ಗೋಧಿಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾದ ನಂತರ ಮತ್ತೊಂದು ಕಾಣೆಯಾದವರ ಹುಡುಕಾಟದ ಸಿನಿಮಾ ಬರಲಿದೆ. ಹೌದು.. ಚಿತ್ರಕ್ಕೆ ಕಾಣೆಯಾದವರ ಬಗ್ಗೆ ಪ್ರಕಟಣೆ ಎಂದು ಟೈಟಲಿಟ್ಟಿದ್ದು, ಆಗಸ್ಟ್ 6ರಿಂದ ಚಿತ್ರೀಕರಣ ಶುರುವಾಗಲಿದೆ. ಅನಿಲ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ `ಶಕ್ತಿ`, `ದಿಲ್ವಾಲ`, `ಕೃಷ್ಣ ರುಕ್ಕು`, `Rambo 2` `ಕಿರಾತಕ 2`, ದಾರಿ ತಪ್ಪಿದ ಮಗ` ಸಿನಿಮಾವನ್ನು ಅನಿಲ್ ನಿರ್ದೇಶಿಸಿದ್ದರು.
ಬಿಲ್ವ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ನವೀನ್ ಅವರು ಈ ಸಿನಿಮಾವನ್ನು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 65 ವರ್ಷ ಮೇಲ್ಪಟವರ (ಹಿರಿಯ ನಾಗರಿಕರ) ಬಗ್ಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ ಅಭಿನಯಿಸುತ್ತಿದ್ದಾರೆ. ಬ್ಯಾಂಕಾಕ್ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
No Comment! Be the first one.