ಕೌಟುಂಬಿಕ ಸಮಸ್ಯೆಯ ಬಳಿಕ ರಘು ದೀಕ್ಷಿತ್ ಮತ್ತೆ ಫಾರ್ಮ್ ಗೆ ಮರಳಿದ್ದು ಮೈಸೂರು ಮಸಾಲಾ ಎಂಬ ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತವಾದ ಸಿನಿಮಾ ಇದಾಗಿದ್ದು, ಹಾರುವ ತಟ್ಟೆಯ ಮೇಲೆ ಚಿತ್ರದ ಕಥೆ ಸಾಗಲಿದೆ. ಈ ಚಿತ್ರವನ್ನು ಅಜಯ್ ಸರ್ಪೇಶ್ವರ್ ನಿರ್ದೇಶನ ಮಾಡುತ್ತಿದ್ದಾರೆ.
ವಾಸುಕಿ ವೈಭವ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡು ಲಾಂಗ್ ಡ್ರೈವ್ ಗೆ ಹೇಳಿ ಮಾಡಿಸಿದಂತಿದೆ. ಚಿತ್ರದಲ್ಲಿ ಕಳೆದುಹೋದ ಪ್ರೀತಿ ಹುಡುಕುವ ನಾಯಕನ ಸಂಕಟದ ದೃಶ್ಯಕ್ಕೆ ರಘು ದೀಕ್ಷಿತ್ ಹಾಡಿದ್ದು, ಈ ದೃಶ್ಯ ಅಧ್ಬುತವಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕರ ಅಂಬೋಣ.
ರಘು ದೀಕ್ಷಿತ್ ಮಾತನಾಡಿ ಮೈಸೂರು ಮಸಾಲಾ’ ಚಿತ್ರಕ್ಕೆ ವಾಸುಕಿ ಅದ್ಭುತ ಸಾಹಿತ್ಯವನ್ನು ಬರೆದಿದ್ದಾರೆ, ಈ ಹಾಡು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ನನ್ನ ಲೈವ್ ಶೋಗಳಲ್ಲಿ ಈ ಹಾಡು ಹೆಚ್ಚಿನ ಬೇಡಿಕೆ ಸೃಷ್ಟಿಸಲಿದೆ. ಹಾಡನ್ನು ಭಾವಪೂರ್ಣವಾಗಿ ಕಟ್ಟಿಕೊಡಲು 10 ರಿಂದ 12 ಬಾರಿ ಹಾಡನ್ನು ರೆಕಾರ್ಡ್ ಮಾಡಲಾಗಿದೆ ಎಂದಿದ್ದಾರೆ. ಗಣೇಶ ಚತುರ್ಥಿಗೆ ಈ ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ಹಿರಿಯ ನಟ ಅನಂತ್ನಾಗ್, ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸು ಬಣ್ಣ ಹಚ್ಚಿದ್ದಾರೆ.
No Comment! Be the first one.