ಈಗ ದೇಶಾದಂತ ಮೀಟೂ ಅಭಿಯಾನವೊಂದು ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಗುರಿಯಿಟ್ಟಿರೋ ಈ ಹೋರಾಟ ಗೌರವಿಸುವಂಥಾದದ್ದೇ. ಆದರೆ ಇದೀಗ ಈ ಅಭಿಯಾನ ಕಹಳತಪ್ಪಿದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಕೆಲ ನಟಿಯರು ಮೀಟೂ ಆರೋಪ ಮಾಡೋ ಮೂಲಕ ಯಾರದ್ದೋ ಮಾನ ಹರಾಜು ಹಾಕಿ ತಾವು ಪ್ರಚಾರ ಗಿಟ್ಟಿಸಿಕೊಳ್ಳುವ ಖಯಾಲಿ ಆರಂಭಿಸಿದ್ದಾರೆ. ಈ ಕಾಯಿಲೆ ಬಾಲಿವುಡ್ನಲ್ಲಿಯೂ ಇದೆ. ಈಗ ಸ್ಯಾಂಡಲ್ವುಡ್ಡಿಗೂ ಅಮರಿಕೊಂಡಿದೆ! ಈ ಕಾಯಿಲೆ ಸ್ಯಾಂಡಲ್ವುಡ್ಡಿಗೂ ಕಾಲಿಟ್ಟಿದ್ದರ ಸೂಚನೆ ಎಂಬಂತೆ ನಟಿ ಶ್ರುತಿ ಹರಿಹರನ್ ಅರ್ಜುನ್ […]
ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳ ಅಲೆಯಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಂಡಿರೋ ಚಿತ್ರ ರುದ್ರಾಕ್ಷಿಪುರ. ಹೆಸರಲ್ಲೇ ಒಂಥರಾ ರಹಸ್ಯ ಬಚ್ಚಿಟ್ಟುಕೊಂಡಿರೋ ಈ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ ಎಂಬುದಷ್ಟೇ ಈವರೆಗೆ ಬಯಲಾಗಿರೋ ಅಂಶ. ಇದನ್ನು ಹೊರತಾಗಿಸಿ ಮತ್ತೆಲ್ಲವನ್ನೂ ನಿಗೂಢವಾಗಿಟ್ಟಿರೋ ನಿರ್ದೇಶಕ ಈಶ್ವರ್ ಪೋಲಂಕಿ ಪಾಲಿಗಿದು ಮೊದಲ ಕನಸು! ಶಿಲ್ಪಿಯೂ ಆಗಿರುವ ನಾಗರಾಜ್ ಮುರುಡೇಶ್ವರ್ ನಿರ್ಮಾಣದ ಚಿತ್ರ ರುದ್ರಾಕ್ಷಿಪುರ. ದಾವಣಗೆರೆಯ ಹುಡುಗ ಅರ್ಜುನ್ ಸಹಾನ್ ಮತ್ತು ರೂಪಿಕ ಈ ಚಿತ್ರದಲ್ಲಿ ನಾಯಕ, ನಾಯಕಿಯರಾಗಿ ಅಭಿನಯಿಸಿದ್ದಾರೆ. ರವಿ ಚೇತನ್ ವಿಲನ್ ಆಗಿ ಆರ್ಭಟಿಸಿದ್ದಾರೆ. ಥ್ರಿಲ್ಲರ್ […]
ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ. ಆದರೆ ವಿಲನ್ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆಮಿ ಜಾಕ್ಸನ್ ಎಂಬ ಅವಿವೇಕಿಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿಲ್ಲ! ವಿಲನ್ ಚಿತ್ರ ತೆರೆಕಾಣುತ್ತಿರೋ ವಿಷಯವೊಮದನ್ನು ಅರ್ಥ ಮಾಡಿಕೊಂಡಿರುವ ಲಂಡನ್ ರಾಣಿ ಆಮಿ ಟ್ವಟರ್ ಮೂಲಕ ಕಾಟಾಚಾರಕ್ಕೊಂದು ವಿಶ್ ಮಾಡಿದ್ದಾಳೆ. ತಾನೇ ನಟಿಸಿದ ಚಿತ್ರದ […]
ಸುಪ್ರೀಂ ಕೋರ್ಟ್ ಅಯ್ಯಪ್ಪ ಸ್ವಾಮಿ ದೇವಳದ ಬಗ್ಗೆ ನೀಡಿರೋ ತೀರ್ಪೊಂದು ಈಗ ವಿವಾದದ ಕೇಂದ್ರರ ಬಿಂದುವಾಗಿದೆ. ಒಂದು ವಲಯದ ಮಂದಿಯನ್ನು, ಸಂಘಟನೆಗಳನ್ನು ಕೆರಳಿಸಿದೆ. ದೇವಳದೊಳಗೆ ಮಹಿಳೆಯರೇನಾದರೂ ಪ್ರವೇಶ ಮಾಡಿದರೆ ಎಲ್ಲ ಧಾರ್ಮಿಕ ವಿಧಿ ವಿಧಾನದಿಂದ ದೂರವಿರೋದಾಗಿ ಪಂದಳ ಮನೆತನದ ಮಂದಿಯೂ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲದರ ನಡುವೆಯೂ ಅಯ್ಯಪ್ಪನ ಮಾಲೆ ಧರಿಸಿ ಪೊಲೀಸ್ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡದವಳು ರೆಹಾನಾ ಫಾತಿಮಾ! cinibuzzಅನ್ನು ಇನಸ್ ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ https://www.instagram.com/cinibuzzsandalwood/?fbclid=IwAR2Y-mLeHQy5S4BVSEErCUaOzCJf6y9DFpJUAkQqrVIX0NhgN75gxHQcQ_0 ಈಕೆ ವರ್ಷಾಂತಗಳ ಹಿಂದೆ ಕೇರಳದಲ್ಲಿ ಕಿಸ್ ಆಫ್ […]
ದಿ ವಿಲನ್: ಎಲ್ಲ ರಸಗಳನ್ನೂ ಬೆರೆಸಿ ತಯಾರಿಸಿದ ಪ್ರೇಮ್ಮೇಡ್ ಕಷಾಯ! ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಥೇಟು ಗಜಪ್ರಸವದ ಮಾದರಿಯಲ್ಲಿಯೇ ಕಡೆಗೂ ಬಿಡುಗಡೆಯಾಗಿದೆ. ಒಂದು ಚಿತ್ರ ಆರಂಭಿಸಿದರೆಂದರೆ ಮೊದಲು ಪ್ರಚಾರ ಆಮೇಲೆ ಕೆಲಸ ಎಂಬ ಸೂತ್ರವನ್ನೇ ನೆಚ್ಚಿಕೊಂಡು ಬಂದಿರೋ ಪ್ರೇಮ್ ಈ ಚಿತ್ರದಲ್ಲಿಯೂ ಅದನ್ನೇ ಮುಂದುವರೆಸಿದ್ದರು. ಆದರೆ ಪ್ರೇಕ್ಷಕರ ಅಸಹನೆಯನ್ನೂ ಕಡೇ ಘಳಿಗೆಯಲ್ಲಿ ಕೊತ ಕೊತನೆ ಕುಡಿಯುವ ಕುತೂಹಲವಾಗಿಸಿದ್ದ ಪ್ರೇಮ್ ಜಾಣ್ಮೆ ಎಂಬುದರಲ್ಲಿ ಎರಡು ಮಾತಿಲ್ಲ. ಸುದೀಪ್ ಮತ್ತು ಶಿವಣ್ಣ ಈ ಇಬ್ಬರಲ್ಲಿ ಯಾರು ರಾಮ ಮತ್ತು […]
ಮತ್ತೆ ಮತ್ತೆ ಕೇಳುವಂಥಾ ಮೋಹಕ ಹಾಡುಗಳು ನಿರ್ದೇಶಕ ಕಿರಣ್ ಗೋವಿಯವರ ಟ್ರೇಡ್ ಮಾರ್ಕ್ ಇದ್ದಂತೆ. ಅವರು ನಿರ್ದೇಶಿಸಿರೋ ಯಾರಿಗೆ ಯಾರುಂಟು ಚಿತ್ರದ ಮೂಲಕ ಅದು ಯಥಾಪ್ರಕಾರವಾಗಿ ಮುಂದುವರೆದಿದೆ. ಮೆಲೋಡಿಯಸ್ ಹಾಡುಗಳ ಮೂಲಕವೇ ಕೌತುಕದ ತರಂಗಗಳನ್ನೆಬ್ಬಿಸಿರೋ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರಲ್ಲಾ? ಆ ಪೈಕಿ ಒಬ್ಬರಾಗಿ ಅದ್ಭುತವಾದೊಂದು ಪಾತ್ರಕ್ಕೆ ಜೀವ ತುಂಬಿದ ಖುಷಿಯಲ್ಲಿರುವವರು ಅದಿತಿ ರಾವ್. ಅಪ್ಪಟ ಬೆಂಗಳೂರಿನ ಕನ್ನಡತಿ ಅದಿತಿ ರಾವ್ ಅವರ ಒರಿಜಿನಲ್ ಹೆಸರು ಮೇಘನಾ. ಅದೇ ಹೆಸರಲ್ಲಿ ಆರಂಭ ಕಾಲದಲ್ಲಿ ಧಾರಾವಾಹಿಗಳಲ್ಲಿ ನಟಿಸಲಾರಂಭಿಸಿದ್ದ ಅವರು […]
ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ. ಅವರೀಗ ಶಿವಣ್ಣ ಮುಖ್ಯ ಭೂಮಿಕೆಯಲ್ಲಿರೋ ರುಸ್ತುಂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ತಾರೆಯರ ದಂಡು ನೆರೆಯುವಂತೆಯೂ ಮಾಡುತ್ತಿದ್ದಾರೆ! ಬಾಲಿವುಡ್ ನಟ ವಿವೇಕ್ ಒಬೇರಾಯ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರೋದು ಗೊತ್ತಿರೋ ವಿಚಾರವೇ. ಇದೀಗ ರುಸ್ತುಂ ಅಡ್ಡೆಗೆ ಮತ್ತೋರ್ವ ಬಾಲಿವುಡ್ ನಟಿಯ ಆಗಮನವಾಗಿದೆ. ಹಾಗೆ ಬಂದವಳು […]
ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ ಚಿತ್ರರಂಗದ ಖದರ್ ಮಾತ್ರ ಇದ್ಯಾವುದರ ಗೊಡವೆಯೂ ಇಲ್ಲದೆ ಗಡಿ ದಾಟಿಕೊಂಡು ಬೇರೆ ಭಾಷೆಗಳಿಗೂ ಪಸರಿಸಿದೆ. ಅಲ್ಲಿನವರನ್ನೂ ಪ್ರಭಾವಿಸಿದೆ! ಈ ಮಾತಿಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಯುವ ನಟ ಶ್ರೇಯಸ್ ತಲ್ಪಡೆ ಹಂಚಿಕೊಂಡಿರೋ ವಿಚಾರಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ! ಶ್ರೇಯಸ್ ಡಾ. ರಾಜ್ಕುಮಾರ್ ಅವರ ಅಭಿಮಾನಿ. ಇದುವರೆಗೂ […]
ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷದಿಂದೀಚೆಗೆ ಒಂದಿಷ್ಟೂ ಬಿಡುವಿಲ್ಲದಂತೆ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೈಲಿ ಇನ್ನೂ ಒಂದೆರಡು ಚಿತ್ರಗಳು ಬಾಕಿ ಇರುವಾಗಲೇ ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿಯೂ ಹೊರ ಬಿದ್ದಿತ್ತು. ಆದರೆ ಎಲ್ಲ ತಯಾರಿ ಮುಗಿದರೂ ಟೈಟಲ್ ಮಾತ್ರ ಪಕ್ಕಾ ಆಗಿರಲಿಲ್ಲ. ಆದರೀಗ ತರುಣ್ ಸುಧೀರ್ ಈ ಚಿತ್ರಕ್ಕೆ ಟೈಟಲ್ ಹುಡುಕಿದ್ದಾರೆ. ಈ ಚಿತ್ರಕ್ಕೆ ‘ರಾಬರ್ಟ್’ ಎಂಬ ಶೀರ್ಷಿಕೆ ನಿಗಧಿಯಾಗಿದೆ! ಈ ಹಿಂದೆ ತರುಣ್ ಸುಧೀರ್ ಚೌಕ ಎಂಬ ಚಿತ್ರ ನಿರ್ದೇಶನ ಮಾಡಿದ್ದರಲ್ಲಾ? ಅದರ ಒಟ್ಟಾರೆ […]
ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಯಾವಾಗ ಚಿತ್ರೀಕರಣ ಆರಂಭವಾಯ್ತೋ ಆ ಘಳಿಗೆಯಿಂದಲೇ ಸದಾ ಸುದ್ದಿಯಲ್ಲಿರುವ ಈ ಚಿತ್ರವೀಗ ಬೇರೆ ಬೇರೆ ಭಾಷೆಗಳ ಚಿತ್ರರಂಗವನ್ನೂ ತನ್ನತ್ತ ಸೆಳೆದಿದೆ. ಇನ್ನು, ದರ್ಶನ್ ಸೋದರಳಿಯ ಮನೋಜ್ ನಟಿಸುತ್ತಿರುವ ‘ಟಕ್ಕರ್’ಗೆ ನಾಲ್ಕೈದು ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಈ ಎರಡೂ ಸಿನಿಮಾಗಳಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಡಬ್ಬಿಂಗ್ ರೈಟ್ಸ್ಗಾಗಿ ಪೈಪೋಟಿ ಆರಂಭವಾಗಿದೆ! ವಿಶೇಷವೆಂದರೆ ಈ ಎರಡೂ ಸಿನಿಮಾಗಳ ಫಸ್ಟ್ ಲುಕ್ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಅದು ಒಟ್ಟಾರೆ ಚಿತ್ರದ ಅದ್ದೂರಿತನಕ್ಕೂ […]