ಬಾಹುಬಲಿ ಚಿತ್ರದ ನಂತರ ಅದರಂಥಾದ್ದೇ ಅದ್ದೂರಿತನದೊಂದಿಗೆ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರ `ಸುವರ್ಣ ಸುಂದರಿ’. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರೋ ಈ ಭರ್ಜರಿ ಬಜೆಟ್ಟಿನ ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ! ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ […]
ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಮುಖ್ಯವಾಗಿರೋದು ನಾಯಕಿ ಹರಿಪ್ರಿಯಾ. ನೀರ್ದೋಸೆಯಂಥಾ ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿದ್ದ ಹರಿಪ್ರಿಯಾರದ್ದು ಪಾತ್ರಕ್ಕಾಗಿ ಒಗ್ಗಿಕೊಳ್ಳೋ ಜಾಯಮಾನ. ಆ ಕಾರಣದಿಂದಲೇ ನೀರ್ದೋಸೆಯಲ್ಲಿ ಬಿಡುಬೀಸಾಗಿ ಸಿಗರೇಟು ಸೇದೋ ಸೀನುಗಳಲ್ಲಿ ಕಾಣಿಸಿಕೊಂಡಿದ್ದರು. ಈಕೆ ಇದೀಗ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕಾಗಿ ಬಿಯರ್ ಗುಟುಕರಿಸಿರೋ ವಿಚಾರ ಅವರ ಕಡೆಯಿಂದಲೇ ಹೊರ ಬಿದ್ದಿದೆ! ಅಷ್ಟಕ್ಕೂ ಹರಿಪ್ರಿಯಾ ನಿರ್ದೇಶಕ ದಿನಕರ್ ಅವರ ಗಮನ ಸೆಳೆದಿದ್ದೇ ನೀರ್ ದೋಸೆ ಚಿತ್ರದ ಮೂಲಕ. ಅದರಲ್ಲಿನ […]
ನಮ್ ಏರಿಯಾಲ್ ಒಂದಿನ, ತುಘ್ಲಕ್ ಮತ್ತು ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದವರು ಅರವಿಂದ್ ಕೌಶಿಕ್. ಸದ್ಯ ಕಮಲಿ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ನಿರ್ದೇಶನವನ್ನೂ ಮಾಡುತ್ತಿರುವ ಅರವಿಂದ್ ಶಾರ್ದೂಲ ಎಂಬ ಸಿನಿಮಾದೊಂದಿಗೆ ಮರಳಿದ್ದಾರೆ. ಶಾರ್ದೂಲ ಹುಲಿರಾಯನ ಮತ್ತೊಂದು ಹೆಸರು. ಹುಲಿ ಅವರ ಪಾಲಿಗೆ ಲಕ್ಕಿಯೋ, ಈ ಚಿತ್ರದ ಕಥೆಗೆ ಅದು ಹೊಂದುತ್ತದೆಯಾದ್ದರಿಂದ ಆ ಶೀರ್ಷಿಕೆಯಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ವಿಶಿಷ್ಟವಾದ ಈ ಟೈಟಲ್ಲಿನ ಮೂಲಕ ಅಷ್ಟೇ ವಿಶೇಷವಾದೊಂದು ಕಥೆಯೊಂದಿಗೆ ಅರವಿಂದ್ ಕೌಶಿಕ್ ಮರಳಿದ್ದಾರೆ! ಅರವಿಂದ್ ಕೌಶಿಕ್ […]
ಕಣ್ಣೆದುರೇ ಕುಸಿದು ಹೋದ ಕೊಡಗಿನ ಜನರ ಬವಣೆಗಳ ಬಗ್ಗೆ ಎಂಥವರಿಗಾದರೂ ಮರುಕ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ರವಿಚಂದ್ರ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರವಿಚಂದ್ರನ್ ಅವರೂ ಕೂಡಾ ಈ ದುರಂತದ ಬಗ್ಗೆ ಸವಿಸ್ತಾರವಾಗಿ ಮಾತಾಡಿದ್ದಾರೆ. ಒಂದು ಮಹಾ ಪ್ರಾಕೃತಿಕ ದುರಂತದಿಂದ ಎಲ್ಲವನ್ನೂ ಕಳೆದುಕೊಂಡು ನಿಂತಿರುವ ಕೊಡಗಿನ ಜನರತ್ತ ದೂರದೃಷ್ಟಿಯ ನೋಟವನ್ನೂ ಬೀರಿದ್ದಾರೆ. ಇದು ನಡೆಯಬಾರದಿತ್ತು. ಆದರೆ ಪ್ರಕೃತಿಯ ಪಲ್ಲಟಗಳನ್ನು ತಡೆಯಲು ಹೇಗೆ ಸಾಧ್ಯ? ಏಕಾಏಕಿ ಮನೆ ಮಠ, ಜಮೀನು […]
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಜ್ಯೂನಿಯರ್ ಕಿರಿಕ್ ಪಾರ್ಟಿ- ಹೀಗಂದಿದ್ದವರು ನಿರ್ದೇಶಕ ರಿಷಬ್ ಶೆಟ್ಟಿ. ಅತ್ತ ಇದು ಮೈಮನಸುಗಳಲ್ಲಿ ಕನ್ನಡತನವನ್ನೇ ತುಂಬಿಕೊಂಡು ಕೇರಳ ಭಾಗವಾಗಿರೋ ಕಾಸರಗೋಡಿನ ಒಡಲ ಕಥೆ ಅಂತ ಸುದ್ದಿ ಹಬ್ಬಿದೆ, ಮತ್ತೊಂದೆಡೆ ಮುಚ್ಚುತ್ತಿರೋ ಸರ್ಕಾರಿ ಶಾಲೆಗಳ ಕಥೆಯನ್ನೊಳಗೊಂಡಿದೆ ಎಂದೂ ಹೇಳಲಾಗುತ್ತಿದೆ. ಆದ್ರೆ ಶೆಟ್ಟರು ಮಾತ್ರ ಇದನ್ನು ಜ್ಯೂನಿಯರ್ ಕಿರಿಕ್ ಪಾರ್ಟಿ ಅನ್ನುತ್ತಿರೋದರ ಮರ್ಮವೇನೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೀಗ ಈ ಚಿತ್ರದ ಟ್ರೈಲರ್ ಮೂಲಕವೇ ನಿಖರವಾದ ಉತ್ತರ […]
ತಾಜಾತನದ ಪೋಸ್ಟರುಗಳು ಸೇರಿದಂತೆ ತನ್ನದೇ ಮಾರ್ಗದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ದಿವಂಗತ ಮಂಜುನಾಥನ ಗೆಳೆಯರು ಚಿತ್ರ ತೆರೆಕಂಡಿದೆ. ಎಸ್.ಡಿ ಅರುಣ್ ನಿರ್ದೆಶನದ ಈ ಚಿತ್ರ ಯುವ ಸಮೂಹದ ಮನೋಭೂಮಿಕೆಯ ಜೊತೆಜೊತೆಗೇ ಕೌಟುಂಬಿಕ ಮೌಲ್ಯಗಳು, ಪೊಲೀಸ್ ವ್ಯವಸ್ಥೆ ಸೇರಿದಂತೆ ಒಟ್ಟಾರೆ ಸಮಾಜ ಪರಿಣಾಮಕಾರಿ ಕಥಾನಕವೊಂದರ ಮೂಲಕ ಪ್ರೇಕ್ಷಕರನ್ನು ಮುಟ್ಟಿದೆ. ನಿರ್ದೇಶಕ ಎಸ್.ಡಿ ಅರುಣ್ ತಮ್ಮ ಚಿತ್ರದಲ್ಲಿ ಸಂಭಾಷಣೆ ಸೇರಿದಂತೆ ಎಲ್ಲವೂ ನ್ಯಾಚುರಲ್ ಆಗಿಯೇ ಮೂಡಿ ಬಂದಿರೋ ಸೂಚನೆ ನೀಡುತ್ತಾ ಬಂದಿದ್ದರು. ಅದಕ್ಕೆ ತಕ್ಕುದಾಗಿಯೇ ಜೀವ ಪಡೆದಿರೋ ಈ ಚಿತ್ರದ ಅಷ್ಟೂ […]
ಕನ್ನಡದ ಚಿತ್ರಪ್ರೇಕ್ಷಕರಿಗೆ ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ಹೆಸರು ಚಿರಪರಿಚಿತ. ಕನ್ನಡದ ಬಹುತೇಕ ಸ್ಟಾರ್ಗಳ ಸಾಕಷ್ಟು ಚಿತ್ರಗಳಿಗೆ ಎವರ್ಗ್ರೀನ್ ಅನ್ನಿಸುವಂಥಾ ನೃತ್ಯ ಸಂಯೋಜನೆ ಮಾಡಿರುವ ಅವರೀಗ ವೈವಾಹಿಕ ಜೀವನಕ್ಕೆ ಅಡಿಯಿಸುತ್ತಿದ್ದಾರೆ. ಇದೇ ತಿಂಗಳ ೨೮-೨೯ರಂದು ಕಲೈ ಮಾಸ್ಟರ್ ವಿವಾಹ ಸಮಾರಂಭ ನೆರವೇರಲಿದೆ. ಕಲೈ ಮಾಸ್ಟರ್ ದಶಕಗಳಿಂದೀಚೆಗೆ ಕನ್ನಡ ಚಿತ್ರ ರಂಗದ ಭಾಗವಾಗಿದ್ದಾರೆ. ಇದುವರೆಗೂ ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರತೀ ಚಿತ್ರಗಳಲ್ಲಿಯೂ ಹೊಸತನಕ್ಕೆ ತುಡಿಯುವ ಮನಸ್ಥಿತಿಯಿಂದಲೇ ಗಮನ ಸೆಳೆದಿರುವ ಕಲೈ ಮಾಸ್ಟರ್ ಪ್ರತಿಭಾವಂತ ನೃತ್ಯ ಪಟುಗಳನ್ನು […]
ರಂಗಿತರಂಗದ ಭಾವಪೂರ್ಣ ಅಭಿನಯದಿಂದಲೇ ಪ್ರೇಕ್ಷಕರ ಪ್ರೀತಿ ಪಾತ್ರಳಾದಾಕೆ ರಾಧಿಕಾ ಚೇತನ್. ಆ ನಂತರದಲ್ಲಿಯೂ ಈಕೆ ಕಾಣಿಸಿಕೊಂಡಿದ್ದು ಭಾವ ತೀವ್ರತೆ ಇರೋ ಪಾತ್ರಗಳಲ್ಲಿಯೇ. ರಿಯಲ್ಲಾಗಿಯೂ ಅಂಥಾದ್ದೇ ಸಾಫ್ಟ್ ನೇಚರ್ ಹೊಂದಿರೋ ರಾಧಿಕಾ ಏಕಾಏಕಿ ಬಡಿಗೆ ಹಿಡಿದು ಫೈಟಿಂಗಿಗೆ ರೆಡಿಯಾಗುತ್ತಿದ್ದಾಳೆಂದರೆ ನಂಬಲು ತುಸು ಕಷ್ಟವಾದೀತು! ಆದರೆ ರಾಧಿಕಾ ರೆಬೆಲ್ ಆಗಿರೋದು ನಿಜ. ಈಕೆಯನ್ನು ಇಂಥಾ ಅವತಾರಕ್ಕೆ ತಂದು ನಿಲ್ಲಿಸಿರೋದು ಇಷ್ಟರಲ್ಲೇ ಶುರುವಾಗಲಿರೋ ಒಂದು ಚಿತ್ರ. ಆ ಚಿತ್ರದಲ್ಲಿ ಮೊದಲ ಸಲ ರಾಧಿಕಾ ಆಕ್ಷನ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳಂತೆ. ಇದುವರೆಗೂ ಡ್ಯಾನ್ಸ್ನಲ್ಲಿ ಮಾತ್ರವೇ […]
ಕನ್ನಡತಿಯಾದರೂ ಬಾಂಬೆಯಲ್ಲಿ ಬೇರಿಳಿಸಿಕೊಂಡಿದ್ದ ಶ್ರುತಿ ಪ್ರಕಾಶ್ ಕನ್ನಡಿಗರಿಗೆ ಪರಿಚಯವಾದದ್ದು ಬಿಗ್ಬಾಸ್ ಶೋ ಮೂಲಕ. ಒಂದಷ್ಟು ತಿಕ್ಕಲುಗಳನ್ನು ಸೃಷ್ಟಿಸಿದ ಬಿಗ್ಬಾಸು ಅಪರೂಪಕ್ಕೆ ಮನುಷ್ಯರನ್ನೂ ಪರಿಚಯಿಸೋದಿದೆ. ಈ ಐದೂ ಸೀಜನ್ನುಗಳಲ್ಲಿ ಆ ಕೆಟಗರಿಯಲ್ಲಿ ಸ್ಥಾನ ಪಡೆಯೋ ಕೆಲವೇ ಕೆಲಸ ಸ್ಪರ್ಧಿಗಳಲ್ಲಿ ಶ್ರುತಿ ಕೂಡಾ ಒಬ್ಬಳು! ಸಿಂಗರ್ ಆಗಿ ನಾನಾ ಕವರ್ ಸಾಂಗುಗಳನ್ನು ಹಾಡಿ, ಹಿಂದಿ ಸೀರಿಯಲ್ಲಿನಲ್ಲೂ ಭಾರೀ ಪ್ರಸಿದ್ಧಿ ಪಡೆದಿದ್ದಾಕೆ ಶೃತಿ. ಆದರೆ ತವರು ನೆಲಕ್ಕೇ ಅಪರಿಚಿತಳಾಗಿದ್ದ ಈಕೆಯೀಗ ಕನ್ನಡದಲ್ಲಿಯೇ ನಟಿಯಾಗಿ ಬೆಳೆಯುತ್ತಿದ್ದಾಳೆ. ಈಕೆ ನಾಯಕಿಯಾಗಿ ನಟಿಸಿರೋ ಮೊದಲ ಚಿತ್ರ […]
ಕೆಜಿಎಫ್ ಚಿತ್ರ ಮುಗಿಯುತ್ತಾ ಬರುತ್ತಿರುವಾಗಲೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಘೋಷಣೆಯಾಗಿದೆ. ಅವರ ಹೊಸಾ ಚಿತ್ರಕ್ಕೆ ‘ಮೈ ನೇಮ್ ಈಸ್ ಕಿರಾತಕ ಎಂಬ ಟೈಟಲ್ಲೂ ಫೈನಲ್ ಆಗಿದೆ. ಈ ಹಿಂದೆ ಕಿರಾತಕ ಚಿತ್ರದ ಮೂಲಕ ಯಶ್ ಗೆಲುವು ದಾಖಲಿಸಿದ್ದರಿಂದ ಈ ಶೀರ್ಷಿಕೆ ಅಭಿಮಾನಿಗಳಿಗೂ ತೃಪ್ತಿ ತಂದಿದೆ. ಆದರೆ ಈ ಚಿತ್ರಕ್ಕೆ ಯಾರು ನಾಯಕಿಯಾಗುತ್ತಾರೆ ಎಂಬ ಕುತೂಹಲ ಮಾತ್ರ ಅಭಿಮಾನಿಗಳಲ್ಲಿತ್ತು. ಇದೀಗ ಕನ್ನಡದಲ್ಲಿ ಲೀಡ್ ನಾಯಕಿಯರಲ್ಲಿಯೇ ಒಂದಷ್ಟು ಹೆಸರುಗಳೂ ಹರಿದಾಡಲಾರಂಭಿಸಿದ್ದವು. ಅದರ ಜೊತೆಗೇ ಪರಭಾಷಾ ನಾಯಕಿಯ ಆಗಮನವಾಗುತ್ತದೆ […]