ಆ ಕಾಲೇಜು ತೆರೆದುಕೊಂಡಿದ್ದೇ ಬರೀ ಮೂವತ್ತೈದು ಪರ್ಸೆಂಟ್ ಪಡೆದು ಪಾಸಾದ ಮಕ್ಕಳಿಗಾಗಿ. ಇಂತಿಷ್ಟು ಪರ್ಸೆಂಟು, ಪೇಮೆಂಟು ಇದ್ದರೂ ಕಾಲೇಜಿಗೆ ಪ್ರವೇಶಾವಕಾಶ ಸಿಗೋದು ಕಷ್ಟ. ಇಂಥದ್ದರಲ್ಲಿ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಕಾಲೇಜು ಆರಂಭವಾದರೆ ಅಂಥಾ ಹುಡುಗರಿಗೆ ಎಷ್ಟು ಖುಷಿಯಾಗಬಹದು. ಕಾಲೇಜು ಮಾತ್ರವಲ್ಲ, ಹಾಸ್ಟೆಲ್ ಸೌಲಭ್ಯವೂ ಅಲ್ಲಿರುತ್ತದೆ ಅಂದರೆ ಹುಡುಗರ ಪಾಲಿಗದು ಸ್ವರ್ಗ! ಹಾಗೆ ಸೀಟು ಪಡೆದು ಬಂದ ಹುಡುಗ ಹುಡುಗಿಯರ ಪ್ರೀತಿ ಪ್ರೇಮ ಪ್ರಣಯದಾಟಗಳೂ ಶುರುವಾಗುತ್ತವೆ. ಹುಡುಗರ ಭವಿಷ್ಯದಂತೆಯೇ ಇಲ್ಲಿನ ಕಥೆ ಕೂಡಾ ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದು ಎನ್ನುವ […]
ನಡೆದುಹೋದ ಘಟನೆ ಮತ್ತೆ ಮರುಕಳಿಸಲ್ಲ. ಆದರೆ, ಅಲ್ಲಿ ಏನು ನಡೆಯಿತು ಅಂತಾ ತಿಳಿದುಕೊಳ್ಳೋಕೆ ಎವಿಡೆನ್ಸ್ ಇಂದ ಮಾತ್ರ ಸಾಧ್ಯ…. ನಾಲೆ ನಿರ್ಮಾಣದ ಕಾಮಗಾರಿ ಮಾಡಲು ಹೋದ ಕಾರ್ಮಿಕರ ಕಣ್ಣಿಗೆ ಬಿದ್ದ ಅಸ್ತಿಪಂಜರಗಳ ಬಗ್ಗೆ ತನಿಖೆ ಮಾಡಲು ಬಂದ ಫೊರೆನ್ಸಿಕ್ ತಂಡ ಅಗೆದು ತೆಗೆಯೋದು ಬರೋಬ್ಬರಿ ನೂರಾ ಎಂಟು ಜನರ ಕಳೇಬರ. ಅವರೆಲ್ಲಾ ಸತ್ತಿದ್ದು ಯಾಕೆ? ಅವರನ್ನೆಲ್ಲಾ ಅಷ್ಟು ನಿರ್ದಯಿಯಾಗಿ ಕೊಂದು ಒಂದೇ ಕಡೆ ಹೂತವನು ಯಾರು? ಅದಕ್ಕೆ ಕಾರಣ ಏನಿರಬಹುದು…? ಇಂಥದ್ದೊಂದು ಕೌತುಕದ ಪ್ರಶ್ನೆಯೊಂದಿಗೆ ಆರಂಭವಾಗುವ ಕತೆ […]
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ದಿಢೀರಂತಾ ಮದುವೆಯಾಗಿ ಒಟ್ಟು ಸೇರಿದ ಎರಡು ಜೀವಗಳು ಇಡೀ ಜೀವನ ಒಂದಾಗಿ ಬಾಳಬೇಕು. ಪರಸ್ಪರರ ಇಷ್ಟ ಕಷ್ಟ, ನಡೆ, ನುಡಿ, ಮಾತು, ಮಂಥನಗಳು ಬೇರೆಬೇರೆಯಾಗಿರುತ್ತವೆ. ಇಬ್ಬರು ಬೆಳೆದ ವಾತಾವರಣ, ಸಂಸ್ಕೃತಿ, ರಿವಾಜುಗಳು ಕೂಡಾ ಭಿನ್ನವಾಗಿರುತ್ತವೆ. ಅಸಲಿಗೆ ಒಬ್ಬರಿಗೆ ಒಬ್ಬರ ಪರಿಚಯವೇ ಇರೋದಿಲ್ಲ. ಮದುವೆಗೆ ಮುಂಚೆ ಸಿಕ್ಕಾಪಟ್ಟೆ ಕನಸು ಕಂಡಿರುತ್ತಾರೆ. ಬದುಕು ಇನ್ನೇನೋ ಆಗಿಬಿಡಬಹುದು ಅಂತಾ ಭ್ರಮಿಸಿರುತ್ತಾರೆ. ಆದರೆ ಮದುವೆ ಅಂತಾದಮೇಲೆ ಆಗೋದೇ ಬೇರೆ. ಇಬ್ಬರೂ ನೀರಿಂದ ತೆಗೆದು ನೆಲಕ್ಕೆಸೆದ ಮೀನಂತಾಡಲು ಶುರು […]
ಬೆಂಗಳೂರಿನ ದ್ರೌಪದಮ್ಮನ ಕರಗ ವಿಶ್ವಾದ್ಯಂತ ಹೆಸರುವಾಸಿ. ಜಾತಿ ಮತ ಮೀರಿ ಎಲ್ಲರೂ ಒಂದಾಗಿ ಸೇರಿ ಇದನ್ನು ಆಚರಿಸುತ್ತಾರೆ. ಈ ಧರ್ಮರಾಯನ ಗುಡಿಗೆ ಬರೋಬ್ಬರಿ ಎಂಟು ನೂರು ವರ್ಷಗಳ ಇತಿಹಾಸವಿದೆ. ನಾಡಪ್ರಭು ಕೆಂಪೇಗೌಡರು ಇದೇ ಗುಡಿಯನ್ನು ಕೇಂದ್ರವಾಗಿಟ್ಟುಕೊಂಡೇ ಬೆಂಗಳೂರನ್ನು ಕಟ್ಟಿದ್ದು ಎನ್ನುವ ಮಾತಿದೆ. ಇದೇ ಬೆಂಗಳೂರಿನ ಧರ್ಮರಾಯನ ದೇವಸ್ಥಾನದ ಆಸುಪಾಸಿನಲ್ಲಿರುವ ತಿಗಳರ ಪೇಟೆಯಲ್ಲಿ ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಹರಿದಿರೋ ನೆತ್ತರು ಒಬ್ಬಿಬ್ಬರದ್ದಲ್ಲ. ಅಂಥದ್ದೇ ಒಂದು ರಕ್ತ ಚರಿತ್ರೆ ʻಕೈವʼದ ಮೂಲಕ ತೆರೆದುಕೊಂಡಿದೆ.. ಪ್ರೀತಿಯೊಂದಕ್ಕೆ ಬಿಟ್ಟು ಅವನ ಹೃದಯದಲ್ಲಿ […]
ಅವನಿಗೆ ನಯ-ವಿನಯವಿಲ್ಲ. ದೊಡ್ಡವರು ಚಿಕ್ಕವರು ಅನ್ನೋದನ್ನೆಲ್ಲಾ ನೋಡದೆ, ಯಾರ ಮುಂದೆ ಬೇಕಾದರೂ ಕಾಲಮೇಲೆ ಕಾಲು ಹಾಕಿಕೊಂಡು ಕೂರುವ, ಮೌನಾಚರಣೆಯ ಸಭೆಯಲ್ಲೂ ದೊಡ್ಡ ಸದ್ದಿನಲ್ಲಿ ಸೀನಿಬಿಡುವ, ಬೂಟಿಗೆ ಕುದುರೆ ಲಾಳ ಫಿಕ್ಸ್ ಮಾಡಿಕೊಂಡು ಸದ್ದು ಮಾಡಿಕೊಂಡು ನಡೆಯುವ, ಎದುರಿದ್ದವನು ಎಷ್ಟೇ ಬಲಶಾಲಿಯಾದರೂ ಮುಷ್ಟಿ ಹಿಡಿದು ಗುದ್ದುವ ಒರಟ… ಒಂಥರಾ ಮ್ಯಾನರ್ಸ್ ಇಲ್ಲದವನು! ಬ್ಯಾಡ್ ಮ್ಯಾನರ್ಸನ್ನೇ ಬಾಡಿ ತುಂಬಾ ತುಂಬಿಕೊಂಡ ರುದ್ರೇಶ್ ಅಲಿಯಾಸ್ ರುದ್ರನ ತಂದೆ ಕಾಲವಾದಮೇಲೆ ಅದೇ ಪೊಲೀಸ್ ಇಲಾಖೆಯಲ್ಲಿ ನೌಕರಿ ಸಿಕ್ಕಿರುತ್ತದೆ. ಅದೊಂದು ದಿನ ಸರ್ವೀಸ್ ಗನ್ […]
ಸುತ್ತಲೂ ಮೂಢರು, ಮತಿಹೀನರು, ಅವಿದ್ಯಾವಂತರು, ಕೇಡುಗರು, ಕುಯುಕ್ತಿ ಮನಸ್ಸಿನವರೇ ತುಂಬಿದ್ದಾಗ ಅವರ ಮಧ್ಯದಲ್ಲೊಬ್ಬ ತಿಳಿವಳಿಕೆ ಉಳ್ಳವನು, ಓದು ಬರಹ ಬಲ್ಲವನು ಇದ್ದಾನೆ ಅಂದುಕೊಳ್ಳಿ. ಸುತ್ತಲಿನ ಆ ಮಂದಿ ಈತನನ್ನು ನೋಡುವ ರೀತಿಯೇ ಬೇರೆ. ಅತಿಯಾಗಿ ಓದಿದವರು ಜಗತ್ತಿನ ಕಣ್ಣಿಗೆ ಅರೆಹುಚ್ಚರಂತೆ, ಕೆಲಸಕ್ಕೆ ಬಾರದವರಂತೆ ಕಾಣುವುದಿದೆ. ಇಲ್ಲಿ ಕಥಾನಾಯಕ ಪ್ರಾಣೇಶ ಅಲಿಯಾಸ್ ಪ್ರಾಣಿಯ ಪಾಡು ಕೂಡಾ ಹಾಗೇ ಆಗಿರುತ್ತದೆ. ಆ ಹಳ್ಳಿಯಲ್ಲಿ ಇವನೊಬ್ಬನೇ ಅತಿ ಹೆಚ್ಚು ಓದಿದವನು. ಕೆ.ಎ.ಎಸ್. ಬರೆದು ಸರ್ಕಾರಿ ಅಧಿಕಾರಿಯಾಗಬೇಕು ಅಂತಾ ಬಯಸಿರುತ್ತಾನೆ. ʻʻಮೂಲಾ ನಕ್ಷತ್ರದಲ್ಲಿ […]
ಅವನು ಅಪ್ಪ-ಅಮ್ಮನನ್ನು ಕಳೆದುಕೊಂಡ ಯುವಕ. ಹೆಸರು ಮಾನವ್. ಸಣ್ಣ ಶಾಲೆಯಲ್ಲಿ ಶಿಕ್ಷಕ ವೃತ್ತಿ. ಒಬ್ಬಂಟಿ ಜೀವನ. ಯಾರಾದರೂ ಜೊತೆಯಾದರೆ ಸಾಕು ಅಂತಾ ಚಡಪಡಿಸಿದವನ ಪಾಲಿಗೆ ತನ್ನ ಮನೆಯ ಸುತ್ತಲೂ ಬಿಕೋ ಎನ್ನುವ ವಾತಾವರಣ. ಎದುರು ಮನೆಯತ್ತ ಇಣುಕಿದರೆ ಟು-ಲೆಟ್ ಬೋರ್ಡು ಮಾತ್ರ ಕಾಣಲು ಸಾಧ್ಯ. ಹೀಗಿರುವಾಗಲೇ ಅದೊಂದು ದಿನ ಅದೇ ಎದುರುಮನೆಯ ಕಾಂಪೌಂಡಿನಲ್ಲಿ ಅರಳಿನಿಂತ ಹೆಣ್ಣುಮಗಳು ಪ್ರತ್ಯಕ್ಷ. ಜೊತೆಗೊಬ್ಬ ಹಿರಿಯ ವ್ಯಕ್ತಿ. ಮನೆಯವರ ಹಿತದೃಷ್ಟಿಯಿಂದ ಅಂಕಲ್ ವಯಸ್ಸಿನವನ ವ್ಯಕ್ತಿಯನ್ನು ಮದುವೆಯಾದ ಚೆಂದದ ಯುವತಿ ಅವಳು. ನಿರೀಕ್ಷೆಯಂತೇ ಮಾನವ್ಗೆ […]
ಮಲ್ಟಿ ಜಿಮ್ಮುಗಳ ಜಮಾನಾದಲ್ಲಿ ಗರಡಿಮನೆ ಕಲ್ಚರು ಬಹುತೇಕ ಕಾಣೆಯಾಗಿದೆ. ಈ ಹೊತ್ತಿನಲ್ಲಿ ಯೋಗರಾಜ ಭಟ್ಟರು ಧಿಗ್ಗನೆ ಎದ್ದು ಕುಂತು ʻಗರಡಿʼ ಎನ್ನುವ ಸಿನಿಮಾವನ್ನು ರೂಪಿಸಿದ್ದಾರೆ. ಇದೇ ವಾರ ಈ ಚಿತ್ರ ತೆರೆಗೆ ಬಂದಿದೆ. ಗರಡಿ ಮನೆಯಲ್ಲಿ ತಯಾರಾದವರ ಜಂಗೀ ಕುಸ್ತಿಯ ಜೊತೆಗೆ ಶ್ರೀಮಂತ ಮನೆತನದ ಪ್ರತಿಷ್ಟೆಯೂ ಸೇರಿಕೊಂಡಿರುತ್ತದೆ. ಕುಸ್ತಿ ಮತ್ತು ಅದರ ಗೆಲುವು ತನ್ನ ಮನೆತನಕ್ಕಷ್ಟೇ ಸೀಮಿತವಾಗಿರಬೇಕು ಅಂತಾ ಬಯಸಿದವನು ರಾಣೆ. ನಿಯತ್ತಿನಿಂದ ಆಡಿ ಗೆದ್ದ ಬಂಡೆ ಸೀನಪ್ಪನ ಕುತ್ತಿಗೆ ಮುರಿದು ಕೊಂದಿರುತ್ತಾನೆ. ಬಂಡೆ ಸೀನನ ಇಬ್ಬರು […]
ಆತ ಉತ್ತರ ಕರ್ನಾಟಕದ ಪ್ರತಿಷ್ಠಿತ ಇನಾಮ್ದಾರ್ ಮನೆತನದ ನಾಯಕ. ಮನೆಯಲ್ಲಿ ಮಕ್ಕಳಿಲ್ಲದ ಕೊರಗು. ಮಲೆನಾಡಿನ ತಪ್ಸೆ ಗುಡ್ಡದ ಶಿವನನ್ನು ಇದೇ ಮನೆತನೆ ಅನಾದಿಕಾಲದಿಂದಲೂ ಪೂಜಿಸುತ್ತಾ ಬಂದಿರುತ್ತದೆ. ಅದೊಂದು ದಿನ ತಪ್ಸೆ ಗುಡ್ಡದ ಶಿವನ ದಯೆಯಿಂದ ಇನಾಮ್ದಾರರ ಮನೆಯಲ್ಲಿ ಮಗುವಿನ ಸದ್ದು ಮೂಡುತ್ತದೆ! ಏಳು ತಿಂಗಳಿಗೇ ಹುಟ್ಟಿದ ಮಗು ಬದುಕಿದರೆ, ತಾಯಿ ಕಣ್ಮುಚ್ಚುತ್ತಾಳೆ. ತನ್ನ ಮನೆತನದ ಹೆಸರು ಉಳಿಸಿ ಬೆಳೆಸುವ ಮಗನಾಗಲಿ ಅಂತಾ ವೀರಬಾಹು ಅಂತಾ ಹೆಸರಿಟ್ಟಿರುತ್ತಾನೆ. ಆದರೆ, ಮಗು ಬೆಳೆಯುತ್ತಾ ವ್ಯಾಘ್ರ ರೂಪ ಪಡೆಯುತ್ತದೆ. ಸರ್ಕಾರ್ ಅಂತಾ […]
ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ತೆರೆಗೆ ಬಂದಿದೆ. ಅನೇಕ ಯುವ ನಿರ್ದೇಶಕರಿಗೆ ಶಿವಣ್ಣನ ಸಿನಿಮಾವೊಂದನ್ನು ನಿರ್ದೇಶಿಸಬೇಕು ಎನ್ನುವ ಕನಸಿರುತ್ತದೆ. ಈ ಸಲ ಶ್ರೀನಿ ಅದನ್ನು ನನಸು ಮಾಡಿಕೊಂಡಿದ್ದಾರೆ. ಸ್ವತಃ ನಟನಾಗಿ, ನಿರ್ದೇಶಕನಾಗಿ ಗೆದ್ದಿರುವ ಶ್ರೀನಿ ಈ ಸಲ ಸೂಪರ್ ಸ್ಟಾರ್ ನಟನ ಇಮೇಜನ್ನು ಉಳಿಸಿದ್ದಾರಾ ಅನ್ನೋದು ಘೋಸ್ಟ್ ಚಿತ್ರದ ಮೂಲಕ ಜಾಹೀರಾಗಿದೆ. ಬೃಹತ್ ಜೈಲೊಂದರ ಮೇಲೆ ಅಟ್ಯಾಕ್ ಮಾಡಿ, ಅದರೊಳಗೆ ನುಸುಳಿ, ಇಡೀ ಜೈಲನ್ನು ಹೈಜಾಕ್ ಮಾಡುವ ಕಥೆ ಈ ಚಿತ್ರದ್ದು. ಅದು ಯಾಕೆ? ಯಾರಿಂದ? […]