ಸ್ನೇಹಿತರ ಸ್ನೇಹ, ಆಸ್ಥೆ, ಕನಸಿಗೆ ಬೆಲೆಕೊಟ್ಟು ಆಟೋ ಸ್ನೇಹಿತರಾದ ಚೆನ್ನೀರ, ಹರೀಶ್ ಜೋಗಿ, ಅರುಣ್ ಕುಮಾರ್, ಭೈರವ, ಲಕ್ಷ್ಮೀ, ಮತ್ತು ಪ್ರಭು ನಿರ್ಮಾಣ ಮಾಡಿರುವ ಕನ್ನಡಿಗರ ಸಿನಿಮಾ ಸ್ಟಾರ್ ಕನ್ನಡಿಗ. ಈ ಚಿತ್ರವನ್ನು ವಿ. ಆರ್. ಮಂಜುನಾಥ್ ನಿರ್ದೇಶನ ಮಾಡುತ್ತಿದ್ದು, ನಾಯಕನೂ ಇವರೇ ಆಗಿರುವುದು ವಿಶೇಷ. ಎರಡು ದೋಣಿಯ ಪ್ರಯಾಣದಲ್ಲಿಯೇ ದಡ ತಲುಪಿರುವ ಮಂಜುನಾಥ್ ಸ್ಟಾರ್ ಕನ್ನಡಿಗ ಚಿತ್ರದ ಮೂಲಕ ಹೊಸದೊಂದು ಮಾದರಿಯ ಲವ್ ಸ್ಟೋರಿಯನ್ನು ಹೇಳ ಹೊರಟಿದ್ದಾರೆ. ನವೆಂಬರ್ ೧ರಂದು ಚಿತ್ರ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಸ್ವತಃ ಮಂಜುನಾಥ್ ಅವರನ್ನು ಸಿನಿಬಜ಼್ ಮಾತಾಡಿಸಿದಾಗ
ನೀವು ಹುಟ್ಟಿ ಬೆಳೆದದ್ದು ಎಲ್ಲಿ? ನಿಮ್ಮ ಹಿನ್ನೆಲೆ ಏನು? – ನಾನು ಹುಟ್ಟಿದ್ದು, ಕನಕಪುರ ತಾಲ್ಲೂಕಿನ ಕಗ್ಗಲೀಪುರದ ವಾಸುದೇವಪುರದಲ್ಲಿ. ೩ನೇ ತರಗತಿಯವರೆಗೆ ಅಲ್ಲಿಯೇ ಓದಿದ್ದು. ಅದಾದ ನಂತರ ಬೆಂಗಳೂರಿಗೆ ಬಂದಿದ್ದು. ನಮ್ಮ ಅಜ್ಜಿ ಬೆಂಗಳೂರಿನ ಜಯನಗರದ ನಕ್ಕಲುಬಂಡೆ ಅಂತ ಒಂದು ಸ್ಲಮ್ನಲ್ಲಿ ವಾಸವಾಗಿದ್ದರು. ೪ನೇ ತರಗತಿಯಿಂದ ಇಲ್ಲೇ ಇದ್ದು, ವಿಜಯಾ ಜೂನಿಯರ್ ಕಾಲೇಜಿನಲ್ಲಿ ಅರ್ಧಕ್ಕೆ ಓದನ್ನು ಸಿನಿಮಾ ಫೀಲ್ಡ್ಗೆ ಎಂಟ್ರಿಯಾದೆ.
ಈಸಿನಿಮಾ ಶುರುವಾಗಿದ್ದು ಹೇಗೆ? ಈ ಸಿನಿಮಾನ ನಿರ್ಮಾಣ ಮಾಡಿರೋದು ಆಟೋ ಹಾಗೂ ಕ್ಯಾಬ್ ಡ್ರೈವರ್ಗಳು, ಇದು ಈ ಸಿನಿಮಾ ವಿಶೇಷ. ಇವರೆಲ್ಲಾ ನನ್ನ ಪ್ರಾಣ ಸ್ನೇಹಿತರು. ನಾನು ಮೊದಲು ನಿರ್ದೇಶನ ಮಾಡೋದಕ್ಕೆ ಈ ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ದೆ. ನಿರ್ದೇಶನ ಮಾಡ್ತಾ ಮಾಡ್ತಾ ಕೆಲವು ಅನುಭವಗಳು ಆಯ್ತು. ಸಿನಿಮಾ ಫೀಲ್ಡ್ಗೆ ಬಂದು ಏನ್ ಮಹಾ ಮಾಡ್ತಾನೆ ಹಾಗೆ ಹೀಗೆ ಎಂದೆಲ್ಲ ಕೆಲವು ಸ್ನೇಹಿತರು ಹಾಗೂ ಸಂಬಂಧಿಕರು ಮಾತನಾಡೋಕ್ಕೆ ಶುರುಮಾಡಿದ್ದರು. ಆಗ ಅಂದುಕೊಂಡೆ ಬರೀ ನಿರ್ದೇಶಕ ಮಾತ್ರ ಅಲ್ಲ ಹೀರೋ ಕೂಡ ಆಗಿ ತೋರಿಸ್ಬೇಕು ಅಂತ ಹಠ ಮಾಡಿ, ನನ್ನ ಸ್ನೇಹಿತ ಚೆನ್ನೀರನ ಹತ್ತಿರ ಹೇಳಿಕೊಂಡೆ. ಚೆನ್ನೀರ ನನಗೆ ಡೈರೆಕ್ಷನ್ ಕೋರ್ಸ್ ಮಾಡುವಾಗಿನಿಂದ ನನ್ನ ಜೊತೆಯಲ್ಲಿದ್ದ. ಈ ಕೋರ್ಸ್ಗೆ ಹಣ ಕಟ್ಟಿದವನೂ ಸಹ ಈತನೇ. ಈ ಸಿನಿಮಾಕ್ಕೆ ಬಂಡವಾಳ ಹಾಕಲು ಪ್ರೇರೇಪಿಸಿದವನೂ ಸಹ ಇವನೇ. ಚೆನ್ನೀರನೊಂದಿಗೆ ಜಯನಗರದಲ್ಲಿ ನಾನು ಬೆಳೆದ ಸ್ಲಂನ ಕೆಲವು ಸ್ನೇಹಿತರೂ ಸಹ ನಮ್ಮೊಂದಿಗೆ ಒಂದಾದರು. ಕಥೆ ಕೇಳಿ ಎಲ್ಲ ಸ್ನೇಹಿತರೂ ಒಪ್ಪಿ, ನನ್ನೊಂದಿಗೆ ಈ ಚಿತ್ರದಲ್ಲಿ ಜೊತೆ ಸೇರಿದ್ದಲ್ಲದೆ ನಿರ್ದೇಶಕನನ್ನಾಗಿ ಜೊತೆಗೆ ನಾಯಕ ನಟನನ್ನಾಗಿಯೂ ಮಾಡಿ ನಿಮ್ಮೊಂದಿಗೆ ಹೀಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ನನ್ನೆಲ್ಲ ಸ್ನೇಹಿತರಿಗೆ ಚಿರಋಣಿಯಾಗಿರುತ್ತೇನೆ. ಸ್ನೇಹಿತರು ಅಂದ್ರೆ ಪ್ರಾಣ ತೆಗೆಯುವವರೂ ಇರುತ್ತಾರೆ ಪ್ರಾಣ ಕೊಡುವವರೂ ಇರುತ್ತಾರೆ. ಅಂತಹ ಪ್ರಾಣ ಸ್ನೇಹಿತರು ನನ್ನ ಜೊತೆಗಿರುವುದೇ ಸಾಕ್ಷಿ. ಇದರಿಂದಲೇ ಸ್ಟಾರ್ ಕನ್ನಡಿಗ ಸಿನಿಮಾ ಸಾಕ್ಷಿಯಾಗಿದೆ. ನವೆಂಬರ್ ೧ರಂದು ಈ ಸಿನಿಮಾ ತೆರೆಕಾಣಲಿದೆ. ಈ ಸಿನಿಮಾ ಕನ್ನಡಿಗರು ಗೆಲ್ಲಿಸುತ್ತಾರೆ ಎಂದು ನಂಬಿದ್ದೇನೆ. ಒಳ್ಳೆ ಸ್ನೇಹ, ಪ್ರೀತಿ ಇರುವಂತಹ ಫ್ಯಾಮಿಲಿ ಕೂತು ನೋಡುವಂತಹ ಸಿನಿಮಾ ಇದು. ನಾನು ಈ ಚಿತ್ರದಲ್ಲಿ ಒಬ್ಬ ನಿರ್ದೇಶಕನ ಪಾತ್ರದಲ್ಲೇ ನಟಿಸಿದ್ದೇನೆ. ಪ್ರೀತಿ ಎಂದರೇನು ಎಂಬುದನ್ನು ನನ್ನ ದೃಷ್ಟಿಯಲ್ಲಿ ಈ ಚಿತ್ರದಲ್ಲಿ ಹೇಳಿದ್ದೇನೆ.
ಚಿತ್ರರಂಗಕ್ಕೆ ಬರಬೇಕು ಅನಿಸಿದ್ದು ಯಾಕೆ? – ನಮ್ಮ ಮನೆಯವರ ಕಷ್ಟ, ಅದರ ಅನುಭವಗಳು, ಬಡತನ ಹುಟ್ಟಬೇಕಾದರೆ ಇರ್ಬೇಕು, ಸಾಯಬೇಕಾದರೆ ಇರ್ಬಾರ್ದು, ಏನಾದ್ರೂ ಸಾಧಿಸಬೇಕು ಅಂತ ಯೋಚಿಸಿದಾಗ ಚೆನ್ನಾಗಿ ಬರೆಯೋ ಅಭ್ಯಾಸವಿದ್ದುದರಿಂದ ಸಿನಿಮಾ ರಂಗವನ್ನ ಆಯ್ಕೆ ಮಾಡ್ಕೊಬೇಕು ಅಂತನಿಸಿತು.
ಸಿನಿಮಾಗೆ ಬರುವ ಮುನ್ನ ಏನು ಮಾಡುತ್ತಿದ್ದಿರಿ?- ಸಿನಿಮಾಗೆ ಬರುವ ಮುನ್ನ ಕಾಲೇಜು ಹೋಗುವಾಗ ಹುಡುಗರೊಂದಿಗೆ ಆಟವಾಡಿಕೊಂಡು, ಕಾಲೇಜ್ ಬಂಕ್ ಮಾಡಿ, ನಮ್ಮ ವಯಸ್ಸಿನಲ್ಲಿ ಹುಡುಗರು ಏನೇನ್ ತರ್ಲೆ ಮಾಡ್ತಿದ್ರೋ ಅದನ್ನೇ ಮಾಡ್ಕೊಂಡಿದ್ದೆ. ಸ್ವಲ್ಪ ದಿನಗಳ ನಂತರ ಲೈಫ್ನ ಸೀರಿಯಸ್ಆಗಿ ತೆಗೆದುಕೊಂಡು ಸಿನಿಮಾ ಫೀಲ್ಡ್ಗೆ ಎಂಟ್ರಿ ಕೊಟ್ಟೆ.
ಈ ಚಿತ್ರವನ್ನು ಜನ ಯಾಕೆ ನೋಡಲೇಬೇಕೆನ್ನುವುದು ನಿಮ್ಮ ಅಭಿಪ್ರಾಯ?- ಏಕೆಂದರೆ ಕನ್ನಡಿಗರಾಗಿ ಒಂದು ಅಭಿಮಾನದಿಂದಾಗಿ ಈ ಚಿತ್ರವನ್ನ ಮಾಡಿದ್ದೇವೆ. ನಮ್ಮಂದ ಹುಡುಗ್ರು ಏನೋ ಸಾಧಿಸಬೇಕೂಂತ ಮುಂದೆ ಬಂದಿರುತ್ತೇವೆ. ನಾವು ಮಾಡಿರುವ ಕೆಲಸ ಸರಿಯೋ ತಪ್ಪೋ ಎಂಬುದನ್ನ ತಿಳಿಸ್ಬೇಕು, ಅದಕ್ಕಾಗಿಯಾದರೂ ಈ ಚಿತ್ರವನ್ನು ಜನ ನೋಡ್ಬೇಕು. ಜನ ನೋಡಿದ್ರೆ ಒಂದು ಬೆಂಬಲ ಸ್ರಚಿಸುತ್ತೀರಿ ಎಚಿದು ಭಾವಿಸುತ್ತೇನೆ. ಈಗ ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ಹುಡಗರಿಗೆ ಜನ ಸಪೋರ್ಟ್ ಮಾಡ್ಬೇಕು ಅಂತ ಕೇಳಿಕೊಳ್ತೀನಿ.
ನಿಮ್ಮ ಚಿತ್ರಕ್ಕೆ ಸ್ಟಾರ್ ಕನ್ನಡಿಗ ಎಂದು ಹೆಸರಿಡಲು ಕಾರಣವೇನು?- ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕನ್ನಡಿಗನೂ ಸ್ಟಾರ್. ಈ ಸ್ಟಾರ್ಗಳ ಮುಂದೆ ಯಾವ ಸ್ಟಾರ್ ಸಹ ಇಲ್ಲ ಹಾಗೂ ನಾನಾಗಲೀ ನಮ್ಮ ತಂಡದವರಿಗಾಗಲೀ ನಮ್ಮಲ್ಲಿರುವ ಕನ್ನಡ ಅಭಿಮಾನಕ್ಕಾಗಿಯೇ ಈ ಸಿನಿಮಾಕ್ಕೆ ಸ್ಟಾರ್ ಕನ್ನಡಿಗ ಎಂಬ ಹೆಸರಿಟ್ಟಿದ್ದೇವೆ. ಈ ಚಿತ್ರದಲ್ಲಿ ಹೀರೋ ಪಾತ್ರಕ್ಕೂ ಸಹ ಕನ್ನಡದ ಮೇಲೆ ಹೆಚ್ಚು ಅಭಿಮಾನವಿರುತ್ತದೆ.
ಸ್ಟಾರ್ ಕನ್ನಡಿಗ ಚಿತ್ರದ ವಿಶೇಷತೆಗಳೇನು? – ಈ ಚಿತ್ರದಲ್ಲಿ ತುಂಬಾ ವಿಶೇಷತೆಗಳಿವೆ. ಮೊದಲನೆಯದಾಗಿ ಚಿತ್ರಕ್ಕೆ ಬಂಡವಾಳ ಹಾಕಿರುವಂತ ಹುಡುಗರಿಗೆ ಸಿನಿಮಾದ ಯಾವುದೇ ಹಿನ್ನೆಲೆಗಳಿಲ್ಲ. ಪವನ್ ಪಾರ್ಕ್ ಅವರು ಮ್ಯೂಸಿಕ್ ಮಾಡಿದ್ದಾರೆ. ಹಾಡುಗಳಂತೂ ಬಹಳ ಅದ್ಭುತವಾಗಿವೆ. ನಾಯಕಿ ಶಾಲಿನಿ ಭಟ್ ಅವರು ಸೀರಿಯಸ್ ಆಗಿರುವಂತಹ, ಆಟೋ ಡ್ರೈವರ್ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾರೆ. ರಾಕ್ಲೈನ್ ಸುಧಾಕರ್ ಸರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆವಿನ್, ಮೋಹನ್, ಹರೀಶ್, ರೋಹಿತ್, ಕಿರಣ್ ಎಂಬ ಹೊಸ ಹುಡುಗರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನೋಡಿದರೆ ನಿಮಗೆ ತಿಳಿಯುತ್ತೆ.
No Comment! Be the first one.