಂಡಸ್ಟ್ರಿಗೆ ತಂದವರೆಂಬ ನಿಯತ್ತಿಲ್ಲದೇ ರಕ್ಷಿತ್ ಶೆಟ್ಟಿಯವರಿಗೆ ವಿಶ್ ಮಾಡಿದ್ದಾಗಲೀ, ಅವರ ಟೀಸರಿಗೆ ಪ್ರತಿಕ್ರಿಯೆ ನೀಡದಿರುವುದಾಗಲಿ ಮಾಡದೇ ಉಳಿದಿದ್ದರಿಂದ ಕುಂದಾಪುರ ಶೆಟ್ಟಿಯ ಅಭಿಮಾನಿಗಳು ಧಗ ಧಗ ಉರಿಯುತ್ತಿದ್ದಾರೆ. ರಶ್ಮಿಕಾ ಕಾಲೆಳೆಯಲು ಕಾಯುತ್ತಿದ್ದಾರೆ. ಅಲ್ಲದೇ “ನೀವು ಕೈ ಕೊಟ್ರು ನಾವು ಶೆಟ್ಟಿ ಕೈ ಬಿಡಲ್ಲಾ” ಎಂದು ಹೇಳುತ್ತಾ ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ಗಳನ್ನು ರಶ್ಮಿಕಾ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಮಾಡಿಕೊಂಡವರೂ ಅನುಭವಿಸಲೇಬೇಕಲ್ಲವೇ…!
No Comment! Be the first one.