ಮುದ್ದು ಮನಸೇ ನಂತರ ಅನಂತ್ ಶೈನ್ ನಿರ್ದೇಶನದ ಹೊಸ ಸಿನಿಮಾ ವಿರಾಟ ಪರ್ವ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ನಟ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದು, ತಂಡಕ್ಕೆ ಶುಭ ಹಾರೈಸಿದ್ದಾರೆ. ಪೋಸ್ಟರ್ ನ ಕುರಿತು ಮಾತನಾಡಿದ ಪವರ್ ಸ್ಟಾರ್, “ಪೋಸ್ಟರ್ ಹೊಸ ರೀತಿಯಲ್ಲಿ ಕೌತುಕತೆಯನ್ನು ಸೃಷ್ಟಿಸುವಂತಿದೆ. ಜತೆಗೆ ಶೀರ್ಷಿಕೆಯೂ ಚೆನ್ನಾಗಿದೆ. ನನಗೆ ಮಹಾಭಾರತದ ಸನ್ನಿವೇಶವನ್ನು ಈ ಚಿತ್ರದ ಟೈಟಲ್ ನೆನಪಿಸಿದೆ. ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ಸಿಗಲಿ” ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಅರು ಗೌಡ ನಾಯಕನಾಗಿ ನಟಿಸುತ್ತಿದ್ದು, ಚಿತ್ರದಲ್ಲಿ ಅವರು ಫೈಟರ್ ಶಿವ ಎಂಬ ಪಾತ್ರವನ್ನು ನಿಭಾಯಿಸಲಿದ್ದಾರೆ.
ಮೂವರು ವಿಭಿನ್ನ ಮನಸ್ಥಿತಿಯ ಹುಡುಗರ ಸುತ್ತ ವಿರಾಟ ಪರ್ವದ ಕಥೆ ಸಾಗಲಿದ್ದು, ಈಗಿನ ಯುವಜನಾಂಗಕ್ಕೆ ಕಥೆ ಲಿಂಕ್ ಆಗಲಿದೆಯಂತೆ. ಈ ಚಿತ್ರವನ್ನು ಸುನೀಲ್ ರಾಜ್ ನಿರ್ಮಾಣ ಮಾಡುತ್ತಿದ್ದು, ವಿನೀತ್ ರಾಜ್ ಮೆನನ್ ಸಂಗೀತ, ಶಿವು ಬಿ.ಕೆ. ಕುಮಾರ್ ಹಾಗೂ ಶಿವಸೀನ ಛಾಯಾಗ್ರಹಣ, ವೆಂಕಿ ಜ್ಞಾನೇಶ್, ವಿಜಯ್ ಸಂಕಲನವಿದ್ದು, ಸಂದೀಪ್ ಮತ್ತು ರಘು ಸಂಭಾಷಣೆ ಚಿತ್ರಕ್ಕಿದೆ.
No Comment! Be the first one.