Tharini_Movie_reviw_cinibuzz_arunkuamar_g
ಸಂತೋಷ್ ಆನಂದ್ ರಾಮ್ ಅವರ ಐದನೇ ಕಲಾಕೃತಿ ತೆರೆ ಮೇಲೆ ಅರಳಿಕೊಂಡಿದೆ. ಈ ಹಿಂದೆ ಸಂತೋಷ್ ನಿರ್ದೇಶನ ಮಾಡಿದ್ದೆಲ್ಲಾ ಸ್ಟಾರ್ ನಟರಿಗೆ. ಈ ಬಾರಿ ಹೊಸಾ ನಾಯಕನಟನನ್ನು ಲಾಂಚ್ ಮಾಡುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದರು. ಅದನ್ನು ನೇರ್ಪಾಗಿ ಮಾಡಿದ್ದಾರಾ? ಡಾ.ರಾಜ್ ಕುಟುಂಬದ ಮತ್ತೊಂದು ಕುಡಿಯ ಸಿನಿಮಾವನ್ನು ಯಾವ ಮಟ್ಟದಲ್ಲಿ ಕಟ್ಟಿ ನಿಲ್ಲಿಸಿದ್ದಾರೆ? ಕಳೆದ ಎರಡು ಸಿನಿಮಾಗಳ ಭಯಾನಕ ಸೋಲಿನಿಂದ ಸ್ವತಃ ಸಂತೋಷ್ ಆನಂದರಾಮ್ ಹೊರಬಂದಿದ್ದಾರಾ? ಹೊಂಬಾಳೆ ಜೊತೆಗಿನ ನಾಲ್ಕನೇ ಸಲದ ನಡಿಗೆ ಗೆಲುವಾಗಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರದಂತೆ […]
ಅರುಣ್ ಕುಮಾರ್ ಜಿ. ಮೂವರು ಹುಡುಗರು, ಮೂವರು ಹುಡುಗಿಯರು, ಮೂರು ಲವ್ ಸ್ಟೋರಿ… ಮೂರೂ ಕತೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಪ್ರ್ಯೇಕವಾಗಿ ಸಾಗುತ್ತಿರುತ್ತದೆ. ಕಟ್ಟಕಡೆಯದಾಗಿ ಈ ಮೂರು ಕತೆಗಳು ಹೇಗೆ ಒಂದು ಕಡೆ ಕೂಡುತ್ತವೆ ಅನ್ನೋದು ಬಹುಮುಖ್ಯ ಅಂಶ. ʻಚೌಚೌ ಬಾತ್ʼ ಹೈಪರ್ ಲಿಂಕ್ ಸಿನಿಮಾ. ಕೆಂಜ ಚೇತನ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವಿದು. ಪ್ರೇಮಗೀಮ ಜಾನೆದೋ ಮತ್ತು ದೇವರು ಬೇಕಾಗಿದ್ದಾರೆ ಎಂಬೆರಡು ಚಿತ್ರಗಳನ್ನು ನೀಡಿದ್ದ ಚೇತನ್ ಕುಮಾರ್ ಬಲು ಶ್ರದ್ಧೆ ವಹಿಸಿ ರೂಪಿಸಿರುವ ಚಿತ್ರ ಚೌಚೌ ಬಾತ್. […]
ಅವನು ಭಯಂಕರ ಒರಟ. ಗಂಡಸು, ಹೆಂಗಸು ಅನ್ನೋದನ್ನೂ ನೋಡದೆ ಯಾರೆಂದರೆ ಅವರ ಮೇಲೆ ಮುರಕೊಂಡು ಬೀಳುವ ಕೋಪಿಷ್ಟ. ಎರಡು ಎಕರೆ ಗದ್ದೆ, ತೋಟ ಖರೀದಿ ಮಾಡೋದೇ ಇವನಿಗೆ ಬದುಕಿನ ಪರಮ ಗುರಿ. ಹೆಸರು ಕೆರೆಮನೆ ನಾಗ! ರಾಜಾರೋಷವಾಗಿ ನಾಟಾ ಕಳ್ಳಸಾಗಾಣೆ ಮಾಡಿಕೊಂಡಿದ್ದ ನಾಗ ಜೈಲಿಂದ ಹೊರಬಂದಿರುತ್ತಾನೆ. ಮಲೆನಾಡ ಗೊಂಬೆಯೊಂದನ್ನು ನೋಡಿ ಈ ಮನೆಹಾಳನ ಮನಸೋಲುತ್ತದೆ. ಜಾತಿ ಕಾರಣಕ್ಕೆ ಒಲ್ಲೆ ಅನ್ನುವ ಅವರಪ್ಪನ ವಿರೋಧವನ್ನೂ ಲೆಕ್ಕಿಸದೆ ಹುಡುಗಿಯನ್ನು ಎತ್ತಾಕಿಕೊಂಡು ಬರುತ್ತಾನೆ. ಮುಂದೆ ಯಾರೂ ನಿರೀಕ್ಷಿಸಲೂ ಸಾಧ್ಯವಾಗದ ತಿರುವುಗಳು ಘಟಿಸುತ್ತವೆ. […]
Somu Sound EngineerCharan Raj, Directed By Abhi, Produced By Christopher Kini_Cinibuzz_Review
ಎಲ್ಲಿ ಕಂಡ ಕನಸು ನನಸಾಗೋದಿಲ್ಲವೋ? ತಾನೊಪ್ಪುವ, ತನ್ನನ್ನೊಪ್ಪುವ ಹುಡುಗ ಸಿಗೋದಿಲ್ಲವೋ ಅನ್ನೋದು ಆ ಹೆಣ್ಣುಮಗಳ ತಳಮಳ. ಸ್ಥೂಲಕಾಯದ ಹುಡುಗಿಯರಿಗೆ ಅಂಥದ್ದೊಂದು ಟೆನ್ಷನ್ ಯಾವತ್ತಿಗೂ ಇರುತ್ತದೆ. ಬರುವವರೆಲ್ಲಾ ಸಣ್ಣಗಿರುವ ತಂಗಿಯ ಕಡೆ ನೋಡಿದರೆ ಯಾರಿಗೆ ತಾನೆ ಸಂಕಟವಾಗೋದಿಲ್ಲ. ಒಂದೊಳ್ಳೆ ಸೀರೆಗೆ ಒಪ್ಪುವ ಡಿಸೈನರ್ ರವಿಕೆ ಒಲಿಸಲು ತನ್ನ ಊರಿನ ಚಂದ್ರಣ್ಣನ ಬಳಿ ಹೋಗುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ರವಿಕೆಯ ತಮಾಷೆ ಪ್ರಸಂಗ. ಕ್ರಮೇಣ ಅದು ವಿಕೋಪಕ್ಕೆ ಹೋಗಿ ಸೀರಿಯಸ್ ಪ್ರಸಂಗವಾಗಿಯೂ ಮಾರ್ಪಡುತ್ತದೆ. ಇಲ್ಲಿ ರವಿಕೆ ಅನ್ನೋದು ಒಂದು ರೂಪಕವಷ್ಟೇ. ಹೊಂದಾಣಿಕೆ […]
ಹೌದಲ್ವಾ? ನಮ್ಮ ಆಸಕ್ತಿಯೇ ಬೇರೆ, ನಾವು ಬದುಕುತ್ತಿರುವ ರೀತಿಯೇ ಬೇರೆ. ನಮ್ಮ ಜೀವನ ಶೈಲಿಯಿಂದ ಜಗತ್ತು ನಮ್ಮನ್ನು ನೋಡುತ್ತಿರುವ ರೀತಿಯಂತೂ ಇನ್ನೂ ಬೇರೇನೇ ಆಗಿದೆ. ಯಾರದ್ದೋ ಮರ್ಜಿಗೆ, ಮತ್ತಿನ್ಯಾರದ್ದೋ ಸಮಾಧಾನಕ್ಕೆ ಎಷ್ಟು ಶುಷ್ಕವಾಗಿ ಜೀವಿಸುತ್ತಿದ್ದೇವೆ… ಸಮಾಜದ ಸಿದ್ದ ಸೂತ್ರಗಳಲ್ಲಿ ಸಿಕ್ಕಿಕೊಂಡು, ನಾವಲ್ಲದ ನಾವಾಗಿಯೇ ಬದುಕಿ ಕಟ್ಟಕಡೆಯದಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿಬಿಡಬೇಕಾ? ಯಾವುದೋ ಮರದ ಸೌದೆಯಮೇಲೆ ಮಲಗಿ ಬೂದಿಯಾಗಬೇಕಾ? ನಮ್ಮದು, ನಮ್ಮತನ ಅನ್ನೋದಕ್ಕಿಲ್ಲಿ ಬೆಲೆಯೇ ಇಲ್ಲವಾ? ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಕ್ರಿಯಾಶೀಲವಾಗಿ ಬರೆದುಕೊಂಡಿರಬೇಕು ಅಂತಾ ಬಯಸಿದವನೊಬ್ಬ ತನಗೆ […]
ಆ ಕಾಲೇಜು ತೆರೆದುಕೊಂಡಿದ್ದೇ ಬರೀ ಮೂವತ್ತೈದು ಪರ್ಸೆಂಟ್ ಪಡೆದು ಪಾಸಾದ ಮಕ್ಕಳಿಗಾಗಿ. ಇಂತಿಷ್ಟು ಪರ್ಸೆಂಟು, ಪೇಮೆಂಟು ಇದ್ದರೂ ಕಾಲೇಜಿಗೆ ಪ್ರವೇಶಾವಕಾಶ ಸಿಗೋದು ಕಷ್ಟ. ಇಂಥದ್ದರಲ್ಲಿ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಕಾಲೇಜು ಆರಂಭವಾದರೆ ಅಂಥಾ ಹುಡುಗರಿಗೆ ಎಷ್ಟು ಖುಷಿಯಾಗಬಹದು. ಕಾಲೇಜು ಮಾತ್ರವಲ್ಲ, ಹಾಸ್ಟೆಲ್ ಸೌಲಭ್ಯವೂ ಅಲ್ಲಿರುತ್ತದೆ ಅಂದರೆ ಹುಡುಗರ ಪಾಲಿಗದು ಸ್ವರ್ಗ! ಹಾಗೆ ಸೀಟು ಪಡೆದು ಬಂದ ಹುಡುಗ ಹುಡುಗಿಯರ ಪ್ರೀತಿ ಪ್ರೇಮ ಪ್ರಣಯದಾಟಗಳೂ ಶುರುವಾಗುತ್ತವೆ. ಹುಡುಗರ ಭವಿಷ್ಯದಂತೆಯೇ ಇಲ್ಲಿನ ಕಥೆ ಕೂಡಾ ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದು ಎನ್ನುವ […]
ನಡೆದುಹೋದ ಘಟನೆ ಮತ್ತೆ ಮರುಕಳಿಸಲ್ಲ. ಆದರೆ, ಅಲ್ಲಿ ಏನು ನಡೆಯಿತು ಅಂತಾ ತಿಳಿದುಕೊಳ್ಳೋಕೆ ಎವಿಡೆನ್ಸ್ ಇಂದ ಮಾತ್ರ ಸಾಧ್ಯ…. ನಾಲೆ ನಿರ್ಮಾಣದ ಕಾಮಗಾರಿ ಮಾಡಲು ಹೋದ ಕಾರ್ಮಿಕರ ಕಣ್ಣಿಗೆ ಬಿದ್ದ ಅಸ್ತಿಪಂಜರಗಳ ಬಗ್ಗೆ ತನಿಖೆ ಮಾಡಲು ಬಂದ ಫೊರೆನ್ಸಿಕ್ ತಂಡ ಅಗೆದು ತೆಗೆಯೋದು ಬರೋಬ್ಬರಿ ನೂರಾ ಎಂಟು ಜನರ ಕಳೇಬರ. ಅವರೆಲ್ಲಾ ಸತ್ತಿದ್ದು ಯಾಕೆ? ಅವರನ್ನೆಲ್ಲಾ ಅಷ್ಟು ನಿರ್ದಯಿಯಾಗಿ ಕೊಂದು ಒಂದೇ ಕಡೆ ಹೂತವನು ಯಾರು? ಅದಕ್ಕೆ ಕಾರಣ ಏನಿರಬಹುದು…? ಇಂಥದ್ದೊಂದು ಕೌತುಕದ ಪ್ರಶ್ನೆಯೊಂದಿಗೆ ಆರಂಭವಾಗುವ ಕತೆ […]
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ದಿಢೀರಂತಾ ಮದುವೆಯಾಗಿ ಒಟ್ಟು ಸೇರಿದ ಎರಡು ಜೀವಗಳು ಇಡೀ ಜೀವನ ಒಂದಾಗಿ ಬಾಳಬೇಕು. ಪರಸ್ಪರರ ಇಷ್ಟ ಕಷ್ಟ, ನಡೆ, ನುಡಿ, ಮಾತು, ಮಂಥನಗಳು ಬೇರೆಬೇರೆಯಾಗಿರುತ್ತವೆ. ಇಬ್ಬರು ಬೆಳೆದ ವಾತಾವರಣ, ಸಂಸ್ಕೃತಿ, ರಿವಾಜುಗಳು ಕೂಡಾ ಭಿನ್ನವಾಗಿರುತ್ತವೆ. ಅಸಲಿಗೆ ಒಬ್ಬರಿಗೆ ಒಬ್ಬರ ಪರಿಚಯವೇ ಇರೋದಿಲ್ಲ. ಮದುವೆಗೆ ಮುಂಚೆ ಸಿಕ್ಕಾಪಟ್ಟೆ ಕನಸು ಕಂಡಿರುತ್ತಾರೆ. ಬದುಕು ಇನ್ನೇನೋ ಆಗಿಬಿಡಬಹುದು ಅಂತಾ ಭ್ರಮಿಸಿರುತ್ತಾರೆ. ಆದರೆ ಮದುವೆ ಅಂತಾದಮೇಲೆ ಆಗೋದೇ ಬೇರೆ. ಇಬ್ಬರೂ ನೀರಿಂದ ತೆಗೆದು ನೆಲಕ್ಕೆಸೆದ ಮೀನಂತಾಡಲು ಶುರು […]