Rachitaram_kannada_hero_notreachable_bengaluru_bangalore_cinibuzz_election
`ಗಂಟುಮೂಟೆ’ ಚಿತ್ರತಂಡದ ಕಡೆಯಿಂದ ರೂಪುಗೊಂಡಿರುವ `ಕೆಂಡ’ ಚಿತ್ರ ಹಂತ ಹಂತವಾಗಿ ಕುತೂಹಲದ ಕಾವೇರಿಸಿಕೊಂಡು ಸಾಗಿ ಬಂದಿತ್ತು. ಇದೀಗ ಕೆಂಡ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಹೊತ್ತಿನಲ್ಲಿ ಜಯಂತ್ಕಾಯ್ಕಣಿ ರಚಿಸಿದ `ತಾಜಾ ತಾಜಾ ಸುದ್ದಿ’ ಗೀತೆಗೆ ಪುತ್ರ ರಿತ್ವಿಕ್ಕಾಯ್ಕಣಿ ಪ್ರಥಮ ಬಾರಿ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ತಂಡಕ್ಕೆ ಶುಭಹಾರೈಸಲು ಯೋಗರಾಜಭಟ್, ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಡಿ.ಬೀಟ್ಸ್ನ ಶೈಲಜಾನಾಗ್ ಮತ್ತು ಜಯಂತ್ಕಾಯ್ಕಣಿ ಆಗಮಿಸಿದ್ದರು. ರೂಪಾ ರಾವ್ ಕೆಂಡ ಚಿತ್ರದ […]
ಈ ಹಿಂದೆ ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ. ಇದೀಗ ಅವರು ಕೈಲಾಸ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ಕುಗಳನ್ನು ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥಾ ಟ್ರಾನ್ಸ್ ಸಾಂಗ್ ವೊಪಂದನ್ನು ಬಿಡುಗಡೆಗೊಳಿಸಿದೆ. ದೃಷ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ […]
ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆಕ್ಷನ್ ಅಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಈ ಚಿತ್ರದ ಸೀಕ್ವೆಲ್ ಬರ್ತಿರೋದು ಗೊತ್ತೇ ಇದೆ. ಈಗಾಗಲೇ ರಿಲೀಸ್ ಆಗಿದ್ದ ‘ಗೂಢಚಾರಿ 2’ ಫಸ್ಟ್ ಲುಕ್ ಬರೀ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಗೂಢಚಾರಿ-2 ಸಿನಿಮಾಗೆ ನಾಯಕಿ ಸಿಕ್ಕಿದ್ದಾರೆ. ಪ್ರತಿಭಾನ್ವಿತ ನಟಿ ಬನಿತಾ ಸಂಧು […]
ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್ಸ್..ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು ಜನ್ಮದಿನದ ಶುಭಾಶಯ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವು ಹಿರಾನಿ ಡಂಕಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ […]
ಸಮಾಜ ಸೇವೆ, ರಾಜಕಾರಣ, ವಾಣಿಜ್ಯ ವ್ಯವಹಾರಗಳ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಯುವ ಪ್ರತಿಭೆ ಅಭಿ ರಾಣವ್. ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದವರು ಅಭಿ. ಪೂರ್ಣ ಪ್ರಮಾಣದ ಹೀರೋ ಆವಿ ಒನ್ ಕ್ರೋರ್, ಯಾಕೋ ಬೇಜಾರ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ವೆಸ್ಲಿ ಬ್ರೌನ್ ನಿರ್ದೇಶನದ ಬೆನ್ಜ್ ಲವ್ ಸ್ಟೋರಿ ಕೂಡಾ ನಿರ್ಮಾಣ ಹಂತದಲ್ಲಿದೆ… ಇವರ ತಂದೆ ಹೊಸಕೋಟೆಯಲ್ಲಿ ಹೆಸರಾಂತ ರಾಜಕಾರಣಿ. ತಮ್ಮದೇ ಉದ್ಯಮ ಹೊಂದಿದ್ದರೂ ಅಭಿ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಬೆಳೆದು ನಿಲ್ಲಬೇಕು […]
ಇಷ್ಟು ದಿನ ಬಹುತೇಕ ವಾಹಿನಿಗಳು ಟಿ.ಆರ್.ಪಿ. ಟ್ಯಾಂಪರಿಂಗ್ ಮಾಡಿ ಬೋಗಸ್ ರೇಟಿಂಗ್ ತೋರಿಸುತ್ತಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ಬ್ರೇಕ್ ಬಿದ್ದಿದೆ. ದರ್ಶನ್ ಒಬ್ಬರ ಸಿನಿಮಾ ಬಿಟ್ಟರೆ ಉಳಿದಂತೆ ದೊಡ್ಡ ಹೀರೋಗಳ ಸಿನಿಮಾಗಳು ಕೂಡಾ ಒಂದೂವರೆ ಎರಡು ದಾಟುತ್ತಿಲ್ಲ. ಸದ್ಯ ಡಾಲಿ ಇಂಡಿಯಾ ಲೆವೆಲ್ಲಿನಲ್ಲಿ ಹೆಸರು ಮಾಡಿರುವ ನಟ. ಟಗರು ನಂತರ ಬೇರೆ ಇಮೇಜು ಪಡೆದಿರುವ ಧನಂಜಯ ನಿರ್ಮಾಪಕರಾಗಿ ಗೆದ್ದಿದ್ದು ಬಡವ ರಾಸ್ಕಲ್ ಸಿನಿಮಾದಲ್ಲಿ. ಆ ನಂತರ ಡಾಲಿ ಧನಂಜಯ ನಟನೆಯ ನಾಲ್ಕಾರು ಸಿನಿಮಾಗಳು ಬಂದಿವೆ. ಆದರೆ ಯಾವುದೂ […]
ಈ ಗುಳ್ಟು ಹುಡುಗ ನವೀನ್ ಶಂಕರ್ ತಲೆಗೆ ಯಾರಾದರೂ ನಾಲ್ಕು ಮೊಟಕೋರು ಬೇಕಲ್ಲಾ? ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋಕೆ ಈತನಿಗೇನು ಧಾಡಿ? ಹಾಳಾದೋನು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ಮೂರು ವರ್ಷ ಸತಾಯಿಸುತ್ತಾನೆ…. -ʻಹೊಂದಿಸಿ ಬರೆಯಿರಿʼ ಎನ್ನುವ ಫ್ರೆಷ್ ಸಿನಿಮಾ ನೋಡಿದ ಮೇಲೆ ಯಾರಿಗಾದರೂ ಹೀಗನ್ನಿಸದೇ ಇರೋದಿಲ್ಲ. ಅದರಲ್ಲೂ ನವೀನ್ ಶಂಕರ್ ಬರೋದು ತೀರಾ ಕಡಿಮೆ ಅನ್ನಿಸುವಷ್ಟು ಕಡಿಮೆ ದೃಶ್ಯಗಳಲ್ಲಿ. ಆದರೆ ಇಡೀ ಸಿನಿಮಾವನ್ನು ನುಂಗಿಕೊಳ್ಳುತ್ತಾರೆ. ಬೆಳ್ಳಗೂ ಇಲ್ಲ, ಬಾಡಿ ಬಿಲ್ಡ್ ಮಾಡಿಲ್ಲ, ಬಿಲ್ಡಪ್ಪಂತೂ ಇಲ್ಲವೇ ಇಲ್ಲ ಅನ್ನೋದು […]
ಅಭಿಶೇಕ್ ಅಂಬರೀಶ್ ಥರದ ಎಳೇ ಹುಡುಗರು, ಹರಿಪ್ರಿಯಾ-ವಸಿಷ್ಠ ಥರದ ಹಿರಿಯರು ಸೇರಿದಂತೆ ಅನೇಕರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ನಡುವಯಸ್ಸಿನ ರಾಜ್ ಶೆಟ್ಟಿಯಂಥವರು ಯಾವಾಗ ಮದುವೆಯಾಗುತ್ತಾರೆ? ದಿಢೀರ್ ಅಂತಾ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಅಚ್ಛರಿ ಮೂಡಿಸಿದವರು ರಾಜ್. ಬೋಳು ತಲೆಯ ಚಿತ್ರವಿದ್ದ ಒಂದು ಮೊಟ್ಟೆಯ ಕತೆ ಅನ್ನೋ ಸಿನಿಮಾದ ಪೋಸ್ಟರು ಗೋಡೆಗಳ ಮೇಲೆ ಕಾಣಿಸಿಕೊಂಡಾಗಲೇ ʻಇದ್ಯಾರಪ್ಪಾʼ ಅಂತಾ ಜನ ಆಶ್ಚರ್ಯಗೊಂಡಿದ್ದರು. ಅದೇ ಜನ ಇಷ್ಟ ಪಟ್ಟು ನೋಡಿ ಚಿತ್ರವನ್ನು ಗೆಲ್ಲಿಸಿದರು. ಆ ನಂತರ ರಾಜ್ ತಮ್ಮದೇ ಶೈಲಿಯ ಕೆಲವಾರು ಸಿನಿಮಾಗಳನ್ನು […]
ಅನಂತ್ ಕನ್ನಡ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅತ್ಯುತ್ಕೃಷ್ಟ ಕಲಾವಿದ. ಅವರಿಗೆ ಇನ್ನೂ ಪದ್ಮಶ್ರೀ ಬಂದಿಲ್ಲ ಅನ್ನೋದೇ ನಂಬಲಾಗದ ವಿಚಾರ. ಅನಂತ್ ನಾಗ್ ಕನ್ನಡ ಮಾತ್ರವಲ್ಲ ವಿಶ್ವದ ಶ್ರೇಷ್ಠ ನಟರ ಲಿಸ್ಟಗೆ ಸೇರುವ ಮಹಾನ್ ನಟ. ಪಾತ್ರ ಯಾವುದೇ ಆದರೂ ಅದರ ಆಳಕ್ಕಿಳಿದು ನಟಿಸುವ ಕಲಾವಿದ. ಕನ್ನಡದ ಮಟ್ಟಿಗೆ ʻಮೆಥೆಡ್ ಆಕ್ಟಿಂಗ್ʼ ಅನ್ನು ಮೈಗೂಡಿಸಿಕೊಂಡ ಅಪರೂಪ ಆಕ್ಟರ್. ಎಷ್ಟೋ ಪಾತ್ರಗಳನ್ನು ನಿರ್ದೇಶಕರು ಅನಂತ್ ನಾಗ್ ಅರನ್ನೇ ಗಮನದಲ್ಲಿಟ್ಟುಕೊಂಡು ಬರೆದುಕೊಂಡಿರುತ್ತಾರೆ. ಆದರೆ, ಆ ಎಲ್ಲ ಪಾತ್ರಗಳನ್ನೂ ಮಾಡಲು […]