ಕಿತಾಪತಿ ಮಾಡಲು ಎಂತೆಂಥಾ ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ ನೋಡಿ. ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಹೆಮ್ಮೆಯ ನಿರ್ಮಾಣ ಸಂಸ್ಥೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಕೆ.ಜಿ.ಎಫ್., ಕಾಂತಾರ ಎನ್ನುವ ಎರಡು ಸಿನಿಮಾಗಳು ಸಾಕು ಹೊಂಬಾಳೆಯ ಹಿರಿಮೆಯನ್ನು ಸಾರಲು. ಸಧ್ಯ ಹೊಂಬಾಳೆ ಭಾರತೀಯ ಚಿತ್ರರಂಗದ ಮುಂಚೂಣಿ ನಿರ್ಮಾಣ ಸಂಸ್ಥೆಯಾಗಿದೆ. ಪ್ರಬಾಸ್ ನಟನೆಯ ಸಲಾರ್ ಚಿತ್ರದ ಮೂಲಕ ಹೊಂಬಾಳೆ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಲು ಸಿದ್ದವಾಗಿದೆ. ಇದೇ ಹೊತ್ತಿನಲ್ಲಿ ಯಾರೋ ನೀಚನೊಬ್ಬ ಹೊಂಬಾಳೆ […]
ಅನ್ಯಾಯಕ್ಕೊಳಗಾದವರ ಮಾನ ಪ್ರಾಣ ಕಾಪಾಡಲು ಇರುವ ಕಾನೂನು, ವ್ಯವಸ್ಥೆಯನ್ನು ಜನ ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಈಗ ನಮ್ಮ ಕಣ್ಮುಂದೆಯೇ ಇದೆ. ತಿಂಗಳುಗಳ ಹಿಂದೆ ಕನ್ನಡದ ಕೆಲವು ಟೀವಿ ವಾಹಿನಿಗಳಲ್ಲಿ ʻಅವಕಾಶ ಕೊಡಿಸುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಮಾಡಿದ ನಿರ್ಮಾಪಕʼ ಎನ್ನುವ ಸುದ್ದಿಯೊಂದು ಪ್ರಕಟವಾಗಿತ್ತು. ಅದು ೫ಡಿ ಮತ್ತು ಕಲರ್ ಆಫ್ ಟೆಮೇಟೋ ಚಿತ್ರದ ನಿರ್ಮಾಪಕಿ ಸ್ವಾತಿ ಅವರ ಪತಿ ಕುಮಾರ್ ವಿರುದ್ಧ ದಾಖಲಾಗಿದ್ದ ಕೇಸು. ಅವಕಾಶದ ಹೆಸರಿನಲ್ಲಿ ನಿರ್ಮಾಪಕಿಯ ಪತಿ ಹೀಗೆ ಮಾಡಿದ್ದಾರೆ […]
ಸಿನಿಮಾರಂಗದ ಕೆಲವೊಂದು ವ್ಯವಸ್ಥೆ ಹಡಾಲೆದ್ದುಕೂತಿದೆ. ಅನುಭವವಿಲ್ಲದ ನಿರ್ಮಾಪಕ, ಪ್ಯಾಕೇಜ್ ಡೀಲು ಪಡೆದು ಕಾಸು ಮಾಡಲು ಹೊಂಚು ಹಾಕಿದ ಸಾಹಸ ನಿರ್ದೇಶಕ, ಎಲ್ಲೆಲ್ಲಿ ಎಷ್ಟೆಷ್ಟು ಕೀಳಬಹುದು ಅಂತಾ ಲೆಕ್ಕ ಹಾಕುವ ಮ್ಯಾನೇಜರು, ಛಾನ್ಸು ಸಿಕ್ಕಿದ್ದೇ ಬದುಕಿನ ಸಾಧನೆ ಅಂದುಕೊಂಡ ನಿರ್ದೇಶಕ… ಇವರೆಲ್ಲರ ನಡುವೆ ಬೆಂದು ಬಸವಳಿದ ಪುರಾತನ ಛಾಯಾಗ್ರಾಹಕ. ಸ್ವಲ್ಪವೇ ಯಾಮಾರಿದ್ದರೂ ಭಾರತೀಯ ಚಿತ್ರರಂಗದ ಹಿರಿಯ ಕಲಾವಿದ ಸೇರಿದಂತೆ ಕನ್ನಡದ ಇಬ್ಬರು ನಟರ ಹೆಣ ಉರುಳುತ್ತಿತ್ತು. ಅದಕ್ಕೆ ಕಾರಣವಾಗಿರೋದು, ʻದೇಸಾಯಿʼ ಎನ್ನುವ ಸಿನಿಮಾ ಮಾಡಲು ಒಟ್ಟಾಗಿರುವ ಕೆಲವು ಬೇಜವಾಬ್ದಾರಿ […]
ಸಾಕಷ್ಟು ಸಿನಿಮಾಗಳಲ್ಲಿ ಜೈಲಿನ ಚಿತ್ರಣಗಳು ಇದ್ದೇ ಇರುತ್ತವೆ. ಮೊದಲೆಲ್ಲಾ ವರ್ಕಿಂಗ್ ಜೈಲುಗಳಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದರು. ʼಕೆಂಪʼ ಎನ್ನುವ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೈದಿಯೊಬ್ಬ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಿಬಿಟ್ಟಿದ್ದ. ಭಾರತದ ಇತರೇ ಜೈಲುಗಳಲ್ಲೂ ಇಂಥಾ ಪ್ರಕರಣಗಳಾಗಿದ್ದವು. ಸಿನಿಮಾದವರ ಸಾವಾಸವೇ ಬೇಡ ಅಂತಾ ಬಂದೀಖಾನೆ ಇಲಾಖೆ ತೀರ್ಮಾನ ಮಾಡಿಬಿಟ್ಟಿತ್ತು. ಬೆಂಗಳೂರಿನ ಹಳೇ ಸೆಂಟ್ರಲ್ ಜೈಲು ಕೂಡಾ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಮಾರ್ಪಟ್ಟಿರೋದರಿಂದ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಜೈಲರ್ನಂತಾ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಇಡೀ ಜೈಲಿನ ಸೆಟ್ ರೂಪಿಸಿಕೊಳ್ಳುತ್ತಾರೆ. […]
ಅರುಣ್ ಕುಮಾರ್.ಜಿ ಫೋಟೋಗಳು : ಕೆ.ಎನ್. ನಾಗೇಶ್ ಕುಮಾರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇದೇ 2023ರ ಸೆಪ್ಟೆಂಬರ್ 23ರಂದು ನಡೆಯಲಿದೆ. ಈ ಸಲ ಛೇಂಬರ್ ಅಧ್ಯಕ್ಷ ಸ್ಥಾನಕ್ಕೆ ಯಾರು ಬಂದು ಕೂರಬಹುದು ಎನ್ನುವ ಕುತೂಹಲ ಒಂದು ಕಡೆಯಾದರೆ, ಅಭ್ಯರ್ಥಿಗಳ ನಡುವೆ ಪೈಪೋಟಿ ಮತ್ತೊಂದು ಕಡೆ. ಈ ಬಾರಿ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಥೇಟು ರಾಜಕೀಯ ಪಕ್ಷಗಳ ಪುಢಾರಿಗಳಂತೆ ತಂತ್ರಗಾರಿಕೆ ಆರಂಭಿಸಿದ್ದಾರೆ. ಹಾಗೆ ನೋಡಿದರೆ, ಪ್ರಸಕ್ತ ವರ್ಷ ಅಧ್ಯಕ್ಷಸ್ಥಾನ […]
ಮಾಯಾಬಳಗ ಪದ್ಮ ಪ್ರಶಸ್ತಿ ವಿಜೇತ ಹಿಂದಿ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್, ಶಾಹರುಖ್ ಖಾನ್, ಅಜಯ್ ದೇವಗನ್ ಹಾಗೂ ಸೈಫ್ಅಲಿ ಖಾನ್ ಮುಂತಾದವರು ಗುಟ್ಕಾ, ಪಾನ್ ಮಸಾಲಾ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದು ಈಗ ಪುನಃ ಮುನ್ನೆಲೆಗೆ ಬಂದಿದೆ. ಅಲಹಾಬಾದ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ, ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಅಲಹಾಬಾದ್ ಹೈಕೋರ್ಟ್ನ ವಕೀಲರೊಬ್ಬರು 2022ರಲ್ಲಿ […]
ಕಳೆದೆರಡು ವರ್ಷಗಳಿಂದ ಯೂ ಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆದರೆ ಇದೇ ಯೂ ಟ್ಯೂಬ್ ಹೆಸರಲ್ಲಿ ಹೆಸರು-ಹಣ ಮಾಡಲು ನಿಂತವರೂ ಸಾಕಷ್ಟು ಜನರಿದ್ದಾರೆ. ಹುಟ್ಟು ಸೋಂಬೇರಿಗಳಿಗೆ ಯೂ ಟ್ಯೂಬ್ ಒಂದು ನೆಪವಾಗಿದೆ. ನೂರಿನ್ನೂರು ಸಬ್ಸ್ಕ್ರೈಬರ್ಗಳೂ ಇಲ್ಲದ, ಬೆರಳೆಣಿಕೆಯ ವ್ಯೂಸ್ ಹೊಂದಿರುವ ಚಾನೆಲ್ಲುಗಳನ್ನು ತೆರೆದ ʻಸ್ವಯಂ ಘೋಷಿತ ಜರ್ನಲಿಸ್ಟುʼಗಳ ಸಂಖ್ಯೆ ಜಾಸ್ತಿಯಾಗಿದೆ. ಸಿನಿಮಾ ವಲಯದಲ್ಲಿ ಸುಶಾಂತ್ ಎನ್ನುವ ಹೇತ್ಲಾಂಡಿಯ ಕಾಟ […]
ನಿರ್ದೇಶಕ ಗುರುಪ್ರಸಾದ್ ಬದುಕು ಹೆಚ್ಚೂಕಮ್ಮಿ ಕೇರ್ ಆಫ್ ಫುಟ್ ಪಾತ್ ಲೆವೆಲ್ಲಿಗೆ ಬಂದು ನಿಂತಿದೆ. ನಂಬಿದವರಿಗೆ ಲಕ್ಷಗಟ್ಟಲೆ ವಂಚಿಸಿದ ಪ್ರತಿಫಲವಾಗಿ ಮಠ ಗುರುಪ್ರಸಾದ ಜೈಲಿಗೆ ಹೋಗಿದ್ದಾನೆ. ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವನು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವನ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ […]
sarpini kannada movie snake