ಒಬ್ಬ ರಾಜಕಾರಣಿ, ರಾಜಕೀಯ ಪಕ್ಷ, ಸಂಘಟನೆ, ಲೀಡರು – ಯಾವುದೇ ಆಗಲಿ, ಭದ್ರವಾಗಿ ತಲೆಯೆತ್ತಿ ನಿಲ್ಲಬೇಕೆಂದರೆ ಅದೆಷ್ಟು ಜನರ ಜೀವಗಳು ಪಾಯದ ಕಲ್ಲಾಗಿರುತ್ತವೋ? ಯಾರೆಲ್ಲಾ ಇಟ್ಟಿಗೆ, ಜೆಲ್ಲಿ, ಮರಳಾಗಿ, ಮಣ್ಣಲ್ಲಿ ಮಣ್ಣಾಗಿಬಿಟ್ಟಿರುತ್ತಾರೋ? ಪಂಥ ಅನ್ನೋದು ಎಡದ್ದಾಗಿರಲಿ, ಬಲದ್ದಾಗಿರಲಿ ಬಲಿ ಕೇಳೇ ಕೇಳುತ್ತದೆ! ʻಯಾವುದೇ ವಿಚಾರವನ್ನು ಅತಿಯಾಗಿ ವಿರೋಧಿಸುವುದು ಅಥವಾ ಪರ ವಹಿಸುವವರ ಅಂತಿಮ ಉದ್ದೇಶ ಲಾಭʼ ಅಂತಾ ಪಿ. ಲಂಕೇಶರು ಹೇಳಿದ್ದಾರೆ. ಹಾಗೆಯೇ ರಾಜಕಾರಣ, ಸ್ಥಾನ ಅಂತಾ ಬಂದಾಗ ಮನುಷ್ಯ ಪರಮ ಸ್ವಾರ್ಥಿಯಾಗಿಬಿಡುತ್ತಾನೆ. ಅದು ಯಾವ ಮಟ್ಟಕ್ಕೆ […]
ʻಪ್ರತೀ ಮೋಸ ಶುರುವಾಗೋದೇ ನಂಬಿಕೆಯಿಂದ!ʼ ಹೌದಲ್ವಾ? ಈ ಒಂದು ಸಾಲು ಎಷ್ಟೊಂದು ಅರ್ಥ ಕೊಡುತ್ತದಲ್ಲವಾ? ನಂಬಿಕೆ ಅನ್ನೋದು ಇಲ್ಲದಿದ್ದರೆ ಮೋಸ ಅನ್ನೋದು ಹುಟ್ಟೋದೇ ಇಲ್ಲ… ಇತ್ತೀಚೆಗಂತೂ ಸೋಷಿಯಲ್ ಮೀಡಿಯಾಗಳು ನಂಬಿಕೆಯ ಹೆಸರಲ್ಲಿ ಅದೆಷ್ಟು ಜನರ ಮಾನ, ಪ್ರಾಣಗಳನ್ನು ನುಂಗಿಕೊಂಡಿದೆಯೋ? ಜನ್ಮೇಪಿ ಒಬ್ಬರನ್ನೊಬ್ಬರು ನೋಡಿರೋದೇ ಇಲ್ಲ; ಜೊತೆಗೆ ಆಡಿ ಬೆಳೆದವರೂ ಅಲ್ಲ… ಆನ್ ಲೈನ್ನಲ್ಲಿ ಪರಿಚಯಗೊಂಡು, ಆತ್ಮೀಯತೆ ಬೆಳೆದು, ಒಬ್ಬರಿಗೊಬ್ಬರ ಅಸಲೀಯತ್ತು ತಿಳಿಯೋ ಹೊತ್ತಿಗೆ ಬದುಕೇ ಮುಗಿದು ಹೋಗಿರುತ್ತದೆ. ಇದು ತಂತ್ರಜ್ಞಾನದಿಂದ ಸೃಷ್ಟಿಯಾದ ಗಂಡಾಂತರ! ಇಂಥದ್ದೇ ಒಂದು ಕಥಾವಸ್ತುವನ್ನು […]
ಅದೊಂದು ಫ್ಯಾಮಿಲಿ. ಗಂಡ, ಹೆಂಡತಿ, ಇಬ್ಬರು ಮಕ್ಕಳು. ಕೆಲಸ ಕಾರ್ಯ ಇಲ್ಲದೆ, ಹುಡುಗಿಯ ಹಿಂದೆ ತಿರುಗುವ ತಿರುಬೋಕಿ ಮಗ. ನೆಟ್ಟಗೆ ಇಂಗ್ಲಿಷು ಬರದಿದ್ದರೂ, ತಾನು ಮಾತಾಡಿದ್ದೇ ಭಾಷೆ ಅಂದುಕೊಂಡು ಕೆಲಸ ಹುಡುಕುವ ಮಗಳು. ಸಣ್ಣದೊಂದು ಹೊಟೇಲು ಆರಂಭಿಸುವ ಉದ್ದೇಶದಿಂದ ಹೆಣಗಾಡುವ ಕಿಲಾಡಿ ಮಮ್ಮಿ. ಈ ಮನೆಗೊಬ್ಬ ಕುಡುಕ ತಂದೆ. ಅಸಲಿಗೆ ಅವನು ಏನು ಕೆಲಸ ಮಾಡುತ್ತಿದ್ದಾನೆ ಅನ್ನೋದೇ ಉಳಿದ ಮೂವರಿಗೆ ಗೊತ್ತಿರೋದಿಲ್ಲ. ವಿಲಕ್ಷಣ, ವಿಚಿತ್ರ ಮತ್ತು ಸ್ವಾರ್ಥವನ್ನಷ್ಟೇ ಮುಖ್ಯವಾಗಿಸಿಕೊಂಡ ಕುಟುಂಬ. ಒಟ್ಟಾರೆಯಾಗಿ `ಕಿತ್ತೋದ ಫ್ಯಾಮಿಲಿ’ ಅನ್ನಿಸಿಕೊಳ್ಳುವ ಎಲ್ಲ […]
ಅವನ ಬದುಕಿನಲ್ಲಿ ಅದೇನೇನಾಗಿರುತ್ತದೋ ಗೊತ್ತಿಲ್ಲ. ಸ್ವಂತಕ್ಕೊಂದು ಕ್ಯಾಬ್ ಇಟ್ಟುಕೊಂಡು ಡ್ರೈವರ್ ಕೆಲಸ ಮಾಡುತ್ತಿರುತ್ತಾನೆ. ಕಣ್ಣ ಸುತ್ತ ಕಪ್ಪು ಕವಿದಿರುತ್ತದೆ. ಇಸ್ತ್ರಿ ಇಲ್ಲದ ಬಟ್ಟೆ, ಬಾಡಿದ ಮುಖ, ಕಳಾಹೀನ ಕಣ್ಣುಗಳು. ಅವನನ್ನು ಕಂಡವರಿಗೆ ಬದುಕಿನಲ್ಲಿ ಏನೆಂದರೆ ಏನೂ ಉಳಿದಿಲ್ಲವೆನ್ನುವ ಭಾವ ಮೂಡುತ್ತದೆ. ಇದರ ಜೊತೆಗೆ ಟಿ.ಬಿ. ಕಾಯಿಲೆಯೂ ಮೈಗಂಟಿರುತ್ತದೆ. ಹಾಗಂತ ಇದು ಶೂನ್ಯಕ್ಕೆ ತಲುಪಿದವನ ಹಿನ್ನೆಲೆಯನ್ನು ಕೆದುಕುವ ಕಥೆಯಲ್ಲ. ಡ್ರೈವರ್ ರಾಘವ ವಾಸ್ತವ್ಯಕ್ಕಿರುವ ಬಿಲ್ಡಿಂಗಿಗೇ ಮತ್ತೊಬ್ಬಳು ಯುವತಿ ಬರುತ್ತಾಳೆ. ಇವಳ ಹಿನ್ನೆಲೆಯಲ್ಲಿ ಏನೇನು ಅಧ್ಯಾಯಗಳಿದ್ದವೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ […]
ಆ ಊರಿನ ಸಮಾರಂಭವೊಂದಕ್ಕೆ ಚೀಫ್ ಗೆಸ್ಟ್ ಆಗಿ ಸ್ಟಾರ್ ನಟ ಮೈಕೆಲ್ ಮಧು ಬರಬೇಕಿರುತ್ತದೆ. ಆದರೆ ಆತ ಅಚಾನಕ್ಕಾಗಿ ಇಹಲೋಕ ತ್ಯಜಿಸಿರುತ್ತಾನೆ. ಇನ್ನು ಅತಿಥಿಯನ್ನು ಕರೆಸಲು ಉಳಿದಿರುವ ಕಾಂಟ್ಯಾಕ್ಟು ಇರೋದು ಕೃಷ್ಣಪ್ಪನಿಗೆ ಮಾತ್ರ. ಆ ಊರಲ್ಲಿ ಮೂರು ಜನ ಕೃಷ್ಣಪ್ಪಗಳಿರುತ್ತಾರೆ. ಅದರಲ್ಲಿ ಮೂರನೇಯವನು ಗಣಿತದ ಮೇಷ್ಟ್ರು. ಈ ಥರ್ಡ್ ಕೃಷ್ಣಪ್ಪನ ಸ್ನೇಹಿತನ ಮೂಲಕ ಊರಿಗೆ ಚೀಫ್ ಮಿನಿಸ್ಟರ್ ಅನ್ನು ಕರೆಸುವ ಪ್ರಯತ್ನವಾಗುತ್ತದೆ. ಈ ಹಂತದಲ್ಲಿ ಏನೇನಾಗುತ್ತದೆ? ಯಾರೆಲ್ಲಾ ಮೋಸ ಹೋಗುತ್ತಾರ್. ಫ್ರಾಡ್ ಅನ್ನುವ ಹಣೆಪಟ್ಟಿ ಕಟ್ಟಿಸಿಕೊಂಡ ಕೃಷ್ಣಪ್ಪ […]
ನಾನು ಕೈಗೆ ತಗೊಂಡ ಕೇಸು ಗೆದ್ದೇಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಹೊಂದಿದ ಕ್ರೇಜಿ ಲಾಯರ್ ಅವರು. ಲಾಯರ್ ಗೋವಿಂದ ಮುಟ್ಟಿದ ಕೇಸೆಂದರೆ ಜಡ್ಜ್ಗಳಿಗೂ ಒಂಥರಾ ಕ್ಯೂರಿಯಾಸಿಟಿ. ಇಂಥ ಪಬ್ಲಿಕ್ ಪ್ರಾಸಿಕ್ಯೂಟರ್ ಅದೊಂದು ಮರ್ಡರ್ ಕೇಸನ್ನು ಕೈಗೆತ್ತಿಕೊಳ್ಳುತ್ತಾರೆ. ಅದು ಎನ್ ಜಿ ಓ ಕಾರ್ಯಕರ್ತೆಯೊಬ್ಬಳ ಕೊಲೆ ಪ್ರಕರಣ. ತಮ್ಮದೇ ಶೈಲಿಯಲ್ಲಿ ವಾದ ಮಂಡಿಸುತ್ತಾರೆ. ಆರೋಪಿಗೆ ಶಿಕ್ಷೆಯನ್ನೂ ಕೊಡಿಸುತ್ತಾರೆ. ಅಸಲಿಗೆ ಆತ ಕೊಲೆಯನ್ನು ಮಾಡಿರೋದೇ ಇಲ್ಲ. ಹಾಗೆ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗೋದೇ ನಾಯಕ ದಿಗಂತ್. ಮಾಡದ ಅಪರಾಧಕ್ಕಾಗಿ ಜೈಲಿಗೆ ಹೋದ […]
ಅದು ಇಂದಿರಾ ಯುಗ. ಭಾರತ ದೇಶವನ್ನು ಇಂದಿರಾಗಾಂಧಿ ಪ್ರಭಲವಾಗಿ ಆಳುತ್ತಿದ್ದ ಕಾಲ. ಆ ತನಕ ಇದ್ದ ಫ್ಯೂಡಲ್ ಪದ್ಧತಿಯನ್ನು ತೊಡೆದುಹಾಕಬೇಕು ಅಂತಾ ನಿರ್ಧರಿಸಿರುತ್ತಾರೆ. ಪ್ರತೀ ರಾಜ್ಯ, ಜಿಲ್ಲೆ, ಕೇರಿಗಳಲ್ಲಿ ಯುವಪಡೆಗಳನ್ನು ಕಟ್ಟೋದರಿಂದ ಮಾತ್ರ ಅದು ಸಾಧ್ಯ ಅನ್ನೋದು ಮೇಡಂ ಇಂದಿರಾ ನಿಲುವಾಗಿರುತ್ತದೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಅರಸು ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಯುವಕರು ಸಂಘಟಿತರಾಗುತ್ತಾರೆ. ಅದಕ್ಕಿಟ್ಟ ಹೆಸರು ಇಂದಿರಾ ಬ್ರಿಗೇಡ್.. ಈ ತಂಡದ ಲೀಡರ್ ಆಗಿ ಜಯರಾಜ್ ಅವರನ್ನು ನೇಮಿಸಲಾಗುತ್ತದೆ. ತೀರಾ ಸಣ್ಣ ವಯಸ್ಸಿಗೇ […]
ಸ್ನೇಹ ಮತ್ತು ಪ್ರೀತಿ ಇವೆರಡರ ನಡುವೆ ಬದುಕನ್ನು ಇಟ್ಟು, ಮೂರರಲ್ಲಿ ಯಾವುದು ಮುಖ್ಯ ಅಂತಾ ಕೇಳಿದರೆ ಹೇಗಿರುತ್ತೆ? ಅದಕ್ಕೆ ಉತ್ತರದಂತೆ ಮೂಡಿ ಬಂದಿರುವ ಸಿನಿಮಾ ದ ಚೆಕ್ ಮೇಟ್. ಅವರು ನಾಲ್ಕು ಜನ ಫ್ರೆಂಡ್ಸು. ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಪ್ರೇಮಪ್ರಕರಣಗಳು ಘಟಿಸಿರುತ್ತವೆ. ಆ ಪ್ರೀತಿ ಮುರಿದುಬಿದ್ದಿರುತ್ತವೆ. ಅದನ್ನು ಲವ್ ಬ್ರೇಕಪ್ ಪಾರ್ಟಿಯ ಮೂಲಕ ಆಚರಿಸಲು ನಾಲ್ವರೂ ಒಂದು ಸೇರಿರುತ್ತಾರೆ. ಜೊತೆ ಸೇರಿ ಪಾರ್ಟಿ ಮಾಡಲು ಮುಂದಾದವರು ಮತ್ತೊಂದು ಗ್ಯಾಂಗ್ ಜೊತೆ ಕಿತ್ತಾಡಿಕೊಳ್ಳುತ್ತಾರೆ. ಆ ಕಿತ್ತಾಟ, ಬಡಿದಾಟಗಳು ಪಾರ್ಟಿಯನ್ನು […]
ಕಷ್ಟಗಳೇ ನೀವೆಲ್ಲಿ ಖುಷಿಯು ಮನೆಯೆಲ್ಲಾ ತುಂಬಿರುವಾಗ ಪುಟ್ಟ ಮನೆಯಲ್ಲಿ ವಿಶಾಲವಾದ ಮನಸ್ಸಿರುವಾಗ ಸಮಯವೇ ಸಂಪತ್ತು. ಸಹನೆಯೇ ಸಾಕತ್ತು ಇದು ನಮ್ಮ ಅರ್ಜುನನ ಕಥೆ ಮಾತ್ರವಲ್ಲ, ಪ್ರತಿ ಮನೆಯ ಮನಸ್ಸಿನ ಕಥೆ ಇದು ಅರ್ಜುನ ಸನ್ಯಾಸಿ ಚಿತ್ರದ ಕಟ್ಟ ಕಡೆಯಲ್ಲಿ ಕಾಣಿಸಿಕೊಳ್ಳುವ ಸಾಲುಗಳು. ಈ ಸಾಲುಗಳಿಗೆ ಅನ್ವರ್ಥದಂತೆ ಮೂಡಿಬಂದಿರುವ ಸಿನಿಮಾ ಅರ್ಜುನ ಸನ್ಯಾಸಿ. ಚಿತ್ರದ ಹೆಸರು ಅರ್ಜುನ ಸನ್ಯಾಸಿ ಅಂತಿದೆ ನಿಜ. ಹಾಗಂತ ಇದು ಸನ್ಯಾಸಿಯೊಬ್ಬನ ಲೈಫ್ ಸ್ಟೋರಿ ಅಲ್ಲ. ಇವತ್ತಿನ ಜನಗರದ ಜೀವನ ಮದುವೆಯಾಗಿದ್ದವರನ್ನೂ ಅವರವರದ್ದೇ ಖಾಸಗೀ […]
ಅವನೊಬ್ಬ ರಾಜ. ಸಮೃದ್ಧವಾದ ರಾಜ್ಯ. ಅವನ ಖುಷಿಯೇ ತಮ್ಮ ಖುಷಿ ಅಂತಾ ಭಾವಿಸಿದ ಜನರು. ಎಲ್ಲವೂ ಇದ್ದ ಆ ರಾಜನಿಗೆ ಕೊರತೆ ಅಂತಾ ಇದ್ದಿದ್ದು ಒಂದೇ. ಅದು ನೆಮ್ಮದಿ. ನಾಲ್ಕಾರು ದೇವಸ್ಥಾನ ತಿರುಗಿ, ಹತ್ತಾರು ದೀಪಸ್ನಾನ ಮಾಡಿದ. ದೇವರಿಗೆ ತುಲಾಭಾರ, ಪಿತೃಗಳಿಗೆ ಪಿಂಡ ಇಟ್ಟರೂ ರಾಜನ ಕಣ್ಣಿಗೆ ನೆಮ್ಮದಿಯ ನಿದ್ರೆ, ಮನಸ್ಸಿಗೆ ಶಾಂತಿ ಮಾತ್ರ ಸಿಗೋಗಲೇಇಲ್ಲ. ನೆಮ್ಮದಿಯನ್ನು ಅರಸಿ ಹೋದ ರಾಜನಿಗೆ ಅದೊಂದು ದಿನ ಭೂತಾರಾಧಕರು ಸಿಗುತ್ತಾರೆ. ನನ್ನ ಕೂಗು ಎಲ್ಲಿಯವರೆಗೆ ಕೇಳಿಸುತ್ತದೋ ಅಲ್ಲಿಯವರೆಗೆ ಜಾಗವನ್ನು ಕಾಡಿನ […]