3/5 ಶೀಲ ಹೆಸರಿನ ಚಿತ್ರವೊಂದು ಈ ವಾರ ತೆರೆ ಕಂಡಿದೆ. ಇದು ಏಕಕಾಲದಲ್ಲಿ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ರಾಗಿಣಿ ಇಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಮಲಯಾಳಂನಲ್ಲಿ ಕಳೆದವಾರವೇ ಈ ಚಿತ್ರ ಬಿಡುಗಡೆಗೊಂಡಿತ್ತು. ಈಗ ಕನ್ನಡದಲ್ಲೂ ತೆರೆಗೆ ಬಂದಿದೆ. ಗಂಡನನ್ನು ಕಳೆದುಕೊಂಡ ಹೆಣ್ಣುಮಗಳು. ಸಾಲ ಕೊಟ್ಟವರ ಹಿಂಸೆ ತಡೆಯಲಾರದೆ, ತನ್ನ ರೆಸಾರ್ಟನ್ನು ಮಾರಾಟ ಮಾಡಲು ಹೊರಟಿರುತ್ತಾಳೆ. ಇನ್ನೇನು ಬೆಳಗಾದರೆ ಆ ಪ್ರಾಪರ್ಟಿ ಮಾರಾಟವಾಗಿ, ಅದರ ಬಾಬ್ತು ಈಕೆಯ ಕೈಸೇರಬೇಕಿರುತ್ತದೆ. ಅಷ್ಟರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು […]
ʻʻಅವೆಲ್ಲಾ ನೆನ್ನೆ ಮೊನ್ನೆ ಆದಂತೆ ಅನಿಸುತ್ತೆ… ಏನೆಲ್ಲಾ ಘಟಿಸಿಬಿಡ್ತು… ಇನ್ನೂ ಆ ದಿನಗಳು ಕಣ್ಣಲ್ಲೇ ಇವೆ…ʼʼ ಹೀಗೆ ಹಳೇದನ್ನು ನೆನಪು ಮಾಡಿಕೊಂಡು ಯಾರು ತಾನೆ ನಿಟ್ಟುಸಿರು ಬಿಡೋದಿಲ್ಲ ಹೇಳಿ. ಒಬ್ಬೊಬ್ಬರ ಬದುಕಿನ ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಪುಟಗಳನ್ನೆಲ್ಲಾ ತೆರೆದಿಟ್ಟಿರುವ ಚಿತ್ರ ನೋಡದ ಪುಟಗಳು. ಈಗೆಲ್ಲಾ ಮೊಬೈಲು, ಸೋಷಿಯಲ್ ಮೀಡಿಯಾಗಳಿವೆ. ಶಾಲೆ, ಕಾಲೇಜು ಬಿಟ್ಟ ನಂತರವೂ ಮಕ್ಕಳು ಸಂಪರ್ಕದಲ್ಲಿರುತ್ತಾರೆ. ತೊಂಭತ್ತರ ದಶಕದದಲ್ಲಿ ಸ್ಕೂಲು, ಕಾಲೇಜು ಓದಿದವರು ಕಳೆದುಕೊಂಡ ಸಹಪಾಠಿಗಳನ್ನು ಹುಡುಕುವ ಪ್ರಕ್ರಿಯೆಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತಾರೆ. ಅಚಾನಕ್ಕಾಗಿ ಎಲ್ಲರೂ ಭೇಟಿಯಾದಾಗ […]
ಒಂದಕ್ಕೊಂದು ಸಂಬಂಧವಿಲ್ಲದ ನಾಲ್ಕಾರು ಕಿರು ಚಿತ್ರಗಳನ್ನು ಒಂದು ಕಡೆ ಜೋಡಿಸಿ ಗುಚ್ಚವಾಗಿಸಿ ಸಿನಿಮಾ ಮಾಡೋದು ಕನ್ನಡಕ್ಕೆ ತೀರಾ ಹೊಸದಲ್ಲ. ಈಗ ಅಂಥದ್ದೇ ಒಂದು ಪ್ರಯತ್ನ ʻಪೆಂಟಗನ್ʼ ಮೂಲಕ ನಡೆದಿದೆ. ಕಾಮಿಡಿ, ಕರಾಳತೆ, ಧರ್ಮ, ಕರ್ಮ, ಕಾಮ – ಈ ಎಲ್ಲ ವಿಚಾರಗಳನ್ನು ಒಂದೊಂದು ಭಿನ್ನ ಕತೆಗಳನ್ನಾಗಿಸಿ ಚೆಂದಗೆ ಕಟ್ಟಿರುವ ಚಿತ್ರ ಪೆಂಟಗನ್. ʻಸಾವುʼ ಪ್ರತಿಯೊಂದೂ ಕಿರುಚಿತ್ರದ ಕೇಂದ್ರ ಬಿಂದು. ಕಾಗೆ ಅದರ ರೂಪಕ! ಆತ್ಮಹತ್ಯೆ ಮಾಡಿಕೊಳ್ಳಲು ಹೆದರಿ ತನ್ನನ್ನು ಕೊಲ್ಲಿಸಿಕೊಂಡು ತಾನೇ ಸುಫಾರಿ ಕೊಡುವ ಹುಡುಗನ ಕಥೆಯ […]
ಕಳೆದ ಮೂರು ದಶಕಗಳಲ್ಲಿ ರೌಡಿಸಂ ಕಥಾವಸ್ತುವಿನ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಸ್ವತಂತ್ರ ಬಂದ ನಂತರ ರೌಡಿಸಂ ಹೇಗೆ ಜನ್ಮ ಪಡೆಯಿತು? ಅಂಡರ್ ವರ್ಲ್ಡ್ ಎನ್ನುವ ಕಾನ್ಸೆಪ್ಟು ಹುಟ್ಟಿಕೊಂಡಿದ್ದು ಹೇಗೆ ಅನ್ನೋದನ್ನು ಬಹುಶಃ ಯಾರೂ ಅನಾವರಣಗೊಳಿಸಿರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಈಗ ತೆರೆ ಕಂಡಿರುವ ಕಬ್ಜ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ; ಅದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಗೆದ್ದಿದೆ. ಚಿತ್ರದ ಕಥೆ ಶುರುವಾಗೋದೇ ಸ್ವತಂತ್ರ್ಯಪೂರ್ವದಲ್ಲಿ. ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮನ ಪತ್ನಿ ತನ್ನಿಬ್ಬರು ಮಕ್ಕಳ ಜೊತೆಗೆ ಬದುಕು ಕಟ್ಟಿಕೊಳ್ಳುತ್ತಾಳೆ. […]
ಬಾಲ್ಯ ಅನ್ನೋದು ಒಟ್ಟಾರೆ ಬದುಕಿನ ತಳಹದಿ. ಆ ಅಡಿಪಾಯ ಒಂಚೂರು ಆಚೀಚೆ ಆದರೂ ಭವಿಷ್ಯವೆನ್ನು ಬಿಲ್ಡಿಂಗು ವಕ್ರವೆದ್ದು ಹೋಗುತ್ತದೆ. ಯಾವುದೇ ವ್ಯಕ್ತಿಯ ಬಾಲ್ಯದ ದಿನಗಳು ಆತನ ಬದುಕನ್ನು ರೂಪಿಸುತ್ತವೆ ಅನ್ನೋದನ್ನು ಬಹುಶಃ ʻಕಡಲ ತೀರದ ಭಾರ್ಗವʼ ಚಿತ್ರ ನಿರೂಪಿಸುತ್ತದೆ. ದೇಹ ಎರಡು ಜೀವ ಒಂದೇ ಎನ್ನುವಂತೆ ಬೆಳೆಯುವ ಇಬ್ಬರು ಸ್ನೇಹಿತರು. ಅವರ ನಡುವೆ ಬರುವ ಮತ್ತೊಂದು ಪಾತ್ರ. ಆ ನಂತರದ ಬೆಳವಣಿಗೆಗಳು, ಬದಲಾಗುವ ಮನಸ್ಥಿತಿ, ಪರಿಸ್ಥಿತಿಗಳು ಮುಂದೆ ನಡೆಯುವ ಏನೆಲ್ಲಾ ಘಟನೆಗಳಿಗೆ ಕಾರಣವಾಗುತ್ತದೆ ಅನ್ನೋದು ಕಡಲ ತೀರದ […]
ಕನ್ನಡದ ಚಿತ್ರರಂಗ ಇನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಸಿಕ್ಕಿಕೊಂಡಿದೆ. ಅಪ್ಪನ ಆಸೆ ಈಡೇರಿಸಲು ಮಗ ಮುಂದೆ ನಿಲ್ಲೋ ಕತೆಗಳಿಲ್ಲಿ ಮಾಮೂಲು. ಆದರೆ ಅದಕ್ಕೆ ತದ್ವಿರುದ್ದವಾದ ಕತೆಯ ಸಿನಿಮಾವೊಂದು ತೆರೆಗೆ ಬಂದಿದೆ. ಅದು ಜೂಲಿಯೆಟ್೨. ಯಾವುದೋ ಕಾಲದಲ್ಲಿ ಅಪ್ಪ ಬಿಟ್ಟುಬಂದ ಊರಿನ ದಾರಿಯಲ್ಲಿ ಸಾಗುವ ಹೆಣ್ಣುಮಗಳು. ಅದಕ್ಕೆ ಕಾರಣ ಅಪ್ಪನಿಗೆ ಕೊಟ್ಟ ಮಾತು. ಅನಿರೀಕ್ಷಿತವಾಗಿ ಸಾವನ್ನಪ್ಪುವ ಅಪ್ಪ ಉಸಿರು ನಿಲ್ಲಿಸುವ ಮುನ್ನ ಮಗಳಿಗೆ ಒಂದು ಟಾಸ್ಕ್ ಕೊಟ್ಟಿರುತ್ತಾರೆ. ಅದನ್ನು ಈಡೇರಿಸಲು ಈಕೆ ಅಪ್ಪನ ಊರಿಗೆ ಹೋಗುತ್ತಾಳೆ. ಅಲ್ಲಿನ ಚಿತ್ರಣ ಸಂಪೂರ್ಣ […]
ಗೆಲುವಿಗೆ ನೂರು ಜನ ಅಪ್ಪಂದಿರು, ಸೋಲಿಗೆ ಮಾತ್ರ ಒಬ್ಬನೇ… ಅನ್ನೋ ಮಾತಿದೆಯಲ್ಲಾ ಹಾಗೇ ಚಿತ್ರರಂಗದಲ್ಲಿ ಕೂಡಾ. ಎಲ್ಲವೂ ನಾನೇ, ನನ್ನಿಂದಲೇ ಎನ್ನುವ ಈಗೇ ಬೆಳೆದಿರುತ್ತದೆ. ಎಲ್ಲೆಲ್ಲಿಂದಲೋ ಬಂದವರು ಒಂದು ಕಡೆ ಸೇರಿ ಏನೋ ಸಾಧಿಸುತ್ತಾರೆ. ಅಲ್ಲೀತನಕ ಇದ್ದ ಒಗ್ಗಟ್ಟು ಒಂದೇ ಏಟಿಗೆ ದಿಕ್ಕಾಪಾಲಾಗಿರುತ್ತದೆ. ಅದಾಗಲೇ ಎರಡು ಬಾರಿ ಸೋಲು ಕಂಡ ನಿರ್ದೇಶಕ. ಅವನನ್ನು ಅವಮಾನಿಸುವ ಬೆಳೆದು ನಿಂತ ಹೀರೋಗಳು. ಸೆಟೆದು ನಿಂತವನು ಮಾಡೋದು ಏನೇನೂ ಅಲ್ಲದ, ಯಾವುದೋ ಶಾಲೆಯಲ್ಲಿ ಪಾಠ ಮಾಡುವ ಮೇಷ್ಟ್ರನ್ನು ಕರೆತಂದು ಹೀರೋ ಮಾಡುತ್ತಾನೆ. […]
ಬುಡಕಟ್ಟು ಜನರ ಬದುಕೇ ಹೀಗಾ? ಒಂದಲ್ಲಾ ಒಂದು ಭಯದಲ್ಲೇ ಇವರು ಬದುಕಬೇಕಾ? ಕಾಡು, ಮೃಗಗಳ ನಡುವೆ ಜೀವಿಸುವ ಈ ಜನ ಅಲ್ಲಿನ ಪಶು, ಪ್ರಾಣಿಗಳಿಗಿಂತಾ ಹೆಚ್ಚು ಭಯಪಡೋದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ. ಯಾವ ಹೊತ್ತಿನಲ್ಲಿ ಬೇಕಾದರೂ ಇವರು ಆದಿವಾಸಿಗಳ ಮಾನ, ಪ್ರಾಣ, ಬದುಕುವ ಹಕ್ಕುಗಳಿಗೆ ಸಂಚಕಾರ ತರಬಹುದು. ʻಗೌಳಿʼ ಎನ್ನುವ ಚಿತ್ರವೊಂದು ಬಿಡುಗಡೆಯಾಗಿದೆ. ಬಹುಕಾಲದ ನಂತರ ಶ್ರೀನಗರ ಕಿಟ್ಟಿ ನಾಯಕನಾಗಿ ಮರುಪ್ರವೇಶಿಸಿರುವ ಸಿನಿಮಾ ಇದು. ತಾನೇ ಕಟ್ಟಿದ ಹಸು, ಮೇಕೆಗಳನ್ನೂ ಕೊಯ್ಯಲು ಕೊಡದ, ಅವುಗಳು ನೀಡುವ […]
ದುಡ್ಡೊಂದಿದ್ರೆ ಸಾಕು. ಎಲ್ಲವನ್ನೂ ಪಡೆದುಕೊಳ್ಳಬಹುದು. ಎನ್ನುವ ಮನಸ್ಥಿತಿಯ ಹುಡುಗರು. ಹಣ ಎಲ್ಲರ ಅವಶ್ಯಕತೆ, ಅನಿವಾರ್ಯತೆ ನಿಜ. ಹಾಗಂತ ಅದನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಿಬಿಡಲು ಸಾಧ್ಯವಿಲ್ಲವಲ್ಲಾ? ಒಳ್ಳೇ ಮಾರ್ಗಗಳನ್ನು ಕಂಡು ಹಿಡಿದುಕೊಂಡು ಶ್ರಮವಹಿಸಿ ಸಂಪಾದಿಸಬೇಕು. ಹಣ ಮಾಡುವ ಧಾವಂತಕ್ಕೆ ಬಿದ್ದು ಯಾವ್ಯಾವುದೋ ದಾರಿಯಲ್ಲಿ ದುಡಿದರೆ ಅದೂ ಒಂದು ಬದುಕು ಅನ್ನಿಸಿಕೊಳ್ಳುತ್ತಾ? ದುಡ್ಡಿನ ಕುರಿತು ನಾನಾ ಮಜಲುಗಳನ್ನು ತೆರೆದು ತೋರಿಸುವ ಸಿನಿಮಾ ʻರೂಪಾಯಿʼ. ಎಲ್ಲೆಲ್ಲಿಂದಲೋ ಬಂದು ಒಂದು ಕಡೆ ಸೇರಿದವರ ಮನಸ್ಥಿತಿ, ಪಪರಿಸ್ಥಿತಿಗಳು ಬೇರೆಯದ್ದೇ ಆಗಿರುತ್ತದೆ. ಆದರೆ ಎಲ್ಲರ […]
ಈ ದುನಿಯಾದಲ್ಲಿ ಇವರು ಒಳ್ಳೆಯವರು, ಅವರು ಕೆಟ್ಟವರು ಅಂಥಾ ಒಂದೇ ಏಟಿಗೆ ಏಳಿಬಿಡಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಬರಿಯ ಒಳ್ಳೆಯತನ, ಪ್ರಾಮಾಣಿಕತೆ ವ್ಯಕ್ತಿಯೊಬ್ಬನನ್ನು ನೋಡುಗರ ದೃಷ್ಟಿಯಲ್ಲಿ ಬೇರೆಯದ್ದೇ ರೀತಿಯಲ್ಲಿ ಚಿತ್ರಿಸಿಬಿಡುತ್ತದೆ. ಹಾಗೆಯೇ, ವ್ಯಸನಕ್ಕೆ ಬಿದ್ದ ವ್ಯಕ್ತಿ ಎಂಥ ಹೀನ ಕೆಲಸ ಮಾಡಲು ಕೂಡಾ ಮುಂದಾಗುತ್ತಾನೆ. ಯಾವತ್ತಾದರೊಂದು ದಿನ ಮುಖವಾಡ ಕಳಚಿಬೀಳುತ್ತದೆ ಅನ್ನೋ ಭಯದಲ್ಲಿ ಬದುಕುವುದಕ್ಕಿಂತಾ ಗೌರವಯುತವಾಗಿ ಬಾಳ್ವೆ ನಡೆಸೋದು ಉತ್ತಮ… ʻಲಾಂಗ್ ಡ್ರೈವ್ʼ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿದೆ. ಈ ಚಿತ್ರದಲ್ಲೂ ಇಂಥ […]