ಮಂಜುನಾಥ್ ಮೊದಲಿಂದಲೂ ಅಪಾರ ಶಿಸ್ತನ್ನು ಮೈಗೂಡಿಸಿಕೊಂಡು ಬಂದವರು. ಈಗ ದಿನಸಿ ಕೊಡುವ ಸಮಯದಲ್ಲಿ ಜನರನ್ನು ಗುಂಪು ಸೇರಿಸುವುದು ಅವರಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೇ ಮೊದಲೇ ಕೂಪನ್’ಗಳನ್ನು ವಿತರಿಸಿದ್ದರು. ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು, ಬಲು ಶಿಸ್ತಿನಿಂದ ಕಿಟ್ ವಿತರಿಸಿದ್ದಾರೆ.
ಸಂಯುಕ್ತ-೨ ಮತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಗಳನ್ನು ನಿರ್ಮಿಸಿ, ನಟಿಸಿ ಸದ್ಯ ೦% ಲವ್ ಸಿನಿಮಾದ ನಾಯಕನಟರೂ ಆಗಿರುವವರು ಅರ್ಜುನ್ ಮಂಜುನಾಥ್. ಬಹುಶಃ ಈಗ ಮಂಜುನಾಥ್ ಅವರು ಇರುವ ರೀತಿಯನ್ನು ಮಾತ್ರವೇ ಕಂಡವರು ಅವರು ನಡೆದು ಬಂದ ಕಡುಕಷ್ಟದ ಹಾದಿಯ ಕಥೆ ಹೇಳಿದರೆ ನಂಬಲು ಕಷ್ಟವಾಗ ಬಹುದೇನೋ. ಅಂಥಾ ಸಂಕಷ್ಟಗಳನ್ನೇ ಶಕ್ತಿಯಾಗಿಸಿಕೊಂಡು ಯಶಸ್ವೀ ಉದ್ಯಮಿಯಾಗಿ, ಚಲನಚಿತ್ರ ನಿರ್ಮಾಪಕನಾಗಿ, ಯಶಸ್ವೀ ನಟನಾಗಿ ನೆಲೆ ನಿಂತಿರುವ ಮಂಜುನಾಥ್ ಪ್ರಾಮಾಣಿಕವಾದ ಕನಸಿಟ್ಟುಕೊಂಡಿರುವ ಜನನಾಯಕರೂ ಹೌದು. ಹಾಗಂತ ಇವರು ಬರೀ ಮಾತಿಗೇ ಸೀಮಿತವಾಗಿಲ್ಲ. ವ್ಯಕ್ತಿಯೋರ್ವ ಮನಸು ಮಾಡಿದರೆ ತಾನೇ ಒಂದು ಶಕ್ತಿಯಾಗಿ ಸಮಾಜವನ್ನು ಮಾದರಿಯಾಗಿ ಕಟ್ಟಿ ನಿಲ್ಲಿಸಬಹುದೆಂಬುದನ್ನು ಅವರು ಕಾರ್ಯ ರೂಪದಲ್ಲಿಯೇ ಮಾಡಿ ತೋರಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಚಿಕ್ಕನಹಳ್ಳಿ ಗ್ರಾಮಪಂಚಾಯ್ತಿಯ ಊರುಗಳನ್ನು ಮಂಜುನಾಥ್ ಅವರು ರೂಪಿಸಿರುವ ರೀತಿ ಇಡೀ ದೇಶಕ್ಕೇ ಮಾದರಿಯಂತಿದೆ.
ತಮ್ಮ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಡಾ. ಮಂಜುನಾಥ್ ಸರಿಸುಮಾರು ಆರುನೂರು ಜನಕ್ಕೆ ಮೊದಲ ಹಂತದ ಪಡಿತರ ವಿತರಣೆ ಮಾಡಿದ್ದಾರೆ. ಸಣ್ಣ ಕುಟುಂಬವೊಂದಕ್ಕೆ ಹದಿನೈದು ದಿನಗಳಿಗೆ ಆಗುವಷ್ಟು ರೇಷನ್ ವಿತರಿಸಿದ್ದಾರೆ. ಒಂದೊಂದು ಕಿಟ್’ನಲ್ಲಿ ಹನ್ನೊಂದು ಬಗೆಯ ವಸ್ತುಗಳನ್ನು ಸೇರಿಸಿದ್ದಾರೆ. ಅಕ್ಕಿ, ಎಣ್ಣೆ ಮಾತ್ರವಲ್ಲದೆ, ರವೆ, ಅವಲಕ್ಕಿಯಂತಾ ಪದಾರ್ಥಗಳನ್ನೂ ನೀಡಿರುವುದು ವಿಶೇಷ. ಮಂಜುನಾಥ್ ಮೊದಲಿಂದಲೂ ಅಪಾರ ಶಿಸ್ತನ್ನು ಮೈಗೂಡಿಸಿಕೊಂಡು ಬಂದವರು. ಈಗ ದಿನಸಿ ಕೊಡುವ ಸಮಯದಲ್ಲಿ ಜನರನ್ನು ಗುಂಪು ಸೇರಿಸುವುದು ಅವರಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೇ ಮೊದಲೇ ಕೂಪನ್’ಗಳನ್ನು ವಿತರಿಸಿದ್ದರು. ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು, ಬಲು ಶಿಸ್ತಿನಿಂದ ಕಿಟ್ ವಿತರಿಸಿದ್ದಾರೆ.
ಯಾವುದನ್ನೇ ಆದರೂ ಕಾಟಾಚಾರಕ್ಕೆ, ದೊಡ್ಡಸ್ತಿಕೆಗೆ ಮಾಡಬಾರದು ಅನ್ನೋದು ದೊಡ್ಡೇರಿ ಮಂಜುನಾಥ್ ಅವರ ಮೂಲ ಮಂತ್ರ. ಸಮಾಜ ಸೇವೆ ಅನ್ನೋದನ್ನು ಬರೀ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ ಕಷ್ಟದಲ್ಲಿರೋ ಪ್ರತಿಯೊಬ್ಬರ ಸಂಕಟಕ್ಕೂ ಮಿಡಿಯುವ ಮನಸ್ಸು ಮಂಜುನಾಥ್ ಅವರದ್ದು. ಕಳೆದ ವರ್ಷ ರಾಜ್ಯ ನೆರೆ ಹಾವಳಿಯಿಂದ ತತ್ತರಿಸಿದ್ದಾಗ ದೂರದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ತೆರಳಿ ನೆರೆ ಹಾವಳಿಯಿಂದ ನೊಂದಿರುವ ಜನರಿಗೆ ಸರಿಸುಮಾರು ಹನ್ನೆರಡು ಟನ್ ದಿನಸಿಗಳನ್ನು ಹಂಚಿಬಂದಿದ್ದವರು ಮಂಜುನಾಥ್.
ಅಂದಹಾಗೆ, ಮಂಜುನಾಥ ಗೌಡರು ಇದೀಗ ಯಶಸ್ವೀ ಉದ್ಯಮಿಯಾಗಿದ್ದರೂ ಕೂಡಾ ಅಪಾರವಾದ ಸಾಮಾಜಿಕ ಕಳಕಳಿಯನ್ನು ಮರೆಯದೇ ಮುಂದುವರೆಯುತ್ತಿದ್ದಾರೆ. ತಾವೂ ಕೂಡಾ ಅತ್ಯಂತ ಕಷ್ಟದ ದಿನಗಳಿಂದ ಮೇಲೆದ್ದು ಬಂದಿರುವುದರಿಂದ ಜನರಿಗೆ ಸಹಾಯವಾಗುವಂಥಾ ಕೆಲಸ ಕಾರ್ಯಗಳನ್ನು ಮಾಡುವ ಉದ್ದೇಶದಿಂದಲೇ ರಾಜಕೀಯ ರಂಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇವರಿಗಿರುವ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗೆ ಬೇರೆ ಯಾರೇ ಆಗಿದ್ದರೂ ನೇರವಾಗಿ ಶಾಸಕನಾಗುವತ್ತ ಗಮನ ಹರಿಸುತ್ತಿದ್ದರು. ಆದರೆ ದೇಶವೊಂದು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಬೇಕಾದರೆ ಗ್ರಾಮಗಳ ಉದ್ಧಾರವಾಗಬೇಕೆಂಬ ಧ್ಯೇಯ ವಾಕ್ಯದಲ್ಲಿ ನಂಬಿಕೆ ಇರಿಸಿರುವ ಮಂಜುನಾಥ ಗೌಡರು ಚಿಕ್ಕನಹಳ್ಳಿ ಗ್ರಾಮಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಗ್ರಾಮಪಂಚಾಯ್ತಿ ಸದಸ್ಯರಾಗಿದ್ದುಕೊಂಡೇ ಅವರು ಇಡೀ ಗ್ರಾಮವನ್ನು ರೂಪಿಸಿದ ರೀತಿ ಎಂಥವರೂ ಬೆರಗಾಗುವಂತಿದೆ.
ಚಿಕ್ಕನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ದೊಡ್ಡೇರಿ ಗ್ರಾಮ ಅತೀ ಹೆಚ್ಚು ಮತದಾರರನ್ನು ಹೊಂದಿದೆ. ಆದರೆ ಈ ಹಿಂದೆ ಇಲ್ಲಿನ ಗ್ರಾಮ ಪಂಚಾಯ್ತಿ ರಾಜಕಾರಣವೆಂಬುದು ಇಲ್ಲಿನ ಜನರನ್ನು ಮತಕ್ಕಾಗಿ ಮಾತ್ರವೇ ಬಳಸಿಕೊಳ್ಳುತ್ತಾ ಬಂದಿತ್ತು. ಆದ್ದರಿಂದಲೇ ಈ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ನೈರ್ಮಲ್ಯೀಕರಣ, ವಿದ್ಯುತ್ ಸೇರಿದಂತೆ ಸಮಸ್ಯೆಗಳು ತಾಂಡವವಾಡುತ್ತಿದ್ದವು. ಇಂಥಾ ಗ್ರಾಮದ ಪಂಚಾಯ್ತಿ ಸದಸ್ಯರಾದ ಮಂಜುನಾಥ ಗೌಡರು ಇದೀಗ ಇಡೀ ಗ್ರಾಮವನ್ನು ಸುಸಜ್ಜಿತವಾದ ರಸ್ತೆ, ಶಿಸ್ತು ಸೇರಿದಂತೆ ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿದ್ದಾರೆ. ಈಗ ಕರೋನಾದಿಂದ ಕಂಗಾಲಾಗಿರುವವರ ನೆರವಿಗೂ ಮಂಜುನಾಥ್ ಅವರು ಧಾವಿಸಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ.
No Comment! Be the first one.