ವಿಶ್ವವಿಖ್ಯಾತ ಬರಹಗಾರ ಲಿಯೋ ಟಾಲ್ಸ್ಟಾಯ್ ಅವರ ಕಾದಂಬರಿಯನ್ನು ಆಧರಿಸಿ ಕನ್ನಡದಲ್ಲಿ ವಾರ್ ಅಂಡ್ ಪೀಸ್ ಹೆಸರಿನ ಚಿತ್ರವೊಂದು ನಿರ್ಮಾಣವಾಗಿದೆ. ಗಾಂಧಿ ಮತ್ತು ಹಿಟ್ಲರ್ನ ಐತಿಹಾಸಿಕ ಭೇಟಿ ಎಂಬ ಟ್ಯಾಗ್ಲೈನ್ ಕೂಡ ಈ ಚಿತ್ರಕ್ಕೆ ಇರುವುದರಿಂದ ಯುದ್ದಕ್ಕೆ ಸಂಬಂಧಿಸಿದ ಅಥವಾ ಗಾಂಧಿ-ಹಿಟ್ಲರ್ ಕುರಿತಾದ ವಿಷಯ ಏನಾದರೂ ಈ ಚಿತ್ರದಲ್ಲಿ ಇರುಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ನಿಮ್ಮ ಊಹೆ ತಪ್ಪು, ಬಾಕ್ಸರ್ ಒಬ್ಬನ ಜೀವನದ ಕಥೆ ಈ ಚಿತ್ರದಲ್ಲಿದೆ.
ಈ ಸಿನಿಮಾವನ್ನು ಪ್ರಖ್ಯಾತ್ ನಿರ್ದೇಶನ ಮಾಡಿದ್ದಾರೆ. “ತಾನೊಬ್ಬ ದೊಡ್ಡ ಬಾಕ್ಸರ್ ಆಗಬೇಕೆಂಬ ಗುರಿಯನ್ನು ಹೊಂದಿರುತ್ತಾನೆ. ಆತನ ಬದುಕಿನ ಪಯಣದಲ್ಲಿ ಅದನ್ನು ಸಾಧಿಸಲು ಹೋದಾಗ ಅವನಿಗೆ ಸಾಕಷ್ಟು ಸಮಸ್ಯೆಗಳು ಯುದ್ದದ ರೀತಿಯಲ್ಲಿ ಎದುರಾಗುತ್ತವೆ. ಆತ ಅವನ್ನೆಲ್ಲಾ ಎದುರಿಸಿ ಹೇಗೆ ಜಯಶಾಲಿಯಾಗುತ್ತಾನೆ ಎನ್ನುವುದು ಚಿತ್ರದ ಸಾರಾಂಶವಾಗಿದೆ. ನಾಯಕ ಗಾಂಧಿ ತತ್ವವನ್ನು ಪಾಲಿಸುವವನು, ಎದುರಾಳಿಗಳು ಹಿಟ್ಲರ್ನಂತೆ ಆಕ್ರಮಣ ಮಾಡುತ್ತಾರೆ. ಅದಕ್ಕಾಗಿ ಈ ರೀತಿಯ ಕ್ಯಾಪ್ಷನ್ ಹಾಕಿದ್ದೇವೆ, ಈ ಇಬ್ಬರಲ್ಲೂ ಸಾಕಷ್ಟು ವ್ಯತ್ಯಾಸ ಇದ್ದು, ಪಾತ್ರಗಳು ಭೇಟಿಯಾದಾಗ ಭಯಂಕರ, ಭೀಕರ ಎನ್ನುವಂತ ಸನ್ನಿವೇಶಗಳು ಬರಲಿದೆ ಎಂದು ಹೇಳಿದರು. ಈ ಚಿತ್ರದ ನಾಯಕನಾಗಿ ಚಿರಂತ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡುವ ಟೆಕ್ಕಿ ರಾಣಿ ವಾರತ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಇಬ್ಬರಿಗೂ ಚಿತ್ರರಂಗ ಹೊಸದು. ಉಳಿದಂತೆ ಜಗಪತಿ ಬಾಬು, ತಬಲಾನಾಣಿ, ಚಿಕ್ಕಣ್ಣ, ಕರಿಸುಬ್ಬು, ಚೇತನ್, ರಂಗ ಶಂಕರ ಶ್ರೀಧರ್ ನಟಿಸುತ್ತಿದ್ದಾರೆ.
ಒಂದು ಹಂತದ ಚಿತ್ರೀಕರಣವನ್ನು ಶಿವಮೊಗ್ಗ, ಅರಸಿಕೆರೆ, ಬೆಂಗಳೂರಿನಲ್ಲಿ ನಡೆಸಲಾಗಿದ್ದು, ಎರಡನೆ ಹಂತದಲ್ಲಿ ಮೈಸೂರು, ರಾಜಸ್ಥಾನದಲ್ಲಿ , ಹಾಡುಗಳನ್ನು ಮಡಿಕೇರಿ, ವಿದೇಶದಲ್ಲಿ ಶೂಟ್ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಚಿತ್ರದ ಆರು ಗೀತೆಗಳಿಗೆ ಗುಮ್ಮಿನೇನಿ ವಿಜಯ್ ಅವರ ಸಂಗೀತವಿದೆ. ಸಂತೋಷ್ ಕುಮಾರ್.ಜೆ. ಮತ್ತು ಸುರೇಶ್.ಆರ್. ಈ ಚಿತ್ರವನ್ನು ನಿರ್ಮಾಣ ಮಾಡುತಿದ್ದು, ಡಾ.ಲೀಲಾಮೋಹನ್ ಸಹನಿರ್ಮಾಪಕರಾಗಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಟ್ರೇಲರನ್ನು ಪ್ರದರ್ಶಿಸಲಾಯಿತು.
No Comment! Be the first one.