ಮೊನ್ನೆ ತಾನೆ ಎಲೆಕ್ಷನ್ ಮುಗಿದು ರಿಸಲ್ಟೂ ಹೊರಬಂದಿದೆ. ಈ ಸಲದ ಚುನಾವಣೆಯಲ್ಲಿ ಸಾಕಷ್ಟು ನಟ-ನಟಿಯರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ʻಇವರು ನನ್ನ ಆತ್ಮೀಯರು. ಅದಕ್ಕಾಗಿ ಪ್ರಚಾರ ಮಾಡುತ್ತಿದ್ದೇನೆʼ ಅಂತಾ ಬಾಯಿಮಾತಿಗೆ ಹೇಳಿಕೊಂಡಿದ್ದಾರಾದರೂ, ಬಹುತೇಕರು ದಿನದ ಪೇಮೆಂಟು ಪಡೆದು ಕ್ಯಾನ್ವಾಸ್ ಮಾಡಿ ಬಂದವರೇ! ನಟ, ನಿರ್ದೇಶಕ, ಸಿನಿಮಾರಂಗದಲ್ಲಿ ಒಂದು ಪೀಳಿಗೆಗೆ ಗಾಡ್ ಫಾದರ್ ಅನ್ನಿಸಿಕೊಂಡಿರುವವರು ರಿಯಲ್ ಸ್ಟಾರ್ ಉಪೇಂದ್ರ. ಸಿನಿಮಾವಲಯದಲ್ಲಿ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವವರು. ಹಾಗೇನಾದರೂ ಸ್ನೇಹ, ಪ್ರೀತಿ, ವಿಶ್ವಾಸಕ್ಕೆ ಕಟ್ಟುಬಿದ್ದು ಪ್ರಚಾರಕ್ಕೆ ಹೋಗುವುದಿದ್ದರೆ, ಉಪೇಂದ್ರನ ಪ್ರಜಾಕೀಯಕ್ಕೇ ಎಲ್ಲರೂ […]
ಯಾವುದೇ ಕ್ಷೇತ್ರದಲ್ಲಿ ಎದ್ದು ನಿಲ್ಲಬೇಕೆಂದರೆ, ಎಲ್ಲ ಕಷ್ಟಗಳಿಗೂ ಎದೆಯೊಡ್ಡಿ ನಿಲ್ಲಬೇಕು. ಚಂದನ್ಗೆ ಸಮಸ್ಯೆಗಳಿರಬಹುದು. ಅದನ್ನೇ ನೆಪ ಮಾಡಿಕೊಂಡು ವ್ಯಕ್ತಿತ್ವ ಹಾಳು ಮಾಡಿಕೊಳ್ಳಬಾರದು ಅನ್ನೋದಷ್ಟೇ ಈ ಬರಹದ ಉದ್ದೇಶ ಚಂದನ್ ಆಚಾರ್ ಎನ್ನುವ ನಟ ನೆನಪಿದ್ದಾನಾ? ಸರಿಯಾದ ಪ್ರಯತ್ನ ಮಾಡಿದ್ದರೆ ಈತ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಸ್ಥಾನ ಗಿಟ್ಟಿಸಿಕೊಳ್ಳಬಹುದಿತ್ತು. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಜನ ಗುರುತಿಸುವಂತಾದವನು ಚಂದನ್. ಆ ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಮತ್ತು ಮಂಗಳವಾರ ರಜಾದಿನ ಎಂಬ ಎರಡು ಸಿನಿಮಾಗಳಲ್ಲಿ ಚೆಂದದ ನಟನೆ ಮಾಡಿದ್ದ […]
ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ’ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್ದಲ್ಲಿ ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೇಲರ್ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ತೂಕ ಹೆಚ್ಚಿದೆ. ನವ ಪ್ರತಿಭೆ ಎಸ್.ವಸಂತ್ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು […]
ರವೀಂದ್ರ ತುಂಬರಮನೆ-ರಮೇಶ್ ಬೇಗಾರ್ ಸೃಷ್ಟಿಸಿದ ಜಲಪಾತ ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ, ರಿಂದ. ನಟ ಪ್ರಮೋದ್ ಶೆಟ್ಟಿ ಅವರಿಗಾಗಿ ವೈಶಂಪಾಯನ ತೀರ ಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಬೇಗಾರ್ ಸದ್ಯ ʻಜಲಪಾತʼವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಜಲಪಾತದಲ್ಲಿದೆ. ೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, […]
ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಆಗಾಗ ಅರಳುತ್ತಿರುತ್ತವೆ. ಈ ವಾರ ತೆರೆಗೆ ಬರುತ್ತಿರುವ ಕಬ್ಜ ಸಿನಿಮಾದಲ್ಲೇ ಕನ್ನಡದ ಮೂವರು ಟಾಪ್ ಸ್ಟಾರ್ಗಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅತಿ ಹೆಚ್ಚು ಮಲ್ಟಿ ಸ್ಟಾರ್ ಸಿನಿಮಾ ಮಾಡಿರೋರಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ರವಿಚಂದ್ರನ್ ರಿಂದ ಹಿಡಿದು ಸುದೀಪ್, ಶ್ರೀಮುರಳಿ ತನಕ ಕನ್ನಡ ಹಿರಿ, ಕಿರಿಯ ಹೀರೋಗಳೊಂದಿಗೆ ತೆರೆ ಹಂಚಿಕೊಂಡ ಹಿರಿಯ ನಟ ಶಿವಣ್ಣ! ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ […]
ಸಿದ್ದಾರ್ಥ ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ಲಾಂಚ್ ಆದಾಗ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ವಲಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾನೇ ಅಂದುಕೊಂಡಂತೆ ಆಗಲಿಲ್ಲ. ಎರಡನೇದಾದರೂ ಕೈ ಹಿಡಿಯಬಹುದು ಅಂದುಕೊಂಡಿದ್ದರು. ರನ್ ಆಂಟನಿ ಎನ್ನುವ ಸಿನಿಮಾ ವಿನಯ್ ರಾಜ್ ಕುಮಾರ್ ವೃತ್ತಿ ಬದುಕಿಗೆ ಭಯಾನಕ ಏಟು ಕೊಟ್ಟುಬಿಟ್ಟಿತು. ದೊಡ್ಮನೆಯ ಬ್ಯಾನರಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಕಡೆಯ ಸಿನಿಮಾವೊಂದು ಈ ಮಟ್ಟದಲ್ಲಿರುತ್ತದೆ ಅಂತಾ ಯಾರೂ ಅಂದಾಜಿಸಿರಲಿಲ್ಲ. ಆ ಚಿತ್ರದ ನಿರ್ದೇಶಕ ರಘುಶಾಸ್ತ್ರಿಯ ಮಾತಿನಲ್ಲಿದ್ದ ನಿಯತ್ತು ಕೃತಿಯಲ್ಲಿರಲಿಲ್ಲ. […]
ಯಾವ ಊರಿನವರಾದರೇನು? ಯಾವ ದೇಶದವರಾದರೇನು? ಹೆಣ್ಣುಮಕ್ಕಳು ಅಂದಮೇಲೆ ಗೌರವಿಸಲೇಬೇಕು. ತೀರಾ ಅವರನ್ನು ಶೋಕೇಸ್ ಗೊಂಬೆಗಳಂತೆ ಬಳಸಿಕೊಳ್ಳೋದು ಅಮಾನವೀಯ. ನೆನ್ನೆ ದಿನ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಟಿ ಕೂಡಾ ಅದಾಗಿತ್ತು. ಧ್ರುವ ಸರ್ಜಾ ಕೂಡಾ ಈಗ ಇಂಡಿಯಾದ ಟಾಪ್ ಹೀರೋಗಳ ಸಾಲಿಗೆ ಬಂದು ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಅದು ಬಹುತೇಕ ಯಶಸ್ವಿಯಾಗೋದು ನಿಜ. ಸ್ವಂತ ಸೋದರ ಮಾವ ಅರ್ಜುನ್ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್ʼಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗೆ ನೋಡಿದರೆ ಮೂರು ದಶಕಗಳ […]
ಅದೇನು ದುರಂತವೋ ಗೊತ್ತಿಲ್ಲ. ತಮಿಳಿನ ಹಾಸ್ಯನಟರೆಲ್ಲಾ ಒಬ್ಬರ ಹಿಂದೆ ಒಬ್ಬರು ಕಾಲವಾಗುತ್ತಿದ್ದಾರೆ. ನೆನ್ನೆ ಫೆಬ್ರವರಿ 19ರಂದು ಸುಪ್ರಸಿದ್ದ ಕಾಮಿಡಿ ಕಲಾವಿದ ಮೈಲ್ಸಾಮಿ ಇಹಲೋಕ ತ್ಯಜಿಸಿದ್ದಾರೆ. (57 ವರ್ಷ ವಯಸ್ಸು) ಸತ್ಯಮಂಗಲ ಮೂಲದ ಮೈಲ್ಸಾಮಿ ಬೆಳೆದಿದ್ದೆಲ್ಲಾ ಕೊಯಮತ್ತೂರಿನಲ್ಲಿ. 1984ರಲ್ಲಿ ಬಂದ ದಾವಣಿ ಕನವುಗಳ್ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದವರು ಮೈಲ್ಸಾಮಿ. ನಂತರ ಪಾಂಡ್ಯರಾಜ ನಿರ್ದೇಶನದ ಕನ್ನಿ ರಾಸಿ ಸಿನಿಮಾದ ದಿನಸಿ ಅಂಗಡಿ ಹುಡುಗನ ಪಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದಾಗುತ್ತಿದ್ದಂತೇ ಪ್ರಭು ನಟನೆಯ ಎನ್ ತಂಗಚ್ಚಿ […]
ಎಲ್ಲ ಸಿನಿಮಾಗಳೂ ಕೆಜಿಎಫ್ಫು, ಕಾಂತಾರಾನೇ ಆಗಲು ಸಾಧ್ಯವಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ಬಗೆಯ ಕಂಟೆಂಟ್ ಇರುತ್ತದೆ. ಉತ್ತಮ ಸಿನಿಮಾ ಅನ್ನಿಸಿದಾಗ ಅದನ್ನು ಜನ ಮೆಚ್ಚಿ ನೋಡಿದಾಗಲೇ ಅವು ಹಿಟ್ ಅನ್ನಿಸಿಕೊಳ್ಳೋದು. ಬರುವ ಎಲ್ಲ ಸಿನಿಮಾಗಳೂ ಗುಣಮಟ್ಟ ಹೊಂದಿರೋದಿಲ್ಲ ಅನ್ನೋದೂ ನಿಜ. ಆದರೆ ಅಲ್ಲೊಂದು ಇಲ್ಲೊಂದು ಕ್ವಾಲಿಟಿ ಚಿತ್ರಗಳು ಬಂದಾಗ ಅದನ್ನು ಪ್ರೋತ್ಸಾಹಿಸಬೇಕಿರುವುದು ಬರಿಯ ಪ್ರೇಕ್ಷಕರ ಜವಾಬ್ದಾರಿ ಮಾತ್ರವಲ್ಲ, ಇಂಡಸ್ಟ್ರಿ ಕೂಡಾ ಸಾಥ್ ನೀಡಬೇಕು. ಎಲ್ಲೋ ಕೆಲವು ಸಿನಿಮಾಗಳಿಗೆ ಕಿಚ್ಚ, ರಕ್ಷಿತ್ ಶೆಟ್ಟರ ಥರದವರು ಬಂದು ಕೈ ಹಿಡಿದ […]
ಬದುಕು ನಿರ್ದಯಿ ಅನ್ನಿಸೋದೇ ಇಂಥಾ ಸಂದರ್ಭಗಳಲ್ಲಿ. ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 55 ಸಿನಿಮಾಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿರುವವರು ಬಿ.ಆರ್. ಕೇಶವ. ಸಿನಿಮಾ ಮಾಡೋದು ತುಂಬಾ ಕಷ್ಟದ ಕೆಲಸ ಅಂತ ಅಂದುಕೊಳ್ಳುವ ಕಾಲದಲ್ಲಿ ತಿಂಗಳಿಗೊಂದು ಚಿತ್ರವನ್ನು ಸುತ್ತಿ ಬಿಸಾಕುತ್ತಿದ್ದವರು ಇದೇ ಕೇಶವ್. ಆಗಿನ್ನೂ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಧಾರಾವಾಹಿಗಳ ನಿರ್ದೇಶನ ಶುರು ಮಾಡಿದ ಕೇಶವ್ ಅತೀ ಕಡಿಮೆ ವಯಸ್ಸಿಗೇ ಡೈರೆಕ್ಟರ್ ಕ್ಯಾಪ್ ತೊಟ್ಟವರು. ಈ ವರೆಗೆ ಇವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬರೋಬ್ಬರಿ 55. ಕೇಶವ್ ಸಿನಿಮಾ ಮಾಡೋ […]