ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದು ರಾತ್ರೋ ರಾತ್ರಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣ. ಅಭಿನಯಿಸಿದ ಚೊಚ್ಚಲ ಚಿತ್ರವನ್ನೇ ಟ್ರಂಪ್ ಕಾರ್ಡಾಗಿ ಇಟ್ಟುಕೊಂಡು ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ ರಶ್ಮಿಕಾ ಬೆರಳೆಣಿಕೆಯ ದಿನಗಳಲ್ಲೇ ಬಹುಬೇಡಿಕೆಯ ನಟಿಯಾಗಿ ಬೆಳೆದದ್ದು ಕನ್ನಡಿಗರಿಗೆ ಹೆಮ್ಮೆ.. ರಶ್ಮಿಕಾ ಶ್ರಮ. ಯಾವಾಗ ಪರ ಭಾಷೆಗಳಿಂದ ಅವಕಾಶಗಳು ದುಬಾರಿಯಾಗುತ್ತಾ ಹೋಯಿತೋ ಪಾಪ ರಶ್ಮಿಕಾ ಅಡ್ಡದಾರಿಯ ಮೇಲೆ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಆರಂಭದಲ್ಲಿ ಯಶ್ ಅವರನ್ನ ಅಲ್ಲಗಳೆದು ಮಾತನಾಡಿದ್ದ ರಶ್ಮಿಕಾ ತೆಲುಗಿನಲ್ಲಿ ಅವಕಾಶ ದೊರೆಯುತ್ತಿದ್ದಂತೆ ಎಂಗೇಜ್ ಆಗಿದ್ದ ರಕ್ಷಿತ್ ಶೆಟ್ಟಿಯವರನ್ನು ಎಡಗಾಲಲ್ಲಿ ಒದ್ದು ವಿಜಯ್ ದೇವರಕೊಂಡನ ಟೀಮು ಸೇರಿಬಿಟ್ಟರು. ಮಾಡಿದವರ ಪಾಪ ಆಡಿದವರ ಬಾಯಿಗೆ.. ಇರಲಿ..
ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಕನ್ನಡದಲ್ಲಿಯೂ ಡಿಯರ್ ಕಾಮ್ರೇಡ್ ರಿಲೀಸ್ ಆಗಲಿದೆ. ಈ ಪೈಕಿ ಕನ್ನಡ ಮಾಧ್ಯಮ ಮಿತ್ರರೊಂದಿಗೂ ಸಂವಾದ ನಡೆಸಿದ್ದ ರಶ್ಮಿಕಾ ಬಹಳಷ್ಟು ವಿಚಾರಗಳನ್ನು ಕನ್ನಡದಲ್ಲಿಯೇ ಶೇರ್ ಮಾಡಿದ್ದರು. ಆದರೆ ದಿಢೀರ್ ಎಂಬಂತೆ ತಮಿಳು ಪೋರ್ಟಲ್ ವೊಂದಕ್ಕೆ ಸ್ಟೇಟ್ ಮೆಂಟ್ ಕೊಟ್ಟು ಉಂಡ ಮನೆಗೆ ಎರಡು ಬಗೆದಿದ್ದಾರೆ.
ಯೆಸ್.. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮಿಳು ಸಂದರ್ಶಕನೊಬ್ಬ “ಕನ್ನಡ ತುಂಬ ಸುಲಭ ಅಲ್ಲವಾ ನಿಮಗೆ” ಎಂದು ಕೇಳಿದ್ದಕ್ಕೆ ಫೇಕ್ ಕನ್ನಡತಿ ರಶ್ಮಿಕಾ “ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ” ಎಂದು ಹೇಳಿದ್ದಾರೆ. ಅದಾದಮೇಲೆ ಸಡನ್ ಜ್ಞಾನೋದಯವಾಗಿ ಕನ್ನಡ ಮಾತ್ರವಲ್ಲ ಯಾವ ಭಾಷೆಯನ್ನು ಸರಿಯಾಗಿ ಮಾತನಾಡಲು ಬರಲ್ಲ” ಎಂದು ತಮಿಳಿನಲ್ಲಿ ಹೇಳಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ತೆಲುಗು ಮತ್ತು ತಮಿಳು ಮಾತನಾಡಲು ಕಲಿತ ರಶ್ಮಿಕಾ ಕರ್ನಾಟಕದ ಕೊಡಗಿನಲ್ಲೇ ಹುಟ್ಟಿ ಬೆಳೆದು ಭಾಷೆ ಬಾರದ ದುರ್ಗತಿಗೆ ಈಡಾಗಿರೋದು ಬಹಳಷ್ಟು ಮಂದಿಗೆ ಅನುಕಂಪದ ಜತೆಗೆ ಆಕ್ರೋಶಕ್ಕೂ ಕಾರಣವಾಗಿದೆ.
ಪಾಪ.. ರಶ್ಮಿಕಾ ಯಾಕಪ್ಪ.. ಅವಕಾಶದ ಸಲುವಾಗಿ ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎನ್ನುವ ಉಮೇಧಿಗೆ ಬಿದ್ದಿದ್ದಾರೋ… ಎನ್ನುವ ವಿಷಾಧದಲ್ಲಿ ಇಲ್ಲಿಯವರೆಗೂ ಕನ್ನಡತಿ ಎಂದು ಹೆಮ್ಮೆ ಪಡುತ್ತಿದ್ದ ಕನ್ನಡಿಗರು ಕೂಡುವಂತಾಗಿದೆ. ಊರಿಗೆ ಬಂದೋರು ನೀರಿಗೆ ಬರಲ್ವೇ… ಬರೀ ಟಾಲಿವುಡ್ ಕಾಲಿವುಡ್ ಗಳನ್ನೇ ನೆಚ್ಚಿಕೊಂಡು ಕೂತವರೆಲ್ಲ ಉಪ್ಪಿನ ಕಾಯಿಗೂ ಗತಿ ಇಲ್ಲದಂತೆ ಬೀದಿಗೆ ಬಿದ್ದ ಇತಿಹಾಸ ರಶ್ಮಿಕಾ ಮರೆತಿರಬೇಕು.. ಆದಷ್ಟು ಬೇಗ ರಶ್ಮಿಕಾಗೆ ಹಿಡಿದ ಪರಭಾಷೆಗಳ ಹುಚ್ಚು ದೂರಾಗಿ ಆರೋಗ್ಯ ಸ್ಥಿಮಿತಕ್ಕೆ ಬರಲಿ.. ಕೊಡಗಿನ ರಶ್ಮಿಕಾ ಗುಣಮುಖರಾಗಲಿ ಎಂದು ದೇವರನ್ನು ಪ್ರಾರ್ಥಿಸೋಣ…
No Comment! Be the first one.