ಸಿನಿಮಾ ಗೀತೆಗೂ ಕವನಕ್ಕೆ ಹೋಲಿಸಿದರೆ ಸಿನಿಮಾ ಗೀತೆಗೆ ಸಾಕಷ್ಟು ಶ್ರಮದ ಅವಶ್ಯಕತೆ ಇದೆ. ಕವಿತ್ವದ ಜತೆಗೆ ಸಂಗೀತ ನಿರ್ದೇಶಕರು ಕೊಟ್ಟ ಟ್ಯೂನಿಗಷ್ಟೇ ನಮ್ಮ ಭಾವನೆಯನ್ನು ಮಜವಾಗಿ ವ್ಯಕ್ತಪಡಿಸಬೇಕಾಗುತ್ತದೆ. ಆ ಚಿತ್ರದ ಸೀನಿಗೆ ವರ್ಕ್ ಔಟ್ ಆಗಬಹುದಾದ ಹಾಡಿಗಳಷ್ಟೇ ಕೇಳುಗರ ಮನಸ್ಸಿನಲ್ಲಿ, ಬಾಯಿಯಲ್ಲಿ ಉಳಿಯುತ್ತದೆ. ಅಂತಹ ಸೃಜನಶೀಲ ಗೀತ ರಚನೆಯಲ್ಲಿ ಆಸಕ್ತಿ ಉಳ್ಳವರಿಗೆ ಟೆಂಟ್ ಸಿನಿಮಾ ಸದವಕಾಶವೊಂದನ್ನು ನೀಡುತ್ತಿದೆ.
ಯೆಸ್.. ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ಶಾಲೆಯಲ್ಲಿ ಇದೇ ಜುಲೈ 19,20,21ರಂದು ಸಮಯ 9.30 ರಿಂದ 5.30ರವರೆಗೆ ಲಿರಿಕ್ಸ್ ರೈಟಿಂಗ್ ವರ್ಕ್ ಶಾಪ್ ತರಬೇತಿ ನಡೆಯಲಿದೆ. ಈ ತರಬೇತಿಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಗೀತ ನಿರ್ದೇಶಕ ವಿ. ಮನೋಮೂರ್ತಿ, ಕವಿಗಳಾದ ಕವಿರಾಜ್ ಭಾಗವಹಿಸಲಿದ್ದಾರೆ.. ಗೀತ ಸಾಹಿತ್ಯದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲದಲ್ಲಿರುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
No Comment! Be the first one.