ಎಚ್.ಎಂ. ಶ್ರೀನಂದನ್ ಆತ್ಮವೊಂದರ ಕಥೆಯನ್ನು ಬೀಗ ಎಂಬ ಟೈಟಲ್ಲಿನಲ್ಲಿ ಹೇಳ ಹೊರಟಿದ್ದಾರೆ. ಈ ಮೊದಲು ಲೀ, ಅಗ್ರಜ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರು ಸದ್ಯ ಆತ್ಮದ ಬೀಗವನ್ನಿಡಿದು ಚಂದನವನಕ್ಕೆ ಹಿಂತಿರುಗಿದ್ದಾರೆ.
ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಭರಪೂರ ಪ್ರತಿಕ್ರಿಯೆಗಳನ್ನು ಗಳಿಸುತ್ತಿದೆ. ರವಿ ಶಂಕರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಸಹೇರಾ ಅಫ್ಜಾ ಕಾಣಿಸಿಕೊಳ್ಳಲಿದ್ದಾರೆ. ಸೋಶಿಯಲ್ ಮೇಸೇಜಿನ ಸಿನಿಮಾಗಳನ್ನು ಹೇಳಿದ್ದ ಶ್ರೀನಂದನ್ ಬೀಗದಿಂದ ಮತ್ತಾವ ಸಂದೇಶವನ್ನು ನೀಡಲು ಅಣಿಯಾಗಿದ್ದಾರೋ ಕಾದುನೋಡಬೇಕು.











































