ರವಿ ಬೆಳಗೆರೆ. ಈ ಹೆಸರು ಕನ್ನಡ ಪತ್ರಿಕಾ ರಂಗವನ್ನು ಆವರಿಸಿಕೊಂಡು ಗಡಿಯ ಗೊಡವೆಯಿಲ್ಲದೆ ಹರಡಿಕೊಂಡಿರುವ ರೀತಿಯೇ ಅದ್ಭುತ. ದಿಕ್ಕಿಲ್ಲದ ಜೀವಗಳಿಗೆ, ದಿಕ್ಕೆಟ್ಟ ಮನಸುಗಳಿಗೆ ಭರವಸೆಯ ಟಾನಿಕ್ಕು ಹನಿಸುತ್ತಲೇ ಅಕ್ಷರ ಜಗತ್ತನ್ನ ಆವರಿಸಿಕೊಂಡಿರುವ ಬೆಳಗೆರೆ ಈವತ್ತು ಎಲ್ಲರನ್ನೂ ಅಗಲಿದ್ದಾರೆ… ಬಹುಶಃ ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ಅಕ್ಷರ ಸಾಂಗತ್ಯದಲ್ಲಿ ಬೆಳಗೆರೆ ಪ್ರಭಾವಿಸದ ಕ್ಷೇತ್ರಗಳೇ ಇಲ್ಲವೇನೋ. ಹಾಗಿರುವಾಗ ಚಿತ್ರರಂಗ ಅದರಿಂದ ಹೊರಗುಳಿಯಲು ಸಾಧ್ಯವಿಲ್ಲ. ಚಿತ್ರರಂಗದ ಘಟಾನುಘಟಿಗಳೊಂದಿಗೆ ನಿಕಟ ನಂಟು ಹೊಂದಿರುವ ಬೆಳಗೆರೆಯವರು ಒಂದಷ್ಟು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಆಯಾ […]
ಜ಼ೀ ವಾಹಿನಿಯಲ್ಲಿ ‘ಮಹಾನಾಯಕ ಅಂಬೇಡ್ಕರ್’ ಹೆಸರಿನ ಧಾರಾವಾಹಿ ಪ್ರಸಾರವಾಗುತ್ತಿದೆ. ದಾದಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕನ್ನು ಪುಸ್ತಕಗಳ ಮೂಲಕ ತಿಳಿದುಕೊಳ್ಳಬೇಕಿತ್ತು. ಇವರ ಕುರಿತ ಕೆಲವಾರು ಸಿನಿಮಾಗಳು ಬಂದಿವೆಯಾದರೂ ಅಂಬೇಡ್ಕರರ ಬದುಕಿನ ಎಲ್ಲ ವಿವರಗಳನ್ನು ಆ ಸಿನಿಮಾಗಳು ಒಳಗೊಂಡಿಲ್ಲ. ಈ ನಿಟ್ಟಿನಲ್ಲಿ ಈ ಮೇರು ವ್ಯಕ್ತಿಯ ಲೈಫ್ ಸ್ಟೋರಿಯನ್ನು ದೃಶ್ಯರೂಪದಲ್ಲಿ ಕಾಣುವುದು ಯಾರಿಗಾದರೂ ಕುತೂಹಲದ ವಿಚಾರವೇ. ಇದೀಗ ಹಿಂದಿಯಿಂದ ಡಬ್ ಆಗಿ ಕನ್ನಡಲ್ಲೂ ಟೆಲಿಕಾಸ್ಟ್ ಆಗುತ್ತಿರುವ ‘ಮಹಾನಾಯಕ ಅಂಬೇಡ್ಕರ್’ ಧಾರಾವಾಹಿಯ ಕುರಿತಾಗಿ ಸಾಕಷ್ಟು ಅಭಿಪ್ರಾಯಗಳು ಕೇಳಿಬರುತ್ತಿವೆ. […]
ಅಂಬರೀಶ್ ಬದುಕಿದ್ದಾಗ ಬಯಸಿದ್ದು ಈಡೇರಲಿಲ್ಲ. ಕೊನೇ ಪಕ್ಷ ಈಗಲಾದರೂ ಈ ಇಬ್ಬರೂ ನಟರು ಒಂದಾಗಿ ನಿಂತು ರೆಬೆಲ್ ಸ್ಟಾರ್ ಕನಸನ್ನು ಈಡೇರಿಸುತ್ತಾರಾ? ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ನಾಲ್ಕು ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ. ಒಂದು ವೇಳೆ ರೆಬೆಲ್ ಸ್ಟಾರ್ ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ […]
ಪುಟ್ಟಣ್ಣ ಕಣಗಾಲರ `ನಾಗರಹಾವು’ ಚಿತ್ರದ ಜಲೀಲ್ ಪಾತ್ರದ ಆ ರೆಬೆಲ್ತನವೇ ಅವರ ನಿಜವಾದ ಗುಣವಾಗಿತ್ತು. ಇಲ್ಲಿಯವರೆಗೆ ನೂರಾರು ಸಿನೆಮಾಗಳಲ್ಲಿ ನಟಿಸಿರುವ, ಕಡೆಯವರೆಗೂ ನಟನೆಯ ಸಂಗದಲ್ಲಿಯೇ ಇದ್ದ ಅಂಬರೀಷ್, ಯಾವುದನ್ನೂ ಮನಸ್ಸಿಟ್ಟು ಮಾಡಿದವರಲ್ಲ. ಸಿನೆಮಾ ಜಗತ್ತಿನಲ್ಲೊಂದು ಅಲಿಖಿತ ನಿಯಮವಿದೆ. ನಾಯಕನಟ ತನ್ನ ವರ್ಚಸ್ಸು ಕಳೆದುಕೊಂಡರೆ, ಜನಪ್ರಿಯತೆ ಕುಗ್ಗಿದರೆ, ವಯಸ್ಸಾದರೆ ಹೊಸಬರಿಗೆ ದಾರಿ ಮಾಡಿಕೊಟ್ಟು, ತಾನು ಹಿಂದಕ್ಕೆ ಸರಿಯುತ್ತಾನೆ. ಅಥವಾ ಆ ಕಾಲವೇ ಆತನನ್ನು ನೇಪಥ್ಯಕ್ಕೆ ನೂಕುತ್ತದೆ. ಅಂಬರೀಷ್, ತಾವು ಸಿನೆಮಾ ರಂಗಕ್ಕೆ ಬರುವಾಗ, ವಯಸ್ಸಾದವರನ್ನು ಹಿಂದಕ್ಕೆ ಸರಿಸಿ, ತಮಗೆ […]
ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ… ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ. ಜನತೆಯ ಪರವಾಗಿ ಧನ್ಯವಾದಗಳು. ಈಗೀಗ ಹಲವಾರು ಮಾಧ್ಯಮದ ನೌಕರರು ಪತ್ರಕರ್ತರಿಗೆ ಕರೋನಾ ಪಾಸಿಟಿವ್ ಎಂಬ ಸುದ್ದಿಗಳಿವೆ. ಇಡೀ ಜಗತ್ತೇ ಕರೋನಾ ಕಾಲಘಟ್ಟದಲಿ ಹೀಗೀಗಿರಬೇಕು ಎಂದು ಜಾಗೃತಿ ಮೂಡಿಸಿರುವ ನೀವುಗಳು ಈಗ ಮತ್ತೆ ಸತ್ಯ ಸಂಧರಾಗುವ ಸದವಕಾಶ ಬಂದಿದೆ. ನಿಮ್ಮ ಕಛೇರಿಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ನಿಭಾಯಿಸುತ್ತಿದ್ದೀರಾ? ಮೇಂಟೇನ್ ಮಾಡಿದ್ದೇ ಆದರೆ, ಹೇಗೆ ಅಂತಾ ಒಂದರ್ಧ […]
ಇಡೀ ದೇಶ ಆಚರಿಸುತ್ತಿರುವ 21 ದಿನಗಳ ಲಾಕ್ ಡೌನ್ ಅವಧಿ ಇನ್ನು ಒಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಕೊರೊನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ಪ್ರಪಂಚದ ಬಹುತೇಕ ದೇಶಗಳು ಇಂತಹ ಲಾಕ್ ಡೌನ್ ಗಳನ್ನು ನಾನಾ ಬಗೆಗಳಲ್ಲಿ ಜಾರಿಗೊಳಿಸಿ ಜನರ ನಡುವೆ ದೈಹಿಕ ಅಂತರ ಕಾಪಾಡುವ ಯತ್ನದಲ್ಲಿವೆ. ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಈ ಲಾಕ್ ಡೌನ್ ಮುಗಿದ ಕೂಡಲೇ ಕೊರೊನಾ ವೈರಾಣು ನಾಶವಾಗುತ್ತದೆಯಾ? ಲಾಕ್ ಡೌನ್ ಮತ್ತೆ ವಿಸ್ತರಣೆ ಆಗುತ್ತದೆಯಾ? ಮುಂದೆ ಏನು ಕತೆ ಎಂಬಿತ್ಯಾದಿ ಪ್ರಶ್ನೆಗಳು ಈಗಾಗಲೇ ಅನೇಕರ ಮನಸಿನಲ್ಲಿ […]
ಪುಟ್ಟಣ್ಣ ಕಂಡಿದ್ದು ೫೧ ವಸಂತಗಳನ್ನು ಮಾತ್ರ. ಅವರ ವ್ಯಕ್ತಿತ್ವದ, ಅವರ ಸಿನಿಮಾಗಳ ಪರ-ವಿರೋಧವೇನೇ ಇರಲಿ, ಅವರ ಉಲ್ಲೇಖವಿಲ್ಲದ ಕನ್ನಡ ಸಿನಿಮಾ ಅಪೂರ್ಣ. ಅವರ ಬಗ್ಗೆ ಕಳೆದ ವರ್ಷಗಳಲ್ಲಿ ಬರೆದ ಹಲವು ಬರಹಗಳನ್ನು ಸಂಕಲಿಸುವ ಒಂದು ಪ್ರಯತ್ನ… ಚಿತ್ರಕಾರನ ವೈವಿಧ್ಯಮಯ ಚಿತ್ರಣ: ಬಹಳ ದಿನಗಳಿಂದ ಹುಡುಕುತ್ತಿದ್ದ ಡಿ.ಬಿ.ಬಸವೇಗೌಡರ ’ನಾ ಕಂಡ ಪುಟ್ಟಣ್ಣ ಕಣಗಾಲ್’ ಕಳೆದವಾರ ’ಕನ್ನಡ-ಸಂಸ್ಕೃತಿ ಇಲಾಖೆಯ’ ಪುಸ್ತಕ ಮಳಿಗೆಯಲ್ಲಿ ಸಿಕ್ಕೇಬಿಟ್ಟಿತು. ಆ ಪುಸ್ತಕದ ನಂತರವೂ ಗೌಡರು ’ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಪರಿಷ್ಕೃತವಾದ ಮೈಕೈ ತುಂಬಿಕೊಂಡ ಆವೃತ್ತಿಯನ್ನೂ ತಂದರು. […]
ಕನ್ನಡ ಕೋಗಿಲೆ ಸೂಪರ್ ಸೀಸನ್ ಪ್ರಸಾರವಾಗಿ ಜನಮನಕ್ಕೆ ಲಗ್ಗೆ ಹಾಕಿರುವುದಂತೂ ಸತ್ಯದ ಸಂಗತಿ. ಅಪರೂಪದ , ಪ್ರಬುದ್ಧ , ಪ್ರತಿಭಾವಂತ ಸಂಗೀತಗಾರರೇ ಈ ವೇದಿಕೆಯಲ್ಲಿ ಹಾಡಿ, ಅಚ್ಚಕನ್ನಡದ, ಸ್ವಚ್ಛ ಕಂಠದ ಅನಾವರಣ ಮಾಡುತ್ತಾ, ಕನ್ನಡದ ಕಂಪನ್ನು, ಸಂಗೀತಲೋಕಕ್ಕೆ ಧಾರೆ ಎರೆಯುತ್ತಿದ್ದಾರೆ. ಆ ಪೈಕಿ ಹಲವರಂತೂ ಅದೆಷ್ಟು ಅದ್ಭುತವಾಗಿ ಹಾಡುತ್ತಿದ್ದಾರೆ ಎಂದರೆ ಕೇಳಲು ಎರಡು ಕಿವಿಗಳೂ ಸಾಲದು. ಇತ್ತೀಚೆಗೆ ಪ್ರಸಾರವಾದ ಪ್ರಕರಣವೊಂದರಲ್ಲಿ ಅನಂತರಾಜ್ ಮಿಸ್ತ್ರಿ ಎಂಬ ಹಾಡುಗಾರ ‘ರಂಗ, ಮೌಲಾ, ಕೃಷ್ಣ’ ಎಂದು ಒಗ್ಗೂಡಿಸಿ ಹಾಡಿದ ಸೊಗಸಾದ ಹಾಡು, […]
ಒಂದು ಪ್ರಸಂಗ ಗಮನಿಸಿ… ತಿರುನೆಲ್ವೇಲಿ (ತಮಿಳಿನಲ್ಲಿ ನೆಲ್ ಅಂದರೆ ಭತ್ತ), ತಮಿಳುನಾಡಿನ ಭತ್ತದ ಕಣಜ. ಅದಕ್ಕೆ ಹೊಂದಿಕೊಂಡಂತೆ ತೂತ್ತುಕುಡಿ, ವಿರುಧುನಗರ್ ಜಿಲ್ಲೆಗಳು.ಥೇನಿ, ಮಧುರೈ, ರಾಮನಾಥ ಪುರಂ ದೂರವೇನೊ ಇಲ್ಲ. ತಮಿಳರ ಹೆಮ್ಮೆ, ಪ್ರತಿಷ್ಟೆಗಳನ್ನು ಹೆಚ್ಚಿಸಿದ ಹಲವು ವ್ಯಕ್ತಿಗಳು ತಮಿಳುನಾಡಿನ ದಕ್ಷಿಣದ ಈ ಜಿಲ್ಲೆಗಳವರು. ತಮಿಳುನಾಡಿಗೆ ಅನ್ನವೀಯುವ ಈ ಪ್ರದೇಶಗಳು, ಅಲ್ಲಿನ ಫ್ಯೂಡಲ್ ಮನ:ಸ್ಥಿತಿಯ ಜಮೀನುದಾರರ ಕ್ರೌರ್ಯ, ಶೋಷಣೆ, ಅಸಂವಿಧಾನಾತ್ಮಕ ಕಾರ್ಯವೈಖರಿಗಳಿಂದ ಸಾಕಷ್ಟು ಅಪಖ್ಯಾತಿಯನ್ನೂ ಪಡೆದಿದೆ. ಈ ತಿರುನೆಲ್ವೇಲಿಯ ಒಂದು ಗ್ರಾಮ ತಾಲೈಯೂತ್ತು. ಆ ಗ್ರಾಮದ ಪಂಚಾಯಿತಿಯ ಅಧ್ಯಕ್ಷೆ, […]
ಇದೇ ಅಕ್ಟೋಬರ್ 4 ರಂದು ಬಿಡುಗಡೆಯಾದ ತಮಿಳು ಚಿತ್ರ ಅಸುರನ್ ನಿರ್ದೇಶಕ ವೆಟ್ರಿಮಾರನ್ ಎಂಬ ಪ್ರತಿಭಾವಂತನ ಸೃಜನಶೀಲತೆ ಮತ್ತು ನಾಯಕ ಧನುಷ್ ಎಂಬ ನಟನ ಅಮೋಘ ಹಾಗೂ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುತ್ತಿದೆ. ಇದು ವೆಟ್ರಿಮಾರನ್ ನಿರ್ದೇಶನದ ಐದನೆಯ ಚಿತ್ರ. ಇಟಲಿ ಭಾಷೆಯ ಬೈಸಿಕಲ್ ಥೀಪ್ ಸಿನಿಮಾದಿಂದ ಪ್ರಭಾವಿತನಾಗಿ ನಿರ್ಮಿಸಿದ ಪೊಲ್ಲಾದವನ್, ಮಧುರೈ ಸುತ್ತ ಮುತ್ತ ಜನಪ್ರಿಯವಾಗಿರುವ ಕೋಳಿ ಕಾಳಗದ ಪಂದ್ಯ ಕುರಿತಾದ ಆಡುಕುಳಂ, ವಲಸೆ ಬಂದ ನಿರಾಶ್ರಿತ ಮೇಲೆ ಆರೋಪ ಹೊರಿಸಿ, ಚಿತ್ರ ಹಿಂಸೆ […]