ಈಗ ಇದ್ದಕ್ಕಿದ್ದಂತೆ ಇದೇ ಅಶ್ವತ್ಥಾಮ ಶಾಹಿದ್ ಕಪೂರ್ ಪಾಲಾಗಿದ್ದಾನೆ. ಈ ಕುರಿತು ಸ್ವತಃ ಶಾಹಿದ್ ಕಪೂರ್ ಟ್ವೀಟ್ ಮಾಡಿ ಅಫಿಷಿಯಲ್ಲಾಗೇ ಘೋಷಿಸಿಕೊಂಡಿದ್ದಾರೆ. ಇದೇ ಸಮಯಕ್ಕೆ ಸಚಿನ್ ರವಿ ಕೂಡ ʻʻಅಶ್ವತ್ಥಾಮನ ಕುರಿತ ಕತೆ ಹೇಳುವ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಉಳಿದಿದ್ದು ಆ ಶ್ರೀಕೃಷ್ಣನಿಗೆ ಬಿಡುತ್ತೇನೆʼʼ ಎಂದಿದ್ದಾರೆ. ಅಚ್ಚರಿ ಎಂದರೆ ಹಿಂದಿಯ ಜೊತೆಗೆ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲೂ ಈ ಚಿತ್ರ ರೂಪುಗೊಳ್ಳಲಿದೆ. ಅಲ್ಲಿಗೆ ಸೆಂಚುರಿ ಸ್ಟಾರ್ ಕೈ ಹಿಡಿಯಬೇಕಿದ್ದ ಮಹಾಭಾರತದ ಅಶ್ವತ್ಥಾಮ, ಬಾಲಿವುಡ್ ಬಾಗಿಲಲ್ಲಿ ನಿಂತು ಶಾಹಿದ್ ಕೈ ಕುಲುಕಿದ್ದಾನೆ. ಅಂದಹಾಗೆ ನಿರ್ಮಾಪಕರ ಕುರ್ಚಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಇಲ್ಲ. ಅಲ್ಲಿಗೆ ʻಅವನೇ ಶ್ರೀಮನ್ನಾರಾಯಣʼ ಚಿತ್ರದ ನಂತರ ನಿರ್ದೇಶಕ ಸಚಿನ್ ರವಿ ಕೂಡ ವನವಾಸ ಮುಗಿಸಿದಂತಾಗಿದೆ!!
No Comment! Be the first one.