ಶ್ರೀ ಭರತ ಬಾಹುಬಲಿಯಲ್ಲಿ ಅಣ್ಣಾವ್ರ ಕಾರು!

Picture of Cinibuzz

Cinibuzz

Bureau Report

ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ “ಮಾಸ್ಟರ್ ಪೀಸ್” ನಿರ್ದೇಶಿಸಿದ್ದವರು ಮಂಜು ಮಾಂಡವ್ಯ. ಅದಕ್ಕೂ ಮುಂಚೆ ಸಾಕಷ್ಟು ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಮಂಜು ಮಾಂಡವ್ಯ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. `ಶ್ರೀ ಭರತ ಬಾಹುಬಲಿ’ ಸಿನಿಮಾದ ಮೂಲಕ ಮಂಜು ಮಾಂಡವ್ಯ ನಾಯಕನಟನಾಗುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಒಂದು ಪ್ರಮುಖ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಆ ದೃಶ್ಯದಲ್ಲಿ ಆ ಕಾಲದಲ್ಲಿ ಅಣ್ಣಾವ್ರ ಕ್ರೇಜ್ ಎಷ್ಟು ದೊಡ್ಡದು ಎಂದು ತೋರಿಸುವ ಸನ್ನಿವೇಶ ಇತ್ತು. ಆ ದೃಶ್ಯಕ್ಕೆ ಚಿತ್ರತಂಡ ಕಾಂಟೆಸ್ಸಾ ಕಾರ್ ಒಂದನ್ನು ಬುಕ್ ಮಾಡಿತ್ತು. ಅನಿರೀಕ್ಷಿತವಾಗಿ ಬರಬೇಕಾಗಿದ್ದ ಕಾಂಟೆಸ್ಸಾ ಕಾರು ಬರದೇ ಕೈ ಕೊಟ್ಟಿತು. ಆಗ ಬೇರೊಂದು ಮೂಲದಿಂದ ಪ್ರಯತ್ನಿಸಿದಾಗ ಚಿತ್ರತಂಡಕ್ಕೆ ಅಣ್ಣಾವ್ರು ಬಳಸಿದ್ದ ಅಂಬಾಸಡರ್ ಕಾರು ಸಿಕ್ಕಿಬಿಟ್ಟಿತ್ತು ಈ ಬೆಳವಣಿಗೆಯಿಂದ ವಿಪರೀತ ಥ್ರಿಲ್ಲಾದ ಚಿತ್ರತಂಡ ಅಣ್ಣಾವ್ರ ದೃಶ್ಯಕ್ಕೆ ಅಣ್ಣಾವ್ರ ಕಾರೇ ಬಂದಿದ್ದು ನೋಡಿ ಇದು ಅಣ್ಣಾವ್ರ ಆಶೀರ್ವಾದವೇ ಸರಿ ಎಂದು ಭಾವಿಸಿತಂತೆ.

ಮಾನವ ಜೀವನದಲ್ಲಿ ತ್ಯಾಗ ಎಷ್ಟು ಮುಖ್ಯವಾದದ್ದು ಎಂದು ತೋರಿಸುವ ಕಥೆಗೆ ವಿಶೇಷವಾದ ಮಂಜು ಮಾಂಡವ್ಯ ಬ್ರ್ಯಾಂಡ್‌ನ ಹಾಸ್ಯದ ಲೇಪನವಿರುವ ಶ್ರೀ ಭರತ ಬಾಹುಬಲಿ ಕನ್ನಡ ಚಿತ್ರರಸಿಕರಿಗೆ ಹೊಸ ಅನುಭವ ನೀಡಿ ರಂಜಿಸುವುದು ಗ್ಯಾರಂಟಿ.

https://www.youtube.com/watch?v=RgcD826Cg-M #

ಇನ್ನಷ್ಟು ಓದಿರಿ

Scroll to Top