ಆರ್. ಚಂದ್ರು ನಿರ್ದೇಶನದಲ್ಲಿ ಬಂದಿದ್ದ ತಾಜ್ ಮಹಲ್ ದೊಡ್ಡ ಹೆಸರು ಮಾಡಿತ್ತು. ಆ ಚಿತ್ರದ ಮೂಲಕ ಚಂದ್ರು ಎಂಬ ಕಮರ್ಷಿಯಲ್ ಡೈರೆಕ್ಟರ್ ಚಿತ್ರರಂಗಕ್ಕೆ ಪರಿಚಿತಗೊಂಡಿದ್ದರು. ಈಗ ತಾಜ್ಮಹಲ್ 2 ಚಿತ್ರದ ಮುಹೂರ್ತ ನಡೆದಿದೆ. ಹಿಂದೆ ತಾಜ್ಮಹಲ್ ಚಿತ್ರವನ್ನು ಆರ್. ಚಂದ್ರು ನಿರ್ದೇಶಿಸಿದ್ದರು. ಆ ಕಾಲದಲ್ಲಿ ಪ್ರೇಮಕಥೆ ಹೊಂದಿದ ತಾಜ್ಮಹಲ್ ಚಿತ್ರವನ್ನು ಜನರೂ ಇಷ್ಟಪಟ್ಟಿದ್ದರು. ಈಗ ತಾಜ್ಮಹಲ್ 2 ಟೈಟಲ್ನಲ್ಲಿ ಮತ್ತೊಂದು ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ನಾಯಕ ದೇವರಾಜ್ ಕುಮಾರ್. ಇವರು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಬದುಕು ಆರಂಭಿಸಿದವರು.
ಈ ಹಿಂದೆ ನಿಶ್ಯಬ್ದ -2 ಟೈಟಲ್ ಚಿತ್ರಕ್ಕೂ ಇದೇ ದೇವರಾಜ್ ನಿರ್ದೇಶನ ಮಾಡಿದ್ದರು. ಈ ಮೊದಲು ಡೇಂಜರ್ ಜೋನ್ ಹಾಗೂ ಅನುಷ್ಕ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದರು. ಈಗ ತಾಜ್ಮಹಲ್ 2 ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರೊಂದಿಗೆ ಅವರೇ ಚಿತ್ರ ನಿರ್ದೇಶಿಸುತ್ತಿದ್ದಾರೆ. ತಬಲಾ ನಾಣಿ ಕ್ಯಾಮೆರ ಚಾಲನೆ ಮಾಡಿದರು. ತಾನು ನಾಯಕನಾಗಲು ಕಾರಣವೇನು ? ಎಂಬುದಕ್ಕೆ ಸಮರ್ಥನೆ ಕೊಡುವ ದೇವರಾಜ್ ಕುಮಾರ್ ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ; ಈಗ ತಾಂತ್ರಿಕ ಅನುಭವವೂ ಸಿಕ್ಕಿದೆ. ತಾಜ್ಮಹಲ್ 2 ಕಥೆಯನ್ನು ರಚಿಸಿದವನು ನಾನೇನೆ. ನನಗೆ ಕಥೆಯ ಎಲ್ಲಾ ಭಾವನೆ ಮತ್ತು ಕಲಾವಿದರಿಂದ ಯಾವ ರೀತಿಯ ಕೆಲಸ ಪಡೆಯಬೇಕೆಂಬುದೂ ಗೊತ್ತು. ಅದು ಚಿತ್ರದ ಪರಿಪೂರ್ಣತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ನಾನೇ ನಿರ್ದೇಶಕ ಮತ್ತು ನಾಯಕ . ಚಿತ್ರಕ್ಕೆ ಹೆಚ್ಚು-ಕಮ್ಮಿ ಒಂದು ಕೋಟಿ ರೂ. ಬಂಡವಾಳ ಹೂಡಲಿದ್ದೇನೆ. ಚಿತ್ರ ಯಶಸ್ವಿ ಆಗುವ ನಂಬುಗೆ ನನಗೆ ಖಂಡಿತಾ ಇದೆ ಎಂದು ದೇವರಾಜ್ ಕುಮಾರ್ ಹೇಳಿಕೊಂಡರು. ನನ್ನ ಚಿತ್ರದಲ್ಲಿ ಪ್ರೇಮಕಥೆ. ಪ್ರೇಮಿಗಳು ಎನ್ನುವಾಗ ನೆನಪಾಗುವುದೇ ತಾಜ್ಮಹಲ್.
ಈ ಮಹಲ್ ನಿರ್ಮಾಣದಲ್ಲಿ ಒಂದು ಪ್ರೇಮಕಾವ್ಯವೇ ಹುಟ್ಟಿಕೊಂಡಿದೆ. ಹಾಗಾಗಿ ಚಿತ್ರಕ್ಕೆ ಬೇರೆ ಹೆಸರೇ ನನ್ನಲ್ಲಿ ಹುಟ್ಟುಕೊಳ್ಳಲಿಲ್ಲ ಎಂದರವರು. ಅವರಿಗೆ ನಾಯಕಿಯಾಗಿ ಸಮೃದ್ದಿ ಎಂಬ ಮುಂಬೈ ಚೆಲುವೆ ಅಭಿನಯಿಸಲಿದ್ದಾಳೆ. ತಬಲಾ ನಾಣಿ, ಜಿಮ್ ರವಿ, ಶೋಭರಾಜ್ ಕೂಡಾ ಇದ್ದಾರೆ. ತಾಜ್ಮಹಲ್ 2 ಗೆ ಐವತ್ತು ದಿನ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಈ ಪ್ರೇಮಕಥೆಗೆ ಹಸಿರು ವಾತಾವರಣ ಬಹುಮುಖ್ಯ, ಮುಂಗಾರು ಆರಂಭವಾಗಿದೆ. ಎಲ್ಲಾ ಕಡೆಯೂ ಹಸಿರು ಆರಂಭವಾಗುವ ಕಾಲ. ಹಾಗಾಗಿ ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕನೂ ಆಗಿರುವ ದೇವರಾಜ್ ಕುಮಾರ್ ಮಡಿಕೇರಿ, ಸಕಲೇಶಪುರಕ್ಕೆ ತೆರಳುವ ಸಿದ್ದತೆಯಲ್ಲಿದ್ದಾರೆ. ಸದ್ಯಕ್ಕೆ ತಾಜ್ಮಹಲ್ ನಿರ್ಮಾಣ ಮತ್ತು ಬಿಡುಗಡೆ ವಿಷಯದಲ್ಲಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿರುವ ದೇವರಾಜ್ ಕುಮಾರ್ ಡಿಸೆಂಬರ್ನಲ್ಲಿ ಚಿತ್ರ ತೆರೆಕಾಣಿಸುವ ಸಿದ್ದತೆ ನಡೆಸಿದ್ದಾರೆ.
No Comment! Be the first one.