ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ. ಇದನ್ನು ಯಾರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವಂತಾಗಿದೆ. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವನ್ನು ಬಿಟ್ಟರೆ, ಹಾವನ್ನು ನುಂಗಲು ಹದ್ದು ಬಂದಂತೆ; ಹೊಂಚು ಹಾಕಿ ಸಂಚು ಮಾಡಿ ಗಂಟು ಹೊಡೆಯಲು, ಆಸ್ತಿ ನುಂಗಲು ಮತ್ತೊಬ್ಬರು ಹುಟ್ಟಿಕೊಂಡಿರುತ್ತಾರೆ. ನಂಬಿಕೆ ಮತ್ತು ಮೂಢನಂಬಿಕೆ ಎರಡನ್ನೂ ತಕ್ಕಡಿಗೆ ಹಾಕಿ ತೂಕ ನೋಡಿರುವ ಚಿತ್ರ ʻಆಡೇ ನಮ್ ಗಾಡ್ʼ. ನಾಲ್ಕು ಜನ ಯುವಕರ ತಂಡ. […]
‘ ನಾನು ಕೋ ಕೋ ಕೋಳಿಕ್ಕೆ ರಂಗ…’ ಬಹುಶಃ ಈ ಹಾಡನ್ನು ಕೇಳದವರೇ ಇಲ್ಲ. ಈ ಹಾಡು ಇಂದಿಗೂ ಎವರ್ ಗ್ರೀನ್. ಇಷ್ಟಕ್ಕೂ ಈ ಹಾಡಿನ ಬಗ್ಗೆ ಹೇಳೋಕೆ ಕಾರಣ ‘ ನಾ ಕೋಳಿಕ್ಕೆರಂಗ’ ಸಿನಿಮಾ. ಹೌದು, ಮಾಸ್ಟರ್ ಆನಂದ್ ಈ ಸಿನಿಮಾದ ಹೀರೋ. ಇದೊಂದು ಹಳ್ಳಿ ಕಥೆ. ಸಿನಿಮಾದ ಶೀರ್ಷಿಕೆ ಹೇಳುವಂತೆ, ಕೋಳಿ ಹಾಗು ರಂಗನ ಕಥೆ. ಅದೊಂದು ಅಪರೂಪದ ಭಾವ ಸಂಗಮ. ಈ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 10 ರಂದು […]
ವಿಭಿನ್ನ ಹೆಸರಿನ ಮೂಲಕ ಗಮನ ಸೆಳೆಯುತ್ತಿರುವ ಕ್ಲಾಂತ ಸಿನಿಮಾದ ಟೀಸರ್ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಸಂಗೀತ ಭಟ್ ಕಂಬ್ಯಾಕ್ ಚಿತ್ರ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಟೀಸರ್ ಮೂಡಿ ಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಕ್ಲಾಂತ ಟೀಸರ್ ಇದ್ದು , ಸಂಗೀತ ಅವರ ನಟನೆ ಎಲ್ಲರ ಗಮನ ಸೆಳೆದಿದೆ. ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ […]
ಸಮಾಜ ಸೇವೆ, ರಾಜಕಾರಣ, ವಾಣಿಜ್ಯ ವ್ಯವಹಾರಗಳ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಯುವ ಪ್ರತಿಭೆ ಅಭಿ ರಾಣವ್. ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದವರು ಅಭಿ. ಪೂರ್ಣ ಪ್ರಮಾಣದ ಹೀರೋ ಆವಿ ಒನ್ ಕ್ರೋರ್, ಯಾಕೋ ಬೇಜಾರ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ವೆಸ್ಲಿ ಬ್ರೌನ್ ನಿರ್ದೇಶನದ ಬೆನ್ಜ್ ಲವ್ ಸ್ಟೋರಿ ಕೂಡಾ ನಿರ್ಮಾಣ ಹಂತದಲ್ಲಿದೆ… ಇವರ ತಂದೆ ಹೊಸಕೋಟೆಯಲ್ಲಿ ಹೆಸರಾಂತ ರಾಜಕಾರಣಿ. ತಮ್ಮದೇ ಉದ್ಯಮ ಹೊಂದಿದ್ದರೂ ಅಭಿ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಬೆಳೆದು ನಿಲ್ಲಬೇಕು […]
ದಿವ್ಯ ಉರುಡುಗ ಬಿಟ್ಟಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಬಿಗ್ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ಧಂಬರ್ಧ ಪ್ರೇಮಕಥೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್ಶೆಟ್ಟಿ, ರಿಶಬ್ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು […]
– ಇಂಡಸ್ ಹರ್ಬ್ಸ್ ನ ಟಿ ಸಿ ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದ್ದು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೇ ಚಿತ್ರ ತೇರ್ಗಡೆ ಹೊಂದಿದೆ. ಇದೇ ಅಕ್ಟೋಬರ್ 13 ರ ಶುಕ್ರವಾರ ಜಲಪಾತ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಹೆಸರಾಂತ ನಟ ಪ್ರಮೋದ್ ಶೆಟ್ಟಿ ಅವರು ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ […]
ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ, ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ “ಇನಾಮ್ದಾರ್ ” ಚಿತ್ರದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ.ಮಠ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು. ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ […]
ಸಿನಿಮಾರಂಗದ ಕೆಲವೊಂದು ವ್ಯವಸ್ಥೆ ಹಡಾಲೆದ್ದುಕೂತಿದೆ. ಅನುಭವವಿಲ್ಲದ ನಿರ್ಮಾಪಕ, ಪ್ಯಾಕೇಜ್ ಡೀಲು ಪಡೆದು ಕಾಸು ಮಾಡಲು ಹೊಂಚು ಹಾಕಿದ ಸಾಹಸ ನಿರ್ದೇಶಕ, ಎಲ್ಲೆಲ್ಲಿ ಎಷ್ಟೆಷ್ಟು ಕೀಳಬಹುದು ಅಂತಾ ಲೆಕ್ಕ ಹಾಕುವ ಮ್ಯಾನೇಜರು, ಛಾನ್ಸು ಸಿಕ್ಕಿದ್ದೇ ಬದುಕಿನ ಸಾಧನೆ ಅಂದುಕೊಂಡ ನಿರ್ದೇಶಕ… ಇವರೆಲ್ಲರ ನಡುವೆ ಬೆಂದು ಬಸವಳಿದ ಪುರಾತನ ಛಾಯಾಗ್ರಾಹಕ. ಸ್ವಲ್ಪವೇ ಯಾಮಾರಿದ್ದರೂ ಭಾರತೀಯ ಚಿತ್ರರಂಗದ ಹಿರಿಯ ಕಲಾವಿದ ಸೇರಿದಂತೆ ಕನ್ನಡದ ಇಬ್ಬರು ನಟರ ಹೆಣ ಉರುಳುತ್ತಿತ್ತು. ಅದಕ್ಕೆ ಕಾರಣವಾಗಿರೋದು, ʻದೇಸಾಯಿʼ ಎನ್ನುವ ಸಿನಿಮಾ ಮಾಡಲು ಒಟ್ಟಾಗಿರುವ ಕೆಲವು ಬೇಜವಾಬ್ದಾರಿ […]
ತೋತಾಪುರಿ ಭಾಗ ೨ ಬಿಡುಗಡೆಯಾಗಿದೆ. ಈ ಹಿಂದೆ ಮೊದಲ ಭಾಗ ಬಂದಿತ್ತು. ಒಂದು ವರ್ಗ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿತ್ತು. ಮತ್ತೊಂದು ವರ್ಗ ಇದರಲ್ಲಿ ಡಬಲ್ ಮೀನಿಂಗ್ ಮಾತುಗಳೇ ತುಂಬಿಕೊಂಡಿವೆ ಅಂತಾ ಬೇಸರ ಮಾಡಿಕೊಂಡಿತ್ತು. ಈಗ ಎರಡೂ ವರ್ಗದವರ ಮನಸ್ಸಿಗೆ ಒಪ್ಪುವ, ಕಾಡುವ, ಕಚಗುಳಿ ಇಡುವ ತೋತಾಪುರಿಯ ಎರಡನೇ ಭಾಗ ತೆರೆಗೆ ಬಂದಿದೆ. ತಮಾಷೆಯ ವಿಷಯಗಳನ್ನು ಹೇಳುತ್ತಲೇ ಗಂಭೀರ ವಿಚಾರಗಳನ್ನೂ ಇಲ್ಲಿ ಬಿಚ್ಚಿಡಲಾಗಿದೆ. ಬರಿಯ ಜಾತಿ ಮಾತ್ರವಲ್ಲ, ಧರ್ಮವನ್ನೂ ಮೀರಿದ್ದು ಪ್ರೀತಿ ಅನ್ನೋದು ಇಲ್ಲಿ ನಿರೂಪಿತಗೊಂಡಿದೆ. ಕಟ್ಟಕಡೆಯಲ್ಲಿ […]
ಮೊದಲೆಲ್ಲಾ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳು ತೆರೆಗೆ ಬರುತ್ತದೆ ಅಂದರೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತಿತ್ತು. ಬರಬರುತ್ತಾ ಯಾಕೋ ಗಣಿ ಸಿನಿಮಾಗಳು ಸದ್ದಡಗುತ್ತಿವೆಯಾ ಅಂತಾ ಸ್ವತಃ ಅವರ ಅಭಿಮಾನಿಗಳಿಗೇ ಅನ್ನಿಸಲು ಶುರುವಾಗಿದೆ. ಅದಕ್ಕೆ ಮುಖ್ಯ ಕಾರಣ ‘ಬಾನ ದಸರಿಯಲ್ಲಿ’ ಚಿತ್ರ. ಏನೇನೂ ಪ್ರಚಾರವಿಲ್ಲದ ಈ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಹಾಗೆ ನೋಡಿದರೆ ಬಾನ ದಾರಿಯಲ್ಲಿ ಗಣೇಶ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ. ಕಳೆದ ಎರಡು ವರ್ಷಗಳಿಂದ ಬಾನ ದಾರಿಯಲ್ಲಿ ಚಿತ್ರದ ಬಗ್ಗೆ ಗೋಲ್ಡನ್ ಸ್ಟಾರ್ ಸಾಕಷ್ಟು ಹೇಳಿಕೊಂಡಿದ್ದರು. […]