ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರದರ್ ದಿನಕರ್ ತೂಗುದೀಪ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಬರ್ತಿದೆ ಅನ್ನೋ ಸುದ್ದಿ ಗಾಂಧಿನಗರದಾದ್ಯಂತ ಸಖತ್ ಸದ್ದು ಮಾಡಿತ್ತು. ಆದ್ರೆ ಈ ಬಗ್ಗೆ ಅಷ್ಟೇನು ಹೆಚ್ಚು ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಅಪ್ಪು-ದಿನಕರ್ ಜೋಡಿಯ ಸಿನಿಮಾದ ಮತ್ತೊಂದು ಅಪ್ಡೇಟೆಡ್ ನ್ಯೂಸ್ ಹೊರ ಬಿದ್ದಿದೆ.
- ಮಹಂತೇಶ್ ಮಂಡಗದ್ದೆ
ವಿಷಯ ಏನಪ್ಪಾ ಅಂದ್ರೆ ದಿನಕರ್ ತೂಗುದೀಪ ಮತ್ತು ಪುನೀತ್ ರಾಜ್ಕುಮಾರ್ ಮೊನ್ನೆ ಭೇಟಿಯಾಗಿ ಮಾತು ಕತೆ ನಡೆಸಿದ್ದು, ಅವರಿಬ್ಬರ ಕಾಂಬಿನೇಷನ್ನ ಸಿನಿಮಾ ಬರ್ತಿದೆ ಅನ್ನೋ ಸ್ಪಷ್ಟ ಮಾಹಿತಿ ಅಭಿಮಾನಿಗಳಿಗೆ ಸಿಕ್ಕಿದೆ. ಮತ್ತೊಂದು ವಿಚಾರವೆಂದರೆ, ಸ್ಯಾಂಡಲ್ವುಡ್ನ ಸ್ಟಾರ್ ಪ್ರೊಡ್ಯೂಸರ್ಸ್ ಆದ ಜಯಣ್ಣ ಮತ್ತು ಭೋಗೇಂದ್ರ ಕೂಡ ಅಪ್ಪು-ದಿನಕರ್ ಮೀಟಿಂಗ್ ವೇಳೆ ಉಪಸ್ಥಿತರಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲೇ ಈ ಸಿನಿಮಾ ತಯಾರಾಗಲಿದೆ.
ಸ್ಯಾಂಡಲ್ವುಡ್ನ ಮತ್ತೊಂದು ಬಿಗ್ ಬಜೆಟ್ ಸಿನಿಮಾ: ಹೌದು.. ನಿರ್ದೇಶಕ ದಿನಕರ್ ತೂಗುದೀಪ ತಮ್ಮ ಮುಂದಿನ ಸಿನಿಮಾಗಾಗಿ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನ ಭೇಟಿಯಾಗಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ಮೀಟಿಂಗ್ನಲ್ಲಿ ಸಿನಿಮಾದ ಕಥೆ, ಮೇಕಿಂಗ್ ಬಗ್ಗೆ ಮಾತುಕತೆ ನಡೆಸಲಾಗಿದೆ ಅಂತಾ ಹೇಳಲಾಗ್ತಿದೆ.
ದಿನಕರ್ ಮತ್ತು ಟೀಂ ಪುನೀತ್ ರನ್ನ ಭೇಟಿಯಾಗಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇದು ಸ್ಯಾಂಡಲ್ವುಡ್ನ ಮತ್ತೊಂದು ಬಿಗ್ ಬಜೇಟ್ ಸಿನಿಮಾ ಅಂತಿವೆ ಸ್ಯಾಂಡಲ್ವುಡ್ ಮೂಲಗಳು. ಈ ವರೆಗೂ ಜಯಣ್ಣ ಆ್ಯಂಡ್ ಕಂಬೈನ್ಸ್ ಬ್ಯಾನರ್ ಅಡಿ ಬಂದಿರೋ ಎಲ್ಲಾ ಸಿನಿಮಾಗಳೂ ಕೂಡ ಬ್ಲಾಕ್ ಬಸ್ಟರ್ ಆಗಿವೆ. ಈಗ ಪುನೀತ್ ರಾಜ್ ಕುಮಾರ್ ಮತ್ತು ದಿನಕರ್ ತೂಗುದೀಪ ಕಾಂಬಿನೇಷನ್ನ ಸಿನಿಮಾವೂ ಸ್ಯಾಂಡಲ್ವುಡ್ನ ಮತ್ತೊಂದು ಬಿಗ್ ಬಜೇಟ್ ಸಿನಿಮಾ ಆಗಿದ್ದು, ಸದ್ಯದಲ್ಲೇ ಈ ಸಿನಿಮಾದ ಮುಹೂರ್ತ ನಡೆಯಲಿದೆ.
No Comment! Be the first one.