ಕರ್ನಾಟಕದ ಕಿರುತೆರೆ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿ ಕರುನಾಡಿನ ಜನ ಮನ ಗೆದ್ದಿರುವಂತಹ “ಗಗನ ಎಂಟರ್ಪ್ರೈಸಸ್” ಮೊದಲ ಬಾರಿಗೆ “ಹೆಜ್ಜಾರು” ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದೆ. ಇಲ್ಲಿಯವರೆಗೂ ಬರೋಬ್ಬರಿ ಹದಿಮೂರು ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಿಸಿರುವ ಕೆ.ಎಸ್. ರಾಮ್ಜಿಯವರ ಮೊದಲ ನಿರ್ಮಾಣದ ಹೆಜ್ಜಾರು ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಕುಂಬಳಕಾಯಿ ಒಡೆಯುವ ಮೂಲಕ ಅದ್ದೂರಿಯಾಗಿ ಮುಗಿಸಿದ್ದಾರೆ. ಕಿರುತೆರೆಯ ದಾರವಾಹಿಯ ಹೆಸರಾಂತ ಬರಹಗಾರ ಮತ್ತು ಜೀ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಆಗಿ ಕಾರ್ಯ ನಿರ್ವಹಿಸಿ ಯಶಸ್ಸು ಗಳಿಸಿದ […]
ಸಿದ್ದರಾಮಯ್ಯನವರ ಬದುಕಿನ ಪುಟಗಳು ಈಗ ತೆರೆಯ ಮೇಲೆ ಅರಳಲು ಸಿದ್ದವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲೈಫ್ ಸ್ಟೋರಿ ಎರಡು ಭಾಗಗಳಲ್ಲಿ ರೂಪುಗೊಳ್ಳಲಿದೆ. ಈ ಚಿತ್ರದಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನು ಇಬ್ಬರು-ಮೂವರು ಪಾತ್ರಧಾರಿಗಳು ನಿಭಾಯಿಸುತ್ತಾರೆ. ಪಾತ್ರ ಕೋರ್ಟ್ ಪ್ರವೇಶಿಸುವಾಗ ವಯಸ್ಕ ಸಿದ್ದರಾಮಯ್ಯರಿಂದ ಹಿಡಿದು ಈಗಿನ ತನಕದ ಪಾತ್ರವನ್ನು ಭಾರತದ ಖ್ಯಾತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಿದ್ದಂತೇ ಈ ಸಿನಿಮಾದ ವಿಚಾರಕ್ಕೆ ವರ್ಚಸ್ಸು ಬಂದಿದೆ. ಆದರೆ, ಕಳೆದ ಎರಡು ವರ್ಷಗಳಿಗಿಂತಾ ಮುಂಚೆಯೇ ಇದರ ಕೆಲಸ ಕಾರ್ಯಗಳು ಆರಂಭಗೊಂಡಿವೆ. ಈಗಾಗಲೇ […]
– ಸತೀಶ್ ಎಸ್ ಇಂಡಿಯಾದ ಟಾಪ್ ನಿರ್ದೇಶಕರಲ್ಲಿ ಟಾಪ್ ಸ್ಥಾನವನ್ನು ಉಳಿಸಿಕೊಂಡು ಬಂದಿರುವ ನಿರ್ದೇಶಕ ಮಣಿರತ್ನಂ. ಅವರ ಸಿನಿಮಾದಲ್ಲಿ ಛಾನ್ಸು ಪಡೆಯಬೇಕು ಅಂತಾ ಕಾದು ಕುಂತ ತಂತ್ರಜ್ಞರು, ಕಲಾವಿದರು ಸಾಕಷ್ಟು ಜನರಿದ್ದಾರೆ. ಅಂಥವರಲ್ಲಿ ಗಾಯಕ ಕಂ ನಟ ವಿಕಯ್ ಏಸು ದಾಸ್ ಕೂಡಾ ಒಬ್ಬರಾಗಿದ್ದರು. ನಟರಾಗಿಯೂ ಹೆಸರು ಮಾಡುತ್ತಿರುವರು ಖ್ಯಾತ ಹಿನ್ನೆಲೆ ಗಾಯಕ ಕೆ ಜೆ ಯೇಸುದಾಸ್ ಪುತ್ರ ವಿಜಯ್ ಯೇಸುದಾಸ್. ಗಾಯಕರಾಗಿದ್ದರೂ ಅವರ ಆಸಕ್ತಿ ನಟನೆಯತ್ತಲೇ ಇತ್ತು. ಅದಕ್ಕಾಗಿ ಅವರು ಕೆಲವು ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. […]
ವಿಷ್ಣುವರ್ಧನ್ ಅವರ ಹಲೋ ಡ್ಯಾಡಿ ಸಿನಿಮಾದ ಶಾಲೆಗೆ ಈ ದಿನ ರಜಾ ಹಾಡು ಎಲ್ಲ ಮಕ್ಕಳ ಪಾಲಿಗೆ ಫೇವರೆಟ್ ಗೀತೆ. ಭಾನುವಾರ ಶಾಲೆಗೆ ರಜಾ ಬಂತೆಂದರೆ ಮಕ್ಕಳು ಹಾಡ್ತಿದ್ದ ಮೊದಲ ಹಾಡು ಇದು. ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರ ಜೊತೆ ಮಗನ ಪಾತ್ರದಲ್ಲಿ ಅಭಿನಯಿಸಿದ್ದ ನಿತಿನ್ ತೀವ್ರ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಹಲೋ ಡ್ಯಾಡಿ ಚಿತ್ರದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ನಿತಿನ್ ನಂತರ ನಿರ್ದೇಶನದಲ್ಲಿ ಒಲವು ತೋರಿದ್ದರು. ಬಾಲಾಜಿ ಟೆಲಿಫಿಲ್ಮ್ ಹಾಗೂ ಶೃತಿ ನಾಯ್ಡು ಅವರ […]
ಕೀರ್ತಿ ಸುರೇಶ್ ಎನ್ನುವ ನಟಿಯ ಬಗ್ಗೆ ಗಂಟೆಗೊಂದು ಘಳಿಗೆಗೊಂದು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಮಗಳ ಬಗ್ಗೆ ಇಲ್ಲ ಸಲ್ಲದ ಪುಕಾರುಗಳೇಳುತ್ತಿರೋದನ್ನು ಕಂಡು ಕೀರ್ತಿಯ ಅಪ್ಪ ಸುರೇಶ್ ಬೆಚ್ಚಿಬಿದ್ದಂತೆ ಕಾಣುತ್ತಿದೆ… ಕೀರ್ತಿ ಸುರೇಶ್ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ನಟಿ. ರಾಷ್ಟ್ರಪ್ರಶಸ್ತಿ ಗೆದ್ದ ನಂತರ ಕೀರ್ತಿ ಸುರೇಶ್ ತಮ್ಮ ಮುಂದಿನ ಚಿತ್ರಗಳತ್ತ ಗಮನಹರಿಸಿದ್ದಾಳೆ. ಇದರ ನಡುವೆ ಈಕೆಯ ಕುರಿತು ಸಾಕಷ್ಟು ವದಂತಿಗಳು ಜೀವ ಪಡೆದಿವೆ.. ಕೀರ್ತಿಯ ಕಾಲೇಜು ಸ್ನೇಹಿತ, ಉದ್ಯಮಿ ಅನಿರುದ್ಧ್ ಜೊತೆಗೆ ಈಗಾಗಲೇ ಪ್ರೇಮ ವಿವಾದದಲ್ಲಿ […]
ಬರೋಬ್ಬರಿ ಮೂವತ್ತೈದು ಲಕ್ಷ ಸಬ್ಸ್ಕ್ರೈಬರ್ಗಳನ್ನು ಹೊಂದಿರುವ ತಮಿಳುನಾಡಿನ ಪಾಪ್ಯುಲರ್ ಯೂ ಟ್ಯೂಬರ್ ಇರ್ಫಾನ್. ಯೂ ಟ್ಯೂಬ್ನಲ್ಲಿ ಹೊಟೇಲುಗಳ ಆಹಾರದ ವಿಮರ್ಶೆಯನ್ನು ಮಾಡಿ ಫೇಮಸ್ಸಾಗಿರುವ ಈತ ಸದ್ಯ ಅತಿ ಹೆಚ್ಚು ದುಡಿಮೆ ಮಾಡುತ್ತಿರುವ ಇಂಡಿಯಾದ ಯೂಟ್ಯೂಬರುಗಳಲ್ಲಿ ಒಬ್ಬ. ಅತೀ ಕಡಿಮೆ ಅವಧಿಯಲ್ಲಿ ಸಿಕ್ಕಾಪಟ್ಟೆ ಸಂಪಾದನೆ ಮಾಡಿರುವ ಇರ್ಫಾನ್ ಇತ್ತೀಚೆಗಷ್ಟೆ ಮದುವೆಯಾಗಿದ್ದಾನೆ. ಫುಡ್ ವಿಡಿಯೋಗಳ ಜೊತೆಗೆ ತಾನು ಖರೀದಿಸುವ ಐಶಾರಾಮಿ ಕಾರುಗಳ ಬಗ್ಗೆಯೂ ಈತ ವ್ಲಾಗ್ ಮಾಡುತ್ತಾನೆ. ಮೊನ್ನೆ ದಿನ ತಮಿಳು ನಾಡಿನ ಮರೈಮಲೆ ನಗರದಲ್ಲಿ ಈತನ ಒಡೆತನದ ದುಬಾರಿ […]
ಅಭಿಶೇಕ್ ಅಂಬರೀಶ್ ನಾಡಿದ್ದು ಮದುವೆಯಾಗುತ್ತಿದ್ದಾರೆ… ಹರಿಪ್ರಿಯಾ-ವಸಿಷ್ಠ ಥರದ ಹಿರಿಯರು ಸೇರಿದಂತೆ ಅನೇಕರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನಡುವಯಸ್ಸಿನ ರಾಜ್ ಶೆಟ್ಟಿಯಂಥವರು ಯಾವಾಗ ಮದುವೆಯಾಗುತ್ತಾರೆ? ದಿಢೀರ್ ಅಂತಾ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಅಚ್ಛರಿ ಮೂಡಿಸಿದವರು ರಾಜ್. ಬೋಳು ತಲೆಯ ಚಿತ್ರವಿದ್ದ ಒಂದು ಮೊಟ್ಟೆಯ ಕತೆ ಅನ್ನೋ ಸಿನಿಮಾದ ಪೋಸ್ಟರು ಗೋಡೆಗಳ ಮೇಲೆ ಕಾಣಿಸಿಕೊಂಡಾಗಲೇ ʻಇದ್ಯಾರಪ್ಪಾʼ ಅಂತಾ ಜನ ಆಶ್ಚರ್ಯಗೊಂಡಿದ್ದರು. ಅದೇ ಜನ ಇಷ್ಟ ಪಟ್ಟು ನೋಡಿ ಚಿತ್ರವನ್ನು ಗೆಲ್ಲಿಸಿದರು. ಆ ನಂತರ ರಾಜ್ ತಮ್ಮದೇ ಶೈಲಿಯ ಕೆಲವಾರು ಸಿನಿಮಾಗಳನ್ನು ಮಾಡುತ್ತಾ ಮಾರ್ಕೆಟ್ […]
ಕೋತಿ, ನಾಯಿ, ಹಸು, ಹುಲಿ, ಹಾವು, ನೊಣಗಳೆಲ್ಲಾ ತೆರೆ ಮೇಲೆ ರಾರಾಜಿಸಿವೆ. ಈಗ ಮೇಕೆ ಕೂಡಾ ಚಿತ್ರವೊಂದರಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸಿಕೊಳ್ಳುತ್ತಿದೆ. ಅದೂ ಕನ್ನಡ ಸಿನಿಮಾದಲ್ಲಿ! ಅದ್ಭುತ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕರ ಪಟ್ಟಿ ದೊಡ್ಡದಿದೆ. ಆ ಪ್ರಮುಖರ ಹೆಸರಲ್ಲಿ ಮುಲಾಜಿಲ್ಲದೇ ಸೇರಿಸಬಹುದಾದ ನಿರ್ದೇಶಕ ಪಿ.ಹೆಚ್. ವಿಶ್ವನಾಥ್. ಪಂಚಮವೇದ, ಮುಂಜಾನೆಯ ಮಂಜು, ಶ್ರೀಗಂಧ, ರಂಗೋಲಿ, ಅಂಡಮಾನ್ ಥರದ ಚೆಂದದ ಸಿನಿಮಾ ಕೊಟ್ಟವರು ವಿಶ್ವನಾಥ್. ಕನ್ನಡ ಮಾತ್ರವಲ್ಲದೆ, ತಮಿಳು, ತುಳು ಚಿತ್ರಗಳನ್ನೂ ಡೈರೆಕ್ಟ್ ಮಾಡಿದ ವಿಶ್ವನಾಥ್ […]
ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ ಯದಾ ಯದಾ ಹಿ ಇದೇ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಯುವ ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೂ ಒಟ್ಟಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದ್ದು, ಒಂದಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಅಲ್ಕದೆ ಹರಿಪ್ರಿಯಾ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ ಇಡೀ ಚಿತ್ರಕಥೆ ನಿಂತಿರುವುದೆ ಅವರ ಪಾತ್ರದ ಮೇಲೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಚಿತ್ರದ ಪ್ರೀಮಿಯರ್ ಶೋವನ್ನು ಕೇವಲ ಒಂದು ರೂಪಾಯಿಯಲ್ಲಿ ನೋಡಬಹುದು, ಹೌದು, ದಿ.31ರ ಬುಧವಾರ […]
ಇಂದು ಡಾ. ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್ಜಿ ಕನೆಕ್ಟ್ಸ್ ಜೊತೆಯಾಗಿ ಕೈಜೋಡಿಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ ಸಹ ಕಾಣಿಸಿಕೊಂಡಿರುವುದು ವಿಶೇಷ. ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವೀವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಡುಗಳು ಸಾಮಾಜಿಕ […]