ತೀರಾ ಕೆಳವರ್ಗದಿಂದ ಹಂತ ಹಂತವಾಗಿ ಮೇಲೆ ಬಂದವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಈಗವರು ಸಿನಿಮಾ ನಿರ್ದೇಶಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ವಿಚಾರ ಅದಲ್ಲ…! ಇತ್ತೀಚೆಗೆ ಅವರದ್ದೇ ನಿರ್ದೇಶನದ ಮೊದಲ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮ್ಮ ಸಹಾಯಕನಿಂದ ಶೂ ಹಾಕಿಸಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ. ಕರೆಕ್ಟಾಗಿ ಅರ್ಜುನ್ ಜನ್ಯ ಹುಟ್ಟು ಹಬ್ಬದ ಸಂದರ್ಭದಲ್ಲೇ ಬಂದಿರುವ ಈ ವಿಡಿಯೋ ತುಣುಕನ್ನು ನೋಡಿದವರು ಜನ್ಯಾಗೆ ಸರಿಯಾಗೇ ಹ್ಯಾಪಿ ಬರ್ತಡೇ ಶುಭಾಶಯ ಹೇಳಿದ್ದಾರೆ. ʻಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ […]
ರವಿಚಂದ್ರನ್ ಅವರಿಗೆ ಶ್ರೇಷ್ಠತೆಯ ವ್ಯಸನವಿದೆಯಾ? ತಾವು ನಿರ್ದೇಶನ ಮಾಡಿದ್ದು ಮಾತ್ರ ಅತ್ಯದ್ಭುತ… ಬೇರೆಯವರ ಸಿನಿಮಾ ಅಂದರೆ ಇವರಿಗೆ ಅಸಡ್ಡೆಯಾ? ಹೌದು ಅಂತಾ ಅನ್ನಿಸಲು ಕಾರಣ ಅವರದ್ದೇ ಮಾತುಗಳು. ಬೇರೊಬ್ಬರ ಸಿನಿಮಾದಲ್ಲಿ ನಟಿಸುವ ಪ್ರತೀ ಸಂದರ್ಭದಲ್ಲೂ ರವಿಚಂದ್ರನ್ ಬೇಕಾಬಿಟ್ಟಿ ಮಾತಾಡಿಬಿಡುತ್ತಾರೆ. ಯಾವ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿರಿ ಅಂತಾ ಯಾವುದೇ ನಟನನ್ನು ಮೀಡಿಯಾದವರು ಪ್ರಶ್ನಿಸೋದು ಸಹಜ. ರವಿಚಂದ್ರನ್ ಅವರು ಒಪ್ಪಿದ್ದಾರೆ ಅಂದರೆ ಈ ಸಿನಿಮಾದಲ್ಲಿ ಏನೇ ವಿಶೇಷತೆಗಳಿರಬಹುದು, ಅದು ಏನೇನು ಅಂತಾ ತಳಿದುಕೊಳ್ಳೋದು ಮಾಧ್ಯಮದವರ ಲೆಕ್ಕಾಚಾರವಾಗಿರುತ್ತದೆ. ಹೀಗೆ ಕೇಳಿದ […]
ಮೊನ್ನೆ ತಾನೆ ಎಲೆಕ್ಷನ್ ಮುಗಿದು ರಿಸಲ್ಟೂ ಹೊರಬಂದಿದೆ. ಈ ಸಲದ ಚುನಾವಣೆಯಲ್ಲಿ ಸಾಕಷ್ಟು ನಟ-ನಟಿಯರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ʻಇವರು ನನ್ನ ಆತ್ಮೀಯರು. ಅದಕ್ಕಾಗಿ ಪ್ರಚಾರ ಮಾಡುತ್ತಿದ್ದೇನೆʼ ಅಂತಾ ಬಾಯಿಮಾತಿಗೆ ಹೇಳಿಕೊಂಡಿದ್ದಾರಾದರೂ, ಬಹುತೇಕರು ದಿನದ ಪೇಮೆಂಟು ಪಡೆದು ಕ್ಯಾನ್ವಾಸ್ ಮಾಡಿ ಬಂದವರೇ! ನಟ, ನಿರ್ದೇಶಕ, ಸಿನಿಮಾರಂಗದಲ್ಲಿ ಒಂದು ಪೀಳಿಗೆಗೆ ಗಾಡ್ ಫಾದರ್ ಅನ್ನಿಸಿಕೊಂಡಿರುವವರು ರಿಯಲ್ ಸ್ಟಾರ್ ಉಪೇಂದ್ರ. ಸಿನಿಮಾವಲಯದಲ್ಲಿ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವವರು. ಹಾಗೇನಾದರೂ ಸ್ನೇಹ, ಪ್ರೀತಿ, ವಿಶ್ವಾಸಕ್ಕೆ ಕಟ್ಟುಬಿದ್ದು ಪ್ರಚಾರಕ್ಕೆ ಹೋಗುವುದಿದ್ದರೆ, ಉಪೇಂದ್ರನ ಪ್ರಜಾಕೀಯಕ್ಕೇ ಎಲ್ಲರೂ […]
ಸಂಗೀತ ನಿರ್ದೇಶಕರಾಗಿ ವಿಪರೀತ ಅವಕಾಶ ಹೊಂದಿದ್ದವರು ವಿ. ಹರಿಕೃಷ್ಣ. ‘ಎಲ್ಲ ಬಿಟ್ಟ ಬಂಗಿ ನೆಟ್ಟ’ ಅನ್ನೋ ಮಾತಿದೆಯಲ್ಲಾ? ಹಾಗೆ ಹರಿಕೃಷ್ಣಂಗೆ ಡೈರೆಕ್ಟರ್ ಆಗಬೇಕು ಅನ್ನೋ ಹುಚ್ಚು ಅದ್ಯಾವ ಘಳಿಗೆಯಲ್ಲಿ ತಲೆಗೇರಿತೋ ಗೊತ್ತಿಲ್ಲ. ಮೊದಲು ನಿರ್ದೇಶಿಸಿದ್ದ ಅರ್ಧ ಸಿನಿಮಾ ಒಂದು ಮಟ್ಟಕ್ಕೆ ನಿರೀಕ್ಷೆ ಹುಟ್ಟಿಸಿತ್ತು. ಆ ನಂತರದ ಬಂದ ಸಿನಿಮಾವಂತೂ ಹರಿ ಮೇಲಿದ್ದ ನಂಬಿಕೆಯನ್ನು ನೀರಲ್ಲಿ ಹೋಮ ಮಾಡಿಸಿದೆ. ಈಗ ಹರಿಗೆ ಎರಡನೇ ಸಲ ಹುಚ್ಚು ಕೆದರಿಕೊಂಡಿತ್ತು. ಆದರೆ ನಿರ್ದೇಶಕನ ಸ್ಥಾನಕ್ಕೀತ ಅನ್ ಫಿಟ್ ಅನ್ನೋದು ಕೂಡಾ ಜಾಹೀರಾಗಿದೆ. […]
ಈ ಗುಳ್ಟು ಹುಡುಗ ನವೀನ್ ಶಂಕರ್ ತಲೆಗೆ ಯಾರಾದರೂ ನಾಲ್ಕು ಮೊಟಕೋರು ಬೇಕಲ್ಲಾ? ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋಕೆ ಈತನಿಗೇನು ಧಾಡಿ? ಹಾಳಾದೋನು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ಮೂರು ವರ್ಷ ಸತಾಯಿಸುತ್ತಾನೆ…. -ʻಹೊಂದಿಸಿ ಬರೆಯಿರಿʼ ಎನ್ನುವ ಫ್ರೆಷ್ ಸಿನಿಮಾ ನೋಡಿದ ಮೇಲೆ ಯಾರಿಗಾದರೂ ಹೀಗನ್ನಿಸದೇ ಇರೋದಿಲ್ಲ. ಅದರಲ್ಲೂ ನವೀನ್ ಶಂಕರ್ ಬರೋದು ತೀರಾ ಕಡಿಮೆ ಅನ್ನಿಸುವಷ್ಟು ಕಡಿಮೆ ದೃಶ್ಯಗಳಲ್ಲಿ. ಆದರೆ ಇಡೀ ಸಿನಿಮಾವನ್ನು ನುಂಗಿಕೊಳ್ಳುತ್ತಾರೆ. ಬೆಳ್ಳಗೂ ಇಲ್ಲ, ಬಾಡಿ ಬಿಲ್ಡ್ ಮಾಡಿಲ್ಲ, ಬಿಲ್ಡಪ್ಪಂತೂ ಇಲ್ಲವೇ ಇಲ್ಲ ಅನ್ನೋದು […]
ಅಭಿಶೇಕ್ ಅಂಬರೀಶ್ ಥರದ ಎಳೇ ಹುಡುಗರು, ಹರಿಪ್ರಿಯಾ-ವಸಿಷ್ಠ ಥರದ ಹಿರಿಯರು ಸೇರಿದಂತೆ ಅನೇಕರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ನಡುವಯಸ್ಸಿನ ರಾಜ್ ಶೆಟ್ಟಿಯಂಥವರು ಯಾವಾಗ ಮದುವೆಯಾಗುತ್ತಾರೆ? ದಿಢೀರ್ ಅಂತಾ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಅಚ್ಛರಿ ಮೂಡಿಸಿದವರು ರಾಜ್. ಬೋಳು ತಲೆಯ ಚಿತ್ರವಿದ್ದ ಒಂದು ಮೊಟ್ಟೆಯ ಕತೆ ಅನ್ನೋ ಸಿನಿಮಾದ ಪೋಸ್ಟರು ಗೋಡೆಗಳ ಮೇಲೆ ಕಾಣಿಸಿಕೊಂಡಾಗಲೇ ʻಇದ್ಯಾರಪ್ಪಾʼ ಅಂತಾ ಜನ ಆಶ್ಚರ್ಯಗೊಂಡಿದ್ದರು. ಅದೇ ಜನ ಇಷ್ಟ ಪಟ್ಟು ನೋಡಿ ಚಿತ್ರವನ್ನು ಗೆಲ್ಲಿಸಿದರು. ಆ ನಂತರ ರಾಜ್ ತಮ್ಮದೇ ಶೈಲಿಯ ಕೆಲವಾರು ಸಿನಿಮಾಗಳನ್ನು […]
ಅನಂತ್ ಕನ್ನಡ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅತ್ಯುತ್ಕೃಷ್ಟ ಕಲಾವಿದ. ಅವರಿಗೆ ಇನ್ನೂ ಪದ್ಮಶ್ರೀ ಬಂದಿಲ್ಲ ಅನ್ನೋದೇ ನಂಬಲಾಗದ ವಿಚಾರ. ಅನಂತ್ ನಾಗ್ ಕನ್ನಡ ಮಾತ್ರವಲ್ಲ ವಿಶ್ವದ ಶ್ರೇಷ್ಠ ನಟರ ಲಿಸ್ಟಗೆ ಸೇರುವ ಮಹಾನ್ ನಟ. ಪಾತ್ರ ಯಾವುದೇ ಆದರೂ ಅದರ ಆಳಕ್ಕಿಳಿದು ನಟಿಸುವ ಕಲಾವಿದ. ಕನ್ನಡದ ಮಟ್ಟಿಗೆ ʻಮೆಥೆಡ್ ಆಕ್ಟಿಂಗ್ʼ ಅನ್ನು ಮೈಗೂಡಿಸಿಕೊಂಡ ಅಪರೂಪ ಆಕ್ಟರ್. ಎಷ್ಟೋ ಪಾತ್ರಗಳನ್ನು ನಿರ್ದೇಶಕರು ಅನಂತ್ ನಾಗ್ ಅರನ್ನೇ ಗಮನದಲ್ಲಿಟ್ಟುಕೊಂಡು ಬರೆದುಕೊಂಡಿರುತ್ತಾರೆ. ಆದರೆ, ಆ ಎಲ್ಲ ಪಾತ್ರಗಳನ್ನೂ ಮಾಡಲು […]
ಇನ್ನೈದು ನಿಮಿಷದಲ್ಲಿ ಫೋನ್ ಎತ್ತಲಿಲ್ಲ ಎಂದರೆ ಗ್ರಹಚಾರ ಬಿಡಿಸುತ್ತೀನಿ ಮಗನೆ ಎಂದು ವಾರ್ನಿಂಗ್ ಕೊಟ್ಟೇ ಚಳಿ ಬಿಡಿಸಿದ್ದಾರೆ ಯೋಗರಾಜ್ ಭಟ್. ಅವರು ಜ಼ಡ್ ಕನ್ನಡದ ರಾಘು ಕುಣಸೂರು ಅವರಿಗೆ ಕಳೆದ 20 ದಿನಗಳಿಂದ ಫೋನ್ ಮಾಡುತ್ತಿದ್ದರಂತೆ. ರಾಘು ಎಂದಿನಂತೆ ನಾಟ್ ರೀಚಬಲ್. ಯಾವಾಗ ಅಷ್ಟು ದಿನವಾದರೂ ಫೋನ್ ಎತ್ತಲಿಲ್ಲವೋ, ಆಗ ಭಟ್ಟರ ತಲೆ ಕೆಟ್ಟಿದೆ. ತಲೆ ಕೆಟ್ಟ ಭಟ್ಟ ಯಬುಡಾ ತಬುಡಾ ಎಂದು ಅವರೇ ಬರೆದುಕೊಂಡಂತೆ, ಅವರೇ ರಾಘುಗೆ ಇನ್ನೊಂದು ವಾಯ್ಸ್ ರೆಕಾರ್ಡ್ ಬಿಟ್ಟಿದ್ದಾರೆ. ಅದರಲ್ಲಿ ಹಿಗ್ಗಾಮುಗ್ಗಾ […]
ಕಿಟ್ಟಿಗೆ ಮಾರ್ಕೆಟ್ ಇಲ್ಲ ಅಂತೇಳಿ ಬಹುತೇಕರು ಮೂಲೆಗೆ ತಿಳ್ಳಿಬಿಟ್ಟಿದ್ದರು. ಇದರ ನಡುವೆ ನನಗೆ ಕಿಟ್ಟೀನೇ ಬೇಕು ಅಂತಾ ಹಠ ಹಿಡಿದು, ಅವರನ್ನು ಕರೆತಂದು, ಅವರಿಗೊಪ್ಪುವ ಪಾತ್ರ ಮಾಡಿಸಿ, ಈಗ ವ್ಯಾಪಾರದಲ್ಲೂ ಗೆಲ್ಲುತ್ತಿರುವ ನಿರ್ದೇಶಕನ ಹೆಸರು ಸೂರಾ ಶ್ರೀನಗರ ಕಿಟ್ಟಿ ಅಂದರೆ ಯಾರು ಅನ್ನೋದನ್ನೇ ಹೆಚ್ಚೂಕಮ್ಮಿ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಮರೆತುಬಿಟ್ಟಿದ್ದರು. ಇಂತಿ ನಿನ್ನ ಪ್ರೀತಿಯ, ಸವಾರಿ, ಸಂಜು ವೆಡ್ಸ್ ಗೀತಾ ಎನ್ನುವ ಮೂರು ಸಿನಿಮಾಗಳನ್ನು ಹೊರತುಪಡಿಸಿ ಕಿಟ್ಟಿ ಹೀರೋ ಆಗಿ ನಟಿಸಿದ ಯಾವ ಸಿನಿಮಾಗಳೂ ತಲೆಯೆತ್ತಲಿಲ್ಲ. […]
ಬಹುತೇಕ ಹೆಣ್ಣುಮಕ್ಕಳ ವಿವಾಹ ನಂತರದ ಬದುಕಿಗೂ ಮುಂಚಿನದಕ್ಕೂ ವ್ಯತ್ಯಾಸಗಳಿರುತ್ತವೆ. ಬದುಕಲ್ಲಿ ಸಾಧನೆ ಮಾಡಬೇಕು, ನೊಂದವರಿಗೆ ಸಹಾಯ ಹಸ್ತ ಚಾಚಬೇಕು ಅಂದುಕೊಂಡವರೆಷ್ಟೋ ಜನ ಮದುವೆ ನಂತರ ಅವರದ್ದೇ ಜಂಜಾಟಗಳು, ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಸುನಿತಾ ಅವರ ಸುಕೃತವೋ ಏನೋ ಅವರ ಎಲ್ಲ ಕನಸುಗಳಿಗೆ ಬೆಳಕಾಗುವಂತೆ ಪತಿ ಮಂಜುನಾಥ್ ಅವರ ಬೆನ್ನೆಲುಬಾಗಿ ನಿಂತರು. ಬದುಕಲ್ಲಿ ಕಷ್ಟ ಕಂಡವರು ಮಾತ್ರ ಮತ್ತೊಬ್ಬರ ಕಣ್ಣೀರು ಒರೆಸಲು ಸಾಧ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿರುವ ದೊಡ್ಡಬಳ್ಳಾಪುರದಲ್ಲಿ ದೊಡ್ಡರಾಯಪ್ಪನಹಳ್ಳಿ ಎನ್ನುವ ಪುಟ್ಟ […]