ಇಲ್ಲಿಯವರೆವಿಗೂ ಲವರ್ ಬಾಯ್ ಆಗಿ, ಭಗ್ನ ಪ್ರೇಮಿಯಾಗಿ ಕನ್ನಡಿಗರ ಮನಸೂರೆಗೊಳಿಸಿದ್ದ ಅಜಯ್ ರಾವ್ ತಾಯಿಗೆ ತಕ್ಕ ಮಗ ಸಿನಿಮಾದ ನಂತರ ಬೇರೆ ಬೇರೆ ಜಾನರ್ ನ ಸಿನಿಮಾಗಳಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ. ಹೌದು.. ಸದ್ಯ ಕೃಷ್ಣ ಅಜೇಯ್ ರಾವ್ ಮೊದಲ ಬಾರಿಗೆ ಪೊಲೀಸ್ ಕಾಪ್ ಆಗಿ ಮಿಂಚಲಿದ್ದಾರೆ.
ಈ ಸಿನಿಮಾವನ್ನು ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಟೈಟಲಿನ್ನು ಅಂತಿಮಗೊಂಡಿಲ್ಲ. ಈ ಸಿನಿಮಾವನ್ನು ಎಸ್. ರಾಜವರ್ಧನ್ ನಿರ್ದೇಶನ ಮಾಡಲಿದ್ದು, ಚಿತ್ರದ ಫಸ್ಟ್ ಲುಕ್ ಇತ್ತೀಚಿಗಷ್ಟೇ ಬಿಡುಗಡೆ ಕೂಡ ಆಗಿದೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ.
No Comment! Be the first one.