ಗಿಣಿ ಹೇಳಿದ ಕಥೆ: ನೀವು ನೋಡಲೇ ಬೇಕೆಂಬುದಕ್ಕೆ ಕಾರಣ ಬಹಳಷ್ಟಿದೆ!

Picture of Cinibuzz

Cinibuzz

Bureau Report


ಕನ್ನಡ ಪ್ರೇಕ್ಷಕರು ಹೊಸಾ ಆಲೋಚನಾ ಕ್ರಮವನ್ನು, ಹೊಸಾ ಅಲೆಯ ಚಿತ್ರಗಳನ್ನು ಅಡಿಗಡಿಗೆ ಗೆಲ್ಲಿಸುತ್ತಲೇ ಬಂದಿದ್ದಾರೆ. ಈವತ್ತಿಗೆ ಚಿತ್ರರಂಗ ಹೊಸತನದಿಂದ ಹೊಳೆಯುತ್ತಿದೆಯೆಂದರೆ ಅದಕ್ಕೆ ಇಂಥಾ ಮನಸ್ಥಿತಿಯೂ ಮೂಲ ಕಾರಣ. ಅದೇ ಸ್ಫೂರ್ತಿಯಿಂದ ತಯಾರಾಗಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರ ಗಿಣಿ ಹೇಳಿದ ಕಥೆ!

ದೇವ್ ನಿರ್ಮಾಣ ಮಾಡಿ, ನಾಯಕನಾಗಿಯೂ ನಟಿಸಿರೋ ಈ ಸಿನಿಮಾವನ್ನ ನಾಗರಾಜ್ ಉಪ್ಪುಂದ ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಚಿತ್ರವಾದರೂ ಅದನ್ನು ಯಾಕೆ ನೋಡ ಬೇಕು ಅಂತೊಂದು ಪ್ರಶ್ನೆ ಪ್ರೇಕ್ಷಕರಲ್ಲಿ ಹುಟ್ಟುತ್ತೆ. ಗಿಣಿ ಹೇಳಿದ ಕಥೆಯ ವಿಚಾರದಲ್ಲಿ ನೀವೆಲ್ಲರೂ ಯಾಕೆ ಈ ಸಿನಿಮಾವನ್ನು ನೋಡಲೇ ಬೇಕು ಎಂಬುದಕ್ಕೆ ಹಲವಾರು ಕಾರಣಗಳಿದ್ದಾವೆ!

ಎಲ್ಲರಿಗೂ ಗೊತ್ತಿರುವಂತೆ ಇದು ರಂಗಭೂಮಿ ಪ್ರತಿಭೆಗಳೇ ಸೇರಿಕೊಂಡು ರೂಪಿಸಿರುವ ಚಿತ್ರ. ಕಥೆಯನ್ನೂ ಮಂಕು ಮಾಡುವಂಥಾ ಬಿಲ್ಡಪ್ಪು, ವಿಜೃಂಭಣೆಗಳಿಂದ ಈ ಸಿನಿಮಾ ಸಂಪೂರ್ಣ ಮುಕ್ತ. ಆದರೆ ಸಿದ್ಧ ಸೂತ್ರಗಳ ಚಿತ್ರಗಳಲ್ಲಿಯೂ ಸಿಗದಂಥಾ ಭರ್ಜರಿ ಮನರಂಜನೆ ಇಲ್ಲಿ ಖಾಯಂ. ಯಾಕೆಂದರೆ ಇದರ ಉದ್ದೇಶವೇ ಮನೋರಂಜನೆ. ಕನ್ನಡಕ್ಕೆ ಫ್ರೆಶ್ ಅನ್ನಿಸುವಂಥಾ ಕಥೆ ಮತ್ತು ಪ್ರತೀ ಸೀನುಗಳಲ್ಲಿಯೂ ಅಂಥಾದ್ದೇ ತಾಜಾತನ ಇರಬೇಕೆಂಬ ಹಂಬಲದಿಂದಲೇ ಈ ಚಿತ್ರ ರೂಪುಗೊಂಡಿದೆ.

ಗಂಭೀರ ವಿಚಾರಗಳನ್ನೂ ಕೂಡಾ ಲಘುವಾಗಿಯೇ ದಾಟಿಸೋ ಈ ಚಿತ್ರದಲ್ಲಿ ಮಧುರವಾದ ಲವ್ ಸ್ಟೋರಿಯಿದೆ. ಮನಮಿಡಿಯುವ ದೃಷ್ಯಾವಳಿಗಳೂ ಇವೆ. ಇಂಥಾ ಭಿನ್ನ ಬಗೆಯ ಸುಂದರ ಅನುಭೂತಿ ಪಡೆಯಲು ಖಂಡಿತಾ ಈ ಚಿತ್ರವನ್ನು ನೋಡಲೇ ಬೇಕಿದೆ. ಈ ಮೂಲಕ ವಿಭಿನ್ನ ಪ್ರಯತ್ನವೊಂದಕ್ಕೆ ಪ್ರೋತ್ಸಾಹ ನೀಡ ಬೇಕಿದೆ.

#

ಇನ್ನಷ್ಟು ಓದಿರಿ

Scroll to Top