ಒಬ್ಬ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕನ ಬಗ್ಗೆ ಬರಬಹುದಾದಷ್ಟು ಲೇಖನಗಳು ಕಾರ್ನಾಡರ ಬಗ್ಗೆ ಇನ್ನೂ ಬಂದಿಲ್ಲ. ಅದಕ್ಕೆ ಬಹುಶಃ ಕಾರಣವೆಂದರೆ ನಾಟಕಗಳಿಗೆ ಎರಡು ಆಯಾಮ. ಒಂದು ಸಾಹಿತ್ಯಕ, ಇನ್ನೊಂದು ಪ್ರಾಯೋಗಿಕ. ಸಾಹಿತ್ಯಕ ಶ್ರೇಷ್ಠತೆಯ ಬಗ್ಗೆ ಕೆಲವಷ್ಟು ಗಿರೀಶ್ ಕಾರ್ನಾಡರ ಸಾಹಿತ್ಯ ಲೇಖನಗಳು ಬಂದಿವೆ, ಪ್ರಾಯೋಗಿಕವಾಗಿ ಇನ್ನೂ ಬರಬೇಕಿತ್ತು. ಅವರ ಅಗಲಿಕೆಯ ನಡುವೆ ಎರಡು ಆಯಾಮಗಳಲ್ಲಿರುವ ಕೊರತೆಯನ್ನು ಇನ್ನು ಮೇಲಾದರೂ ತುಂಬಬೇಕಾಗಿದೆ.
ಆಕ್ಸ್ ಫರ್ಡ್ ನಲ್ಲಿ ಎಂ.ಎ ಪದವಿಗಳಿಸಿ ಹಿಂದಿರುಗಿದ ಮೇಲೆ ಮದ್ರಾಸಿನ ಆಕ್ಸ್ ಫರ್ಡ ಯೂನಿವರ್ಸಿಟಿ ಪ್ರೆಸ್ಸ್ನ ಅಸಿಸ್ಟೆಂಟ್ ಮ್ಯಾನೇಜರ್ ಆಗಿಯೂ , ಅನಂತರದಲ್ಲಿ ಮ್ಯಾನೇಜರ್ ಆಗಿಯೂ (1963-1970) ಕಾರ್ನಾಡರು ಸೇವೆ ಸಲ್ಲಿಸಿದರು. 1974-78 ರಲ್ಲಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಅಷ್ಟಲ್ಲದೆ ಲಂಡನ್ನಿನ ನೆಹರೂ ಸೆಂಟರಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಇಂಗ್ಲೆಡ್ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೆ ಸ್ಪಷ್ಟ ಮಾರ್ಗಗಳನ್ನು ಶೋಧಿಸುತ್ತಿದ್ದಾರೆ. ಹೊಸ ಆಯಾಮಗಳನ್ನು ಜೋಡಿಸುತ್ತಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷತೆ (1976-78), ಶಿಕ್ಷಣ ಮತ್ತು ಸಂಸ್ಕøತಿಗಳಿಗೆ ಸಂಬಂಧಿಸಿದ ಭಾರತ ಅಮೇರಿಕಾ ಜಾಯಿಂಟ್ ಮಿಡಿಯಾ ಕಮಿಟಿ (ಸಿನೆಮಾ, ಪ್ರಸಾರ ಮತ್ತು ಪತ್ರಿಕೋದ್ಯಮ) ಯಲ್ಲಿ ಇಂಡಿಯನ್ ಕೋ ಛೇರ್ಮನ್ (1984-93) ಆಗಿದ್ದರು. ಪ್ರದರ್ಶನ ಕಲೆಗಳ ರಾಷ್ಟ್ರೀಯ ಅಕಾಡೆಮಿ ಆಗಿರುವ ಸಂಗೀತ ನಾಟಕ ಅಕಾಡೆಮಿಯ ಛೇರ್ಮನ್ (1988-93) ಈ ಸ್ಥಾನಗಳಲ್ಲಿ ಕಾರ್ನಾಡರು ಸೇವೆ ಸಲ್ಲಿಸಿದ್ದಾರೆ. ಅವುಗಳ ಘನತೆ ಗೌರವಗಳನ್ನು ಅವರು ಹೆಚ್ಚಿಸಿದ್ದು ದಾಖಲಿಸಬೇಕಾಗಿದೆ.
ಆದರೆ ಭಾರತ ಇತ್ತೀಚಿನ ವರ್ಷಗಳಲ್ಲಿ ಕಂಡ ಬಹು ಪ್ರತಿಭಾವಂತ, ಕಾಯಕದಕ್ಷತೆಯ ಕಲಾವಿದ, ಕಲಾಸಂಘಟಕ ಗಿರೀಶ ಕಾರ್ನಾಡರು ಅನ್ನುವುದು ಸೂರ್ಯ ಸತ್ಯ. ಅವರು ತಮ್ಮ ಪ್ರತಿಭೆಗೆ ತಕ್ಕಂತೆ ಅನೇಕ ಮನ್ನಣೆಗಳನ್ನು, ಪುರಸ್ಕಾರಗಳನ್ನು, ಅತ್ಯಂತ ಧಾರಳವಾಗಿ ಪಡೆದುಕೊಂಡವರು. ಪ್ರಖರವಾದ ಬುದ್ಧಿಮತ್ತೆ, ಸೂಕ್ಷ್ಮ ಸಂವೇದನಾಶೀಲತೆ, ಶ್ರೀಮಂತ ಕಲ್ಪನಾಶಕ್ತಿ ಹಾಗೂ ಅಚ್ಚು ಕಟ್ಟಾದ ಕಾಯಕ ಶೀಲತೆಗಳೆಲ್ಲ ಒಬ್ಬನೇ ವ್ಯಕ್ತಿಯಲ್ಲಿ ಕೇಂದ್ರಿಕೃತವಾಗಿದೆ ಅಂದರೆ ಅದು ಕಾರ್ನಾಡರಲ್ಲಿ. ನಮ್ಮ ಕಾಲದಲ್ಲಿ ಕಂಡು ಕೇಳಿರುವ ಬಹುತೇಕ ಎಲ್ಲಾ ಪ್ರತಿಷ್ಠಿತ ಗೌರವಗಳು ಕಾರ್ನಾಡರನ್ನು ಹುಡುಕಿಕೊಂಡು ಬಂದಿವೆ.
ಜಾನಪದ ರಂಗಭೂಮಿಯಲ್ಲಿ ಸೃಜನಶೀಲ ಕಾರ್ಯಗಳಿಗಾಗಿ ಹೋಮಿಬಾಬ ಫೆಲೋಶಿಫ್ (1970-72), ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ (1974), ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕ ಹಾಗೂ ಫುಲ್ಬ್ರೈಟ್ ಸ್ಕಾಲರ್ ಇನ್ ರೆಸಿಡೆನ್ಸಿ (1987-1988), ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷ (1988-93), ರಾಷ್ಟ್ರಪತಿಗಳಿಂದ ಪದ್ಮಭೂಷಣ ಪದವಿ (1992), ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ (1994), ಕರ್ನಾಟಕ ಸರ್ಕಾರದಿಂದ ಗುಬ್ಬಿ ವೀರಣ್ಣ ಪ್ರಶಸ್ತಿ (1997), ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ (1994), ಭಾರತೀಯ ಜ್ಞಾನ ಪೀಠ ಪ್ರಶಸ್ತಿ (1999) ಹಾಗೂ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದುಕೊಂಡಿದ್ದಾರೆ.
ಇಷ್ಟಲ್ಲದೆ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ (1972), ಭಾರತೀಯ ನಾಟಕ ಸಂಘದವರಿಂದ ‘ಹಯವದನ’ಕ್ಕೆ ವರ್ಷದ ಶ್ರೇಷ್ಠ ನಾಟಕವೆಂದು ಕವiಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ (1972), ನಾಗಮಂಡಲಕ್ಕೆ ಸೃಜನಶೀಲ ವಿಭಾಗದಲ್ಲಿ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1992), ತಲೆದಂಡಕ್ಕೆ 1990-91ನೇ ವರ್ಷದ ಶ್ರೇಷ್ಠ ನಾಟಕವೆಂದು ಕರ್ನಾಟಕ ನಾಟಕ ಅಕಾಡೆಮಿಯ ಪುರಸ್ಕಾರ (1992), ದಕ್ಷಿಣ ಭಾರತದ ಪ್ರಕಾಶಕ ಹಾಗೂ ವಿತರಕರ ಸಂಘದಿಂದ ಪ್ರಶಸ್ತಿ (1992), ತಲೆದಂಡ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (19 3), ತಲೆದಂಡ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1994) ಹೀಗೆ ಗಿರೀಶ್ ಕಾರ್ನಾಡರ ಕಲಾಜೀವನಕ್ಕೆ ಸಂದ ಎಲ್ಲಾ ಗೌರವದ ಗರಿಗಳು ಶಿಖರಪ್ರಾಯವಾದುದು. ನಾಟಕ ಒಂದನ್ನೇ ತಮ್ಮ ಸಾಹಿತ್ಯಿಕ ಅಭಿವ್ಯಕ್ತಿಯ ಮಾಧ್ಯಮವಾಗಿರಿಸಿಕೊಂಡು, ಜ್ಞಾನಪೀಠ ಪ್ರಶಸ್ತಿ ಗಳಿಸಿದವರಲ್ಲಿ ಗಿರೀಶ್ ಕಾರ್ನಾಡರೇ ಮೊದಲನೆಯವರಾಗಿದ್ದಾರೆ. ಹೀಗೆ ಮೇಲ್ಕಂಡ ಗೌರವಗಳನ್ನು ಪ್ರಾತಿನಿಧಿಕವಾಗಿ ಮಾತ್ರ ಉಲ್ಲೇಖಿಸಲಾಗಿದೆ. ಇವುಗಳಲ್ಲದೆ ಇನ್ನು ಹಲವಾರು ಪ್ರಶಸ್ತಿ, ಗೌರವಗಳನ್ನು ಪಡೆದುಕೊಂಡದ್ದನ್ನು ಮರೆಯುವ ಹಾಗಿಲ್ಲ.
ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.
– ಸಂ
No Comment! Be the first one.