ಅಂದವಾದ ಸಿನಿಮಾ ಇವತ್ತು ತೆರೆಗೆ ಬರುತ್ತಿದೆ. ಚಲ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾದ ಟ್ರೇಲರು ನೋಡಿದರೇನೆ ಇದು ಕ್ವಾಲಿಟಿ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಈ ಸಿನಿಮಾದ ಬಗ್ಗೆ ಚಿತ್ರತಂಡ ಹಂಚಿಕೊಂಡಿರುವ ಅಭಿಪ್ರಾಯ ಇಲ್ಲಿದೆ…
ಜೈ, ನಾಯಕನಟ: ಈ ಚಿತ್ರದಲ್ಲಿ ನಾನು ಇನೋಸೆಂಟ್ ಹೀರೋ ಆಗಿ ಪಾತ್ರ ಮಾಡಿದ್ದೇನೆ. ತುಂಬಾ ಒಳ್ಳೇ ಕ್ಯೂಟ್ ಲವ್ ಸ್ಟೋರಿ. ಈ ಚಿತ್ರಕ್ಕಾಗಿ ೧೦ ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ. ನನ್ನ ಮೊದಲನೇ ಸಿನಿಮಾ ಇಷ್ಟೊಂದು ಕ್ವಾಲಿಟಿಯಾಗಿ ಬರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಈ ಸಿನಿಮಾದಲ್ಲಿ ಮಾಡಿರೋದು ನನ್ನ ಲಕ್ ಅಂತ ಹೇಳಬಹುದು. ಈ ಕಥೆಯಲ್ಲಿ ಒಂದು ಮೆಸೇಜಿದೆ. ಸೌತ್ ಇಂಡಿಯನ್ ಸಿನಿಮಾದಲ್ಲೇ ಈ ರೀತಿಯ ಸಿನಿಮಾ ಇದೇ ಮೊದಲು. ಸಿನಿಮಾದ ಯಾವ ಹಂತದಲ್ಲೂ ಜನಕ್ಕೆ ಬೇಸರ ತರೋದಿಲ್ಲ. ಡೈರೆಕ್ಟರ್ ಹೇಳಿ ಕೊಡುವ ರೀತಿಯಲ್ಲೇ ಒಂದು ಇನೋಸೆನ್ಸ್ ಇತ್ತು. ನಾನು ಅದನ್ನೇ ಅಳವಡಿಸಿಕೊಂಡು ಪಾತ್ರ ಮಾಡಿದ್ದೇನೆ. ಈ ಟಿವಿ ಶ್ರೀಧರ್, ಹರೀಶ್ ರಾಯ್, ಮಂಗಳೂರು ಮೀನನಾಥ, ಅಮರ್ ಇವರುಗಳು ತಾರಾಗಣದಲ್ಲಿದ್ದಾರೆ. ಇದೊಂದು ಹೊಸ ನರೇಷನ್. ಹೀರೋಯಿನ್ ಲೈಫ್ನಲ್ಲಿ ನಡೆದಿರುವಂತದ್ದನ್ನ ಕಥೆ ಮೂಲಕ ಹೇಳುತ್ತಾ ಹೋಗುತ್ತಾಳೆ.
ಡಿ.ಆರ್. ಮಧು ಜಿ ರಾಜ್, ನಿರ್ಮಾಪಕಿ : ನಾನು ಬೇಸಿಕಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೆ. ಸಿನಿಮಾ ಫ್ಯಾಷನ್ ಡಿಸೈನರ್ ಒಬ್ಬರ ಪರಿಚಯವಿತ್ತು. ಹಾಗಾಗಿ ನಾನ್ಯಾಕೆ ಒಂದು ಸಿನಿಮಾ ಮಾಡಬಾರದು ಅನ್ನೊ ಯೋಚನೆ ಬಂತು. ಇದೊಂದು ಡಿಫರೆಂಟ್ ಲವ್ ಸ್ಟೋರಿ. ಅದ್ರಿಂದ ಈ ಸಿನಿಮಾ ಮಾಡಲು ಒಪ್ಕೊಂಡೆ.
ಚಲ, ನಿರ್ದೇಶಕ : ಈ ಸಿನಿಮಾದಲ್ಲಿ ಪ್ರತಿನಿತ್ಯ ನೀವು ಮಾದ್ಯಮಗಳಲ್ಲಿ ನೋಡುತ್ತಲೇ ಇರುವ ಒಂದು ವಿಚಾರ ಕಥಾವಸ್ತುವಾಗಿದೆ. ಆದರೆ ಇದನ್ನು ಈ ವರೆಗೂ ಯಾರೂ ಸಿನಿಮಾಗಳಲ್ಲಿ ಬಳಸಿಕೊಂಡಿಲ್ಲ. ತುಂಬಾ ಮುದ್ದು ಮುದ್ದಾಗಿ ಕಾಣುವಂತೆ ಚಿತ್ರವನ್ನು ರೂಪಿಸಿದ್ದೇವೆ. ಲವ್ ಸ್ಟೋರಿಯ ಜೊತೆಗೆ ಕಾಡುವಂಥ ಒಂದು ಎಳೆ ಈ ಸಿನಿಮಾದಲ್ಲಿದೆ.
ಅನುಷಾ ರಂಗನಾಥ್: ನಾನು ಈ ವರೆಗೂ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಅಂದವಾದ ಸಿನಿಮಾದಲ್ಲಿ ಬೇರೆಯದ್ದೇ ಆದ ಕಥಾವಸ್ತುವಿದೆ. ಈ ಸಿನಿಮಾದಲ್ಲಿ ನನಗೆ ಪಾತ್ರ ಸಿಕ್ಕಿದ್ದು ನಿಜಕ್ಕೂ ನನಗೆ ಖುಷಿ ಇದೆ. ಸಿನಿಮಾ ತಂಡ ಕೂಡಾ ಎಲ್ಲೂ ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದಾರೆ. ನಿರ್ದೇಶಕ ಚಲ ಅವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವವರು. ತಮಿಳು ತೆಲುಗು ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಸಿನಿಮಾವನ್ನು ಎಲ್ಲಿಯೂ ಗೊಂದಲವಾಗದಂತೆ ಸರಾಗವಾಗಿ ಚಿತ್ರೀಕರಣ ಮುಗಿಸಿದರು. ಜೈ ಮತ್ತು ನನ್ನ ಕಾಂಬಿನೇಷನ್ ಕೂಡಾ ತೆರೆಮೇಲೆ ಸಖತ್ ವರ್ಕೌಟ್ ಆಗಲಿದೆ.
ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಡಿ.ಆರ್. ಮಧು ಜಿ ರಾಜ್ ನಿರ್ಮಿಸಿರುವ ಅಂದವಾದ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಳೆಗಾಲದಲ್ಲಿ ನಡೆಯುವ ಕ್ಯೂಟ್ ಲವ್ ಸ್ಟೋರಿ ಜೊತೆ ಒಂದೊಳ್ಳೆ ಮೆಸೇಜ್ ಕೊಡುವ, ಕಾಡುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ ನೋಡುಗರ ಕಣ್ಣು ತೇವಗೊಳಿಸಬಲ್ಲ ಗಂಭೀರ ಕಥಾ ವಸ್ತು ಕೂಡಾ ಇದರಲ್ಲಿದೆ. ಈ ಚಿತ್ರಕ್ಕೆ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ, ಗುರುಕಿರಣ್ ಹಿನ್ನೆಲೆ ಸಂಗೀತ, ಹರೀಶ್ ಎನ್. ಸೊಂಡೇಕೊಪ್ಪ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ ಗೀತ ಸಾಹಿತ್ಯವಿದೆ. ಜೈ, ಅನುಷಾ ರಂಗನಾಥ್, ಹರೀಶ್ ರೈ, ಕೆ.ಎಸ್. ಶ್ರೀಧರ್, ಕೆ.ವಿ. ಮಂಜಯ್ಯ, ರೇಖಾ ಸಾಗರ್, ರೋಜಾ ಮುಂತಾದವರ ತಾರಾಬಳಗವಿದೆ.
No Comment! Be the first one.