ಈ ಸಲ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಬಂಗಾರಪ್ಪನವರ ಪುತ್ರಿ ಮತ್ತೊಮ್ಮೆ ರಾಜಕಾರಣದ ಅಖಾಡದಲ್ಲಿ ಪರೀಕ್ಷೆಗಳಿದಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಿಜಕ್ಕೂ ಗಟ್ಟಿಗಿತ್ತಿ ಹೆಣ್ಣುಮಗಳು. ಹೇಗೆ ಪಾರ್ವತಮ್ಮನವರು ಡಾ. ರಾಜಕುಮಾರ್ ಅವರ ಪ್ರೇರಕ ಶಕ್ತಿಯಾಗಿದ್ದರೋ, ಹಾಗೆಯೇ ಕಳೆದ ಮೂರೂವರೆ ದಶಕಗಳಿಂದ ಶಿವರಾಜ್ ಕುಮಾರ್ ಅವರ ಬೆನ್ನಿಗೆ ನಿಂತವರು. ಆದರೆ ಈಗ ವಿಚಾರ ಅದಲ್ಲ. ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಶಿವಣ್ಣನ ಪತ್ನಿ […]
ಧಾರಾಳವಾಗಿ ಖರ್ಚು ಮಾಡುವ ನಿರ್ಮಾಣ ಸಂಸ್ಥೆ ಯಾವುದಾದರೂ ಇಂಡಸ್ಟ್ರಿಗೆ ಬಂತು ಅಂತಿಟ್ಟುಕೊಳ್ಳಿ… ಆ ಸಂಸ್ಥೆಯನ್ನು ಕಾಪಾಡಿಕೊಳ್ಳುವುದಕ್ಕಿಂತಾ ಅವರನ್ನು ಮುಂಡಾಮೋಚಲು ಸ್ಕೆಚ್ ಹಾಕ್ತಾರೆ. ಆ ಮೂಲಕ ಆ ನಿರ್ಮಾಪಕರು ಇನ್ನೆಂದೂ ಚಿತ್ರರಂಗದ ಕಡೆ ತಲೆ ಹಾಕಿ ಕೂಡಾ ಮಲಗಬಾರದು ಹಾಗೆ ಮಾಡಿ ಕಳಿಸುತ್ತಾರೆ. ಸದ್ಯ ಹಾಗೆ ಗುರುತು ಕೂಡಾ ಸಿಗದಂತೆ ಕುಯ್ಸಿಕೊಳ್ಳುತ್ತಿರುವ ನಿರ್ಮಾಪಕರ ಹೆಸರು ರವೀಂದ್ರ ಕುಮಾರ್. ಎಂತೆಂಥಾ ಶಕ್ತಿಶಾಲಿ ನಿರ್ಮಾಪಕರು, ನೂರಾರು ಕೋಟಿಗಳ ಒಡೆಯರು ಕೂಡಾ ಏಕ ಕಾಲಕ್ಕೆ ಒಂದಕ್ಕಿಂತಾ ಹೆಚ್ಚು ಸಿನಿಮಾಗಳನ್ನು ಶುರು ಮಾಡಲು ಹೆದರುತ್ತಾರೆ. […]
೨೦೨೩ರಲ್ಲಿ ಬಂದ ಬಹುತೇಕ ಸಿನಿಮಾಗಳು ದೊಪ್ಪದೊಪ್ಪನೆ ನೆಲಕ್ಕಪ್ಪಳಿಸಿದ್ದರಿಂದ ಕನ್ನಡ ಚಿತ್ರರಂಗ ಹೆಚ್ಚೂ ಕಡಿಮೆ ಐಸಿಯೂ ಬೆಡ್ಡಿನಲ್ಲಿ ಮಲಗಿತ್ತು. ವರ್ಷದ ಕೊನೆಯಲ್ಲಿ ತೆರೆಕಂಡ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಅಮೋಘ ಗೆಲುವು ಚಿತ್ರರಂಗ ಒಂದಿಷ್ಟು ಮಟ್ಟಕ್ಕಾದರೂ ಕಣ್ಣು ಬಿಡುವಂತಾಗಿತ್ತು. ನಂತರ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಕೂಡ ನಿರೀಕ್ಷಿಸಿದ್ದಕ್ಕಿಂತಾ ದೊಡ್ಡ ಗೆಲುವು ಕಂಡು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿನಿಮಾ ಇಂಡಸ್ಟ್ರಿಯಲ್ಲಿ ಲವಲವಿಕೆಯ ವಾತಾವರಣ ನಿರ್ಮಾಣವಾಗಬೇಕೆಂದರೆ, ದೊಡ್ಡ ಸ್ಟಾರ್ಗಳ ಸಿನಿಮಾಗಳು ಅಲ್ಲೊಂದು ಇಲ್ಲೊಂದಾದರೂ ರಿಲೀಸಾಗುತ್ತಿರಬೇಕು. ಹೊಸಬರ ಸಿನಿಮಾಗಳು ಗೆಲುವು […]
Soori_darshan_arunkumar_filmjournalist_cinibuzz_shivanna
ashwatthama movie shahid kapoor shivarajkumar kannada
ಮೊದಲೆಲ್ಲಾ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ರಂಥಾ ಕಲಾವಿದರು ವರ್ಷಕ್ಕೆ ಒಂದು ಅಥವಾ ಎರಡು ಸಲ ಮೀಡಿಯಾದವರನ್ನು ತಮ್ಮ ಮನೆಗೇ ಕರೆಸಿಕೊಂಡು ಆತ್ಮೀಯ ಸಭೆ ನಡೆಸುತ್ತಿದ್ದರು. ಯಾವುದಾದರೂ ವಿಶೇಷ ಸಂದರ್ಭಕ್ಕೆ ಇಂಥಾ ಕಾರ್ಯಕ್ರಮಗಳು ಏರ್ಪಾಟಾಗುತ್ತಿದ್ದವು. ಈಗ ಕಾಲ ಬದಲಾಗಿದೆ…! ಹೀರೋಗಳ ಮನೆಗಳೇ ಮಾಧ್ಯಮಗೋಷ್ಟಿಗಳ ಕೇಂದ್ರವಾಗುತ್ತಿವೆ… ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೀಗ ಕನ್ನಡದ ಹಿರಿಯ ನಟ. ಈ ವಯಸ್ಸಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಲಾವಿದ. ತಮ್ಮ ʻಎನರ್ಜಿʼಯಿಂದಲೇ ದೇಶವ್ಯಾಪಿ ಹೆಸರಾಗಿರುವವರು. ಇಂಥ ಶಿವಣ್ಣ ಈಗ […]
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿಬಂದಿರುವ ಫೈರ್ ಫ್ಲೈ ಬೆಳಕಿನ ಹಬ್ಬ ದೀಪಾವಳಿಗೆ ದರ್ಶನ ಕೊಡಲಿದೆ. ಈ ಬಗ್ಗೆ ಶಿವಣ್ಣನ ನಾಗವಾರ ನಿವಾಸದಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ಶಿವಣ್ಣ, ಗೀತಾಕ್ಕ ಮಗಳ ಹೊಸ ಪ್ರಯತ್ನಕ್ಕೆ ಜೊತೆಯಾಗಿ ಸಾಥ್ ಕೊಟ್ಟರು. ಬಳಿಕ ಮಾತನಾಡಿದ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್ ಮಾತನಾಡಿ, ವೆಬ್ ಸೀರಿಸ್ […]
ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ “ಫುಲ್ ಮೀಲ್ಸ್” ಚಿತ್ರದ ನಿರ್ದೇಶಕ ಎನ್ ವಿನಾಯಕ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಮೇಕಿಂಗ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿ ನಿರ್ದೇಶಕರಿಗೆ ಶುಭಾಶಯ ಕೋರಿದೆ. ಸಿನೆಮಾಗೆ ಕೊನೆಯ ಹಂತದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ. ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಎನ್.ವಿನಾಯಕ, ಈ ಹಿಂದೆ ಹಲವು ಕಿರುಚಿತ್ರ ಮತ್ತು […]
ಇವತ್ತಿನ ದಿನಗಳಲ್ಲಿ ನಿಜಕ್ಕೂ ನಗಿಸುವ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ. ಒಬ್ಬ ನಟ ತೆರೆ ಮೇಲೆ ಬರ್ತಿದ್ದಂಗೇ ಜನ ನಗಲು ಶುರು ಮಾಡ್ತಾರೆ ಅಂದರೆ ನಿಜಕ್ಕೂ ಅದು ಒಬ್ಬ ಹಾಸ್ಯ ಕಲಾವಿದನ ಗೆಲುವು ಅಂದುಕೊಳ್ಳಬಹುದು. ಸಧ್ಯಕ್ಕೆ ಸಾಧು ಕೋಕಿಲಾ ನಂತರ ಜನ ತೆರೆ ಮೇಲೆ ಅತಿ ಹೆಚ್ಚು ಎಂಜಾಯ್ ಮಾಡ್ತಿರೋದು ಮಹಂತೇಶ್ ಅವರ ನಟನೆಯನ್ನು ನೋಡಿ! ಫ್ರೆಂಚ್ ಬಿರಿಯಾನಿ ಸಿನಿಮಾದ ಮಸಲ್ ಮಣಿ ಪಾತ್ರ ಮಹಂತೇಶ್ ಅವರಿಗೆ ಸ್ಟಾರ್ ವರ್ಚಸ್ಸು ತಂದುಕೊಟ್ಟಿದೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ […]